ಬೆಂಗಳೂರಿನಲ್ಲಿ ನಡೆದ ಒಂದು ಅಪರೂಪದ ಘಟನೆಗೆ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಮೆಚ್ಚುಗೆ ವ್ಯಕ್ತವಾಗುತ್ತಿದ್ದು ಪ್ರತಿಯೊಬ್ಬ ವೈದ್ಯರು ಇಂತಹ ಭಾವನೆಯನ್ನು ಹೊಂದಿ ತಮ್ಮ ವೃತ್ತಿ ಧರ್ಮಕ್ಕೆ ಗೌರವ ನೀಡಲಿ ಎನ್ನುತ್ತಿದ್ದಾರೆ ನೆಟ್ಟಿಗರು. ಬೆಂಗಳೂರಿನಲ್ಲಿ ಸುರಿಯುತ್ತಿರುವ ಭಾರಿ ಮಳೆ ಇಂದಾಗಿ ಅನೇಕ ಅವಂತರಗಳು ಸೃಷ್ಟಿಯಾಗಿದ್ದು ಮಳೆ ಬಂದರೆ ಸಾಕು ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಆಗುವುದು ಅನಿವಾರ್ಯ ಆಗಿದೆ. ಮಳೆಯಿಂದಾಗಿ ಮಾರತ್ ಹಳ್ಳಿ ರಸ್ತೆಯಲ್ಲಿ ಕೂಡ ಟ್ರಾಫಿಕ್ ಇದ್ದು ಸರ್ಜಾಪುರದ ಪ್ರತಿಷ್ಠಿತ ಮಣಿಪಾಲ್ ಆಸ್ಪತ್ರೆಯಲ್ಲಿ ಸರ್ಜನ್ ಆಗಿ ಕೆಲಸ ಮಾಡುತ್ತಿದ್ದ.
ಡಾಕ್ಟರ್ ಗೋವಿಂದ ನಂದಕುಮಾರ್ ಎನ್ನುವವರು ಕನ್ನಿಂಗ್ ಹ್ಯಾಮ್ ನಿಂದ ಬೆಳಗ್ಗೆ 10 ಗಂಟೆಗೆ ರೋಗಿಯೊಬ್ಬರಿಗೆ ಶಸ್ತ್ರ ಚಿಕಿತ್ಸೆ ನಿಗಧಿ ಆಗಿದ್ದರಿಂದ ಸರ್ಜಾಪುರ ಮಣಿಪಾಲ್ ಆಸ್ಪತ್ರೆಗೆ ಕಾರಿನಲ್ಲಿ ಬರುವ ಸಂದರ್ಭದಲ್ಲಿ ಟ್ರಾಫಿಕ್ ನಲ್ಲಿ ಸಿಲುಕುತ್ತಾರೆ. ಆದರೆ ಮಾರ್ಗ ಮಧ್ಯದಲ್ಲಿ ಅಂದರೆ ಆಸ್ಪತ್ರೆಗೆ 3 km ಇರುವಾಗಲೇ ಟ್ರಾಫಿಕ್ ಜಾಮ್ ಆಗಿ ಕಾರ್ ಟ್ರಾಫಿಕ್ ನಲ್ಲಿ ಸಿಲುಕಿಕೊಳ್ಳುತ್ತದೆ ಸಮಯ ಮೀರುತ್ತಿದ್ದ ಕಾರಣ ಚಾಲಕನಿಗೆ ಕಾರ್ ಅನ್ನು ತೆಗೆದುಕೊಂಡು ಬರಲು ಹೇಳಿ ಡಾಕ್ಟರ್ ಗೋವಿಂದ ನಂದಕುಮಾರ್ ಅವರು ಓಡಿಕೊಂಡು 3 km ದೂರವನ್ನು ಕ್ರಮಿಸಿ ಆಸ್ಪತ್ರೆಗೆ ತಲುಪುತ್ತಾರೆ.
ಸಧ್ಯ ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದ್ದು ಇವರ ಕರ್ತವ್ಯ ಪ್ರಜ್ಞೆಗೆ ಸಲಾಂ ಹೇಳುತ್ತಿದ್ದಾರೆ. ಆಗಸ್ಟ್ 30 ರಂದು ರೋಗಿಯೊಬ್ಬರಿಗೆ ಲ್ಯಾಪ್ರೋ ಸ್ಕೋಪಿಕ್ ಪಿತ್ತಕೋಶದ ಚಿಕಿತ್ಸೆಗೆ ಸರ್ಜರಿ ಮಾಡಬೇಕಾಗಿದ್ದುದರಿಂದ ಬೆಳಗ್ಗೆ 10 ಕ್ಕೆ ನಿಗಧಿಯಾಗಿದ್ದ ಶಸ್ತ್ರ ಚಿಕಿತ್ಸೆಗೆ ಸಮಯ ಮೀರುತ್ತಿದ್ದ ಕಾರಣ ಡಾಕ್ಟರ್ ಗೋವಿಂದ ನಂದಕುಮಾರ್ ಅವರು ಇಂತಹ ಜನ ಮೆಚ್ಚುವಂತಹ ಕಾರ್ಯವನ್ನು ಮಾಡಿ ಕರ್ತವ್ಯ ಪ್ರಜ್ಞೆಯನ್ನು ಮೆರೆದಿದ್ದಾರೆ. ಒಂದು ವೇಳೆ ಇವರು ಕೇವಲ 3 km ಅಷ್ಟೇ ಎಂದು ನೆಗ್ಲೆಕ್ಟ್ ಮಾಡಿದ್ದರೆ ಅವರು ಆಸ್ಪತ್ರೆಗೆ ತಲುಪುವ ವೇಳೆ ಮದ್ಯಾಹ್ನ ಒಂದು ಘಂಟೆ ಆಗುತ್ತಿತ್ತೆಂದೂ ಅವರೇ ಹೇಳಿಕೊಂಡಿದ್ದಾರೆ.
ಸದ್ಯ ಅವರು ಮಾಡಿದ ಶಸ್ತ್ರ ಚಿಕಿತ್ಸೆ ಸಫಲವಾಗಿದ್ದು ರೋಗಿಯು ಈಗ ಆರಾಮಾಗಿ ಇದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಈ ದೃಶ್ಯದ ಬಗ್ಗೆ ಸ್ವತಃ ಡಾಕ್ಟರ್ ಗೋವಿಂದ ನಂದಕುಮಾರ್ ಅವರೇ ಒಂದು ಲೈವ್ ವಿಡಿಯೋ ಮಾಡಿದ್ದು. ನಾನು ಕರುಳಿನ ಶಸ್ತ್ರ ಚಿಕಿತ್ಸೆ ಮಾಡುವ ಸರ್ಜನ್ ಆಗಿದ್ದು ಆಗಸ್ಟ್ 30 ಮಂಗಳವಾರ ಕನ್ನಿಂಗ್ ಹ್ಯಾಮ್ ರೋಡ್ ನಿಂದ ಸರ್ಜಾಪುರ ಮಣಿಪಾಲ್ ಆಸ್ಪತ್ರೆಗೆ ಬರುವ ವೇಳೆಯಲ್ಲಿ ಮಳೆ ಹೆಚ್ಚಾಗಿ ಫುಲ್ ಟ್ರಾಫಿಕ್ ಜಾಮ್ ಆಗಿದ್ದ ಕಾರಣ ನನ್ನ ಕಾರ್ ಅನ್ನು ಡ್ರೈವರ್ ಗೆ ಹೇಳಿ ಅಲ್ಲಿಯೇ ಬಿಟ್ಟು ಓಡಿಕೊಂಡು ಆಸ್ಪತ್ರೆ ತಲುಪಿದೆ ಎಂದು ಹೇಳಿದ್ದಾರೆ.
ಅಲ್ಲದೇ 10 ನಿಮಿಷದಲ್ಲಿ ತಲುಪಬಹುದಾದ ಸಮಯ ಟ್ರಾಫಿಕ್ ನಿಂದಾಗಿ ಕನಿಷ್ಠ 45 ನಿಮಿಷ ಆದರೂ ಆಗುತ್ತಿತ್ತು ನನ್ನ ಡ್ರೈವರ್ ಆಸ್ಪತ್ರೆಗೆ ಸುಮಾರು ನಾನು ಬಂದ 2 ಗಂಟೆಯ ನಂತರ ಬಂದರು ಎಂದು ಹೇಳಿಕೊಂಡಿದ್ದಾರೆ. ಏನೇ ಆಗಲಿ ಇಂತಹ ಸಮಯ ಪ್ರಜ್ಞೆ ಇರುವ ಕರ್ತವ್ಯ ನಿರತ ವೈದ್ಯರಂತೆ ಪ್ರತಿಯೊಂದು ಆಸ್ಪತ್ರೆಯಲ್ಲಿಯೂ ಸಹ ಇದೇ ರೀತಿಯಲ್ಲಿ ವೈದ್ಯರು ಇದ್ದರೆ ಇಂದು ಎಷ್ಟೋ ಬಡ ಜೀವಗಳು ಬಲಿಯಾಗುವುದಿಲ್ಲ. ಎಷ್ಟೋ ವೈದ್ಯರ ನಿರ್ಲಕ್ಷ್ಯತನದಿಂದಲೇ ರೋಗಿಗಳ ಪ್ರಾಣಪಕ್ಷಿ ಹಾರಿ ಹೋಗುತ್ತಿದ್ದು ಇಂತಹ ಸಮಯಪ್ರಜ್ಞೆ ಎಲ್ಲಾ ವೈದ್ಯರಿಗೂ ಬಂದರೆ ಒಳಿತಾಗುತ್ತದೆ.