Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ದರ್ಶನ್ ಕೈ ಹಿಡಿಯಬೇಕಾಗಿದ್ದ ರಕ್ಷಿತಾ ಡೈರೆಕ್ಟರ್ ಪ್ರೇಮ್ ಅವರನ್ನು ಮದುವೆ ಆಗಿದ್ದು ಯಾಕೆ ಗೊತ್ತಾ.?

Posted on April 16, 2023 By Kannada Trend News No Comments on ದರ್ಶನ್ ಕೈ ಹಿಡಿಯಬೇಕಾಗಿದ್ದ ರಕ್ಷಿತಾ ಡೈರೆಕ್ಟರ್ ಪ್ರೇಮ್ ಅವರನ್ನು ಮದುವೆ ಆಗಿದ್ದು ಯಾಕೆ ಗೊತ್ತಾ.?

 

ರಕ್ಷಿತಾ ಪ್ರೇಮ್ ಈ ಹೆಸರು ಕೇಳಿದ ತಕ್ಷಣ ಎಲ್ಲರ ಮುಖದಲ್ಲೂ ಕೂಡ ಒಂದು ಮುಗುಳುನಗೆ ಮೂಡುತ್ತದೆ. ಇದಕ್ಕೆ ಕಾರಣ ರಕ್ಷಿತಾ ಅವರ ನಗುಮುಖ. ಇದ್ದಲೆಲ್ಲಾ ಲವಲವಿಕೆಯಿಂದ ಕಾಣಿಸಿಕೊಂಡು ನಗುನಗುತ್ತ ಎಲ್ಲರ ಜೊತೆ ತಮಾಷೆ ಮಾಡಿಕೊಂಡು ಆಕ್ಟಿವ್ ಆಗಿರುವ ಇವರು ಕನ್ನಡ ಸಿನಿಮಾ ಇಂಡಸ್ಟ್ರಿಯ ಸ್ಟಾರ್ ನಟಿ. 2002 ರಲ್ಲಿ ಅಪ್ಪು ಸಿನಿಮಾ ಮೂಲಕ ಶ್ವೇತಾ ಆಗಿದ್ದ ಇವರು ರಕ್ಷಿತ ಎನ್ನುವ ಮರುನಾಮಕರಣವನ್ನು ಪಾರ್ವತಮ್ಮ ರಾಜಕುಮಾರ್ ಅವರಿಂದ ಮಾಡಿಸಿಕೊಂಡು ಸಿನಿಮಾ ರಂಗಕ್ಕೆ ಕಾಲಿಡುತ್ತಾರೆ.

2007 ರಲ್ಲಿ ನಿರ್ದೇಶಕ ಪ್ರೇಮ್ ಅವರ ಕೈಹಿಡಿದ ರಕ್ಷಿತಾ ಪ್ರೇಮ್ ಅವರು ಸ್ವ ಇಚ್ಛೆಯಿಂದ ಇನ್ನೂ ಸಿನಿಮಾಗಳನ್ನು ಮಾಡುವುದಿಲ್ಲ ಎಂದು ಹೇಳಿ ಸಿನಿಮಾ ರಂಗದಿಂದ ದೂರ ಆಗುತ್ತಾರೆ. ಆದರೆ ಐದಾರು ವರ್ಷಗಳು ಮಾತ್ರ ಸಿನಿಮಾರಂಗದಲ್ಲಿ ಇದ್ದರೂ ಇವರು ಎಲ್ಲಾ ಸಿನಿಮಾಗಳು ಹಾಗೂ ಎಲ್ಲಾ ಪಾತ್ರಗಳು ಕೂಡ ಸೂಪರ್ ಹಿಟ್.

ಕಡಿಮೆ ಸಮಯದಲ್ಲಿ ಬಹುತೇಕ ಎಲ್ಲಾ ನಾಯಕನಟರುಗಳ ಜೊತೆಗೆ ಅವರು ತೆರೆ ಹಂಚಿಕೊಂಡಿದ್ದರು. ಉಪೇಂದ್ರ, ದರ್ಶನ್, ಸುದೀಪ್, ಪುನೀತ್, ಮುರಳಿ, ವಿಜಯ ರಾಘವೇಂದ್ರ, ವಿಷ್ಣುವರ್ಧನ್, ರವಿಚಂದ್ರನ್, ಶಿವರಾಜ್ ಕುಮಾರ್ ಹೀಗೆ ಎಲ್ಲರೊಂದಿಗೂ ಕೂಡ ಅಭಿನಯಿಸಿದ್ದ ಈಕೆ ದರ್ಶನ್ ಜೊತೆ ಯಶಸ್ವಿ ಜೋಡಿಯಾಗಿ ಕಾಣಿಸಿಕೊಂಡಿದ್ದರು. ದರ್ಶನ್ ಮತ್ತು ರಕ್ಷಿತಾ ಅವರ ಕೆಮಿಸ್ಟ್ರಿ ತೆರೆ ಮೇಲೆ ಸಕ್ಕತ್ತಾಗಿ ವರ್ಕೌಟ್ ಆಗುತ್ತಿತ್ತು.

ದರ್ಶನ್ ಮತ್ತು ರಕ್ಷಿತಾ ಇವರಿಬ್ಬರ ನಡುವೆ ಮೊದಲೇ ಸ್ನೇಹವಿದ್ದ ಕಾರಣ ಈ ಹೊಂದಾಣಿಕೆ ಸಾಧ್ಯವಾಗಿತ್ತು ಎಂದು ಹೇಳಬಹುದು. ಯಾಕೆಂದರೆ ರಕ್ಷಿತಾ ಅವರು ಕನ್ನಡದ ಫೇಮಸ್ ಸಿನಿಮಾಟೋಗ್ರಾಫರ್ ಗೌರಿಶಂಕರ್ ಅವರ ಪುತ್ರಿ, ಗೌರಿಶಂಕರ್ ಅವರ ಪ್ರೀತಿಯ ಶಿಷ್ಯ ದರ್ಶನ್ ಹಾಗಾಗಿ ಇವರಿಬ್ಬರ ನಡುವೆ ಉತ್ತಮ ಸ್ನೇಹವಿತ್ತು.

ರಕ್ಷಿತಾ ಪ್ರೇಮ್ ಅವರು ಬಾಲ್ಯದಿಂದಲೂ ಕೂಡ ಅನೇಕ ನೋವನ್ನು ಅನುಭವಿಸಿಕೊಂಡು ಬಂದಿದ್ದಾರೆ. ಅವರು ಚಿಕ್ಕವರಿದ್ದಾಗಲೇ ತಂದೆ ತಾಯಿ ಬೇರೆಯಾದ ಕಾರಣ ಮಮತಾ ರಾವ್ ಜೊತೆಗೆ ಬೆಳೆದ ಇವರು ತಂದೆ ಮೇಲೆ ಬಹಳ ಪ್ರೀತಿ ಇಟ್ಟು ಕೊಂಡಿದ್ದರು. ರಕ್ಷಿತಾ ಅವರ ತಂದೆಗೆ ತನ್ನ ಮಗಳು ಹೀರೋಯಿನ್ ಆಗದಿದ್ದರೂ ಪರವಾಗಿಲ್ಲ ಒಂದೊಳ್ಳೆ ಕುಟುಂಬ ಸೇರಿ ಚೆನ್ನಾಗಿ ಬದುಕಬೇಕು ಎನ್ನುವ ಆಸೆ ಇತ್ತು. ಹೀಗಾಗಿ ಸ್ವತಃ ಅವರೇ ದರ್ಶನ್ ಜೊತೆಗೆ ರಕ್ಷಿತಾ ಅವರ ಮದುವೆ ಆಗಬೇಕು ಎಂದು ಆಸೆ ಪಟ್ಟಿದ್ದರು.

ಇದರ ಬಗ್ಗೆ ರಕ್ಷಿತಾ ಅವರ ಜೊತೆಗೂ ಕೂಡ ವಿಷಯ ಪ್ರಸ್ತಾಪ ಮಾಡಿದ್ದರು. ಆಗ ತಾನೇ ಸಿನಿಮಾ ಇಂಡಸ್ಟ್ರಿಯಲ್ಲಿ ಬೆಳಗುತ್ತಿದ್ದ ರಕ್ಷಿತಾ ಅಷ್ಟು ಬೇಗ ಮದುವೆಗೆ ಒಪ್ಪಲಿಲ್ಲ ಜೊತೆಗೆ ದರ್ಶನ್ ಜೊತೆ ಅವರಿಗಿದ್ದಿದ್ದು ಶುದ್ಧ ಸ್ನೇಹವಾಗಿತ್ತು. ಆ ಕಾರಣಕ್ಕಾಗಿ ಅವರು ದರ್ಶನ ಅವರನ್ನು ಮದುವೆಯಾಗಲು ಒಪ್ಪಿಕೊಳ್ಳಲಿಲ್ಲ ಅವರಿಬ್ಬರ ಸ್ನೇಹ ಇಂದಿಗೂ ಕೂಡ ಅಷ್ಟೇ ಪರಿಶುದ್ಧವಾಗಿದೆ. ಜೊತೆಗೆ ಆ ಸಮಯಕ್ಕೆ ದರ್ಶನ್ ಅವರು ವಿಜಯಲಕ್ಷ್ಮಿ ಅವರ ಜೊತೆ ಪ್ರೀತಿಯಲ್ಲಿ ಬಿದ್ದಿದ್ದರು.

ರಕ್ಷಿತಾ ಮತ್ತು ಪ್ರೇಮ್ ಮದುವೆ ಮುಂಚೆಯೇ ಅವರಿಬ್ಬರಿಗೂ ಮದುವೆ ಕೂಡ ಆಗಿತ್ತು. ನಂತರ ರಕ್ಷಿತಾ ಅವರು ನಿರ್ದೇಶಕ ಪ್ರೇಮ್ ಅವರನ್ನು ಪ್ರೀತಿಸಿ ಅವರೇ ಪ್ರಪೋಸ್ ಮಾಡಿ ಪ್ರೇಮ್ ಅವರನ್ನು ವಿವಾಹವಾದರು. ವಿವಾಹವಾದ ಬಳಿಕ ಈಗ ಗೌಡರ ಮನೆ ಸೊಸೆಯಾಗಿ ಅಚ್ಚುಕಟ್ಟಾಗಿ ಬದುಕು ನಡೆಸಿಕೊಂಡು ಹೋಗುತ್ತಿದ್ದಾರೆ. ನಟಿಯಾಗಿ ಅಲ್ಲದಿದ್ದರೂ ಕೂಡ ನಿರ್ಮಾಪಕಿಯಾಗಿ ಸಿನಿಮಾರಂಗದ ನಂಟನ್ನು ಉಳಿಸಿಕೊಂಡಿದ್ದಾರೆ. ದರ್ಶನ್ ಮತ್ತು ರಕ್ಷಿತಾ ಅವರ ಸ್ನೇಹದ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎನ್ನುವುದನ್ನು ತಪ್ಪದೆ ಕಮೆಂಟ್ ಮಾಡಿ ತಿಳಿಸಿ.

Entertainment Tags:Challenging star darshan, Rakshitha pem
WhatsApp Group Join Now
Telegram Group Join Now

Post navigation

Previous Post: ಮಗನ ಮದುವೆ ಸತ್ಯ ಒಪ್ಪಿಕೊಂಡಂತೆ ನಿಮ್ಮ ಪತಿ ಇವರೇ ಎಂಬ ಸತ್ಯವನ್ನು ಒಪ್ಪಿಕೊಳ್ಳಿ ಎಂದು ಹೇಳಿದಕ್ಕೆ ಲೀಲಾವತಿಗೆ & ವಿನೋದ್ ರಾಜ್ ಕೊಟ್ಟ ಪ್ರತಿಕ್ರಿಯೆ ಏನು ಗೊತ್ತ.?
Next Post: ಅಣ್ಣಾವ್ರ ಅದೊಂದು ಹಾಡಿನ ಪ್ರಭಾವದಿಂದ ಕರ್ನಾಟಕದಲ್ಲಿ ಎಷ್ಟೋ ಕಡೆ ಕೋಮುಗಲಭೆ ನಿಂತಿತ್ತು, ಅಷ್ಟು ಪ್ರಭಾವ ಬೀರಿದ ಸಿನಿಮಾ ಯಾವುದು ಗೊತ್ತಾ.?

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore