Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಅಡುಗೆ ಮನೆ ಟಿಪ್ಸ್.!

Posted on October 23, 2023October 23, 2023 By Kannada Trend News No Comments on ಅಡುಗೆ ಮನೆ ಟಿಪ್ಸ್.!

 

ಇತ್ತೀಚಿನ ದಿನದಲ್ಲಿ ಪ್ರತಿಯೊಬ್ಬರೂ ಕೂಡ ಯಾವುದೇ ಕೆಲಸವನ್ನು ಕೂಡ ಒಂದು ಮನಸ್ಸಿನಿಂದ ಮಾಡಲು ಸಾಧ್ಯವಾಗುತ್ತಿಲ್ಲ ಅಂದರೆ ಇತ್ತೀಚಿನ ಜೀವನ ಶೈಲಿ ಬಹಳ ಗಡಿಬಿಡಿಯಾಗಿದೆ ಎಂದೇ ಹೇಳಬಹುದು ಒಂದು ಕೆಲಸ ಮಾಡುತ್ತಿದ್ದಂತೆ ಮತ್ತೊಂದು ಕೆಲಸ ಮಾಡುತ್ತಿರುತ್ತೇವೆ ಅದರಲ್ಲೂ ಸಮಯದ ಅಭಾವ ಇರುವುದರಿಂದ ಯಾವ ಕೆಲಸವನ್ನು ನಾವು ಸರಿಯಾಗಿ ಮಾಡುತ್ತಿದ್ದೇವ ಮಾಡುತ್ತಿಲ್ಲವ ಎನ್ನುವುದರ ಗಮನವನ್ನು ಸಹ ಕೊಡುವುದಿಲ್ಲ.

ಬದಲಿಗೆ ಆ ಕೆಲಸ ಮುಗಿದರೆ ಸಾಕು ಎನ್ನುವ ಹಾಗೆ ನಾವು ಪ್ರತಿ ಕೆಲಸವನ್ನು ಮಾಡುತ್ತಿರುತ್ತೇವೆ. ಆದರೆ ಆ ರೀತಿ ಮಾಡುವುದರಿಂದ ಕೆಲವೊಂದಷ್ಟು ಸಮಸ್ಯೆಗಳು ಉಂಟಾಗುತ್ತದೆ ಅದರಲ್ಲೂ ಮನೆಯಲ್ಲಿರುವಂತಹ ಹೆಣ್ಣು ಮಕ್ಕಳು ಅಡುಗೆ ಮನೆಯ ವಿಚಾರವಾಗಿ ಕೆಲವೊಂದಷ್ಟು ಟಿಪ್ಸ್ ಗಳನ್ನು ತಿಳಿದುಕೊಂಡಿರುವುದು ತುಂಬಾ ಮುಖ್ಯವಾಗಿರುತ್ತದೆ.

ಇಂದಿನ ಅವಸರದ ಜೀವನದಲ್ಲಿ ಎಲ್ಲವೂ ಗಡಿಬಿಡಿಯೇ. ಅದರಲ್ಲೂ ಕೆಲಸಕ್ಕೆ ತೆರಳುವ ಹೆಣ್ಣುಮಕ್ಕಳ ಅಡುಗೆ ಮನೆಯ ಗಡಿಬಿಡಿ, ಗಜಿಬಿಜಿಗೆ ಕೊನೆಯಿಲ್ಲ. ಆದರೆ ಅಡುಗೆಮನೆಯಲ್ಲಿ ಗಡಿಬಿಡಿ ತಪ್ಪಿಸಿ ಸಸೂತ್ರ ಅಡುಗೆ ಹಾಗೂ ಸಮಯ ನಿರ್ವಹಣೆ ನಿಮ್ಮದಾಗಬೇಕು ಎಂದರೆ ಈ ಟಿಪ್ಸ್ ಪಾಲಿಸಿ, ಖಂಡಿತ ಇದು ನಿಮಗೆ ಸಹಾಯ ಆಗುವುದರಲ್ಲಿ ಎರಡು ಮಾತಿಲ್ಲ.

ಇಂದು ಹೆಚ್ಚಿನ ಮಹಿಳೆಯರು ಉದ್ಯೋಗದಲ್ಲಿರುವವರೇ. ನಿತ್ಯ ಕೆಲಸಕ್ಕೆ ತೆರಳುವ ಮಹಿಳೆಯರಿಗೆ ಅಡುಗೆ ಮನೆ ಕೆಲಸ ನಿಭಾಯಿಸುವ ಕೆಲವೊಂದು ಸರಳ ಟಿಪ್ಸ್ ಗಳು ಇಲ್ಲಿವೆ. ಇದರಿಂದ ನಿಮ್ಮ ಸಮಯ ಹಾಗೂ ಶಕ್ತಿ ಎರಡೂ ಉಳಿಯಲಿದೆ.
* ಆಲೂಗಡೆ ಸಿಪ್ಪೆಯನ್ನು ಬೇಗ ತೆಗೆಯಲು ಕುದಿಸುವಾಗ ಅದಕ್ಕೆ ಸ್ವಲ್ಪ ಉಪ್ಪು ಸೇರಿಸಿದರೆ ಆಲೂಗಡ್ಡೆಯ ಸಿಪ್ಪೆಯನ್ನು ಬಹಳ ಸುಲಭವಾಗಿ ತೆಗೆಯಬಹುದು.

* ಕಾಳುಗಳು ಮತ್ತು ಬೇಳೆಗಳು ಬೇಯಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಆದ್ದರಿಂದ ಬಳಸುವ ಮುನ್ನ ಬೇಳೆ ಅಥವಾ ಕಾಳುಗಳನ್ನು ನೆನೆಸಿ, ನಂತರ ಬೇಯಿಸಿದರೆ ಬೇಗ ಬೇಯುತ್ತದೆ.
* ಅಕ್ಕಿಯನ್ನು ಮೃದುವಾಗಿಸಲು ಅಡುಗೆ ಮಾಡುವಾಗ ಎಣ್ಣೆ ಅಥವಾ ತುಪ್ಪವನ್ನು ಸೇರಿಸಬೇಕು. ಇದರಿಂದ ಅಕ್ಕಿ ಬೇಗನೆ ಬೇಯುವ ಜತೆಗೆ ಉತ್ತಮ ರುಚಿಯನ್ನೂ ನೀಡುತ್ತದೆ.
* ತೆಂಗಿನಕಾಯಿಯನ್ನು ಯಾವುದೇ ಗ್ರೇವಿಯನ್ನು ದಪ್ಪವಾಗಿಸಲು ಬಳಸಲಾಗುತ್ತದೆ. ಇದನ್ನು ಯಾವುದೇ ತರಕಾರಿಗಳೊಂದಿಗೆ ಸಹ ಹಾಕಿ ಅಡುಗೆ ಮಾಡಬಹುದು.

* ಪದೇ ಪದೇ ತುರಿಯುವುದು ಕಷ್ಟದ ಕೆಲಸ. ಹಾಗಾಗಿ ಕಾಯಿತುರಿಯನ್ನು ದೀರ್ಘ ಕಾಲದವರೆಗೆ ತಾಜಾವಾಗಿಡಲು ನೀವು ಅದರಲ್ಲಿ ಕರಿಬೇವನ್ನು ಹಾಕಿಡಬಹುದು.
* ಬಿಡುವಿದ್ದಾಗ ಎರಡು ತೆಂಗಿನಕಾಯಿಯನ್ನು ತುರಿದು ಒಂದು ಡಬ್ಬದಲ್ಲಿ ಹಾಕಿಟ್ಟು ಫ್ರೀಜರ್‌ನಲ್ಲಿಟ್ಟರೆ ಪ್ರತಿ ಸಲ ಕಾಯಿ ತುರಿಯುವ ಹೊರೆಯನ್ನು ಸ್ಪಲ್ಪ ಮಟ್ಟಿಗೆ ಕಡಿಮೆ ಮಾಡಿಕೊಳ್ಳಬಹುದು.
* ಪಾಯಸ ಮಾಡುವಾಗ ಹಾಲು ದಪ್ಪವಾಗಲು ಸಹ ಬಹಳ ಸಮಯವನ್ನು ತೆಗೆದು ಕೊಳ್ಳುತ್ತದೆ. ಇಂತಹ ಸಂದರ್ಭದಲ್ಲಿ ಹಾಲಿನ ಪುಡಿಯನ್ನು ಬಳಸಬಹುದು.

* ಜೇನುತುಪ್ಪವನ್ನು ಫ್ರಿಡ್ಜ್‌ನಲ್ಲಿಟ್ಟರೆ ಗಟ್ಟಿಯಾಗುತ್ತದೆ. ಬದಲಾಗಿ ತಂಪಾದ, ಶುಷ್ಕ ಸ್ಥಳದಲ್ಲಿ ಇಟ್ಟರೆ ಗಟ್ಟಿಯಾಗುವುದಿಲ್ಲ.
* ಹಾಟ್ ಬಾಕ್ಸ್ ಗಳಲ್ಲಿ ತಿಂಡಿ ಇಟ್ಟ ಬಳಿಕ ಅದನ್ನು ಬಟ್ಟೆಯಿಂದ ಮುಚ್ಚಿದರೆ ತೇವಾಂಶ ಉಂಟಾಗುವುದಿಲ್ಲ.
* ಟೊಮೊಟೊ ಬಹಳ ದಿನಗಳವರೆಗೆ ಕೆಡದಂತೆ ಇಡಬೇಕಾದರೆ ಟೊಮೆಟೊ ಹಣ್ಣಿನ ಮೇಲ್ಬಾಗಕ್ಕೆ ಪ್ಲಾಸ್ಟರ್ ಹಾಕಿ ಇಡಬೇಕು.
* ಉಪ್ಪಿನ ಡಬ್ಬದಲ್ಲಿ ಎರಡು ಒಣಮೆಣಸಿನ ಕಾಯಿಯನ್ನು ಹಾಕಿಟ್ಟರೆ ಉಪ್ಪು ನೀರು ಬಿಟ್ಟು ಕೊಳ್ಳುವುದಿಲ್ಲ.

* ಬೆಳ್ಳುಳ್ಳಿಯನ್ನು ಹೆಚ್ಚಿದ ನಂತರ ಕೈ ಅದೇ ವಾಸನೆ ಬರುತ್ತಿದ್ದರೆ ಒಂದು ಪ್ಲೇಟ್‌ಗೆ ಕೈಯನ್ನು ರಬ್ ಮಾಡಿದರೆ ಬೆಳ್ಳುಳ್ಳಿಯ ಹಸಿ ವಾಸನೆ ಹೋಗುತ್ತದೆ.
* ತೆಂಗಿನಕಾಯಿ ಒಡೆದ ಬಳಿಕ ಅದಕ್ಕೆ ಸ್ಪಲ್ಪ ಉಪ್ಪು ಸವರಿ ಇಟ್ಟರೆ ಕೆಲ ದಿನಗಳವರೆಗೆ ಕೆಡುವುದಿಲ್ಲ.
* ನೀರನ್ನು ಕುದಿಸುವಾಗ ಪಾತ್ರೆಯನ್ನು ಮುಚ್ಚಿರಿ. ಇದರಿಂದ ನೀರು ಬೇಗನೆ ಬಿಸಿಯಾಗುತ್ತದೆ.

* ಆಹಾರ ಅಂಟಿಕೊಳ್ಳದಂತೆ ಸ್ಟೇನ್‌ಲೆಸ್ ಸ್ಟೀಲ್ ಕುಕ್‌ವೇರ್ ಅನ್ನು ಸರಿಯಾಗಿ ಬಳಸಿ.
* ಹಸಿಮೆಣಸಿನ ಕಾಯಿಯನ್ನು ಕತ್ತರಿಸಲು ಕತ್ತರಿಯನ್ನು ಬಳಸಿ. ಇದ ರಿಂದ ಕೈ ಉರಿಯುವುದನ್ನು ತಪ್ಪಿಸಬಹುದು.
* ಚಮಚ ಬಳಸಿ ಶುಂಠಿಯ ಸಿಪ್ಪೆಯನ್ನು ತೆಗೆದರೆ ಆ ಕೆಲಸ ಸುಲಭ ವಾಗಿ ಬೇಗ ಆಗುತ್ತದೆ.
* ಸಕ್ಕರೆ ಡಬ್ಬಿಯಲ್ಲಿ ಮೂರರಿಂದ ನಾಲ್ಕು ಲವಂಗ ಕಾಳುಗಳನ್ನು ಹಾಕಿಟ್ಟರೆ ಡಬ್ಬಕ್ಕೆ ಇರುವೆ ಬರುವುದನ್ನು ತಡೆಯಬಹುದು.

Useful Information
WhatsApp Group Join Now
Telegram Group Join Now

Post navigation

Previous Post: ಜೀವನದಲ್ಲಿ ಸದಾ ಖುಷಿಯಿಂದ ಇರಲು ಇಲ್ಲಿವೆ ಮೂರು ನಿಯಮಗಳು.!
Next Post: ಈರುಳ್ಳಿ ಕತ್ತರಿಸುವಾಗ ಕಣ್ಣೀರು ಬರಬಾರದು ಅಂದ್ರೆ ಈ ಟ್ರಿಕ್ಸ್ ಉಪಯೋಗಿಸಿ.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore