Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಕಲಿಯುಗದಲ್ಲಿ ಹೆಂಡತಿಗಿಂತ ಗಂಡ ಬಹಳ ಬೇಗ ಮ-ರಣ ಹೊಂದುತ್ತಾನೆ ಯಾಕೆ ಗೊತ್ತ.? ಶ್ರೀಕೃಷ್ಣ ತಿಳಿಸಿದ ರಹಸ್ಯ ಇದು.!

Posted on December 21, 2023 By Kannada Trend News No Comments on ಕಲಿಯುಗದಲ್ಲಿ ಹೆಂಡತಿಗಿಂತ ಗಂಡ ಬಹಳ ಬೇಗ ಮ-ರಣ ಹೊಂದುತ್ತಾನೆ ಯಾಕೆ ಗೊತ್ತ.? ಶ್ರೀಕೃಷ್ಣ ತಿಳಿಸಿದ ರಹಸ್ಯ ಇದು.!

 

ಮದುವೆ ಆಗಿರುವ ಪ್ರತಿ ವಿವಾಹಿತ ಮಹಿಳೆಗೂ ಆಕೆಯ ಪಾಲಿನ ಸೌಭಾಗ್ಯ ಅವಳ ಗಂಡನೇ ಆಗಿರುತ್ತಾನೆ. ಜಗತ್ತಿನಲ್ಲಿ ಬೆಲೆ ಬಾಳುವ ವಸ್ತು ಸಾಕಷ್ಟಿದ್ದರು ಅವಳ ಪಾಲಿಗೆ ಇರುವ ಬೆಲೆ ಕಟ್ಟಲಾಗದ ವಸ್ತು ಹಾಗೂ ಅವಳ ಕಣ್ಣಿಗೆ ಅತ್ಯಂತ ಮೌಲ್ಯವಾದದ್ದು ಆಕೆ ಪಾಲಿಗೆ ಪ್ರೀತಿ ಪಾತ್ರನಾದ ಆಕೆಯ ಸರ್ವಸ್ವವೂ ಆದ ಅವಳ ಪತಿ ಮಾತ್ರ.

ಈ ಪ್ರಪಂಚದಲ್ಲಿ ಆಕೆ ಸಂಪೂರ್ಣವಾಗಿ ನಂಬುವುದು ಹಾಗೂ ಆಕೆಯ ಜೀವನದ ಬಹು ಪಾಲಿನ ಕ’ಷ್ಟ ಸುಖ ಸಂತೋಷ ಸಮಸ್ಯೆ ಎಲ್ಲವನ್ನು ಹಂಚಿಕೊಳ್ಳುವುದು ಅವನೊಂದಿಗೆ ಮಾತ್ರ. ಹಾಗಾಗಿ ಪತಿ-ಪತ್ನಿ ಬೇರೆ ಬೇರೆ ಅಲ್ಲ ಎಂದು ಒಟ್ಟಿಗೆ ದಂಪತಿ ಎಂದು ಕರೆಯುವುದು. ಈ ರೀತಿ ಅನ್ಯೋನ್ಯವಾಗಿದ್ದ ದಂಪತಿಗಳು ಒಬ್ಬರನ್ನು ಅಗಲಿ ಮತ್ತೊಬ್ಬರು ಹೆಚ್ಚು ದಿನ ಬದುಕುತ್ತಿರಲಿಲ್ಲ.

ಆದರೆ ಈಗಿನ ಕಾಲದಲ್ಲಿ ಗಂಡಂದಿರು ಹೆಂಡತಿಯರಿಗಿಂತ ಬೇಗ ಸಾ’ಯುತ್ತಿದ್ದಾರೆ ಅದಕ್ಕೆ ಕಾರಣ ಏನು ಗೊತ್ತಾ.? ಮದುವೆ ಆದ ಮೇಲೆ ಪ್ರತಿಯೊಂದು ಹೆಣ್ಣು ಕೂಡ ತನ್ನ ಸೌಭಾಗ್ಯ ಶಾಶ್ವತವಾಗಿರಬೇಕು ಎಂದು ಬಯಸುತ್ತಾಳೆ. ಆಕೆಗೆ ಪತಿ ಇದ್ದರೆ ಮಾತ್ರ ಅಲಂಕಾರ ಮಾಡಿಕೊಳ್ಳುವ, ಹಣೆಗೆ ಕುಂಕುಮ, ಕೈಗೆ ಬಯಳೆ, ಮುಡಿಗೆ ಹೂವು, ಕಾಲುಂಗುರ ಹಾಗೂ ಮಾಂಗಲ್ಯ ಹಾಕಿಕೊಳ್ಳುವ ಅದೃಷ್ಟ ಇರುತ್ತದೆ.

ಮತ್ತು ಆಕೆಗೆ ಎಲ್ಲಾ ಕಡೆಯೂ ಕೂಡ ಗೌರವ ಸಿಗುತ್ತದೆ ಮತ್ತು ಈ ಅದೃಷ್ಟ ಆಕೆಗೆ ಕಡೆವರೆಗೂ ಇರಬೇಕು ಎನ್ನುವ ಕಾರಣಕ್ಕಾಗಿ ಅವಳು ಮದುವೆಗೂ ಮುಂಚೆ ಹಾಗೂ ಮದುವೆ ಆದ ನಂತರವೂ ಕೂಡ ಅನೇಕ ವ್ರತ ಪೂಜೆ ಆಚರಣೆಗಳನ್ನು ಮಾಡುತ್ತಿರುತ್ತಾಳೆ. ಇದನ್ನೆಲ್ಲ ಬಹಳ ಕಟ್ಟು ನಿಟ್ಟಾಗಿ ನಂಬಿಕೆಗಿಂತ ಪಾಲಿಸುತ್ತಿದ್ದ ಕಾರಣ ಆಗಿನ ಕಾಲದಲ್ಲಿ ಮಹಿಳೆಯರು ಮುತ್ತೈದೆಯಾಗಿ ಸಾ’ಯುತ್ತಿದ್ದರು ಹಾಗೂ ಈ ರೀತಿ ಮುತ್ತೈದೆಯಾಗಿ ಸ’ತ್ತವರಿಗೆ ಸಾ’ವಿನಲ್ಲೂ ಗೌರವ ಇರುತ್ತಿತ್ತು.

ಆದರೆ ಈಗಿನ ಕಾಲದಲ್ಲಿ ಯಾರಿಗೂ ಇಷ್ಟೊಂದು ಪತಿ ಭಕ್ತಿ ಇಲ್ಲ. ಪತಿಯ ಬಗ್ಗೆ ಬಹಳ ತಾತ್ಸಾರ ಮತ್ತು ಪತಿಯ ಸಂಕೇತವಾಗಿರುವ ತಾಳಿ ಹಾಗೂ ಕಾಲುಂಗುರದ ಮಹತ್ವವನ್ನು ಅರಿಯದೆ ಇರುವುದು ಇತ್ಯಾದಿಗಳು ಈ ರೀತಿ ಗಂಡನಿಗೆ ಅಪಮೃತ್ಯು ಬರಲು ಕಾರಣವಾಗುತ್ತಿದೆ. ತಾಳಿ ಹಾಗೂ ಕಾಲುಂಗುರ ಎಂದರೆ ಮುತ್ತೈದೆತನ ಎನ್ನುವ ಸಂಸ್ಕೃತಿ ಭಾರತದ್ದು.

ಆದರೆ ಈಗಿನ ಕಾಲದಲ್ಲಿ ಬರೀ ನೆಪ ಮಾತ್ರಕ್ಕೆ ಇದನ್ನು ಧರಿಸುತ್ತಾರೆ ಅಥವಾ ಬೇಕೆಂದಾಗ ಧರಿಸುತ್ತಾರೆ ಬೇಡ ಎಂದಾಗ ತೆಗೆದಿಡುತ್ತಾರೆ. ಈ ರೀತಿ ಮಾಡುವುದರಿಂದ ಗಂಡನಿಗೆ ಅನಾರೋಗ್ಯ, ಆತನ ಆಯಸ್ಸಿಗೆ ಕಂ’ಟ’ಕ ಹಾಗೂ ಆತನಿಗೆ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳು ಬರುವುದರ ಜೊತೆಗೆ ಪತಿ-ಪತ್ನಿ ಮಧ್ಯೆ ಕಲಹಗಳು ಹೆಚ್ಚಾಗುತ್ತಿದೆ.

ಕಲಿಯುಗದಲ್ಲಿ ಈ ರೀತಿ ಜನರ ವರ್ತನೆಗಳು, ಭಾವನೆಗಳು, ವಿಪರೀತವಾಗಿ ಬದಲಾಗಿ ಅದು ಪರಮಾವಧಿ ತಲುಪಿ ಇದುವರೆಗೆ ಇದ್ದ‌ ಎಲ್ಲಾ ಸುಗುಣಗಳು ಕೂಡ ದು’ರ್ಗು’ಣಗಳಾಗಿ ಬದಲಾಗಿ ಪ್ರಪಂಚದ ತುಂಬಾ ಕಷ್ಟ ಕಾರ್ಪಣ್ಯಗಳು ಹೆಚ್ಚಾಗುತ್ತವೆ ಎಂದು ಆಗಿನ ಕಾಲದಲ್ಲೇ ಭವಿಷ್ಯ ಬರೆಯಲಾಗಿದೆ.

ಅದಕ್ಕೆ ತಕ್ಕಂತೆ ಈಗಿನ ಕಾಲದಲ್ಲಿ ಜನರು ಬದಲಾಗಿ ನಡೆದುಕೊಳ್ಳುತ್ತಿದ್ದಾರೆ ಇದು ಜೀವನದಲ್ಲಿ ಅತ್ಯಂತ ಪವಿತ್ರವಾದ ಸಂಬಂಧ ಎಂದು ನಂಬಲಾಗಿದ್ದ ವಿವಾಹ ಬಂಧನದ ಪಾವಿತ್ರ್ಯತೆ ಹಾಳು ಮಾಡುವ ತನಕ ಇದು ಬಂದು ತಲುಪಿದೆ. ಇದೇ ಕಾರಣಕ್ಕಾಗಿ ಹೆಣ್ಣು ಮಕ್ಕಳು ನತದೃಷ್ಟರಾಗಿ ಬಹಳ ಬೇಗ ವೈಧವ್ಯ ಹೊಂದುತ್ತಿದ್ದಾರೆ. ಹೀಗಾಗಬಾರದು ಎಂದರೆ ಮನೆಯಲ್ಲಿ ಹಿರಿಯರು ಹೇಳಿದ ಪ್ರಕಾರವಾಗಿ ಗಂಡನಿಗೆ ಪ್ರಾಮಾಣಿಕವಾಗಿ ನಡೆದುಕೊಳ್ಳಬೇಕು ಮತ್ತು ಪತಿಭಕ್ತಿಯನ್ನು ತೋರಿಸಿ ಆತನನ್ನು ಪ್ರೀತಿಯಿಂದ ಜೋಪಾನ ಮಾಡಬೇಕು.

Useful Information
WhatsApp Group Join Now
Telegram Group Join Now

Post navigation

Previous Post: ವೈಕುಂಠ ಏಕಾದಶಿ ದಿನ ಈ ಒಂದು ವಸ್ತುವನ್ನು ನೀರಿಗೆ ಹಾಕಿ ಸ್ನಾನ ಮಾಡಿ, 24 ಗಂಟೆಗಳಲ್ಲಿ ಗ್ಯಾರಂಟಿ ಶುಭ ಸಮಾಚಾರ ಕೇಳುತ್ತೀರಿ…
Next Post: ಮಧ್ಯರಾತ್ರಿ ಒಬ್ಬರೇ ಇದ್ದಾಗ ಈ ತಂತ್ರ ಮಾಡಿ, ಕೋಟ್ಯಾಧಿಪತಿಗಳಾಗುತ್ತೀರಿ.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore