Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಅಪ್ಪನ ಪುಣ್ಯಸ್ಮರಣೆಗೆ ಬರದೆ ವಿದೇಶದಲ್ಲಿ ಎಂಜಾಯ್ ಮಾಡ್ತಿದ್ದಾರಾ ಧೃತಿ ಪುನೀತ್ ರಾಜಕುಮಾರ್.? ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ ಈ ವಿಡಿಯೋ.

Posted on October 30, 2022October 30, 2022 By Kannada Trend News No Comments on ಅಪ್ಪನ ಪುಣ್ಯಸ್ಮರಣೆಗೆ ಬರದೆ ವಿದೇಶದಲ್ಲಿ ಎಂಜಾಯ್ ಮಾಡ್ತಿದ್ದಾರಾ ಧೃತಿ ಪುನೀತ್ ರಾಜಕುಮಾರ್.? ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ ಈ ವಿಡಿಯೋ.

ನಿಮ್ಮೆಲ್ಲರಿಗೂ ತಿಳಿದಿರುವಂತೆ ನಿನ್ನೆಯಷ್ಟೇ ನಾವು ಅಪ್ಪು ಅವರನ್ನು ಶಾರೀರಿಕವಾಗಿ ಕಳೆದುಕೊಂಡು ವರ್ಷವಾಗಿದೆ ಹಾಗಾಗಿ ದೊಡ್ಮನೆಯಲ್ಲಿ ಮತ್ತು ಕರ್ನಾಟಕದ ಪ್ರತಿ ಮನೆಯಲ್ಲೂ ಕೂಡ ಅಪ್ಪು ಅವರ ಮೊದಲನೇ ವರ್ಷದ ಪುಣ್ಯ ಸ್ಮರಣೆಯನ್ನು ಮಾಡಿದ್ದಾರೆ. ವಿಶೇಷವಾಗಿ ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ ಅವರ ಎರಡನೇ ಪುತ್ರಿ ವಂದಿತಾ ಪುನೀತ್ ರಾಜಕುಮಾರ್ ಹಾಗೂ ಡಾಕ್ಟರ್ ರಾಜಕುಮಾರ್ ಗೆ ಸೇರಿದ ಎಲ್ಲಾ ಸದಸ್ಯರು ಕೂಡ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಇರುವಂತಹ ಅಪ್ಪು ಅವರ ಸ.ಮಾ.ಧಿ ಬಳಿಗೆ ಬಂದು ಅಪ್ಪು ಅವರಿಗೆ ಇಷ್ಟ ಆದ ಎಲ್ಲಾ ಆಹಾರ ಪದಾರ್ಥಗಳನ್ನು ಇಟ್ಟು ಮೊದಲನೇ ವರ್ಷದ ಪುಣ್ಯ ಸ್ಮರಣೆ ಪೂಜೆಯನ್ನು ಮಾಡಿದ್ದಾರೆ.

View this post on Instagram

A post shared by Vijayavani Digital (@vijayavanidigital)

ವಿಶೇಷವಾಗಿ ಈ ಒಂದು ಪುಣ್ಯ ಸ್ಮರಣೆಗೆ ಬರುವ ಸುಮಾರು ಒಂದು ಲಕ್ಷಕ್ಕೂ ಅಧಿಕ ಜನರಿಗೆ ಅನ್ನದಾನ ಸಂತ್ರಪಣೆ ಕೂಡ ಮಾಡಿದರು ಅಪ್ಪು ಅವರ ಸಮಾಧಿ ಬಳಿ ಬರುವಂತಹ ಪ್ರತಿಯೊಬ್ಬರಿಗೂ ಕೂಡ ಸ್ವತಃ ವಂದಿತಾ ಪುನೀತ್ ರಾಜ್ ಕುಮಾರ್ ಹಾಗೂ ಅಶ್ವಿನಿ ಪುನೀತ್ ರಾಜಕುಮಾರ್ ಅವರ ಊಟವನ್ನು ಬಡಿಸಿದರು. ಈ ವಿಡಿಯೋ ನೋಡುತ್ತಿದ್ದರೆ ನಿಜಕ್ಕೂ ಕೂಡ ಎಂಥವರ ಕಣ್ಣಲ್ಲಾದರೂ ಕೂಡ ನೀರು ಬರುತ್ತದೆ. ಅತ್ತ ಕಡೆ ಅಪ್ಪು ಅವರ ಎರಡನೇ ಪುತ್ರಿ ವಂದಿತಾ ಹಾಗೂ ಅಶ್ವಿನಿ ಅವರು ಅಪ್ಪುವಿನ ಸ.ಮಾ.ಧಿ.ಗೆ ಪೂಜೆ ಮಾಡುವ ವೇಳೆ ಭಾವುಕರಾಗಿ ಕಣ್ಣೀರನ್ನು ಹಾಕಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೋಡುಗರಿಗೆ ನಿಜಕ್ಕೂ ಕರುಳು ಹಿಂದುವಂತಹ ದೃಶ್ಯವಾಗಿದೆ.

ಇದೆಲ್ಲ ಒಂದು ಕಡೆಯಾದರೆ ಮೊನ್ನೆಯಷ್ಟೇ ಪುನೀತ ಪರ್ವ ಕಾರ್ಯಕ್ರಮವನ್ನು ಕೂಡ ಬಹಳ ಅದ್ದೂರಿಯಾಗಿ ಅಶ್ವಿನಿ ಅವರು ಆಯೋಜಿಸಿದರು. ಅದಾದ ನಂತರ ಅಪ್ಪು ಫುಡ್ ಫೆಸ್ಟಿವಲ್ ಎಂದು ಕೂಡ ಅಕ್ಟೋಬರ್ 21 ಮತ್ತು 22 ಆಯೋಜಿಸಿದರು ಹೀಗೆ ಒಂದರ ಹಿಂದೆ ಮತ್ತೊಂದರಂತೆ ಅಪ್ಪು ಅವರ ಹೆಸರಿನಲ್ಲಿ ಅಶ್ವಿನಿಯವರು ಪ್ರತಿನಿತ್ಯವೂ ಕೂಡ ಒಂದಲ್ಲ ಒಂದು ರೀತಿಯ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬರುತ್ತಿದ್ದಾರೆ. ಆದರೆ ಈ ಯಾವ ಕಾರ್ಯಕ್ರಮಕ್ಕೂ ಕೂಡ ಮೊದಲನೇ ಮಗಳು ದೃತಿ ಪುನೀತ್ ರಾಜಕುಮಾರ್ ಪಾಲ್ಗೊಳ್ಳುತ್ತಿಲ್ಲ.

ಇದು ಎಲ್ಲರಲ್ಲೂ ಕೂಡ ಅನುಮಾನ ಹುಟ್ಟು ಹಾಕಿದೆ ಏಕೆಂದರೆ ತಂದೆ ಮತ್ತು ಮಗಳ ಸಂಬಂಧ ಎಂತದ್ದು ಅಂತ ನಿಮಗೆ ತಿಳಿದೇ ಇದೆ ಎಷ್ಟೇ ಕಷ್ಟ ಇರಲಿ ಎಂತಹದೇ ಸನ್ನಿವೇಶವಿರಲಿ ತಂದೆಯ ಸ್ಮರಣೆ ದಿನ ಮಕ್ಕಳು ಬಂದೇ ಬರುತ್ತಾರೆ ಪೂಜೆ ಮಾಡೇ ಮಾಡುತ್ತಾರೆ. ಆದರೆ ಧೃತಿ ಪುನೀತ್ ರಾಜಕುಮಾರ್ ಅವರು ಮಾತ್ರ ಅಪ್ಪು ಅವರ ಪುಣ್ಯ ಸ್ಮರಣೆಯಲ್ಲಿ ಕಾಣಿಸಿಕೊಂಡಿಲ್ಲ. ಪುನೀತ ಪರ್ವ ಕಾರ್ಯ ಕ್ರಮದಲ್ಲೂ ಕೂಡ ಕಾಣಿಸಿಕೊಂಡಿಲ್ಲ ಇದು ನಿಜಕ್ಕೂ ಅಭಿಮಾನಿಗಳಲ್ಲಿ ಬೇಸರ ತಂದಿದೆ.

ಇನ್ನು ಪುನೀತ ಪರ್ವ ಕಾರ್ಯಕ್ರಮಕ್ಕೆ ದಕ್ಷಿಣ ಭಾರತದ ಸ್ಟಾರ್ ಸೆಲೆಬ್ರಿಟಿಗಳ ಬಂದಿದ್ದಾರೆ ಆದರೆ ಮೊದಲ ಮಗಳು ಮಾತ್ರ ಬಂದಿಲ್ಲ ಪುನೀತ ಪರ್ವ ಕಾರ್ಯ ಕ್ರಮವನ್ನು ಬಿಟ್ಟಾಕಿ, ಕೊನೆಗೆ ಅಪ್ಪು ಅವರ ಮೊದಲ ವರ್ಷದ ಪುಣ್ಯ ಸ್ಮರಣೆಗಾದರೂ ಬರಬಹುದಿತ್ತು ಅದಕ್ಕೂ ಕೂಡ ಗೈರಾಗಿದ್ದಾರೆ ಇದು ನಿಜಕ್ಕೂ ಎಲ್ಲರಲ್ಲೂ ಕೂಡ ಆಶ್ಚರ್ಯವನ್ನು ಉಂಟುಮಾಡಿದೆ. ಮತ್ತೊಂದು ಕಡೆ ಧೃತಿ ಪುನೀತ್ ರಾಜಕುಮಾರ್ ಅವರು ಸ್ನೇಹಿತರ ಜೊತೆ ವಿದೇಶದಲ್ಲಿ ಕಾಲ ಕಳೆಯುತ್ತಿರುವಂತಹ ಒಂದಷ್ಟು ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಇದನ್ನು ನೋಡಿದಂತಹ ಕೆಲವು ನೆಟ್ಟಿದರು ವಿದೇಶದಲ್ಲಿ ಸ್ನೇಹಿತರ ಜೊತೆ ಎಂಜಾಯ್ ಮಾಡುತ್ತಿದ್ದಾರೆ ಆದರೆ ಅಪ್ಪನ ಕಾರ್ಯಕ್ಕೆ ಬಂದಿಲ್ಲವಲ್ಲ ಎಂದು ಟೀಕೆ ಮಾಡುತ್ತಿದ್ದಾರೆ.

ಆದರೆ ಧೃತಿ ಪುನೀತ್ ರಾಜ್ ಕುಮಾರ್ ಅವರು ಅಪ್ಪುವಿನ ಪುಣ್ಯ ಸ್ಮರಣೆಗೆ ಬರದೇ ಇರುವುದಕ್ಕೆ ಬೇರೊಂದು ಕಾರಣವೂ ಇದೆ ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ ಉನ್ನತ ವಿದ್ಯಾಭ್ಯಾಸಕ್ಕಾಗಿ ಧೃತಿ ಪುನೀತ್ ರಾಜಕುಮಾರ್ ಅವರು ವಿದೇಶಕ್ಕೆ ತೆರಳಿದ್ದಾರೆ. ಅಪ್ಪುವಿನ ಪುಣ್ಯಸ್ಮರಣೆಯ ದಿನವೇ ಅವರಿಗೆ ಪರೀಕ್ಷೆ ಇರುವ ಕಾರಣ ಪರೀಕ್ಷೆಯನ್ನು ತಪ್ಪಿಸಿಕೊಳ್ಳಲು ಸಾಧ್ಯವಾಗದಿದ್ದರಿಂದ ಮೊದಲನೇ ವರ್ಷದ ಪುಣ್ಯಸ್ಮರಣೆಯಲ್ಲಿ ಭಾಗಿಯಾಗಿಲ್ಲ. ಒಂದು ವೇಳೆ ಪರೀಕ್ಷೆ ಇಲ್ಲದಿದ್ದರೆ ಖಂಡಿತವಾಗಿಯೂ ಕೂಡ ಅವರು ಬರುತ್ತಿದ್ದರು ಎಂದು ರಾಜ್ ಕುಟುಂಬದವರು ಇದೀಗ ತಿಳಿಸಿದ್ದಾರೆ. ಆದರೆ ಕೆಲವು ನೆಟ್ಟಿಗರು ಮಾತ್ರ ಇದರ ಹಿಂದೆ ಇರುವ ಕಾರಣವನ್ನು ತಿಳಿಯದೆ ಸುಮ್ಮನೆ ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದಾರೆ ಇದು ನಿಜಕ್ಕೂ ಕೂಡ ಅಶ್ವಿನಿ ಅವರಿಗೆ ಬೇಸರವನ್ನು ಉಂಟುಮಾಡಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ಕಾಮೆಂಟ್ ಮುಖಾಂತರ ತಿಳಿಸಿ.

Entertainment Tags:Ashwini Appu, Druthi appu, Power Star Puneeth Rajkumar
WhatsApp Group Join Now
Telegram Group Join Now

Post navigation

Previous Post: ಈ ವಾರ ಬಿಗ್ ಬಾಸ್ ಮನೆಯಿಂದ ನಟಿ ನೇಹಗೌಡ ಹೊರ ಬಂದಿದ್ದಾರೆ .
Next Post: ದರ್ಶನ್ ಅಭಿಮಾನಿಗಳಿಗೆ ಸಂತಸದ ಸುದ್ದಿ ಕೊನೆಗೂ ಫಿಕ್ಸ್ ಆಯ್ತು ಕ್ರಾಂತಿ ಸಿನಿಮಾ ರಿಲೀಸ್ ಡೇಟ್

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore