Home Entertainment ಮದುವೆ ಆದ ನಾಲ್ಕೇ ದಿನಕ್ಕೆ ನನ್ನ ಅಣ್ಣ ಸಂಪೂರ್ಣ ಬದಲಾಗಿ ಬಿಟ್ಟ ಎಂದು ಕಣ್ಣೀರು ಹಾಕಿ ಬಿಗ್ ಬಾಸ್ ಮನೆಯಲ್ಲಿ ಜೀವನದ ಕಥೆ ಹೇಳಿಕೊಂಡ ನಟಿ ದೀಪಿಕಾ ದಾಸ್

ಮದುವೆ ಆದ ನಾಲ್ಕೇ ದಿನಕ್ಕೆ ನನ್ನ ಅಣ್ಣ ಸಂಪೂರ್ಣ ಬದಲಾಗಿ ಬಿಟ್ಟ ಎಂದು ಕಣ್ಣೀರು ಹಾಕಿ ಬಿಗ್ ಬಾಸ್ ಮನೆಯಲ್ಲಿ ಜೀವನದ ಕಥೆ ಹೇಳಿಕೊಂಡ ನಟಿ ದೀಪಿಕಾ ದಾಸ್

0
ಮದುವೆ ಆದ ನಾಲ್ಕೇ ದಿನಕ್ಕೆ ನನ್ನ ಅಣ್ಣ ಸಂಪೂರ್ಣ ಬದಲಾಗಿ ಬಿಟ್ಟ ಎಂದು ಕಣ್ಣೀರು ಹಾಕಿ ಬಿಗ್ ಬಾಸ್ ಮನೆಯಲ್ಲಿ ಜೀವನದ ಕಥೆ ಹೇಳಿಕೊಂಡ ನಟಿ ದೀಪಿಕಾ ದಾಸ್

ಇಷ್ಟು ದಿನ ಮುಚ್ಚಿಟ್ಟಿದ್ದ ಕಹಿ ಘಟನೆ ಹೊರ ಹಾಕಿದ ನಟಿ(Deepika Das) ದೀಪಿಕಾ ದಾಸ್.

ಬದುಕು ಎಂಬುದು ಎಲ್ಲರಿಗೂ ಒಂದೇ ಅದು ಸೆಲೆಬ್ರಿಟಿ ಆಗಿರಲಿ ಅಥವಾ ಜನ ಸಮಾನ್ಯರಾಗಿರಲಿ

(Deepika Das)ದೀಪಿಕಾ ದಾಸ್ ಅವರು ನಾಗಿಣಿ ಎನ್ನುವ ಕಿರುತೆರೆ ಧಾರಾವಾಹಿ ಮೂಲಕ ಕನ್ನಡಿಗರಿಗೆ ಚಿರಪರಿಚಿತರು. ಇದಾದ ಬಳಿಕ ಬಿಗ್ ಬಾಸ್ ಸೀಸನ್ ಎಂಟರ ಕಂಟೆಸ್ಟೆಂಟ್ ಆಗಿ ಮನೆ ಒಳಗಿದ್ದ ಇವರ ವ್ಯಕ್ತಿತ್ವವನ್ನು ಕನ್ನಡಿಗರು ಮೆಚ್ಚಿಕೊಂಡಿದ್ದಾರೆ. ಸದ್ಯಕ್ಕೆ ಈಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 9ನೇ ಅಲ್ಲೂ ಕೂಡ ಬಿಗ್ ಬಾಸ್ ಕಂಟೆಸ್ಟೆಂಟ್ ಆಗಿದ್ದ ಇವರು ಕಳೆದ ವಾರ ಮನೆಯಿಂದ ಎಲಿಮಿನೇಟ್ ಆಗಿದ್ದರು.

ಪ್ರೇಕ್ಷಕರಿಗೆ ಮತ್ತು ಮನೆ ಮಂದಿಗೆ ಶಾ-ಕ್ ಆಗುವಂತೆ ಮತ್ತೆ ವೈಲ್ಡ್ ಕಾರ್ಡ್ ಎಂಟಿಯಾಗಿ ಬಿಗ್ ಮನೆ ಸೇರಿದ್ದಾರೆ. ಈ ರೀತಿ ಮೂರು ಮೂರು ಬಿಗ್ ಬಾಸ್ ಮನೆಗೆ ಹೋಗುವ ಭಾಗ್ಯ ಸಿಕ್ಕಿರುವುದು ದೀಪಿಕ ದಾಸ್ ಅವರಿಗೆ ಮಾತ್ರ. ದೀಪಿಕಾ ದಾಸ್ ಅವರನ್ನು ಸೀಸನ್ ಎಂಟರಿಂದಲೂ ಸಹ ಜನ ನೋಡಿದ್ದಾರೆ.

ಸದಾ ಗಾಂಭೀರ್ಯದಿಂದ ಇರುವ ಎಲ್ಲೂ ಕೂಡ ಬೇಕಾಬಿಟ್ಟಿ ಮಾತನಾಡದೆ ಬೇಕಾದದ್ದಷ್ಟು ಮಾತ್ರ ಸ್ಪಷ್ಟವಾಗಿ ಚಿಕ್ಕದಾಗಿ ನೇರವಾಗಿ ಹೇಳಿ ಮುಗಿಸುವ ಸದಾ ಶಾಂತವಾಗಿರುವ ಯಾರ ಜೊತೆಗೂ ಕೂಡ ಅತಿ ಹೆಚ್ಚು ಸಲಿಗೆ ಬೆಳೆಸದೆ ಒಂದು ಅಂತರ ಕಾಯ್ದುಕೊಂಡೆ ಎಲ್ಲರ ಜೊತೆಗೂ ಸ್ನೇಹದಿಂದ ಇರುವ ದಿಪಿಕಾ ನೋಡುವುದಕ್ಕೆ ಆಟಿಟ್ಯೂಡ್ ಗರ್ಲ್ ಎನಿಸಿದರೂ ಒಬ್ಬ ಸ್ಟ್ಯಾಂಡರ್ಡ್ ವುಮೆನ್.

ಇವರ ಇಂತಹ ವ್ಯಕ್ತಿತ್ವವೇ ಅನೇಕ ಜನರಿಗೆ ಸ್ಪೂರ್ತಿ ಕೂಡ ಆಗಿದ್ದು ಹೆಣ್ಣುಮಗಳೆಂದರೆ ಹೀಗೆ ಇರಬೇಕು ಎಂದು ಖ್ಯಾತ ಬರಹಗಾರ ರವಿ ಬೆಳಗೆರೆ ಅವರೇ ಸೀಸನ್ ಎಂಟರಲ್ಲಿ ಇವರ ಜೊತೆಗಿದ್ದಾಗ ನೋಡಿ ಹೊಗಳಿದ್ದರು. ದೀಪಿಕಾ ದಾಸ್ ಅವರು ಎಲ್ಲೂ ಕೂಡ ತಮ್ಮ ಕಥೆಯ ಬಗ್ಗೆ ಹೆಚ್ಚು ಹೇಳಿಕೊಳ್ಳುವುದಿಲ್ಲ ಸದಾ ಪ್ರಾಕ್ಟಿಕಲ್ ಆಗಿ ಆ ಘಳಿಕೆ ನಡೆಯುವುದರ ಬಗ್ಗೆ ಮಾತನಾಡುವ ಇವರು ಇತರರಂತೆ ಹಳೆ ಕಥೆಗಳನ್ನು ನೆನೆದು ಕಥೆ ಹೊಡೆಯುವುದು ತೀರಾ ವಿರಳ.

ಆದರೆ ಬಿಗ್ ಬಾಸ್ ಕಡೆಯಿಂದ ಬಂದ ಟಾಸ್ಕ್ ಕಾರಣ ಎಲ್ಲರೂ ಸಹ ಅವರ ಜೀವನದಲ್ಲಿ ನಡೆದ ಕಹಿ ಘಟನೆಗಳನ್ನು ಹೇಳಿಕೊಳ್ಳಲೇ ಬೇಕಾಗಿತ್ತು. ಈ ಸಂದರ್ಭದಲ್ಲಿ ದೀಪಿಕ ದಾಸ್ ಅವರು ಸಹ ಆ ಚಟುವಟಿಕೆಯಲ್ಲಿ ಭಾಗವಹಿಸಿ ಪ್ರಾಮಾಣಿಕವಾಗಿ ತಮ್ಮ ಜೀವನದಲ್ಲಿ ತಮಗಾದ ಅತ್ಯಂತ ಕಹಿಯ ನೋವು ಯಾವುದು ಎನ್ನುವುದನ್ನು ಹೇಳಿಕೊಂಡು ಭಾವುಕರಾಗಿ ಕಣ್ಣೀರು ಇಟ್ಟಿದ್ದಾರೆ.

ಅಷ್ಟಕ್ಕೂ ದೀಪಿಕಾ ದಾಸ್ ಅವರು ಇನ್ನೂ ಸಹ ನೊಂದುಕೊಳ್ಳುತ್ತಿರುವ ಆ ಕಹಿ ಘಟನೆ ಯಾವುದು ಎಂದರೆ ಅವರ ಅಣ್ಣ ಮದುವೆ ಆದ ತಕ್ಷಣ ಬದಲಾದದ್ದು. ದೀಪಿಕಾ ದಾಸ್ ಅವರಿಗೆ ಒಬ್ಬ ಅಣ್ಣನಿದ್ದು ಅವರ ತಂದೆ ತೀರಿ ಹೋದ ಸಂದರ್ಭದಲ್ಲಿ ಅವರ ಮದುವೆ ನಡೆದಿರುತ್ತದೆ. ದೀಪಿಕಾ ದಾಸ್ ಅವರು ಬಹಳ ಇಷ್ಟಪಡುತ್ತಿದ್ದ ತಂದೆ ಲಿವರ್ ಜಾಂಡಿಸ್ಸಿನಿಂದ ತೀರಿ ಹೋಗುತ್ತಾರೆ.

ಅದೇ ಸಮಯದಲ್ಲಿ ಸಂಬಂಧಿಕರು ವರ್ಷದೊಳಗೆ ಶುಭ ಕಾರ್ಯ ಮಾಡಬೇಕು ಎಂದು ಹೇಳಿದ್ದರಂತೆ. ಆಗ ದೀಪಿಕಾ ದಾಸ್ ಅವರು ಆಗಷ್ಟೇ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟಿದ್ದು ತಾನಿನ್ನು ಚಿಕ್ಕವಳು ಈಗಲೇ ಮದುವೆಯಾಗುವುದಿಲ್ಲ ಎಂದು ಕಡಾ ಖಂಡಿತವಾಗಿ ಹೇಳಿ ಬಿಟ್ಟರಂತೆ. ಈ ಕಾರಣದಿಂದ ದೀಪಿಕಾ ಬದಲು ಅವರ ಅಣ್ಣನಿಗೆ ಮದುವೆ ಮಾಡಲು ನಿರ್ಧರಿಸಿದ ಕುಟುಂಬ ಅಂತಹ ಕಷ್ಟದ ಸಂದರ್ಭದಲ್ಲೂ ಅದ್ದೂರಿಯಾಗಿ ಮದುವೆ ಮಾಡಿಕೊಡುತ್ತಾರೆ.

Deepika Das

Deepika Das

ಅಲ್ಲದೆ ಆ ಮದುವೆ ನಡೆಸಲು ಸಾಲ ಕೂಡ ಮಾಡಬೇಕಾಗುತ್ತದೆ. ಆದರೆ ಅವರ ಅಣ್ಣ ಮಾತ್ರ ಮದುವೆ ಆದ ಎರಡೇ ದಿನಕ್ಕೆ ಮನೆಯಲ್ಲಿ ಆದ ಸಣ್ಣ ವಿಷಯಕ್ಕೆ ದೊಡ್ಡದಾಗಿ ಜಗಳ ಆಡಿ ಅತ್ತಿಗೆ ಎದುರೇ ತಟ್ಟೆ ಎಸೆದು ರಂಪ ಮಾಡಿದ್ದರಂತೆ. ಅದಾದ ಬಳಿಕ ಮನೆ ಬಿಟ್ಟು ಹೋಗಿ ಬೇರೆ ಮನೆಯಲ್ಲಿ ನೆಲೆಸಿದ್ದ ಇವರು ತಂಗಿ ಹಾಗೂ ಅಮ್ಮನನ್ನು ಹಲವು ದಿನಗಳವರೆಗೆ ದೂರ ಇಟ್ಟಿದ್ದರಂತೆ.

ಆ ಸಂದರ್ಭದಲ್ಲಿ ತನಗೆಷ್ಟು ನೋವು ಆಗಿತ್ತು ಎನ್ನುವುದನ್ನು ಹೇಳಿಕೊಂಡು ದೀಪಿಕಾ ಕಣ್ಣೀರಿಟ್ಟಿದ್ದಾರೆ. ಆದರೆ ಸದ್ಯ ದೇವರ ದಯೆಯಿಂದ ಈಗ ಎಲ್ಲಾ ಸರಿ ಆಗಿದ್ದು ಅಣ್ಣ ವಾಪಸ್ ಮನೆಗೆ ಬಂದಿದ್ದಾರಂತೆ. ಸಾಮಾನ್ಯ ಜನರ ಮನೆಯಲ್ಲಿ ಇಂತಹ ಘಟನೆ ನಡೆಯುವುದನ್ನು ನಾವು ಕೇಳಿದ್ದೇವೆ ನೋಡಿದ್ದೇವೆ ಆದರೆ ಸೆಲೆಬ್ರಿಟಿಗಳ ಬದುಕಲು ಕೂಡ ಇಂತಹ ಕಹಿ ಘಟನೆಗಳು ಇದೆ ಎಂಬುದನ್ನು ಕೇಳಿದರೆ ನಿಜಕ್ಕೂ ಆಶ್ಚರ್ಯ ಅನಿಸುತ್ತದೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ.

LEAVE A REPLY

Please enter your comment!
Please enter your name here