Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಎಲ್ಲಾ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಹಾಗೂ 8000 ಫ್ರೀ ಸ್ಕಾಲರ್ಶಿಪ್ ವಿತರಣೆ.!

Posted on February 9, 2024 By Kannada Trend News No Comments on ಎಲ್ಲಾ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಹಾಗೂ 8000 ಫ್ರೀ ಸ್ಕಾಲರ್ಶಿಪ್ ವಿತರಣೆ.!

ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆಯ ವತಿಯಿಂದ ಎಲ್ಲಾ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ 3 ಭರ್ಜರಿ ಗುಡ್ ನ್ಯೂಸ್ ನೀಡಲಾಗಿತ್ತು. ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ವಿತರಣೆ ಸೇರಿದಂತೆ ಉಚಿತ 8000 ರೂಪಾಯಿ ಉಚಿತ ಸ್ಕಾಲರ್ಶಿಪ್ ಹಾಗೂ 1ನೇ ತರಗತಿ ಯಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್ ಕೊಡುಗೆಯನ್ನು ಸರ್ಕಾರ ಘೋಷಿಸಿದೆ.

ಹಾಗಾದರೆ ಶಾಲಾ ಕಾಲೇಜು ವಿದ್ಯಾರ್ಥಿ ಗಳಿಗೆ ಸರ್ಕಾರ ಯಾವುದೆಲ್ಲ ರೀತಿಯ ಪ್ರಯೋಜನಗಳನ್ನು ಉಂಟು ಮಾಡಿದೆ ಹಾಗೂ ಯಾವುದೆಲ್ಲ ವಿಷಯಗಳಲ್ಲಿ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗಲಿದೆ ಎನ್ನುವಂತೆ ಯಾವ ಕೆಲವು ಉತ್ತಮವಾದ ತೀರ್ಮಾನಗಳನ್ನು ತೆಗೆದುಕೊಂಡಿದ್ದಾರೆ ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳನ್ನು ಈ ದಿನ ತಿಳಿಯೋಣ.

ಹಾಗೂ ಸರ್ಕಾರದಿಂದ ಬಂದಿರುವಂತಹ ಮಾಹಿತಿ ಏನು ಎಂದು ಕೂಡ ಈ ದಿನ ತಿಳಿಯೋಣ. ಕಳೆದ ವರ್ಷಗಳಲ್ಲಿ ಅಂದರೆ ಸುಮಾರು ಐದಾರು ವರ್ಷಗಳ ಹಿಂದೆ ಎಂಟನೇ ತರಗತಿಯಲ್ಲಿ ಓದುತ್ತಿರುವಂತಹ ಪ್ರತಿ ಯೊಬ್ಬ ವಿದ್ಯಾರ್ಥಿಗಳಿಗೂ ಕೂಡ ಸರಕಾರ ಉಚಿತವಾದಂತಹ ಸೈಕಲ್ ವಿತರಣೆ ಮಾಡುವಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು.

ಅದೇ ರೀತಿಯಾಗಿ ಆ ಸಮಯದಲ್ಲಿ 8ನೇ ತರಗತಿಯಲ್ಲಿ ಓದುತ್ತಿರುವ ಪ್ರತಿಯೊಬ್ಬರಿಗೂ ಕೂಡ ಸರ್ಕಾರದ ವತಿಯಿಂದ ಉಚಿತವಾದ ಸೈಕಲ್ ವಿತರಣೆ ಮಾಡುತ್ತಿದ್ದು ಆದರೆ ಸ್ವಲ್ಪ ವರ್ಷಗಳ ನಂತರ ಆ ಒಂದು ಸೈಕಲ್ ವಿತರಣೆ ಕಾರ್ಯ ನಿಂತು ಹೋಗಿತ್ತು. ಆದರೆ ಮತ್ತೆ ಇದೀಗ ಈ ವಿಚಾರದ ಬಗ್ಗೆ ಸರ್ಕಾರದಲ್ಲಿ ಹಲವಾರು ತೀರ್ಮಾನಗಳನ್ನು ತೆಗೆದು ಕೊಳ್ಳುವುದರ ಮೂಲಕ ಉಚಿತ ಸೈಕಲ್ ವಿತರಣೆ ಬಗ್ಗೆ ಕೆಲವೊಂದಷ್ಟು ಗುಡ್ ನ್ಯೂಸ್ ನೀಡಿದೆ.

ಅಂದರೆ ವಿದ್ಯಾರ್ಥಿಗಳಿಗೆ ಮತ್ತೆ ಉಚಿತ ಸೈಕಲ್ ವಿತರಣೆ ಮಾಡುವು ದಾಗಿ ಶಿಕ್ಷಣ ಮಂಡಳಿ ಮತ್ತೆ ಹೊಸ ತೀರ್ಮಾನವನ್ನು ತೆಗೆದುಕೊಂಡಿದೆ. * ಸೈಕಲ್ ಯೋಜನೆ ಪುನರಾರಂಭಕ್ಕೆ ಶಿಕ್ಷಣ ಇಲಾಖೆಯು 320 ಕೋಟಿ ರೂಪಾಯಿ ಹಣ ಪ್ರಸ್ತಾವನೆಯನ್ನು ಹಣಕಾಸು ಖಾತೆ ಹೊಂದಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ಸಲ್ಲಿಸಲಾಗಿತ್ತು.

ಶಾಲಾ ವಿದ್ಯಾರ್ಥಿಗಳಿಗೆ ಸೈಕಲ್ ಉಚಿತವಾಗಿ ಕೊಡುವುದರ ಜೊತೆಗೆ ಮಧ್ಯಾಹ್ನದ ಸಮಯ ಬಿಸಿ ಊಟದಲ್ಲಿ ಪೌಷ್ಟಿಕವಾದಂತಹ ಹಾಲು ಹಾಗೂ ಮೊಟ್ಟೆಯನ್ನು ವಿತರಿಸಬೇಕೆಂಬುವಂತಹ ಮಾಹಿತಿಯನ್ನು ಸಹ ಸರ್ಕಾರದ ಮುಂದೆ ಪ್ರಸ್ತಾವನೆಯನ್ನು ಇಟ್ಟಿತ್ತು ಹಾಗೂ ಎರಡನೆಯ ಸುದ್ದಿ ಏನು ಎಂದು ನೋಡುವುದಾದರೆ ರಾಜ್ಯದ ಬರಪೀಡಿತ ತಾಲೂಕುಗಳಲ್ಲಿರುವ ಮಕ್ಕಳು ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ ಶಿಕ್ಷಣ ಇಲಾಖೆ ಮುಂಬರುವ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ

ಶಾಲಾ ಮಕ್ಕಳಿಗೆ ಬಿಸಿ ಊಟ ನೀಡಲು ನಿರ್ಧರಿಸಿದೆ. ರಾಜ್ಯದಲ್ಲಿ ಘೋಷಣೆಯಾಗಿರುವ 223 ಬರಪೀಡಿತ ತಾಲೂಕುಗಳಲ್ಲಿರುವ 1 ರಿಂದ 8ನೇ ತರಗತಿ ಓದುತ್ತಿರುವಂತಹ ವಿದ್ಯಾರ್ಥಿಗಳಿಗೆ ಬೇಸಿಗೆ ಊಟ ವಿತರಿಸುವ ಕುರಿತಂತೆ ಈಗಾಗಲೇ ಆದೇಶವನ್ನು ಹೊರಡಿಸಲಾಗಿದೆ. ಹಾಗೂ ಮೂರನೆಯ ಸಹಿ ಸುದ್ದಿ ಏನು ಎಂದು ನೋಡುವುದಾದರೆ.

ರಾಜ್ಯದ ಪರಿಶಿಷ್ಟ ಜಾತಿ ವರ್ಗದ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರವು ಸಿಹಿ ಸುದ್ದಿ ನೀಡಿದ್ದು ಉನ್ನತ ಶಿಕ್ಷಣಕ್ಕೆ ಸಹಾಯಧನವನ್ನು ನೀಡಲಿದೆ. ವಿವಿಧ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಇಂಟರ್ ಕೋರ್ಸ್ ಗೆ ಹಾಗೂ ಕೊನೆಯ ಪರೀಕ್ಷೆಗೆ ಕ್ರಮವಾಗಿ 1 ಲಕ್ಷ ರೂಪಾಯಿ ಗಳಷ್ಟು ಸಹಾಯಧನವನ್ನು ಮಂಜೂರು ಮಾಡಲಾಗುತ್ತದೆ ಎಂದು ರಾಜ್ಯ ಶಿಕ್ಷಣ ಇಲಾಖೆ ಸ್ಪಷ್ಟನೆ ನೀಡಿದೆ.

ಹಾಗಾಗಿ ಪ್ರತಿಯೊಬ್ಬರೂ ಕೂಡ ಈ ಮಾಹಿತಿಗಳನ್ನು ನಿಮ್ಮ ಸುತ್ತಮುತ್ತ ಇರುವಂತಹ ಪ್ರತಿಯೊಬ್ಬರಿಗೂ ತಿಳಿಸುವುದರಿಂದ ಅವರಿಗೂ ಇದರ ಪ್ರಯೋಜನ ಸಿಗುತ್ತದೆ ಹಾಗೂ ಪ್ರತಿಯೊಬ್ಬರೂ ಕೂಡ ಇದರ ಪ್ರಯೋಜನವನ್ನು ಪಡೆದುಕೊಳ್ಳಬಹು ದಾಗಿದೆ.

 

Useful Information
WhatsApp Group Join Now
Telegram Group Join Now

Post navigation

Previous Post: ಎದೆ ಉರಿ ಹೊಟ್ಟೆ ಉಬ್ಬರ ಗ್ಯಾಸ್ಟ್ರಿಕ್’ಗೆ ಶಾಶ್ವತ ಪರಿಹಾರ.!
Next Post: ದೇವರಿಗೆ ಹರಕೆ ಹೊತ್ತು ತೀರಿಸದೆ ಇದ್ರೆ ಏನಾಗುತ್ತೆ.? ನಿಮಗಿದು ಗೊತ್ತಿರಲಿ.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore