Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಮನೆಯಲ್ಲಿ ಸುಖ ಸಂತೋಷ ಮತ್ತು ಸಮೃದ್ಧಿಗಾಗಿ ಈ 40 ವಾಸ್ತು ಸಲಹೆ ಪಾಲಿಸಿ.!

Posted on April 24, 2024 By Kannada Trend News No Comments on ಮನೆಯಲ್ಲಿ ಸುಖ ಸಂತೋಷ ಮತ್ತು ಸಮೃದ್ಧಿಗಾಗಿ ಈ 40 ವಾಸ್ತು ಸಲಹೆ ಪಾಲಿಸಿ.!

 

* ಈಶಾನ್ಯ ದಿಕ್ಕಿನಲ್ಲಿ ಕಲಶವನಿಟ್ಟು ಕೆಂಪು ಕಮಲದ ಹೂವಿನಿಂದ ಲಕ್ಷ್ಮಿಯನ್ನು ಪೂಜಿಸಿದರೆ ಅತಿ ಶೀಘ್ರದಲ್ಲಿ ಹೇರಳ ಧನ ಪ್ರಾಪ್ತಿ.
* ಪೂಜಾ ಕೋಣೆ ಸದಾ ಶುದ್ದವಾಗಿರಬೇಕು ಹಾಗೂ ದೇವರನ್ನು ಹೂಗಳಿಂದ ಅಲಂಕರಿಸಿದರೆ ಧನಾಭಿವೃದ್ಧಿಯಾಗಿ ಸುಖ ಸಂತೋಷ ಗಳು ಲಭಿಸುತ್ತದೆ.
* ಅಡುಗೆ ಮನೆಯಲ್ಲಿ ಪೂಜಾ ಕೋಣೆ ಇರಬಾರದು ಹಾಗೆ ಇದ್ದಲ್ಲಿ ಧನ ಸಂಪಾದನೆಗೆ ತೊಡಕು ಉಂಟಾಗುತ್ತದೆ.

* ಅಡುಗೆ ಮನೆಯಲ್ಲಿ ವಾಷಿಂಗ್ ಮಷೀನ್ ಬಳಸುವುದರಿಂದ ಹಲ ವಾರು ನಷ್ಟಗಳು ಹಾಗೂ ಧನ ಹಾನಿ ಸಾಧ್ಯತೆಗಳಿರುತ್ತದೆ.
* ಮನೆಯ ಮುಂಭಾಗಿಲನ್ನು ಹಸಿರು ತೋರಣದಿಂದ ಸಿಂಗರಿಸಿದರೆ ಮನೆಯಲ್ಲಿ ನೆಮ್ಮದಿ ಹಾಗೂ ಶುಭಫಲಗಳು ಲಭಿಸುತ್ತವೆ.
* ದೇವರ ಮನೆಯಲ್ಲಿ ಸದಾ ದೀಪವನ್ನು ಬೆಳಗಿಸಿದರೆ ಧನಕನಕಾದಿ ಭಾಗ್ಯಗಳು ಲಭಿಸುತ್ತದೆ.

* ಮನೆ ಅಥವಾ ಅಂಗಡಿಯಲ್ಲಿ ಈಶಾನ್ಯ ದಿಕ್ಕಿನಲ್ಲಿ ಅಥವಾ ದೇವರ ಮನೆಯಲ್ಲಿ ಬಿಲ್ವಪತ್ರೆ ಮತ್ತು ತೆಂಗಿನಕಾಯಿ, ಬಾಳೆಹಣ್ಣು, ವೀಳ್ಯದೆಲೆ ಅಡಿಕೆ ಹೂ ಇವುಗಳಿಂದ ಲಕ್ಷ್ಮಿ ಪೂಜೆಯನ್ನು ಮಾಡಿದರೆ ಸಕಲ ರೀತಿಯ ದೋಷಗಳು ಪರಿಹಾರವಾಗಿ ಸುಖ ಸಂತೋಷಗಳು ಪ್ರಾಪ್ತಿಯಾಗುತ್ತದೆ.

ಈ ಸುದ್ದಿ ಓದಿ:- ಹೆಣ್ಣು ಮಕ್ಕಳು ತವರಿನಿಂದ ಈ ವಸ್ತುಗಳನ್ನು ತಂದರೆ ಅದೃಷ್ಟ ಬರುತ್ತದೆ.!

* ಮನೆಯ ಪೂರ್ವ ದಿಕ್ಕನ್ನು ಸಂಪೂರ್ಣವಾಗಿ ಮುಚ್ಚುವುದರಿಂದ ಪತಿ-ಪತ್ನಿಯರಲ್ಲಿ ವಿರಸ ಸಂಭವಿಸುತ್ತದೆ. ಪೂರ್ವ ದಿಕ್ಕಿನಲ್ಲಿ ಕನಿಷ್ಠ ಒಂದು ಕಿಟಕಿಯನ್ನು ಇಡುವುದರಿಂದ ಈ ದೋಷ ಪರಿಹಾರ ಆಗುತ್ತದೆ.
* ಹಣಕಾಸು ಹಾಗೂ ಒಡವೆಗಳನ್ನು ಕೆಂಪು ವಸ್ತ್ರದಲ್ಲಿ ಸುತ್ತಿ ದಕ್ಷಿಣ ಅಥವಾ ಉತ್ತರ ದಿಕ್ಕಿನಲ್ಲಿ ತಿಜೋರಿಯಲ್ಲಿದ್ದರೆ ಅಭಿವೃದ್ಧಿ ಪ್ರಾಪ್ತಿ.
* ಪಶ್ಚಿಮ ಅಥವಾ ದಕ್ಷಿಣ ದಿಕ್ಕಿಗೆ ತಲೆ ಇಟ್ಟು ಮಲಗಿದರೆ ಶೀಘ್ರವಾಗಿ ನಿದ್ದೆ ಬರುತ್ತದೆ. ಹಾಗೂ ಆರೋಗ್ಯ ವೃದ್ಧಿಸುತ್ತದೆ.

* ಪೂಜಾ ಕೋಣೆಯಲ್ಲಿ ದೇವರ ಫೋಟೋಗಳನ್ನು ಒಂದರ ಹಿಂದೆ ಒಂದರಂತೆ ಸಾಲು ಸಾಲಾಗಿ ಇಟ್ಟಿರಬಾರದು.
* ಈಶಾನ್ಯ ದಿಕ್ಕಿನ ಕೋಣೆಯಲ್ಲಿ ಮಂಗಳಕರವಾದ ವಸ್ತುಗಳನ್ನು ಇಡುವುದರಿಂದ ಸಕಲ ರೀತಿಯ ಶುಭಕಾರ್ಯಗಳು ನಡೆಯುತ್ತವೆ.
* ನಿಮ್ಮ ಡೈನಿಂಗ್ ಟೇಬಲ್ ಅನ್ನು ಎಂದಿಗೂ ಮನೆಯ ಮುಖ್ಯ ದ್ವಾರದ ಮುಂದೆ ಇಡಬಾರದು. ಊಟದ ಪ್ರದೇಶವನ್ನು ನಿರ್ಧರಿಸುವಾಗ ಅದು ನಿಮ್ಮ ಮುಖ್ಯ ಬಾಗಿಲಿನಿಂದ ನೇರವಾಗಿ ಗೋಚರಿಸಬಾರದು ಎಂಬುದನ್ನು ನೆನಪಿನಲ್ಲಿಡಿ.

* ಬಾಗಿಲು ತೆರೆದಾಗಲೆಲ್ಲ ಉತ್ತರ ದಿಕ್ಕಿಗೆ ತೆರೆದುಕೊಳ್ಳುವ ರೀತಿಯಲ್ಲಿ ಮನೆಯ ಕಪಾಟುಗಳನ್ನು ಇರಿಸಿ.
* ಮನೆಯ ಬಾಗಿಲುಗಳು ಹಳೆಯದಾಗಿದ್ದರೆ ಮತ್ತು ತೆರೆಯುವಾಗ ಅಥವಾ ಮುಚ್ಚುವಾಗ ಅವುಗಳಿಂದ ಶಬ್ದ ಬಂದರೆ ಅದು ಶುಭವಲ್ಲ. ಆದ್ದರಿಂದ ಸಮಯಕ್ಕೆ ಎಣ್ಣೆಯನ್ನು ಸೇರಿಸುವ ಮೂಲಕ ಅವುಗಳನ್ನು ಸರಿಪಡಿಸಿ.

ಈ ಸುದ್ದಿ ಓದಿ:- ಸಾಲ ಕೊಟ್ಟ ಹಣ ವಾಪಸ್ ಬರುತ್ತಿಲ್ಲ ಅಂದ್ರೆ ಹೀಗೆ ಮಾಡಿ ಸಾಕು ಅವರೇ ವಾಒಸ್ ತಂದು ಕೊಡ್ತಾರೆ.!

* ನೀವು ಮಲಗಿದಾಗಲೆಲ್ಲ ನಿಮ್ಮ ತಲೆಯನ್ನು ದಕ್ಷಿಣ ದಿಕ್ಕಿಗೆ ಮತ್ತು ನಿಮ್ಮ ಪಾದಗಳನ್ನು ಉತ್ತರ ದಿಕ್ಕಿನಲ್ಲಿ ಇರಿಸಿ. ಹೀಗೆ ಮಾಡುವುದರಿಂದ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ.
* ಆಗ್ನೇಯ ದಿಕ್ಕು. ಹನುಮಂತನ ಮೂರ್ತಿಯನ್ನು ಈ ದಿಕ್ಕಿನಲ್ಲಿ ಸ್ಥಾಪಿಸಬಾರದು. ಮನೆಯಲ್ಲಿ ಈ ದಿಕ್ಕಿನಲ್ಲಿ ಹನುಮಂತನ ವಿಗ್ರಹವಿದ್ದರೆ ಅದರ ಸ್ಥಳವನ್ನು ಬದಲಾಯಿಸಿ.

*ಮನೆಯ ಈಶಾನ್ಯ ದಿಕ್ಕನ್ನು ಸಾಧ್ಯವಾದಷ್ಟು ತೆರೆದಿಡಿ ಈ ದಿಕ್ಕಿನಲ್ಲಿ ಹೆಚ್ಚಿನ ನಿರ್ಮಾಣವನ್ನು ಮಾಡಬಾರದು.
* ಮನೆಗೆ ಒಂದು ಬಾಗಿಲು ಇದ್ದರೆ ಸಕಲ ರೀತಿಯಲ್ಲಿ ಅಭಿವೃದ್ಧಿ ಮತ್ತು ಸುಖ ಸಂತೋಷಗಳು ಲಭಿಸುತ್ತದೆ.

• ಮನೆಗೆ ಎರಡು ಬಾಗಿಲುಗಳು ಇದ್ದರೆ, ನೆಮ್ಮದಿ ಹಾಗೂ ಆಯುರಾರೋಗ್ಯ ಭಾಗ್ಯಗಳು ಪ್ರಾಪ್ತಿಯಾಗುತ್ತದೆ.
• ಮನೆಗೆ ಮೂರು ಬಾಗಿಲುಗಳು ಇದ್ದರೆ, ಸಂತೋಷ, ಧನವ್ಯಯ ಇತ್ಯಾದಿಗಳು ಸಂಭವಿಸುತ್ತದೆ.
• ಮನೆಗೆ ನಾಲ್ಕು ಬಾಗಿಲುಗಳು ಇದ್ದರೆ, ಸಕಲ ರೀತಿಯಲ್ಲಿ ಸುಖ ಸಂತೋಷ ಹಾಗೂ ಕೀರ್ತಿ ಪ್ರತಿಷ್ಠೆಗಳು ಪ್ರಾಪ್ತಿಯಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Useful Information
WhatsApp Group Join Now
Telegram Group Join Now

Post navigation

Previous Post: ಈ ರಾಶಿಯವರಿಗೆ ಗಜಕೇಸರಿ ರಾಜಯೋಗ ಪ್ರಾರಂಭ..!
Next Post: ಎಷ್ಟೇ ದುಡಿದರೂ ಹಣ ಕೈಯಲ್ಲಿ ನಿಲ್ಲದೆ ಇರಲು ಮುಖ್ಯ ಕಾರಣಗಳು……!!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore