Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಮನೆಗೆ ಸಂತೋಷವನ್ನು ತರುವ ಸುಲಭ ಮಾರ್ಗಗಳು.! ಇದನ್ನ ಫಾಲೋ ಮಾಎಇದ್ರೆ ಸುಖ ಸಂಸಾರ.!

Posted on November 29, 2023 By Kannada Trend News No Comments on ಮನೆಗೆ ಸಂತೋಷವನ್ನು ತರುವ ಸುಲಭ ಮಾರ್ಗಗಳು.! ಇದನ್ನ ಫಾಲೋ ಮಾಎಇದ್ರೆ ಸುಖ ಸಂಸಾರ.!

 

* ಈಗಿನ ಕಾಲದಲ್ಲಿ ಅನೇಕರಿಗೆ ಬೆಳಗ್ಗೆ ಎದ್ದ ಕೂಡಲೇ ಸೋಶಿಯಲ್ ಮೀಡಿಯಾಗಳನ್ನು ಚೆಕ್ ಮಾಡುವ ದುರಭ್ಯಾಸ ಇದೆ. ಅದಕ್ಕೆ ಸಂಬಂಧಪಟ್ಟ ಕೆಲಸ ಮಾಡುವವರನ್ನು ಹೊರತುಪಡಿಸಿ ಮತ್ಯಾರು ಬೆಳಬೆಳಗ್ಗೆ ಮೊಬೈಲ್ ಫೋನ್ ನೋಡುವ ಅವಶ್ಯಕತೆ ಇರುವುದಿಲ. ಲ ಎದ್ದ ಕೆಲಸ ಸಮಯ ಮನಸ್ಸು ಪ್ರಶಾಂತವಾಗಿದ್ದರೆ ಮನೆಯ ವಾತಾವರವೂ ಹಾಗೇ ಇರುತ್ತದೆ. ಹಾಗಾಗಿ ಸಾಧ್ಯವಾದಷ್ಟು ಬೆಳಗ್ಗೆ ಸಮಯ ಸ್ತೋತ್ರಗಳನ್ನು ಪಠಿಸಿ, ಸಾಧ್ಯವಾಗದೇ ಇದ್ದರೆ ಅದನ್ನು ಮೊಬೈಲ್ ನಲ್ಲಿ ಹಾಕಿಕೊಂಡು ಕೇಳಿಸಿಕೊಳ್ಳಿ.

* ನಮ್ಮ ದಿನನಿತ್ಯದ ಚಟುವಟಿಕೆ ಶುರು ಮಾಡುವ ಮೊದಲು ಮತ್ತೊಂದು ದಿನವನ್ನು ಬದುಕುವುದಕ್ಕೆ ಅವಕಾಶ ಮಾಡಿಕೊಟ್ಟ ಭಗವಂತನಿಗೆ ಧನ್ಯವಾದಗಳನ್ನು ಹೇಳುತ್ತಾ ಶುರು ಮಾಡಬೇಕು. ಹಾಗಾಗಿ ಬೆಳಗಿನ ಜಾವದ ಮೊದಲ ಎರಡು ಗಂಟೆಗಳನ್ನು ದೇವರಿಗೆ ಪೂಜೆ ಮಾಡಲು ಮೀಸಲಿಡಿ

* ಮನೆಯ ಈಶಾನ್ಯ ದಿಕ್ಕಿನಲ್ಲಿ ಯಾವಾಗಲೂ ನೀರು ತುಂಬಿದ ಚೊಂಬು ಇಡಬೇಕು ಸಾಧ್ಯವಾದರೆ ಅಲ್ಲಿಯೇ ಕಳಶ ಇಟ್ಟು ಪೂಜೆ ಮಾಡಿದರೆ ಬಹಳ ಒಳ್ಳೆಯದು. ಇದರಿಂದ ಮನೆಯ ಸಂಪತ್ತು ವೃದ್ಧಿಯಾಗುತ್ತದೆ ಮತ್ತು ಶಾಂತಿ ನೆಮ್ಮದಿ ಆರೋಗ್ಯ ಸಿಗುತ್ತದೆ.

* ನಿಮ್ಮ ಮನೆಯಲ್ಲಿ ಹಿರಿಯರು ನಡೆಸಿಕೊಂಡಿರು ಬಂದಿರುವ ಯಾವುದೇ ಹಬ್ಬ ಹಾಗೂ ಆಚರಣೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬೇಡಿ. ಅವರು ಮಾಡಿರುವ ಪದ್ಧತಿಯ ಪ್ರಕಾರ ನಡೆಸಿಕೊಂಡು ಹೋಗಿ ಇದರಿಂದ ಹಿರಿಯರ ಆತ್ಮಗಳಿಗೆ ಸಮಾಧಾನ ಸಿಗುತ್ತದೆ ಹಾಗೂ ಅವರ ಆಶೀರ್ವಾದವೂ ನಿಮಗೆ ಸಿಗುತ್ತದೆ, ನಿಮ್ಮ ಕುಲದೇವರ ಆಶೀರ್ವಾದ ಸಿಗುತ್ತದೆ.

* ಮನೆ ದೀಪ, ಆರತಿ ಇವುಗಳನ್ನು ಬಾಯಿಂದ ಊದಿ ಆರಿಸುವುದು ಮನೆಗೆ ದೋಷ ತರುತ್ತದೆ, ಇಂತಹ ತಪ್ಪುಗಳನ್ನು ಮಾಡಬೇಡಿ.
* ಹಾಸಿಗೆಯ ಮೇಲೆ ಕುಳಿತು ಆಹಾರ ಸೇವಿಸಬೇಡಿ ಈ ರೀತಿ ಮಾಡುವುದರಿಂದ ಕೆಟ್ಟ ಕನಸುಗಳು ಬೀಳುತ್ತವೆ.
* ದೇವರ ಕೋಣೆಯ ಆಗ್ನೇಯ ದಿಕ್ಕಿನಲ್ಲಿ ಧೂಪ ದೀಪ, ಹವನಕುಂಡದ ವಸ್ತುಗಳನ್ನು ಇಡಿ

* ಮನೆಯ ಮುಖ್ಯ ದ್ವಾರದ ಬಲಭಾಗದಲ್ಲಿ ಅರಿಶಿಣದಿಂದ ಸ್ವಸ್ತಿಕ್ ಚಿಹ್ನೆಯನ್ನು ಬರೆಯಿರಿ, ಇದರಿಂದ ನಕಾರಾತ್ಮಕ ಶಕ್ತಿಗಳು ಮನೆಗೆ ಪ್ರವೇಶ ಮಾಡಲು ಅವಕಾಶ ಆಗುವುದಿಲ. ಲ ಇದರಿಂದ ನಿಮ್ಮ ಮನೆಯ ವಾತಾವರಣ ಉತ್ತಮವಾಗಿರುತ್ತದೆ.
ವಾರಕ್ಕೆ ಒಮ್ಮೆ ಸಮುದ್ರದ ಉಪ್ಪು ಅಥವಾ ಕಲ್ಲು ಉಪ್ಪು ಜೊತೆಗೆ ಸ್ವಲ್ಪ ಗೋಮೂತ್ರ ಹಾಗೂ ಅರಿಶಿಣ ಹಾಕಿ ಮನೆಯನ್ನು ಸ್ವಚ್ಛಗೊಳಿಸಿ. ಇದರಿಂದ ಮನೆಯಲ್ಲಿರುವ ನಕರಾತ್ಮಕ ಶಕ್ತಿಗಳು ಹೊರ ಹೋಗುತ್ತವೆ ಮನೆಯ ಮೇಲೆ ಕೆಟ್ಟ ದೃಷ್ಟಿ ಬಿದ್ದಿದ್ದರು ಅದು ನಿವಾರಣೆಯಾಗುತ್ತದೆ.

* ದೇವರ ಕೋಣೆಯಲ್ಲಿ ಮನೆಯ ಹಿರಿಯ ಸದಸ್ಯನ ಹೆಬ್ಬರಳಿಗಿಂತ ದೊಡ್ಡ ಗಾತ್ರದ ವಿಗ್ರಹಗಳು ಇದ್ದರೆ ಅದಕ್ಕೆ ಪ್ರತಿದಿನ ಪೂಜಾ ಹಾಗೂ ನೈವೇದ್ಯ ಆಗಬೇಕು. ಇದನ್ನು ತಪ್ಪಿಸುವುದರಿಂದ ನಿಮ್ಮ ಮನೆಗೆ ಗೃಹ ದೋಷಗಳು ಉಂಟಾಗುತ್ತವೆ ಆಗ ಮನೆಯಲ್ಲಿರುವ ಎಲ್ಲರೂ ಕ’ಷ್ಟವನ್ನು ಅನುಭವಿಸಬೇಕಾಗುತ್ತದೆ.

* ಮನೆ ಮುಂಭಾಗದಲ್ಲಿ ಶೂ ಮತ್ತು ಚಪ್ಪಲಿಗಳನ್ನು ಬಿಟ್ಟುಕೊಳ್ಳುವುದು ಮತ್ತು ಶೂ, ಚಾಪ್ಪಲಿಗಳನ್ನು ಅಸ್ತವ್ಯಸ್ತವಾಗಿ ಚೆಲ್ಲಾಡುವುದು ಈ ರೀತಿ ಮಾಡಬೇಡಿ ಇದರಿಂದಲೂ ಕೂಡ ಮನೆಯಲ್ಲಿ ಕ’ಲ’ಹಗಳು ಉಂಟಾಗುತ್ತವೆ, ಮನೆಯಲ್ಲಿ ಗೊಂದಲಮಯ ವಾತಾವರಣ ಸೃಷ್ಟಿಯಾಗುತ್ತದೆ. ಇವುಗಳನ್ನು ಇಡಲು ಪ್ರತ್ಯೇಕವಾದ ವ್ಯವಸ್ಥೆ ಮಾಡಿಕೊಂಡು ಅಲ್ಲಿ ನೀಟಾಗಿ ಜೋಡಿಸಿ.

* ಮನೆಯಲ್ಲಿ ಹಸು ಸಾಕಿದ್ದರೆ ಮೊದಲಿನ ರೊಟ್ಟಿಯನ್ನು ಹಸುವಿಗೆ ಮೀಸಲಿಡಿ, ಇದರೊಂದಿಗೆ ಮನೆಯ ಸಾಕು ಪ್ರಾಣಿಗಳನ್ನು ಬಹಳ ಪ್ರೀತಿಯನ್ನು ನೋಡಿಕೊಳ್ಳಿ ಮತ್ತು ಪಶು ಪಕ್ಷಿಗಳಿಗೆ, ಕೋತಿಗಳಿಗೆ, ಬೀದಿ ನಾಯಿಗಳಿಗೆ ಕೂಡ ಆಹಾರವನ್ನು ನೀರಿನ ವ್ಯವಸ್ಥೆಯನ್ನು ಮಾಡಿಕೊಡುವುದರಿಂದ ನಿಮ್ಮ ಮನೆ ಏಳಿಗೆ ಆಗುತ್ತದೆ.

Useful Information
WhatsApp Group Join Now
Telegram Group Join Now

Post navigation

Previous Post: ಔಷಧಿ ಇಲ್ಲದೆ ಹೈ BPಯನ್ನು ಹೇಗೆ ನಿಯಂತ್ರಗೊಳಿಸುವ ಸುಲಭ ವಿಧಾನ ವೈದ್ಯರು ನೀಡಿರುವ ಸಲಹೆ ನೋಡಿ ಒಮ್ಮೆ.!
Next Post: ಬಿಸಿ ನೀರು ಕುಡಿಯಬೇಕಾ.? ತಣ್ಣೀರು ಕುಡಿಯಬೇಕಾ.? ದೇಹಕ್ಕೆ ಯಾವುದು ಒಳ್ಳೆದು ಅನ್ನೊದನ್ನ ತಿಳಿಸಿದ ವೈದ್ಯರು ತಪ್ಪದೆ ನೋಡಿ.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore