Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಅಂದು ದರ್ಶನ್ ಪತ್ನಿಗೆ ಹ’ಲ್ಲೆ ಮಾಡಿದ ಪ್ರಕಾರದಲ್ಲಿ ಜೈಲಿಗೆ ಸೇರಿದಾಗ ದರ್ಶನ್ ಬೆನ್ನೆಲುಬಾಗಿ ನಿಂತ ಏಕೈಕ ನಟ ಯಾರು ಗೊತ್ತಾ.?

Posted on August 4, 2022 By Kannada Trend News No Comments on ಅಂದು ದರ್ಶನ್ ಪತ್ನಿಗೆ ಹ’ಲ್ಲೆ ಮಾಡಿದ ಪ್ರಕಾರದಲ್ಲಿ ಜೈಲಿಗೆ ಸೇರಿದಾಗ ದರ್ಶನ್ ಬೆನ್ನೆಲುಬಾಗಿ ನಿಂತ ಏಕೈಕ ನಟ ಯಾರು ಗೊತ್ತಾ.?

ನಿಮ್ಮೆಲ್ಲರಿಗೂ ತಿಳಿದಿರುವಂತೆ ನಟ ದರ್ಶನ್ ಅವರು ಮುಂಗೋಪಿ ಅಷ್ಟೇ ಅಲ್ಲದೆ ಇದ್ದ ವಿಚಾರವನ್ನು ನೇರವಾಗಿ ಹೇಳುತ್ತಾರೆ ಮನಸ್ಸಿನಲ್ಲಿ ಯಾವುದೇ ಕಲ್ಮಶ ಇರುವುದಿಲ್ಲ ಆದರೆ ಇವರಿಗೆ ಕೋಪಾ ವಿಪರೀತವಾಗಿ ಬರುತ್ತದೆ. ಈ ಕಾರಣದಿಂದಲೇ ತಮ್ಮ ಧರ್ಮಪತ್ನಿ ವಿಜಯಲಕ್ಷ್ಮಿ ಅವರು ಒಟ್ಟಿಗೆ ಸಂಸಾರದಲ್ಲಿ ಚಿಕ್ಕದೊಂದು ಬಿರುಕು ಮೂಡಿತು. ಆ ಸಂದರ್ಭದಲ್ಲಿ ಮಾತಿನ ಚಕ್ಕಮಕ್ಕಿಯಲ್ಲಿ ದರ್ಶನ್ ಅವರು ವಿಜಯಲಕ್ಷ್ಮಿ ಅವರ ಮೇಲೆ ಹ.ಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದವು. ಸ್ವತಃ ವಿಜಯಲಕ್ಷ್ಮಿ ಅವರೇ ತಮ್ಮ ಪತಿಯ ವಿರುದ್ಧ ದೂರು ಕೊಟ್ಟಿದ್ದಾರೆ ಎಂಬ ಮಾಹಿತಿಗಳು ಕೂಡ ಹೊರಬಂದವು ಅಷ್ಟೇ ಅಲ್ಲದೆ ದರ್ಶನ್ ತಮ್ಮ ಮಗನಿಗೆ ಕೊ.ಲೆ ಬೆ.ದ.ರಿ.ಕೆ ಹಾಕಿದ್ದಾರೆ ಎಂಬ ವದಂತಿಗಳು ಕೂಡ ಹರಿದಾಡುತ್ತಿದ್ದವು.

ಈ ವಿಚಾರಕ್ಕಾಗಿಯೇ ದರ್ಶನ್ ಅವರು ಪರಪ್ಪನ ಅಗ್ರಹಾರದಲ್ಲಿ ಸುಮಾರು ಒಂದು ತಿಂಗಳವರೆಗೆ ಜೈಲುವಾಸ ಅನುಭವಿಸಬೇಕಾಗುತ್ತದೆ ಆ ಸಂದರ್ಭದಲ್ಲಿ ದರ್ಶನ್ ಅವರು ತಮ್ಮ ಪತ್ನಿಯ ಮೇಲೆ ಹ.ಲ್ಲೆ ಮಾಡಿರಬಹುದು ಮಗನಿಗೂ ಕೂಡ ಕೊ.ಲೆ ಬೆ.ದ.ರಿ.ಕೆ ಹಾಕಿದರೆ ಎಂಬ ವಿಚಾರವನ್ನು ಚಿತ್ರರಂಗದಲ್ಲಿ ಇರುವ ಬಹುತೇಕ ಎಲ್ಲಾ ನಟರು ಕೂಡ ನಂಬಿದ್ದರು. ಈ ಸಂದರ್ಭದಲ್ಲಿ ದರ್ಶನ್ ಅವರಿಗೆ ಯಾವ ಹೀರೋ ಕೂಡ ಸಪೋರ್ಟ್ ಮಾಡಲಿಲ್ಲ ಅದೇ ಸಂದರ್ಭದಲ್ಲಿ ದರ್ಶನ್ ಅಭಿನಯಿಸಿದಂತಹ ಸಾರಥಿ ಸಿನಿಮಾ ಚಿತ್ರೀಕರಣವು ಕಂಪ್ಲೀಟ್ ಆಗಿತ್ತು. ಚಿತ್ರ ಇನ್ನೇನು ಬಿಡುಗಡೆಯಾಗಬೇಕಿತ್ತು ಆ ಸಂದರ್ಭದಲ್ಲಿ ದರ್ಶನವರು ಜೈಲು ಸೇರಿದರು ಈ ಕಾರಣದಿಂದಾಗಿ ಸಿನಿಮಾ ಯಶಸ್ವಿ ಕಾಣುತ್ತದೆಯೋ ಅಥವಾ ಇಲ್ಲವೋ ಎಂಬ ಆತಂಕ ನಿರ್ಮಾಪಕರಿಗೆ ಇರುತ್ತದೆ. ಅಷ್ಟೇ ಅಲ್ಲದೆ ಈ ಸಿನಿಮಾಗಾಗಿ ಬಂಡವಾಳವನ್ನು ಕೂಡ ಸಾಲವನ್ನಾಗಿ ಪಡೆದುಕೊಂಡಿದ್ದರು ಒಂದು ಕಡೆ ಫೈನಾನ್ಸಿಯರ್ ಅವರ ಒತ್ತಾಯ ಬ್ಯಾಂಕ್ನಿಂದ ಹೆಚ್ಚಾದ ಕರೆಗಳು ಬರುತ್ತಿದ್ದ ಕರಣ ಹೇಗಾದರೂ ಮಾಡಿ ಈ ಸಿನಿಮಾವನ್ನು ಬಿಡುಗಡೆ ಮಾಡಲೇಬೇಕು ಎಂದು ದರ್ಶನ್ ಅವರ ಸಹೋದರ ಆದ ದಿನಕರ್ ತೂಗುದೀಪ ಅವರಿಗೆ ನಿರ್ಮಾಪಕರು ಒತ್ತಾಯ ಮಾಡುತ್ತಾರೆ.

ಈ ಸಂದರ್ಭದಲ್ಲಿ ಯಾವ ನಟನ ಬೆಂಬಲ ಇಲ್ಲದೆ ಸಿನಿಮಾವನ್ನು ರಿಲೀಸ್ ಮಾಡಿದರೆ ಖಂಡಿತವಾಗಿಯೂ ಕೂಡ ಈ ಸಿನಿಮಾ ಓಡುವುದಿಲ್ಲ ಎಂದು ದಿನಕಾರ್ ಹೇಳುತ್ತಾರೆ. ಆ ಸಮಯದಲ್ಲಿ ದರ್ಶನವರಿಗೆ ಬೆನ್ನಲ್ಲ ಬಗ್ಗೆ ನಿಂತ ಏಕೈಕ ವ್ಯಕ್ತಿ ಅಂದರೆ ಅದು ಕಿಚ್ಚ ಸುದೀಪ್ ಅಂತಾನೇ ಹೇಳಬಹುದು ಸ್ವತಃ ಕಿಚ್ಚ ಸುದೀಪ್ ಅವರೇ ದಿನಾಕರ್ ತೂಗುದೀಪ ಅವರಿಗೆ ಕರೆ ಮಾಡಿ ಈ ಸಿನಿಮಾವನ್ನು ರಿಲೀಸ್ ಮಾಡು ಈ ಸಿನಿಮಾದ ಪ್ರಮೋಷನ್ ಕಾರ್ಯಕ್ಕೆ ಏನೆ ಸಹಾಯ ಮಾಡಬೇಕು ನಾನು ಮಾಡುತ್ತೇನೆ ಈ ಸಿನಿಮಾದ ಪ್ರಚಾರ ಕಾರ್ಯವನ್ನು ನಾನೆ ಮುಂದೆ ನಿಂತು ನಡೆಸಿಕೊಡುತ್ತೇನೆ. ದರ್ಶನ್ ಅವರಿಗೆ ಯಾವುದೇ ತೊಂದರೆ ಆಗದಂತೆ ಎಲ್ಲ ವಿಚಾರವನ್ನು ಕೂಡ ನಾನು ನಿಭಾಯಿಸಿಕೊಂಡು ಹೋಗುತ್ತೇನೆ ಎಂದು ಧೈರ್ಯವನ್ನು ತುಂಬುತ್ತಾರೆ.

ಅಷ್ಟೇ ಅಲ್ಲದೆ ಮಾಧ್ಯಮಗಳ ಮುಂದೆ ಪ್ರತಿಕ್ರಿಯೆ ನೀಡಿದಂತಹ ಸುದೀಪ ಅವರು ದರ್ಶನ್ ಯಾರು ಮಾಡಿರದ ತಪ್ಪೇನು ಮಾಡಿಲ್ಲ ಸೆಲೆಬ್ರೆಟಿ ಆದ ಕಾರಣಕ್ಕೆ ಪತ್ನಿಯ ಜೊತೆ ವೈಮನಸ್ಸು ಮೂಡಬಾರದು ಎಂಬುದೇನು ಇಲ್ಲವಲ್ಲ. ಸಂಸಾರ ಎಂದ ಮೇಲೆ ಚಿಕ್ಕಪುಟ್ಟ ತೊಂದರೆಗಳು ಇದ್ದೇ ಇರುತ್ತದೆ ಆದರೆ ಅದನ್ನೇ ದೊಡ್ಡದು ಮಾಡಬಾರದು. ಈ ಪ್ರಪಂಚದಲ್ಲಿ ಯಾವ ಗಂಡ ಹೆಂಡತಿ ತಾನೇ ಕಿತ್ತಾಡದೆ ಇದ್ದರೆ ತೋರಿಸಿ ಎಂದು ಮಾಧ್ಯಮದವರಿಗೆ ತಿರುಗೇಟು ನೀಡಿದರು. ಅಷ್ಟೇ ಅಲ್ಲದೆ ಪರಪ್ಪನ ಅಗ್ರಹಾರನಿಂದ ಹೊರಬರುವುದಕ್ಕೆ ಸುದೀಪ ಅವರು ಸಾಕಷ್ಟು ಸಹಾಯ ಮಾಡಿದ್ದಾರೆ ನಿಜಕ್ಕೂ ಚಿತ್ರರಂಗದಲ್ಲಿ ಅಂಬರೀಶ್ ಮತ್ತು ವಿಷ್ಣುವರ್ಧನ್ ಅವರನ್ನು ಹೊರತುಪಡಿಸಿದರೆ ದರ್ಶನ್ ಮತ್ತು ಕಿಚ್ಚ ಸುದೀಪ್ ಅವರೇ ಆ ಸ್ಥಾನವನ್ನು ತುಂಬಾ ಬಲ್ಲ ನಟರು ಎಂದು ಸ್ಯಾಂಡಲ್ವುಡ್ ನಲ್ಲಿ ಮಾತನಾಡಿಕೊಳ್ಳುತ್ತಿದ್ದರು.

ಆದರೆ ಅದ್ಯಾರೋ ಕೆಟ್ಟ ದೃಷ್ಟಿ ಬಿತ್ತೋ ಏನೋ ಗೊತ್ತಿಲ್ಲ ಇವರಿಬ್ಬರ ಸ್ನೇಹ ಹೆಚ್ಚು ದಿನ ಉಳಿಯಲಿಲ್ಲ ಇವರಿಬ್ಬರ ನಡುವೆ ಯಾವುದೇ ರೀತಿಯಾದಂತಹ ಕ.ಲ.ಹ ನಡೆದೆ ಇದ್ದರೂ ಕೂಡ ಕೆಲವು ಭಿನ್ನಾಭಿಪ್ರಾಯಗಳಿಂದ ಹಾಗೂ ಕಿಡಿಗೇಡಿಗಳಿಂದ ಇವರಿಬ್ಬರ ನಡುವೆ ತಂದಿಡುವಂತಹ ಕೆಲಸವನ್ನು ಮಾಡಿದ್ದಾರೆ. ಈ ವಿಚಾರಕ್ಕಾಗಿ ಬೇಸರಗೊಂಡ ದರ್ಶನ್ ಹಾಗೂ ಸುದೀಪ್ ಅವರು ಇದೀಗ ಬೇರೆ ಬೇರೆಯಾಗಿದ್ದಾರೆ. ಒಟ್ಟಾಗಿ ಕಾಣಿಸಿಕೊಳ್ಳದೆ ಇದ್ದರೂ ಕೂಡ ಮನಸ್ಸಿನಲ್ಲಿ ಇವರ ಸ್ನೇಹಕ್ಕೆ ಅಷ್ಟೇ ಮಹತ್ವವನ್ನು ನೀಡಿದ್ದಾರೆ ಇದಕ್ಕೆ ಉದಾಹರಣೆ ಅಂದರೆ ಕುರುಕ್ಷೇತ್ರ ಸಿನಿಮಾ ಬಿಡುಗಡೆಯಾದಾಗ ಕಿಚ್ಚ ಸುದೀಪ್ ಅವರು ಈ ಸಿನಿಮಾದ ದುರ್ಯೋಧನನ ಪಾತ್ರ ಮಾಡುವುದಕ್ಕೆ ದರ್ಶನ್ ಅವರಿಂದ ಮಾತ್ರ ಸಾಧ್ಯ ಅವರ ಪಾತ್ರವನ್ನು ಇನ್ಯರಿಂದಲೂ ಮಾಡುವುದಕ್ಕೆ ಸಾಧ್ಯವಿಲ್ಲ ನನ್ನ ಸ್ನೇಹಿತನಿಗೆ ಶುಭವಾಗಲಿ ಎಂದು ಟ್ವೀಟ್ ಮಾಡಿದ್ದರು.

ಮತ್ತೊಂದು ಕಡೆ ದರ್ಶನವರು ಕೂಡ ಸಂದರ್ಶನ ಒಂದರಲ್ಲಿ ಮಾತನಾಡುವಂತಹ ಸಂದರ್ಭದಲ್ಲಿ ಕಿಚ್ಚ ಸುದೀಪ್ ಅವರ ಪೈಲ್ವಾನ್ ಸಿನಿಮಾ ಬಿಡುಗಡೆಯಾಗಿರುತ್ತದೆ. ಈ ಸಿನಿಮಾದ ಬಗ್ಗೆ ಪ್ರಶ್ನೆ ಕೇಳಿದಾಗ ದರ್ಶನ್ ಅವರು ಕೂಡ ಒಳ್ಳೆಯ ಸಿನಿಮಾವನ್ನೇ ಮಾಡಿದ್ದಾರೆ ಅವರಿಗೆ ಚಿತ್ರದಿಂದ ಯಶಸ್ವಿ ಸಿಗಲಿ ಎಂದು ಹಾರೈಸಿದರು. ಇವೆಲ್ಲವನ್ನೂ ನೋಡುತ್ತಿದ್ದರೆ ದರ್ಶನ್ ಹಾಗೂ ಸುದೀಪ್ ಅವರ ನಡುವೆ ವೈ ಮನಸು ಇದ್ದರೂ ಕೂಡ ಒಬ್ಬರಿಗೊಬ್ಬರು ಕೆಟ್ಟದ್ದನ್ನು ಮಾತ್ರ ಬಯಸಿಲ್ಲ ಎಂದು ತಿಳಿಯುತ್ತದೆ. ಆದಷ್ಟು ಬೇಗ ಈ ಇಬ್ಬರು ನಟರು ಮೊದಲಿನಂತೆ ಒಂದಾಗಲಿ ಎಂದು ಅಭಿಮಾನಿಗಳು ಆಶಯ ಪಟ್ಟಿದ್ದಾರೆ ನಿಮ್ಮ ಪ್ರಕಾರ ಕಿಚ್ಚ ಸುದೀಪ್ ಮತ್ತು ದರ್ಶನ್ ಅವರು ಒಂದಾದರೆ ಹೇಗಿರುತ್ತದೆ ಎಂಬುದನ್ನು ಊಹೆ ಮಾಡಿ ನೋಡಿ. ಈ ಇಬ್ಬರು ನಟರು ಒಂದಾಗುವುದನ್ನು ನೀವು ಬಯಸುವುದಾದರೆ ತಪ್ಪದೆ ನಮಗೆ ಕಾಮೆಂಟ್ ಬಾಕ್ಸ್ ನಲ್ಲಿ ಕಿಚ್ಚ ದರ್ಶನ್ ಎಂದು ಕಾಮೆಂಟ್ ಮಾಡಿ.

Entertainment Tags:Badhsha sudeep, Box office sulthana, Challenging star darshan, Darshan dacchu, Kiccha sudeep, Sudeep
WhatsApp Group Join Now
Telegram Group Join Now

Post navigation

Previous Post: ಹೊಸ ಫೋಟೋ ಶೂಟ್ ಮಾಡಿಸಿದ ಅಗ್ನಿಸಾಕ್ಷಿ ಖ್ಯಾತಿಯ ವೈಷ್ಣವಿ, ಈ ಫೋಟೋಸ್ ನೋಡಿ ದಂಗಾದ ನೆಟ್ಟಿಗರು.
Next Post: ಅಪ್ಪು ಸ್ಥಾನವನ್ನು ತುಂಬುವ ಏಕೈಕ ನಟ ಇವರೇ ನೋಡಿ ಇನ್ನು ಮುಂದೆ ಅಪ್ಪು ಬದಲಿಗೆ ಈ ನಟನೆ ಹೆಚ್ಚು ಪ್ರಸಿದ್ಧಿ ಪಡೆಯುತ್ತಾರೆ.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore