Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಜೂನ್ 30 ರ ಒಳಗೆ ಈ ಕೆಲಸ ಮಾಡದಿದ್ದರೆ ರೈತರಿಗೆ PM ಕಿಸಾನ್ ಯೋಜನೆಯ 2000 ಹಣ ಬರುವುದಿಲ್ಲ.!

Posted on June 24, 2023 By Kannada Trend News No Comments on ಜೂನ್ 30 ರ ಒಳಗೆ ಈ ಕೆಲಸ ಮಾಡದಿದ್ದರೆ ರೈತರಿಗೆ PM ಕಿಸಾನ್ ಯೋಜನೆಯ 2000 ಹಣ ಬರುವುದಿಲ್ಲ.!

 

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜಾರಿಗೆ ತಂದ ಯೋಜನೆಗಳಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಚನೆಯು ದೇಶದಾದ್ಯಂತ ಎಲ್ಲಾ ರೈತರಿಗೂ ಬಹಳ ಅನುಕೂಲಕರವಾಗಿದೆ. ಕೇಂದ್ರ ಸರ್ಕಾರವು ಈ ಯೋಜನೆಯಲ್ಲಿ ದೇಶದ ಅರ್ಹ ರೈತ ಫಲಾನುಭವಿಗಳಿಗೆ ವಾರ್ಷಿಕವಾಗಿ 6,000ರೂ. ಸಹಾಯಧನವನ್ನು 4 ತಿಂಗಳ ಅಂತರದಲ್ಲಿ 3 ಬಾರಿ ನೀಡುತ್ತದೆ.

ನಮ್ಮ ಕರ್ನಾಟಕ ರಾಜ್ಯದಲ್ಲಿ ಈ ಸಹಾಯಧನವನ್ನು ಪಡೆಯುತ್ತಿರುವ ರೈತರುಗಳು ಹೆಚ್ಚುವರಿಯಾಗಿ ರಾಜ್ಯ ಸರ್ಕಾರದಿಂದಲೂ ಕೂಡ 2 ಕಂತುಗಳಲ್ಲಿ 4,000 ಸಹಾಯಧನವನ್ನು ಪಡೆಯುತ್ತಿದ್ದಾರೆ. ರೈತರಿಗೆ ಕೃಷಿ ಚಟುವಟಿಕೆಗೆ ಹಣದ ಅವಶ್ಯಕತೆ ಇದ್ದಾಗ ಈ ಸಹಾಯಧನದ ಮೂಲಕ ನೆರವಾಗಿ ಕೃಷಿ ಚಟುವಟಿಕೆಯನ್ನು ಸರ್ಕಾರಗಳು ಪ್ರೋತ್ಸಾಹಿಸುತ್ತಿವೆ.

ಇದುವರೆಗೆ ಕೇಂದ್ರ ಸರ್ಕಾರದ ವತಿಯಿಂದ 13 ಕಂತಿನ ಹಣವನ್ನು ಎಲ್ಲ ರೈತರು ಪಡೆದಿದ್ದಾರೆ. ಆದರೆ ನಕಲಿ ರೈತರು ಕೂಡ ಈ ಯೋಜನೆಯಲ್ಲಿ ಸಹಾಯ ಪಡೆಯುತ್ತಿರುವುದು ಹಾಗೂ ಈ ಯೋಜನೆಗಾಗಿ ನೀಡಿರುವ ನಿರ್ದೇಶನಗಳನ್ನು ಪೂರೈಸದೇ ಇರುವುದರಿಂದ ಕಳೆದ ಬಾರಿಯಿಂದ ಅನೇಕ ರೈತರ ಹೆಸರುಗಳು ಈ ಪಟ್ಟಿಯಲ್ಲಿ ಬಿಟ್ಟು ಹೋಗಿದೆ. ಇದರಲ್ಲಿ ಮುಖ್ಯವಾಗಿ ರೈತರು ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಬೇಕು ಎನ್ನುವುದು ಸರ್ಕಾರದ ಆದೇಶವಾಗಿತ್ತು.

ಇ-ಕೆವೈಸಿ ಅಪ್ಡೇಟ್ ಮಾಡಿಸದ ರೈತರ ಖಾತೆಗೆ ಕಿಸಾನ್ ಸಮ್ಮಾನ್ ಹಣ ಜಮೆ ಆಗದೆ ಸ್ಥಗಿತಗೊಂಡಿದೆ. ಇನ್ನೇನು ಈ ತಿಂಗಳ ಅಂತ್ಯದಲ್ಲಿ 14ನೇ ಕಂತಿನ ಹಣವು ಕೊಡ ಕೇಂದ್ರ ಸರ್ಕಾರದಿಂದ ಜಮೆ ಆಗಲಿದೆ. ಆದ್ದರಿಂದ ಕೂಡಲೇ ರೈತರು ತಮ್ಮ ಇ-ಕೆವೈಸಿ ಅಪ್ಡೇಟ್ ಆಗಿದೆಯೇ ಎನ್ನುವುದನ್ನು ಪರಿಶೀಲಿಸಿಕೊಳ್ಳಬೇಕು, ಒಂದು ವೇಳೆ ಅಪ್ಡೇಟ್ ಆಗದೇ ಇದ್ದಲ್ಲಿ ಆ ಪ್ರಕ್ರಿಯೆಯನ್ನು ಶೀಘ್ರವಾಗಿ ಪೂರ್ತಿಗೊಳಿಸಬೇಕು.

ಇ-ಕೆವೈಸಿ ಅಪ್ಡೇಟ್ ಮಾಡಿಸಲು ರೈತರು https://pmkisan.gov.in ಪೋರ್ಟಲ್ ಗೆ ಭೇಟಿ ಕೊಟ್ಟು ಫಾರ್ಮ್ ಫಿಲ್ ಮಾಡಬೇಕು. ಕಿಸಾನ್ ಸಮ್ಮಾನ್ ಯೋಜನೆಗೆ ರೈತರು ನೋಂದಣಿ ಮಾಡಿಕೊಂಡಿರುವ ಮೊಬೈಲ್ ಸಂಖ್ಯೆಗೆ OTP ಬರುತ್ತದೆ. OTP ದಾಖಲಿಸಿದರೆ ತಂತ್ರಾಂಶ ಆಧಾರಿತ ಪರಿಶೀಲನೆಗಾಗಿ ಯಶಸ್ವಿಯಾಗಿ ಇ-ಕೆವೈಸಿ ಅಪ್ಡೇಟ್ ಪೂರ್ತಿಯಾಗಿರುವ ಬಗ್ಗೆ ಘೋಷಣೆ ಬರುತ್ತದೆ.

ಒಂದು ವೇಳೆ ಈಗಾಗಲೇ ನಿಮ್ಮ ಇ-ಕೆವೈಸಿ ಅಪ್ಡೇಟ್ ಆಗಿದ್ದರೂ ಕೂಡ ಅದನ್ನು ಸಹ ಘೋಷಿಸುತ್ತದೆ. ಒಂದು ವೇಳೆ ಮೊಬೈಲ್ ಸಂಖ್ಯೆ ಆಧಾರ್ ಸಂಖ್ಯೆಗೆ ಲಿಂಕ್ ಆಗದೆ ಇದ್ದಲ್ಲಿ ಅಥವಾ OTP ಮೊಬೈಲ್ ಗೆ ಬರದೇ ಇದ್ದಲ್ಲಿ ಅಂತವರು ನಾಗರಿಕ ಸೇವಾ ಕೇಂದ್ರಕ್ಕೆ ಹೋಗಿ ಬಯೋಮೆಟ್ರಿಕ್ ಮಾಹಿತಿಗಳನ್ನು ಕೊಟ್ಟು ಇ-ಕೆವೈಸಿ ಅಪ್ಡೇಟ್ ಮಾಡಿಸಬಹುದು.

ಗೂಗಲ್ ಪ್ಲೇ ಸ್ಟೋರ್ ಗೆ ಹೋಗಿ PM KISAN GOI
ಆಪ್ ಅಥವಾ Adhar face rd ಆಪ್ ಡೌನ್ಲೋಡ್ ಮಾಡಿಕೊಂಡು ಅದರಲ್ಲಿ ಎಲ್ಲಾ ಹಂತಗಳನ್ನು ಕೂಡ ಎಚ್ಚರಿಕೆಯಿಂದ ಪೂರೈಸುವ ಮೂಲಕ ಅಂತಿಮವಾಗಿ ಇ-ಕೆವೈಸಿ ಅಪ್ಡೇಟ್ ಮಾಡಬಹುದು. ಇದಕ್ಕೆ ಕೊನೆ ದಿನಾಂಕ ಜುಲೈ 30 ಎಂದು ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ವಿಚಾರದ ಬಗ್ಗೆ ಹೆಚ್ಚಿನ ಮಾಹಿತಿಗಳು ಬೇಕಿದ್ದರೆ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಗ್ರಾಮ ಒನ್ ಕೇಂದ್ರಗಳಿಗೆ ಭೇಟಿ ಕೊಟ್ಟು ಮಾಹಿತಿ ಪಡೆಯಲು ಸೂಚಿಸಿದ್ದಾರೆ.

Useful Information
WhatsApp Group Join Now
Telegram Group Join Now

Post navigation

Previous Post: ಕಳೆದ 12 ತಿಂಗಳಿನಿಂದ ನೀವು ಬಳಸಿದ ವಿದ್ಯುತ್ ಚೆಕ್ ಮಾಡುವುದು ಹೇಗೆ.? ಈ ಲಿಂಕ್ ಕ್ಲಿಕ್ ಮಾಡಿ ಸಾಕು.!
Next Post: ಫ್ರಿಡ್ಜ್ ನಲ್ಲಿ ಎಲ್ಲಾ ಪದಾರ್ಥಗಳನ್ನು ಇಡುವಂತಿಲ್ಲ, ಫ್ರಿಡ್ಜ್ ನಲ್ಲಿ ಇಡಬಾರದ ಪದಾರ್ಥಗಳು ಯಾವುದು ಅಂತ ತಿಳಿದುಕೊಳ್ಳಿ.! ಪ್ರತಿಯೊಬ್ಬರೂ ಕೂಡ ಈ ವಿಚಾರ ತಿಳಿಯಲೇ ಬೇಕು.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore