Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ದರ್ಶನ್ ನೋಡಲು ಬಂದ ಅಭಿಮಾನಿಯನ್ನು ಸ್ಟೇಜ್ ಮೇಲಿಂದ ಎಳೆದು ಹಾಕಿದ ಬಾಡಿಗಾರ್ಡ್ ಎಲ್ಲವನ್ನೂ ನೋಡುತ್ತ ಸುಮ್ಮನೆ ನಿಂತಿದ್ದ ಡಿ ಬಾಸ್,ಎಲ್ರೂ ಅಪ್ಪು ಆಗೋಕೆ ಆಗಲ್ಲ ಎಂದ ನೆಟ್ಟಿಗರು.

Posted on November 25, 2022 By Kannada Trend News No Comments on ದರ್ಶನ್ ನೋಡಲು ಬಂದ ಅಭಿಮಾನಿಯನ್ನು ಸ್ಟೇಜ್ ಮೇಲಿಂದ ಎಳೆದು ಹಾಕಿದ ಬಾಡಿಗಾರ್ಡ್ ಎಲ್ಲವನ್ನೂ ನೋಡುತ್ತ ಸುಮ್ಮನೆ ನಿಂತಿದ್ದ ಡಿ ಬಾಸ್,ಎಲ್ರೂ ಅಪ್ಪು ಆಗೋಕೆ ಆಗಲ್ಲ ಎಂದ ನೆಟ್ಟಿಗರು.

ಸ್ಟಾರ್ ಹೀರೋಗಳಿಗೆ ಕೋಟ್ಯಂತರ ಸಂಖ್ಯೆಯಲ್ಲಿ ಅಭಿಮಾನಿಗಳು ಇರುತ್ತಾರೆ. ಅಭಿಮಾನಿಗಳನ್ನು ಸಂಪಾದಿಸುವುದರ ಜೊತೆಗೆ ಅವರನ್ನು ನಿಭಾಯಿಸುವುದು ಕೂಡ ಒಂದು ಕಲೆ. ವರನಟ ಡಾಕ್ಟರ್ ರಾಜಕುಮಾರ್ ಅವರು ಅಭಿಮಾನಿಗಳನ್ನೇ ದೇವರು ಎಂದು ಕರೆದಿದ್ದರು. ಹಾಗೆಯೇ ಈಗ ಕರ್ನಾಟಕದಾದ್ಯಂತ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಸ್ಟಾರ್ ಹೀರೋ ಎನ್ನುವ ಖ್ಯಾತಿಗೆ ಒಳಗಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೂಡ ಅಭಿಮಾನಿಗಳನ್ನು ವಿಶೇಷ ಹೆಸರಿನಿಂದ ಕರೆಯುತ್ತಾರೆ.

ಅಭಿಮಾನಿಗಳನ್ನೇ ಇವರು ಸೆಲೆಬ್ರಿಟಿ ಎಂದು ಕರೆಯುತ್ತಾರೆ. ಹೀಗೆ ಕರೆಯುವುದು ಮಾತ್ರವಲ್ಲದೆ ತಮ್ಮನ್ನು ನೋಡಲು ಇಚ್ಚಿಸುವ ಹಾಗೂ ಭೇಟಿಯಾಗಲು ಬರುವ ಅಭಿಮಾನಿಗಳನ್ನು ಅಷ್ಟೇ ಗೌರವಯುತವಾಗಿ ನಡೆಸಿಕೊಳ್ಳುತ್ತಾರೆ. ಆದರೆ ದರ್ಶನ್ ಅವರ ಎದುರಿಗೆ ಅವರ ಅಭಿಮಾನಿ ಒಬ್ಬರಿಗೆ ಅವಮಾನ ಆಗಿದೆ ಆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ತೀವ್ರ ಚರ್ಚೆಯಾಗುತ್ತಿದೆ.

ದರ್ಶನ್ ಅವರು ಅಭಿಮಾನಿಗಳಿಗೆ ಮಾತ್ರ ಅಲ್ಲ ತಮ್ಮನ್ನು ಹುಡುಕಿಕೊಂಡು ಸಹಾಯ ಅರಸಿ ಬರುವವರಿಗೂ ಕೂಡ ಯಾವುದೇ ಪ್ರಚಾರ ಪಡೆಯದೆ ಕೈಲಾದಷ್ಟು ಸಹಾಯ ಮಾಡಿ ಅನೇಕರ ಪಾಲಿಗೆ ದೇವರಾಗಿದ್ದಾರೆ. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಇಷ್ಟಪಡುವಂತಹ ವ್ಯಕ್ತಿತ್ವ ಹೊಂದಿರುವ ದರ್ಶನ್ ಅವರಿಗೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿ ಬಳಗವಿದೆ. ಹೀಗಾಗಿಯೇ ದರ್ಶನ್ ಅವರು ಯಾವುದೇ ಕಾರ್ಯಕ್ರಮಕ್ಕೆ ಹೋದರು ಕೂಡ ಅಲ್ಲಿ ಲಕ್ಷಾಂತರ ಅಭಿಮಾನಿಗಳು ಸೇರಿರುತ್ತಾರೆ.

ಅಭಿಮಾನಿಗಳಿಗೆ ಡಿ ಬಾಸ್ ಎಂದರೆ ಏನು ಒಂದು ರೀತಿ ಕ್ರೇಜ್ ಅವರ ನೇರ ನುಡಿ ಮತ್ತು ನಿಷ್ಕಲ್ಮಶ ಹೃದಯ ನೋಡಿದ ತಕ್ಷಣವೇ ಇಷ್ಟವಾಗುವಂತಹ ಗುಣವಾಗಿದೆ. ಅದೇನೋ ಗೊತ್ತಿಲ್ಲ ದರ್ಶನ್ ಅವರನ್ನು ಅವರ ಅಭಿಮಾನಿಗಳು ಇಷ್ಟಪಡುವ ಆ ಮಟ್ಟದ ಪ್ರೀತಿಗೆ ಮತ್ತೊಂದು ಹೋಲಿಕೆಯನ್ನು ಮಾಡಲಾಗದು.

ಹೀಗೆ ಇತ್ತೀಚೆಗೆ ಕಾರ್ಯಕ್ರಮ ಒಂದಕ್ಕೆ ಮುಖ್ಯ ಅತಿಥಿಯಾಗಿ ಹೋಗಿದ್ದ ದರ್ಶನ್ ಅವರನ್ನು ನೋಡಲು ಎಂದಿನಂತೆ ದೊಡ್ಡ ಮಟ್ಟದ ಜನಸಾಗರವೇ ಅಲ್ಲಿ ಸೇರಿತ್ತು. ಕಾರ್ಯಕ್ರಮದ ವಿಶೇಷ ಆಕರ್ಷಣೆ ದರ್ಶನ್ ಅವರಾಗಿದ್ದ ಕಾರಣ ಅವರ ಮಾತುಗಳನ್ನು ಕೇಳಲು ಅವರನ್ನು ನೋಡಲು ದಾಖಲೆ ಮಟ್ಟದ ಸಂಖ್ಯೆಯಲ್ಲಿ ಅಲ್ಲಿ ಅಭಿಮಾನಿಗಳು ಸೇರಿದ್ದರು.

ಇಂತಹ ಕಾರ್ಯಕ್ರಮದಲ್ಲಿ ದರ್ಶನ್ ಅವರನ್ನು ನೋಡಿದ ತಕ್ಷಣ ಭಾವುಕವಾದ ಅಭಿಮಾನಿ ಒಬ್ಬ ಅವರನ್ನು ಓಡಿ ಹೋಗಿ ತಬ್ಬಿಕೊಳ್ಳಲು ಪ್ರಯತ್ನಪಟ್ಟಿದ್ದಾನೆ. ವೇದಿಕೆ ಮೇಲೆ ದರ್ಶನ್ ಅವರು ಅವರ ಪಾಡಿಗೆ ಮಾತನಾಡುತ್ತಿದ್ದರು ಅಲ್ಲಿಗೆ ಓಡಿ ಬಂದ ಅವರ ಅಭಿಮಾನಿ ದರ್ಶನ್ ಅವರನ್ನು ಅಪ್ಪಿ ಕೊಳ್ಳುವ ಮೊದಲೇ ಅಲ್ಲಿಗೆ ಧಾವಿಸಿದ ದರ್ಶನ್ ಅವರ ಬಾಡಿಗಾರ್ಡ್ ಆತನನ್ನು ಹಿಡಿದು ವೇದಿಕೆಯಿಂದ ಹೊರ ಕಳುಸಿದ್ದಾರೆ.

ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿದ್ದು ಬಾಡಿಗಾರ್ಡ್ ವರ್ತನೆ ಬಗ್ಗೆ ಜನ ಬೇಸರಿಸಿಕೊಂಡು ರಿಪ್ಲೈ ಮಾಡುತ್ತಿದ್ದಾರೆ ಮತ್ತು ದರ್ಶನ್ ಅವರು ಅವವ ಎದುರಿಗೆ ಹೀಗಾಗುತ್ತಿದ್ದರೂ ತಡೆಯದೆ ಸುಮ್ಮನಿದ್ದರಾ ಎಂದು ಪ್ರಶ್ನಿಸುತ್ತಿದ್ದಾರೆ. ಅಲ್ಲಿ ನಂತರ ಏನಾಯ್ತು ಎಂದು ಸರಿಯಾದ ಮಾಹಿತಿ ಇಲ್ಲ ಆದರೆ ದರ್ಶನ್ ಅವರು ಖಂಡಿತವಾಗಿ ಆ ವ್ಯಕ್ತಿಯನ್ನು ಅಪ್ಪಿಕೊಂಡು ಮಾತನಾಡಿಸಿ ಕಳುಹಿಸಿದ್ದಾರೆ ಎನ್ನುವ ನಂಬಿಕೆ ಅವರ ಅಭಿಮಾನಿಗಳಲ್ಲಿ ಇದೆ.

ಸೆಲೆಬ್ರೆಟಿಗಳು ಈ ರೀತಿ ಹೊರ ಹೋದಾಗ ಅವರ ಮೇಲೆ ಜನ ಅಭಿಮಾನದಿಂದ ಮುಗಿ ಬೀಳುವುದು ಸಹಜ ಆದರೆ ಅವರನ್ನು ರಕ್ಷಿಸುವ ಹೊಣೆ ಕೂಡ ಅವರ ಬಾಡಿಗಾರ್ಡ್ ಗಳಿಗೆ ಇರುತ್ತದೆ. ಈ ಬಗ್ಗೆ ದರ್ಶನ್ ಅವರಿಗೆ ಮಾತ್ರವಲ್ಲದೇ ಬೇರೆ ಹೀರೋಗಳ ಬಾಡಿಗಾರ್ಡ್ ಗಳು ಮತ್ತು ಅಭಿಮಾನಿಗಳ ನಡುವೆ ಕೂಡ ಸಾಕಷ್ಟು ಸಲ ಸಂಘರ್ಷಗಳಾಗಿವೆ. ಇದು ಅಂತಹದೊಂದು ಸಾಧಾರಣ ಘಟನೆ ಎನ್ನುತ್ತಿದ್ದಾರೆ ಕೆಲವರು.

Entertainment Tags:Challenging star darshan, D Boss, Darshan, Darshan event, Darshan fans, Kranthi
WhatsApp Group Join Now
Telegram Group Join Now

Post navigation

Previous Post: ರಾತ್ರೋರಾತ್ರಿ ಯಾರಿಗೂ ತಿಳಿಯದ ಹಾಗೇ ಗುಟ್ಟಾಗಿ ಮದುವೆಯಾದ ರಶ್ಮಿಕಾ & ವಿಜಯ್ ದೇವರಕೊಂಡ ಮದುವೆ ಫೋಟೋ ವೈರಲ್.
Next Post: ಮದ್ವೆ ಆಗಲ್ಲ, ನನ್ಗೆ ಮದ್ವೆ ಮುಖ್ಯ ಅಲ್ಲ, ಮದ್ವೆ ಆದವ್ರು ಯಾರು ತಾನೇ ಖುಷಿಯಾಗಿದ್ದಾರೆ.? ಎಂದು ಶಾ-ಕಿಂ-ಗ್ ಹೇಳಿಕೆ ಕೊಟ್ಟ ನಟಿ ರಮ್ಯಾ.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore