Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಅಂಬರೀಶ್ ಸ-ಮಾ-ಧಿ ಮುಂದೆ ದರ್ಶನ್ ಹೇಳಿದ ಮಾತು ಗಳಗಳನೇ ಕಣ್ಣೀರು ಹಾಕಿದ ನಟಿ ಸುಮಲತಾ

Posted on December 3, 2022 By Kannada Trend News No Comments on ಅಂಬರೀಶ್ ಸ-ಮಾ-ಧಿ ಮುಂದೆ ದರ್ಶನ್ ಹೇಳಿದ ಮಾತು ಗಳಗಳನೇ ಕಣ್ಣೀರು ಹಾಕಿದ ನಟಿ ಸುಮಲತಾ

ದರ್ಶನ್ ಅಂಬರೀಶ್

ಕನ್ನಡ ಚಿತ್ರರಂಗದ ಹಾಗೂ ಪ್ರಸಿದ್ಧ ನಟ ರೆಬೆಲ್ ಸ್ಟಾರ್ ಅಂಬರೀಶ್ ರವರು ಕನ್ನಡ ಚಿತ್ರರಂಗದಲ್ಲಿ ಅವರದೇ ಆದ ಶೈಲಿಯಲ್ಲಿ ನಟನೆ ಮಾಡಿ ಚಾಪನ್ನು ಮೂಡಿಸಿ ತಮ್ಮ ಅಭಿಮಾನಿಗಳನ್ನು ದೊಡ್ಡ ಮಟ್ಟದಲ್ಲಿ ಸಂಪಾದಿಸಿದ್ದಾರೆ ಇನ್ನು ರೆಬಲ್ ಸ್ಟಾರ್ ಅಂಬರೀಶ್ ರವರು ನಮ್ಮನ್ನೆಲ್ಲಾ ಅಗಲಿ ಈಗಾಗಲೇ ನಾಲ್ಕು ವರ್ಷಗಳು ಕಳೆದಿವೆ.

ಇತ್ತೀಚಿಗೆ ಅಂಬರೀಶ್ ರವರ ನಾಲ್ಕು ನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಅಂಬರೀಶ್ ರವರ ಪತ್ನಿಯಾದ ಹಾಗೂ ಮಂಡ್ಯದ ಸಂಸದೆಯು ಆಗಿರುವ ನಟಿ ಸುಮಾಲತಾ ರವರು ಅಂಬರೀಶ್ ಅವರ ಸಮಾಧಿಯ ಬಳಿ ಹಮ್ಮಿಕೊಂಡಿದ್ದರು. ಈ ವೇಳೆ ಡಿ ಬಾಸ್ ದರ್ಶನ್ ರವರು ಸಮಾಧಿಯ ಬಳಿ ಬಂದು ದರ್ಶನವನ್ನು ಪಡೆದಿದ್ದಾರೆ ಜೊತೆಯಲ್ಲಿ ತಮ್ಮ ಪೂಜೆಯನ್ನು ಕೂಡ ಅಲ್ಲಿ ಸಲ್ಲಿಸಿದ್ದಾರೆ.

ಆ ಸಂದರ್ಭದಲ್ಲಿ ಅಂಬರೀಶ್ ರವರ ಬಗ್ಗೆ ಮಾತನಾಡಿದ ಮಾತು ಸುಮಲತರವರನ್ನು ಕಣ್ಣಲ್ಲಿ ನೀರು ಹಾಕುವಂತೆ ಮಾಡಿದೆ. ಇನ್ನು ಸದಾ ನಟನೆ ಹಾಗೂ ರಾಜಕೀಯದಲ್ಲಿ ಸಕ್ರಿಯ ರಾಗಿರುವ ಅಂಬರೀಶ್ ಅವರ ಪತ್ನಿ ಸುಮಲತರವರು ಕೂಡ ಪುಣ್ಯ ಸ್ಮರಣೆಯ ದಿನದಂದು ತಮ್ಮ ಪೂಜೆಯನ್ನು ಅಂಬಿಯವರಿಗೆ ಸಲ್ಲಿಸಿದ್ದಾರೆ.

ಇದರ ಜೊತೆಗೆ ಸುಮಲತರವರು ತಮ್ಮ ಪತಿಯ ಫೋಟೋವನ್ನು ಹಾಕಿ ಕೆಲವೊಂದು ಸಾಲುಗಳನ್ನು ಬರೆದು ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. “ಜೊತೆಗಿರದ ಜೀವ ಎಂದೆಂದಿಗೂ ಜೀವಂತ ನಿಮಗೆ ನಿಮ್ಮ ಪುಣ್ಯ ಸ್ಮರಣೆಗೆ ನನ್ನ ಹೃದಯದ ಅಂತರಾಳದ ನಮನ ಅಂಬಿ ಅಮರ” ಎಂದು ಸುಮಲತಾ ಅಂಬರೀಶ್ ರವರು ಟ್ವೀಟ್ ಮಾಡಿದ್ದಾರೆ.

ರೆಬಲ್ ಸ್ಟಾರ್ ಅಂಬರೀಶ್ ಅವರ ಹಾಗೂ ನಟಿ ಸುಮಲತಾ ರವರ ಮಗನಾದ ಅಭಿಷೇಕ್ ಅವರು ಕೂಡ ತಮ್ಮ ತಂದೆಯ ನಾಲ್ಕನೇ ಪುಣ್ಯಸ್ಮರಣೆಯ ದಿನದಂದು ಪೂಜೆಯನ್ನು ಸಲ್ಲಿಸಿ ತಮ್ಮ ಮೀಡಿಯಾ ಖಾತೆಗಳಲ್ಲಿ ತಮ್ಮ ತಂದೆಯ ಫೋಟೋವನ್ನು ಅಪ್ಲೋಡ್ ಮಾಡಿದ್ದಾರೆ. ಅಭಿಷೇಕ್ ಅಂಬರೀಶ್ ಅವರು ತಮ್ಮ ತಂದೆ ಇರುವಾಗಲೇ ಕನ್ನಡ ಚಿತ್ರರಂಗಕ್ಕೆ ಅಮರ್ ಚಿತ್ರದ ಮೂಲಕ ಪಾದಾರ್ಪಣೆಯನ್ನು ಮಾಡಿದ್ದರು.

ಈ ಚಿತ್ರದ ಮೂಲಕ ತಮ್ಮ ಪರಿಚಯವನ್ನು ಮಾಡಿಸಿದ ಅಭಿಷೇಕ್ ರವರು ಮುಂದೆ ರಚಿತಾ ರಾಮ್ ರವರ ಜೊತೆ ಬ್ಯಾಡ್ ಮಾನರ್ಸ್ ಎಂಬ ಚಿತ್ರದಲ್ಲಿ ನಾಯಕನಟನಾಗಿ ಮತ್ತೆ ತೆರೆಯ ಮೇಲೆ ಕಾಣಿಸಿಕೊಳ್ಳದಿದ್ದರೆ. ಡಿ ಬಾಸ್ ದರ್ಶನ್ ರವರು ಮುಂಚೆಯಿಂದಲೂ ಅಂಬರೀಶ್ ರವರಿಗೆ ಬಹಳ ಹತ್ತಿರದವರು ಜೊತೆಗೆ ಈ ಎರಡು ಕುಟುಂಬವು ಬಹಳ ವರ್ಷದಿಂದ ಅನ್ಯೋನ್ಯವಾಗಿದ್ದವು.

ದರ್ಶನ್ ಅವರ ಮನೆಯಲ್ಲಿ ಯಾವುದೇ ತರಹದ ಇತ್ಯರ್ಥಗಳು ಆಗುವಾಗ ರೆಬೆಲ್ ಸ್ಟಾರ್ ಅಂಬರೀಶ್ ಅವರು ಅಲ್ಲಿ ಸಮಸ್ಯೆಯನ್ನು ಬಗೆಹರಿಸುವ ಕೆಲಸವನ್ನು ರೆಬೆಲ್ ಸ್ಟಾರ್ ಅವರು ಮಾಡುತ್ತಿದ್ದರು ಅದಲ್ಲದೆ ಅಂಬರೀಶ್ ರವರ ಸಾ.ವಿ.ನ ನಂತರವೂ ದರ್ಶನ್ ರವರು ಅಂಬರೀಶ್ ಅವರ ಪತ್ನಿ ಹಾಗೂ ಮಗ ಅಭಿಷೇಕ್ ರವರ ಜೊತೆ ಯಾವಾಗಲೂ ಬೆನ್ನೆಲುಬಾಗಿ ನಿಲ್ಲುತ್ತಿದ್ದರು.

ಇದರ ಜೊತೆಗೆ ಸುಮಲತರವರ ರಾಜಕೀಯ ಗೆಲುವಲ್ಲೂ ಕೂಡ ಡಿ ಬಾಸ್ ದರ್ಶನ್ ರವರ ಕೊಡುಗೆಯು ಇದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಸದ್ಯ ಅಂಬರೀಶ್ ಅವರ ಪುಣ್ಯಸ್ಮರಣೆ ಹಿನ್ನಲೆಯಲ್ಲಿ ದರ್ಶನ್ ಅವರು ಸ.ಮಾ.ಧಿ.ಯ ಬಳಿ ಭೇಟಿ ನೀಡಿದ್ದರು ಈ ವೇಳೆ ದರ್ಶನ್ ರವರು ಅಂಬರೀಶ್ ಅವರು ನಮ್ಮನ್ನೆಲ್ಲ ಆಗಲಿ ನಾಲ್ಕು ವರ್ಷವಾದರೂ ದೈಹಿಕವಾಗಿ ಮಾತ್ರ ಅಗಲಿದ್ದಾರೆ.

ಆದರೆ ಅವರ ಮಾತುಗಳು ಮಾರ್ಗದರ್ಶನವು ಶಾಶ್ವತವಾಗಿ ನಮ್ಮಲ್ಲಿ ಉಳಿಯುತ್ತದೆ ಎಂದು ಹೇಳಿದ್ದಾರೆ, ಸದ್ಯ ದರ್ಶನ್ ರವರ ಮಾತಿಗೆ ನಟಿ ಸುಮಲತಾ ಅವರು ಭಾವುಕರಾಗಿ ಕಣ್ಣೀರು ಹಾಕಿದ್ದಾರೆ.

Entertainment Tags:Abhishek Ambareesh, Ambareesh, Darshan, Sumalatha
WhatsApp Group Join Now
Telegram Group Join Now

Post navigation

Previous Post: ನಟನೆಗೆ ಗುಡ್ ಬೈ ಹೇಳಿ ಸಮಾಜಸೇವೆ ಮಾಡಲು ಮುಂದಾದ ನಟಿ ಸಾಯಿಪಲ್ಲವಿ, ಸ್ವಂತ ದುಡ್ಡಲ್ಲಿ ಆಸ್ಪತ್ರೆ ಕಟ್ಟಿಸಿ ಜನರಿಗೆ ಉಚಿತ ಸೇವೆ ನೀಡಿ ಸಮಾಜಕ್ಕೆ ಮಾದರಿಯಾದ ನಟಿ.
Next Post: ಯಾವನು ನನ್ಗೆ ಸಹಾಯ ಮಾಡಿಲ್ಲ ಸುಮ್ನೆ ನಾನ್ ಸಹಾಯ ಮಾಡ್ದೆ ಅಂತ ಮಿಡಿಯಾ ಮುಂದೆ ಗಿಮಿಕ್ ಮಾಡ್ಬೇಡಿ ಅಂತ ಖಡಕ್ ಆಗಿ ಎಚ್ಚರಿಕೆ ಕೊಟ್ಟ ನಟ ರವಿಚಂದ್ರನ್.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore