Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಅನಾಥ ಮಕ್ಕಳ ಜೊತೆ ಚಿರು ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದ ಚಿರಂಜೀವಿ ಸರ್ಜಾ ತಾಯಿ ಈ ಮನ ಕಲಕುವ ವಿಡಿಯೋ ನೋಡಿ ನಿಜಕ್ಕೂ ಕಣ್ಣೀರು ಬರುತ್ತೆ.

Posted on October 17, 2022 By Kannada Trend News No Comments on ಅನಾಥ ಮಕ್ಕಳ ಜೊತೆ ಚಿರು ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದ ಚಿರಂಜೀವಿ ಸರ್ಜಾ ತಾಯಿ ಈ ಮನ ಕಲಕುವ ವಿಡಿಯೋ ನೋಡಿ ನಿಜಕ್ಕೂ ಕಣ್ಣೀರು ಬರುತ್ತೆ.

ಇಂದಿಗೆ ಚಿರಂಜೀವಿ ಸರ್ಜಾ ಅವರಿಗೆ 38ನೇ ವರ್ಷ ಬಹುಶಃ ಇಂದು ಚಿರಂಜೀವಿ ಸರ್ಜಾ ಅವರ ಬದುಕಿದ್ದರೆ ಈ ಒಂದು ಹುಟ್ಟು ಹಬ್ಬವನ್ನು ಅಭಿಮಾನಿಗಳೊಂದಿಗೆ ಹಾಗೂ ಕುಟುಂಬದೊಟ್ಟಿಗೆ ಬಹಳ ಅದ್ದೂರಿಯಾಗಿ ಆಚರಿಸುತ್ತಿದ್ದರು. ಆದರೆ ವಿಧಿ ಆಟ ಎಂಬುದೇ ಬೇರೆ ಇತ್ತು ಬದುಕಿ ಬಾಳಬೇಕಾದಂತಹ ಯುವ ಸಾಮ್ರಾಟ ನಮ್ಮೆಲ್ಲರನ್ನು ಬಿಟ್ಟು ಅಗಲಿ ಹೋಗಿದ್ದಾರೆ. ಹೌದು ನಿಮಗೆ ತಿಳಿದಿರುವ ಹಾಗೆ ಚಿರಂಜೀವಿ ಸರ್ಜಾ ನಮ್ಮೆಲ್ಲರನ್ನು ಬಿಟ್ಟು ಅಗಲಿ ಎರಡು ವರ್ಷಗಳೇ ಕಳೆದು ಹೋಗಿದೆ. ಜೂನ್ 7ನೇ ತಾರೀಕು 2020ನೇ ಇಸ್ವಿಯಲ್ಲಿ ಚಿರಂಜೀವಿ ಸರ್ಜಾ ಅವರು ಹೃ.ದ.ಯ.ಘಾ.ತ.ದಿಂದ ಸಾ.ವ.ನ್ನ.ಪ್ಪಿ.ದರೂ

ಈ ಸಾ.ವು ನಿಜಕ್ಕೂ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಬರ ಸಿಡಿಲು ಬಡಿದಂತಾಯಿತು ಚಿರು ಅವರು ಇಲ್ಲಿ ಇಲ್ಲ ಎಂಬ ಮಾತನ್ನು ಯಾರಿಂದಲೂ ಕೂಡ ಅರಗಿಸಿಕೊಳ್ಳುವುದಕ್ಕೆ ಸಾಧ್ಯವಾಗಲಿಲ್ಲ. ಏಕೆಂದರೆ ಚಿರು ಅವರ ವಯಸ್ಸು ಹಾಗೂ ಅವರ ದೇಹದ ಫಿಟ್ನೆಸ್ ಅಷ್ಟರ ಮಟ್ಟಿಗೆ ಇತ್ತು. ಚಿರು ಬದುಕಿದ್ದಷ್ಟು ದಿನವೂ ಕೂಡ ಚಿಕ್ಕದೊಂದು ಕಾಂಟ್ರವರ್ಸಿಯು ಕೂಡ ಮಾಡಿಕೊಂಡಿರಲಿಲ್ಲ ಕುಟುಂಬಕ್ಕೆ ತಕ್ಕ ಮಗ ಇಂಡಸ್ಟ್ರಿಗೆ ತಕ್ಕ ನಟ ಎಂಬ ಹೆಸರನ್ನು ಗಿಟ್ಟಿಸಿಕೊಂಡಿದ್ದರು. ಇನ್ನು ತಾವು ಪ್ರೀತಿಸಿ ಮದುವೆಯಾದಂತಹ ಮೇಘನಾ ರಾಜ್ ಅವರು ಕೂಡ ಚಿರಂಜೀವಿ ಸರ್ಜಾ ಅಗಲಿದ ಸಮಯದಲ್ಲಿ 5 ತಿಂಗಳ ತುಂಬ ಗರ್ಭಿಣಿಯಾಗಿದ್ದಳು.

ಈ ಸಮಯದಲ್ಲಿ ಹೆಂಡತಿಯ ಜೊತೆಗೆ ಇರಬೇಕಾದಂತಹ ಪತಿ ಇದ್ದಕ್ಕಿದ್ದ ಹಾಗೆ ಆಕೆಯನ್ನು ಒಂಟಿ ಮಾಡಿ ಹೊರಟೆ ಬಿಟ್ಟ ನಿಜಕ್ಕೂ ಈ ನೋವನ್ನು ಬರಿಸುವ ಶಕ್ತಿ ಆ ಸಮಯದಲ್ಲಿ ಆ ದೇವರೇ ಮೇಘಾನ ಅವರಿಗೆ ನೀಡಿದ್ದರು ಅಂತ ಹೇಳಿದರು ಕೂಡ ತಪ್ಪಾಗಲಾರದು. ಇನ್ನು ವೃದ್ಯಾಪ್ಯದಲ್ಲಿ ಮಕ್ಕಳಿಂದ ಮೋಕ್ಷ ದೊರೆಯಬೇಕು ಅಂತ ತಂದೆ ತಾಯಿ ಅಂದುಕೊಳ್ಳುತ್ತಾರೆ. ಆದರೆ ಮಗನಿಗೆ ಕೊಳ್ಳಿ ಇಡುವಂತಹ ಪರಿಸ್ಥಿತಿ ಚಿರಂಜೀವಿ ಸರ್ಜಾ ಅವರ ತಂದೆ ಮತ್ತು ತಾಯಿಗೆ ಬರುತ್ತದೆ ಇಂತಹ ಘನ ಘೋ.ರ ಪರಿಸ್ಥಿತಿ ಯಾವ ತಂದೆ ತಾಯಿಗೂ ಕೂಡ ನಿರ್ಮಾಣವಾಗಬಾರದು.

ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡಂತಹ ನೋವು ಅಮ್ಮಜಿಯವರಿಗೆ ತಮ್ಮ ಜೀವಿತಾವಧಿಯವರೆಗೂ ಇರುತ್ತದೆ ನಾವೆಲ್ಲರೂ ಒಂದು ಗಾದೆಯನ್ನು ಕೇಳೇ ಇರುತ್ತೇವೆ ಪುತ್ರಶೋಕ ನಿರಂತರ ಅಂತ. ಅದೇ ರೀತಿ ಚಿರು ಅವರನ್ನು ಕಳೆದುಕೊಂಡ ಅಮ್ಮಜಿಯವರು ಈಗಲೂ ಕೂಡ ಅವರ ನೆನಪಿನಲ್ಲಿಯೇ ದಿನಾಲೂ ಕಣ್ಣೀರು ಇಡುತ್ತಾರೆ. ಇನ್ನು 38ನೇ ವರ್ಷದ ಚಿರಂಜೀವಿ ಸರ್ಜಾ ಅವರ ಹುಟ್ಟುಹಬ್ಬವನ್ನು ಧ್ರುವ ಸರ್ಜಾ ಹಾಗೂ ಅವರ ತಾಯಿ ಅಮ್ಮಜಿಯವರು ಬಹಳ ಅರ್ಥಪೂರ್ಣವಾಗಿ ಆಚರಿಸಿದ್ದಾರೆ.

ಹೌದು ಬೆಂಗಳೂರಿನ ಹೊರ ವಲಯದಲ್ಲಿ ಕರಕಪುರ ರಸ್ತೆಯಲ್ಲಿ ಇರುವಂತಹ ಧ್ರುವ ಸರ್ಜಾ ಅವರ ಫಾರ್ಮರ್ಸ್ ಆದಂತಹ ಬೃಂದಾವನಕ್ಕೆ ಹೋಗಿ ಚಿರಂಜೀವಿ ಸರ್ಜಾ ಅವರ ಸ.ಮಾ.ಧಿ.ಗೆ ಪೂಜೆಯನ್ನು ಸಲ್ಲಿಸಿ ಅವರಿಗೆ ಇಷ್ಟ ಆದಂತಹ ಎಲ್ಲಾ ತಿಂಡಿಯನ್ನು ನೈವೇದ್ಯ ಇಟ್ಟು ಪೂಜೆ ಮಾಡಿ ಬಂದಿದ್ದಾರೆ. ತದನಂತರ ಅನಾಥಾಶ್ರಮ ಒಂದಕ್ಕೆ ಭೇಟಿ ನೀಡಿ ಅಲ್ಲಿ ಚಿರಂಜೀವಿ ಸರ್ಜಾ ಅವರ ಹೆಸರಿನಲ್ಲಿ ಕೇಕ್ ಕತ್ತರಿಸಿ ಅನಾಥ ಮಕ್ಕಳಿಗೆ ಸಿಹಿ ತಿಂಡಿ ಬಟ್ಟೆ ಉಡುಗೊರೆಯನ್ನು ನೀಡಿ ಆ ಮಕ್ಕಳ ಮುಖದಲ್ಲಿ ಮಂದಹಾಸವನ್ನು ಮೂಡಿಸಿದ್ದಾರೆ.

ಮಕ್ಕಳ ಮಂದಹಾಸದಲ್ಲಿ ತಮ್ಮ ಮಗನನ್ನು ಕಳೆದುಕೊಂಡ ನೋವನ್ನು ಮರೆತಿದ್ದಾರೆ ಅಷ್ಟೇ ಅಲ್ಲದೆ ಈ ಒಂದು ಸಂದರ್ಭದಲ್ಲಿ ಚಿರು ಇಲ್ಲವಲ್ಲ ಎಂದು ಅಮ್ಮಜಿಯವರು ಕಣ್ಣೀರಿಟ್ಟಿದರೆ. ಸದ್ಯಕ್ಕೆ ಈ ವಿಡಿಯೋ ದಲ್ಲಿ ವೈರಲ್ ಆಗಿದ್ದು ಹಲವಾರು ಅಭಿಮಾನಿಗಳು ಈ ವಿಡಿಯೋ ನೋಡಿ ಭಾವುಕರಾಗಿದ್ದಾರೆ ಚಿರು ಬದುಕಿರಬೇಕಿತ್ತು ಎಂದು ಹೇಳಿದ್ದಾರೆ ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡಿ.

Entertainment Tags:Chiranjeevi sarja, Chiru Birthday, Chiru sarja
WhatsApp Group Join Now
Telegram Group Join Now

Post navigation

Previous Post: ವೇದಿಕೆ ಮೇಲೆ ಅಂಬರೀಶ್ ಜೊತೆ ಅನುಶ್ರೀ ಮಾಡಿದ ಈ ರೋಮ್ಯಾಂಟಿಕ್ ಡ್ಯಾನ್ಸ್ ನೋಡಿ ಎಷ್ಟು ಸೊಗಸಾಗಿದೆ. ಅಂಬಿ ಅವರ ಅಪರೂಪದ ವಿಡಿಯೋ ತಪ್ಪದೆ ನೋಡಿ.
Next Post: ಮೊನ್ನೆ ದರ್ಶನ್, ನೆನ್ನೆ ಸುದೀಪ್ ಇಂದು ಯಶ್ ರವಿಚಂದ್ರನ್ ಮನೆಗೆ ಬಂದು ಮಾಡಿದ ಸಹಾಯವೇನು ಗೊತ್ತಾ.? ಸೋತು ಕಂಗಾಲಾಗಿ ಕುಳಿತಿರುವ ರವಿಚಂದ್ರನ್ ಗೆ ಬೆನ್ನೆಲುಬಾಗಿ ನಿಂತಿದೆ ಇಡೀ ಚಿತ್ರರಂಗ.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore