Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಡಿಸೆಂಬರ್ 29 ವರ್ಷದ ಕೊನೆಯ ಪುಷ್ಯ ನಕ್ಷತ್ರದ ದಿನ, ಅಂದು ಈ ಒಂದು ವಸ್ತುವನ್ನು ಬೀರುವಿನ ಕೆಳಗೆ ಇಡಿ, ವರ್ಷವಿಡೀ ಹಣದ ಹೊಳೆಯೇ ಹರಿದು ಬರುತ್ತದೆ.!

Posted on December 28, 2023 By Kannada Trend News No Comments on ಡಿಸೆಂಬರ್ 29 ವರ್ಷದ ಕೊನೆಯ ಪುಷ್ಯ ನಕ್ಷತ್ರದ ದಿನ, ಅಂದು ಈ ಒಂದು ವಸ್ತುವನ್ನು ಬೀರುವಿನ ಕೆಳಗೆ ಇಡಿ, ವರ್ಷವಿಡೀ ಹಣದ ಹೊಳೆಯೇ ಹರಿದು ಬರುತ್ತದೆ.!

ಎಲ್ಲರಿಗೂ ಕೂಡ ಹೆಚ್ಚು ಹಣ ಪಡೆಯಬೇಕು, ಅದರಿಂದ ಜೀವನದ ಸಮಸ್ಯೆಗಳನ್ನು ಪರಿಹಾರ ಮಾಡಿಕೊಂಡು ಜೀವನದಲ್ಲಿ ಸುಖ ಶಾಂತಿ ನೆಮ್ಮದಿಯಿಂದ ಬದುಕಬೇಕು, ಯಾವುದಕ್ಕೂ ಕೊರತೆ ಇರದ ಲಕ್ಸುರಿ ಜೀವನ ನಡೆಸಬೇಕು ಎನ್ನುವ ಆಸೆ ಇರುತ್ತದೆ. ಹೀಗಾಗಬೇಕು ಎಂದರೆ ಹಣ ಮುಖ್ಯ ಹಣದ ಗುಣವೇನೆಂದರೆ ಇದು ಒಮ್ಮೆ ಆಕರ್ಷಣೆಯಾದರೆ ರಾಶಿ ರಾಶಿ ಹಣವನ್ನು ತನ್ನತ್ತ ಸೆಳೆಯುತ್ತದೆ ಹಾಗಾಗಿ ಹಣ ಇರುವವರ ಕಡೆಗೆ ಹಣ ಹರಿಯುತ್ತದೆ.

ಯಾವ ರೀತಿ ನಾವು ನಮಗೆ ಹಣದ ಕೊರತೆ ಆಗದಂತೆ ನೋಡಿಕೊಳ್ಳಬೇಕು ಮ, ಹೇಗೆ ನಮ್ಮಲ್ಲಿರುವ ಹಣವನ್ನು ಹೆಚ್ಚಿಸಿಕೊಳ್ಳಬೇಕು ಎನ್ನುವುದಕ್ಕೆ ಕೆಲವು ಉಪಾಯಗಳು ಇದೆ. ಶುಭದಿನಗಳಲ್ಲಿ ಈ ವಿಶೇಷ ಆಚರಣೆ ಮಾಡುವುದರಿಂದ ಇಂತಹ ಉತ್ತಮ ಫಲಗಳನ್ನು ಪಡೆಯಬಹುದು ಈಗ ಅದಕ್ಕೆ ಸಮಯ ಬಂದಿದೆ ಡಿಸೆಂಬರ್ 29 ಈ ವರ್ಷದ ಕೊನೆಯ ಪುಷ್ಯ ನಕ್ಷತ್ರದ ದಿನವಾಗಿದೆ.

ಈ ದಿನ ಹಣದ ಆಕರ್ಷಣೆ ಹೆಚ್ಚಿಸಿಕೊಳ್ಳಲು ಉಪಾಯ ಮಾಡುವುದಕ್ಕೆ ಬಹಳ ಶಕ್ತಿಶಾಲಿ ದಿನವಾಗಿದೆ. ಈ ದಿನದಂದು ನಾವು ಹೇಳುವ ಈ ಸರಳ ಉಪಾಯವನ್ನೇನಾದರೂ ನೀವು ಮಾಡಿದರೆ ನಿಮ್ಮ ಜೀವಮಾನದಲ್ಲಿ ನಿಮಗೆ ಎಂದೂ ಹಣದ ಸಮಸ್ಯೆ ಬರುವುದಿಲ್ಲ, ನಿಮ್ಮ ಹಣಕಾಸಿನ ಪರಿಸ್ಥಿತಿ ಸುಧಾರಿಸುತ್ತದೆ, ಎಲ್ಲಿಯಾದರೂ ಹಣ ಹಾಕಿ ಸಿಕ್ಕಿ ಹಾಕಿಕೊಂಡಿದ್ದರೆ ಅವರೇ ಬಂದು ಹಣ ಕೊಡುತ್ತಾರೆ.

ಮನೆ ಮಾಡುವುದು ಆಸ್ತಿ ಖರೀದಿ ಅರ್ಧಕ್ಕೆ ನಿಂತಿದ್ದರೆ ಅದು ಮುಂದಕ್ಕೆ ನಡೆಯುತ್ತದೆ, ನಿಮಗೆ ವ್ಯಾಪಾರ ವ್ಯವಹಾರದಲ್ಲಿ ಅಭಿವೃದ್ಧಿ ಆಗುತ್ತದೆ ಈ ರೀತಿ ನೂರಾರು ಆದಾಯದ ಮೂಲಗಳು ನಿಮಗೆ ಸೃಷ್ಟಿಯಾಗುತ್ತವೆ. ಇದನ್ನು ಬಹಳ ಸರಳವಾಗಿ ಮಾಡಬಹುದು ಮನೆಯಲ್ಲಿರುವ ಗೃಹಿಣೀರು ಸಾಧ್ಯವಾಗದೇ ಇದ್ದರೆ ಮನೆಯಲ್ಲಿರುವ ಯಾವುದೇ ಸದಸ್ಯ ಬೇಕಾದರೂ ಮಾಡಬಹುದು.

ಈ ತಂತ್ರವನ್ನು ಆರಂಭಿಸಲು ಪುಷ್ಯ ನಕ್ಷತ್ರ ಅತ್ಯಂತ ಶುಭ ದಿನವಾಗಿದೆ, ಈ ದಿನ ಆರಂಭಿಸಿ ಮುಂದುವರೆಸಿಕೊಂಡು ಹೋಗಿ. ಅಂತೆಯೇ ಈ ವರ್ಷದ ಕೊನೆಯ ಪುಷ್ಯ ನಕ್ಷತ್ರವು ಡಿಸೆಂಬರ್ 29 ಶುಕ್ರವಾರ ಇದೆ. ಬೆಳಿಗ್ಗೆ 5.30 ರಿಂದ 10.10ರ ಒಳಗೆ ಈ ಆಚರಣೆಯನ್ನು ಮಾಡಬೇಕು.

ಆ ದಿನ ಬೆಳಗ್ಗೆ ನಿಮ್ಮ ಮನೆ ದೇವರ ಹಾಗೂ ಇಷ್ಟ ದೇವರನ್ನು ಪೂಜಿಸಿದ ಮೇಲೆ ಒಂದು ಗಾಜಿನ ಬಟ್ಟಲ ತುಂಬಾ ಉಪ್ಪನ್ನು ತೆಗೆದುಕೊಂಡು ಅದರ ಮೇಲೆ ಆರರಿಂದ ಏಳು ಲವಂಗವನ್ನು ಹಾಕಿ ದೇವರ ಬಳಿ ಇಟ್ಟು ಭಕ್ತಿಯಿಂದ ಬೇಡಿಕೊಂಡು ಪಾಸಿಟಿವ್ ಆಗಿ ಅಫರ್ಮೇಷನ್ ಮಾಡಿಕೊಳ್ಳಬೇಕು.

ನಮಗೆ ಹಣದ ಹರಿವು ಹೆಚ್ಚಾಗಿದೆ ನಮ್ಮ ಬಳಿ ಹಣ ತೆಗೆದುಕೊಂಡು ಹೋದವರು ವಾಪಸ್ ಕೊಟ್ಟಿದ್ದಾರೆ, ನಮ್ಮ ಬಿಸಿನೆಸ್ ಇಂಪ್ರೂ ಆಗಿದೆ ಈ ರೀತಿ ಹೇಳಿಕೊಂಡು ನಂತರ ಅದನ್ನು ಹಣ ಇಡುವ ಬೀರುವಿನ ಕೆಳಗೆ ಯಾರಿಗೂ ಕಾಣದ ರೀತಿ ಇಡಬೇಕು. 15 ದಿನಕ್ಕೊಮ್ಮೆ ಇದನ್ನು ಚೇಂಜ್ ಮಾಡಬೇಕು.

ಇದನ್ನು ತೆಗೆದುಕೊಂಡು ಉಪ್ಪನ್ನು ನೀರಿನಲ್ಲಿ ಕರಗಿಸಿ ಗಿಡಗಳಿಗೆ ಹಾಕಬೇಕು, ಯಾರು ತುಳಿಯದ ಜಾಗದಲ್ಲಿ ಹಾಕಬೇಕು ಅಥವಾ ಗಿಡದ ಬುಡಕ್ಕೆ ಹಾಕಬಹುದು. ಮತ್ತೆ ಹೊಸದಾಗಿ ಬೇರೆ ಉಪ್ಪು ತೆಗೆದುಕೊಂಡು ಅದೇ ರೀತಿ ಪಾಸಿಟಿವ್ ಅಫರ್ಮೇಷನ್ ಮಾಡಿ ಇಡಬೇಕು ಈ ರೀತಿ ಮಾಡುವುದರಿಂದ ನೀವು ಆಶ್ಚರ್ಯ ಪಡುವ ರೀತಿಯಲ್ಲಿ ಬಹಳ ಉತ್ತಮವಾದ ಪರಿಣಾಮಗಳು ಉಂಟಾಗುತ್ತವೆ. ತಪ್ಪದೇ ಈ ದಿನ ಇದನ್ನು ಮಾಡಿ.

Useful Information
WhatsApp Group Join Now
Telegram Group Join Now

Post navigation

Previous Post: ಮಿಥುನ ರಾಶಿಯವರ ವರ್ಷ ಭವಿಷ್ಯ.! 2024 ಹೇಗಿರಲಿದೆ ಗೊತ್ತಾ.?
Next Post: ನಿಮ್ಮ ನಕ್ಷತ್ರದಿಂದ ತಿಳಿಯಬಹುದು ಮದುವೆಯ ಗುಟ್ಟು, ಯಾವ ನಕ್ಷತ್ರದವರ ಸಂಸಾರ ಹೇಗಿರುತ್ತದೆ ನೋಡಿ.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore