Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಅಲ್ಲು ಅರ್ಜುನ್ ಗೆ ಸಿನಿಮಾ ಮಾಡ್ತಿನಿ ಅಂತ ಹೋದಾಗ ಅವಮಾನ ಮಾಡಿದ್ರು ಎಂದು ಕಬ್ಜ ಸಿನಿಮಾ ಸಿನಿಮಾ ಸಕ್ಸಸ್ ಮೀಟಿಂಗ್ ನಲ್ಲಿ ನೋವು ಹಂಚಿಕೊಂಡ ನಿರ್ದೇಶಕ ಚಂದ್ರು

Posted on March 20, 2023 By Kannada Trend News No Comments on ಅಲ್ಲು ಅರ್ಜುನ್ ಗೆ ಸಿನಿಮಾ ಮಾಡ್ತಿನಿ ಅಂತ ಹೋದಾಗ ಅವಮಾನ ಮಾಡಿದ್ರು ಎಂದು ಕಬ್ಜ ಸಿನಿಮಾ ಸಿನಿಮಾ ಸಕ್ಸಸ್ ಮೀಟಿಂಗ್ ನಲ್ಲಿ ನೋವು ಹಂಚಿಕೊಂಡ ನಿರ್ದೇಶಕ ಚಂದ್ರು

 

ಆರ್ ಚಂದ್ರು ಅವರು ಅಲ್ಲು ಅರ್ಜುನ್ ಅವರಿಗೆ ಕಥೆ ಹೇಳುತ್ತೇನೆ ಎಂದು ಹೋದಾಗ ಯಾವ ರೀತಿ ಅವಮಾನ ಮಾಡಿದ್ರು ಗೊತ್ತಾ. ಕನ್ನಡದಲ್ಲಿ ತಾಜ್ ಮಹಲ್ ಮತ್ತು ಚಾರ್ ಮಿನಾರ್ ಇಂತಹ ಪ್ರೇಮ ಕಥೆಗಳನ್ನು ಬರೆದು ನಿರ್ದೇಶಿಸಿ ಹಿಟ್ ಆದ ನಿರ್ದೇಶಕ ಆರ್ ಚಂದ್ರು ಅವರು ಸಿನಿಮಾ ಮಾಡುತ್ತಾರೆ ಎಂದರೆ ಕನ್ನಡಿಗರು ಈಗಲೂ ಸಹ ಅವರ ಕಥೆಗಳ ಮೇಲೆ ಅಷ್ಟೇ ಕುತೂಹಲ ಉಳಿಸಿಕೊಂಡಿರುತ್ತಾರೆ. ಈ ರೀತಿ ಕಾಲಕ್ಕೆ ತಕ್ಕ ಹಾಗೆ ತನ್ನ ಕಥೆಗಳಲ್ಲಿ ಇಂಪ್ರೂವ್ಮೆಂಟ್ ಮಾಡಿಕೊಂಡು ಕನ್ನಡಿಗರಿಗೆ ಎಂದೂ ಮನರಂಜನ ವಿಷಯದಲ್ಲಿ ಮೋಸ ಮಾಡಿದ ಆರ್ ಚಂದ್ರು ಅವರು ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಪ್ಯಾನ್ ಇಂಡಿಯಾ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ.

ರಿಯಲ್ ಸ್ಟಾರ್ ಉಪ್ಪಿ, ಕಿಚ್ಚ ಸುದೀಪ್ ಮತ್ತು ಹ್ಯಾಟ್ರಿಕ್ ಹೀರೋ ಶಿವಣ್ಣನ ಕಾಂಬಿನೇಷನ್ ಇಟ್ಟುಕೊಂಡು ಕಬ್ಜಾ ಎನ್ನುವ ರಕ್ತ ಚರಿತ್ರೆಯ ಆಕ್ಷನ್ ಥ್ರಿಲ್ಲರ್ ಸಿನಿಮಾ ತೆಗೆದಿದ್ದಾರೆ. ಕನ್ನಡದ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರವಾಗಿದ್ದ ಕಬ್ಜಾ ಚಿತ್ರವು ಪುನೀತ್ ರಾಜಕುಮಾರ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಮಾರ್ಚ್ 17ರಂದು ಬಿಡುಗಡೆ ಆಗಿದೆ. ಸಿನಿಮಾ ರಿಲೀಸ್ ಆದ ಮೂರು ದಿನಕ್ಕೆ 100 ಕೋಟಿ ಕಲೆಕ್ಷನ್ ದಾಟಿದ್ದು, ಚಿತ್ರತಂಡ ಆ ಸಂಭ್ರಮಾಚರಣೆ ಭಾಗಿ ಆಗಿದೆ.

ಇತ್ತೀಚೆಗೆ ಸಿನಿಮಾ ನೂರು ಕೋಟಿ ದಾಟಿದ ದಾಖಲೆಯನ್ನು ಸಂಭ್ರಮಿಸುವ ರೂಢಿ ಇಂಡಸ್ಟ್ರಿಯಲ್ಲಿ ಶುರುವಾಗಿದೆ. ಅದಕ್ಕಾಗಿ ಪ್ರೆಸ್ ಮೀಟ್ ಕೂಡ ನಡೆಸಲಾಗಿದ್ದು, ಅದರಲ್ಲಿ ಅನೇಕ ಭಾವನಾತ್ಮಕ ವಿಷಯಗಳನ್ನು ಆರ್. ಚಂದ್ರು ಅವರು ಹಂಚಿಕೊಂಡಿದ್ದಾರೆ. ಮೊದಲಿಗೆ ಅವರು ಅವರ ಚಿತ್ರದ ಕಲೆಕ್ಷನ್ ಬಗ್ಗೆ ಮಾತನಾಡಿ ನನ್ನ ಸಿನಿಮಾ ಓ ಟಿ ಟಿ ರೈಡ್ಸ್ ಮತ್ತು ಸ್ಯಾಟಲೈಟ್ ರೈಟ್ಸ್ ಎಲ್ಲವೂ ಸೇರಿ ಈಗಾಗಲೇ ಹಾಕಿದ್ದ ಬಜೆಟ್ ಅನ್ನು ಗೆದ್ದುಕೊಂಡಿದೆ, ಅದು ಮೊದಲ ಸಂಭ್ರಮ ಈಗ ಕಲೆಕ್ಷನ್ ಅಲ್ಲಿ ಥಿಯೇಟರ್ ಕಲೆಕ್ಷನ್ ಇಷ್ಟು ಉತ್ತಮವಾಗಿರುವುದು ನಮ್ಮ ಎರಡನೇ ಸಂಭ್ರಮ ಎಂದಿದ್ದಾರೆ.

ಪ್ಯಾನ್ ಇಂಡಿಯಾ ಸಿನೆಮಾ ಬಗ್ಗೆ ಮಾತು ಶುರು ಮಾಡಿದ ಅವರು ಪಕ್ಕದ ತೆಲುಗು ಇಂಡಸ್ಟ್ರಿಯವರು ಒಮ್ಮೆ ಹೇಗೆ ಅವಮಾನ ಮಾಡಿದ್ದರು ಎನ್ನುವ ಘಟನೆ ಬಗ್ಗೆಯೂ ಹೇಳಿಕೊಂಡಿದ್ದಾರೆ. ನಾನು ಎಲ್ಲರೂ ಹೋಗುತ್ತಾರೆ ನಾನು ದೊಡ್ಡದಾಗಿ ಏನಾದ್ರು ಮಾಡಬೇಕು ಎಂದುಕೊಂಡು ಅಲ್ಲಿಗೆ ಒಂದು ಸಿನಿಮಾ ಮಾಡಲು ಹೋದೆ. ಅವರು ನನಗೆ ಮೂರು ಕೋಟಿ ಬಜೆಟ್ ಕೊಟ್ಟರು, ಅದೇ ಹೆಚ್ಚಾಗಿತ್ತು ಆದರೂ ಅದರಲ್ಲಿ ಅಚ್ಚುಕಟ್ಟಾಗಿ ಮುಗಿಸಿ ಆ ಸಕ್ಸಸ್ ನಲ್ಲಿ ಇದ್ದಾಗಲೇ ಅಲ್ಲು ಅರ್ಜುನ್ ಅವರಿಗೆ ಕಥೆ ಹೇಳುತ್ತೇನೆ ಎಂದು ಕೇಳಿಕೊಂಡೆ.

ಆಗ ನನ್ನ ಸಿನಿಮಾದ ನಿರ್ಮಾಪಕರೇ ಬೇಡ ಎಂದು ಬಿಟ್ಟರು, ಮತ್ತೊಬ್ಬರನ್ನು ಸಂಪರ್ಕಿಸಿದಾಗ ಕನ್ನಡ ಡೈರೆಕ್ಟರ್ ಆ? ಕನ್ನಡ ರೈಟರ್ ಆದರೆ ಬೇಡ ಎಂದು ಹೇಳಿ ಬಿಟ್ಟರು. ಈ ರೀತಿ ಕನ್ನಡದವರು ಆ ರೆಂಜ್ ಗೆ ಅಲ್ಲ ಎನ್ನುವ ಅಭಿಪ್ರಾಯ ಅವರ ಮನದಲ್ಲಿ ಇತ್ತು, ಅದನ್ನೆಲ್ಲವನ್ನು ಹೋಗಲಾಡಿಸಿದ್ದು ಕೆಜಿಎಫ್ ತಂಡ ಎಂದು ಕೆಜಿಎಫ್ ಟೀಮ್ ಅನ್ನು ಕೂಡ ನೆನೆಸಿಕೊಂಡಿದ್ದಾರೆ ಎಲ್ಲರೂ ಬೇರೆಯವರ ಬಗ್ಗೆ ಮಾತನಾಡಬೇಡಿ ಎನ್ನುತ್ತಾರೆ.

ಆದರೆ ಗೆದ್ದವರು ಯಾರೇ ಆಗಿದ್ದರೂ ಅವರ ಬಗ್ಗೆ ಮಾತನಾಡಲೇಬೇಕು. ನನಗೂ ಸಹ ಕೆಜಿಎಫ್ ರೀತಿ ಪ್ಯಾನ್ ಇಂಡಿಯಾ ಸಿನಿಮಾ ಮಾಡಬೇಕು ಅನ್ನುವ ಸ್ಫೂರ್ತಿಯನ್ನು ಅದೇ ಚಿತ್ರ ಕೊಟ್ಟಿದ್ದು, ಅದಕ್ಕೆ ನನಗೆ ಎಲ್ಲರೂ ಬೆಂಬಲವಾಗಿ ಸಹಕಾರವಾಗಿ ನಿಂತುಕೊಂಡ ಕಾರಣ ಎಂದು ಕಬ್ಜಾ ಸಿನಿಮಾ ತಯಾರಾಗಿದ್ದು ಎಂದು ತಮ್ಮ ಕಬ್ಜಾ ಸಿನಿಮಾ ಜರ್ನಿ ಬಗ್ಗೆ ಹೇಳಿಕೊಂಡಿದ್ದಾರೆ.

Cinema Updates Tags:Kabza, R Chandru, Shivanna, Sudeep, Upendra
WhatsApp Group Join Now
Telegram Group Join Now

Post navigation

Previous Post: ಹರೀಶ್ ರಾಯ್ ಕ್ಯಾನ್ಸರ್ ನಿಂದ ಕಷ್ಟ ಅನುಭವಿಸುತ್ತಿದ್ದಾಗ ಅವರ ಜೀವ ಉಳಿಸಿದ ವ್ಯಕ್ತಿ ಯಾರು ಎಂಬ ಸತ್ಯ ಬಿಚ್ಚಿಟ್ಟ ದರ್ಶನ್
Next Post: Mayur Patel: ನನಗೆ ಯಾವ ಸಿನಿಮಾದಲ್ಲು ಆಫರ್ ಕೊಡದೆ ಇರಲು ಕಾರಣ ಏನು ಗೊತ್ತ.? ನೋವು ಹಂಚಿಕೊಂಡ ನಟ ಮಯೂರ್ ಪಟೇಲ್

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore