Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಇನ್ಮುಂದೆ ವಾಹನ, ಚಿನ್ನ, ಹಣ ಏನೇ ಕಳುವಾದ್ರೆ ಮೊಬೈಲ್‌ನಲ್ಲೇ ಪೊಲೀಸರಿಗೆ ದೂರು ನೀಡಬಹುದು ಹೇಗೆ ಅಂತ ನೋಡಿ.!

Posted on August 21, 2023 By Kannada Trend News No Comments on ಇನ್ಮುಂದೆ ವಾಹನ, ಚಿನ್ನ, ಹಣ ಏನೇ ಕಳುವಾದ್ರೆ ಮೊಬೈಲ್‌ನಲ್ಲೇ ಪೊಲೀಸರಿಗೆ ದೂರು ನೀಡಬಹುದು ಹೇಗೆ ಅಂತ ನೋಡಿ.!

ವಾಹನಗಳು(Vehicles) ಕಳವಾದರೆ ಆನ್ಲೈನ್(Online) ಮೂಲಕ ದೂರು ಸಲ್ಲಿಸುವುದು ಹೇಗೆ? ಎಂಬುದರ ಬಗ್ಗೆ ಮಾಹಿತಿಯನ್ನು ಇಲ್ಲಿ ನೀಡಲಾಗುತ್ತದೆ. ವಾಹನಗಳು ಕಳವಾದರೆ ಆನ್ಲೈನ್ ಮೂಲಕ ಯಾವ ಆ್ಯಪ್ ಮೂಲಕ ದೂರನ್ನು ಸಲ್ಲಿಸಬೇಕು?, ದೂರನ್ನು ಸಲ್ಲಿಸುವ ವಿಧಾನ ಹೇಗೆ? ಎಂಬುವುದರ ಸಂಪೂರ್ಣ ಮಾಹಿತಿಯನ್ನು ಇಂದಿನ ಈ ಲೇಖನದಲ್ಲಿ ತಿಳಿದುಕೊಳ್ಳೋಣ. ಕೊನೆವರೆಗೂ ಮಿಸ್‌ ಮಾಡದೇ ಓದಿ.

ಇನ್ಮುಂದೆ ವಾಹನ ಕಳವಾದರೆ ದೂರು ದಾಖಲಿಸಲು ಜನರು ಪೊಲೀಸ್ ಠಾಣೆಗೆ ಅಲೆಯಬೇಕಿಲ್ಲ. ಆನ್‌ಲೈನ್ ಮೂಲಕ ದೂರು ದಾಖಲಿಸುವ ಜನಸ್ನೇಹಿ ಸೇವೆಯನ್ನು ರಾಜ್ಯ ಪೊಲೀಸ್‌ ಇಲಾಖೆ ಆರಂಭಿಸಿದೆ. ದಾಖಲಾದ ದೂರಿಗೆ ಪ್ರತಿಯಾಗಿ ಇಲಾಖೆಯು ದೂರುದಾರರಿಗೆ ಇ-ಎಫ್‌ಐಆರ್(E-FIR) ಒದಗಿಸಿ ತನಿಖೆ ನಡೆಸಲಿದೆ.

ಸ್ಟೇಟ್ ಬ್ಯಾಂಕ್‌ನಲ್ಲಿ ಅಕೌಂಟ್ ಇದ್ದವರಿಗೆ ಭರ್ಜರಿ ನ್ಯೂಸ್, ವಿಚಾರ ಕೇಳುತ್ತಿದ್ದ ಹಾಗೇ ಬ್ಯಾಂಕ್ ನತ್ತ ಮುಗಿಬಿದ್ದ ಗ್ರಾಹಕರು.!

ಬೈಕ್, ಕಾರು, ಆಟೊ ಸೇರಿದಂತೆ ಯಾವುದೇ ವಾಹನ ಕಳುವಾದರೆ ಮಾಲೀಕರು ದೂರು ದಾಖಲಿಸಲು ಸಂಬಂಧಪಟ್ಟ ಪೊಲೀಸ್ ಠಾಣೆಗೆ ಮೊದಲು ಹೋಗಬೇಕಿತ್ತು. ಠಾಣೆಗಳಲ್ಲಿ ದೂರು ದಾಖಲಿಸಲು ಸಿಬ್ಬಂದಿ ಹಿಂದೇಟು ಹಾಕುವ ಹಾಗೂ ಜನರನ್ನು ಠಾಣೆಯಿಂದ ಠಾಣೆಗೆ ಅಲೆಸುತ್ತಿದ್ದ ಬಗ್ಗೆ ಸಾಕಷ್ಟು ಕೇಳಿದ್ದೇವೆ. ಆದರೆ, ಇನ್ನು ಮುಂದೆ ಇಂತಹ ಸಮಸ್ಯೆಗಳಿಲ್ಲ. ಇದೀಗ ನೂತನ ವ್ಯವಸ್ಥೆಯಲ್ಲಿ ಕಳವಾದ ವಾಹನಗಳ ಮಾಲೀಕರು ತಮ್ಮ ಮೊಬೈಲ್‌ನಲ್ಲಿ ಆನ್‌ಲೈನ್ ಮೂಲಕ ದೂರು ದಾಖಲಿಸುವ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಜನರಿಗೆ ಠಾಣೆಗೆ ಹೋಗುವ ತೊಂದರೆ ತಪ್ಪಲಿದೆ.

ಇ-ಎಫ್‌ಐಆರ್ ಸೇವೆ (E-FIR)

ವಾಹನ ಕಳವಾದಾಗ ದೂರು ದಾಖಲಿಸುವ ಪ್ರಕ್ರಿಯೆಯಲ್ಲಿ ಆಗುತ್ತಿದ್ದ ವಿಳಂಬ ಮತ್ತು ಠಾಣೆಗೆ ಜನರ ಅಲೆದಾಟ ತಪ್ಪಿಸುವ ಉದ್ದೇಶಕ್ಕೆ ಇ-ಎಫ್‌ಐಆರ್ ಸೇವೆ ಆರಂಭಿಸಲಾಗಿದೆ. ಇದರಿಂದ ವಾಹನ ಕಳವು ಪ್ರಕರಣಗಳಲ್ಲಿ ದೂರು ದಾಖಲಿಸುವುದು ಸುಲಭವಾಗುತ್ತದೆ.

ಸುಖ ಸಂಸಾರಕ್ಕೆ ಕೆಲವು ಗುಟ್ಟುಗಳು ಇವು, ಯಾವುದೇ ಯಂತ್ರ ಮಂತ್ರ ತಂತ್ರದ ಪ್ರಭಾವವಿಲ್ಲದೆ ಪತಿಯನ್ನು ನಿಮ್ಮ ಅಂಗೈನಲ್ಲಿ ಇಟ್ಟುಕೊಳ್ಳುವ ಸುಲಭ ಉಪಾಯಗಳು.!

ವಾಹನ ಕಳವಾದ ಬಗ್ಗೆ ಮಾಲೀಕರು ಆನ್ ಲೈನ್‌ನಲ್ಲಿ ದೂರು ನೀಡಿದರೆ ಸಂಬಂಧಪಟ್ಟ ಠಾಣೆಯ ಸಿಬ್ಬಂದಿಗಳು ವಿಚಾರವನ್ನು ಕೈಗೊಳ್ಳುತ್ತಾರೆ. ಸಾರ್ವಜನಿಕ ಸೇವಾ ಕೇಂದ್ರ ವ್ಯವಸ್ಥೆ ಮೂಲಕ ಆನ್‌ಲೈನ್ ದೂರು ಸ್ವೀಕಾರ ಪ್ರಕ್ರಿಯೆ ನಡೆಯಲಿದೆ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್‌ ಸೂದ್ ತಿಳಿಸಿದ್ದಾರೆ. ನೂತನ ಸೇವೆಯ ಸದುಪಯೋಗ ಪಡೆಯಬೇಕು. ಸುಳ್ಳು ದಾಖಲಿಸಿ, ಸಿಬ್ಬಂದಿಗೆ ಸಮಸ್ಯೆ ಮಾಡಿದರೆ ಶಿಸ್ತುಕ್ರಮ ಜರುಗಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.

ದೂರು ದಾಖಲಿಸುವ ವಿಧಾನ

ಹಂತ 1: ಮೊದಲನೆಯದಾಗಿ ದೂರು ದಾಖಲಿಸಲು ಪೊಲೀಸ್ ರಾಜ್ಯ ಇಲಾಖೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಬೇಕು, ಅದಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ. https://ksp.karnataka.gov.in/
ಹಂತ 2: ನಂತರ ನಾಗರಿಕ ಕೇಂದ್ರಿತ ತಾಣ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ಬಳಿಕ ಕ್ರಮ ನಾಗರಿಕ ಕೇಂದ್ರಿತ ಪೋರ್ಟಲ್ ಪುಟದಲ್ಲಿ ಲಾಗಿನ್ ಬಟನ್ ಒತ್ತಬೇಕು.
ಹಂತ 3: ಅಲ್ಲಿ ನ್ಯೂ ಟು ಎನ್‌ಎಸ್‌ಒ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ, ಆಧಾರ್ ಸಂಖ್ಯೆ ನಮೂದಿಸಿ.

ಬಾಡಿಗೆ ಮನೆಯಲ್ಲಿ ವಾಸ ಮಾಡುತಿದ್ದವರಿಗೆ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್ ಹರ್ಷ ವ್ಯಕ್ತ ಪಡಿಸಿದ ಬಾಡಿಗೆದಾರರು.!

ಹಂತ 4: ಹೊಸ ಯೂಸರ್ ಐಡಿ ಹಾಗೂ ಪಾಸ್‌ ವರ್ಡ್ ಬಳಸಿಕೊಂಡು ಲಾಗಿನ್ ಆಗಿ.
ಹಂತ 5: ನಂತರ ಮುಂದಿನ ಪುಟದಲ್ಲಿ ವಾಹನದ ನೋಂದಣಿ ಸಂಖ್ಯೆ, ಎಂಜಿನ್ ಸಂಖ್ಯೆ ಸೇರಿದಂತ ಪೂರಕ ವಿವರ ದಾಖಲಿಸಿ ದೂರು ಸಲ್ಲಿಸಬೇಕು.
ಹಂತ 6: ನಂತರ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಸಂದೇಶ ರವಾನೆಯಾಗುತ್ತದೆ.

ಹಂತ 7: ಆ ನಂತರ ಠಾಣೆಗಳ ತನಿಖಾಧಿಕಾರಿಯ ಸಹಿ ಸಮೇತ ಇ-ಎಫ್‌ಐಆರ್ ಪ್ರತಿ ಸಿಗುತ್ತದೆ.
ಈ ಎಫ್‌ಐಆರ್ ಪ್ರತಿಗೆ ಕಾನೂನು ಬದ್ದ ಮಾನ್ಯತೆ ಇದ್ದು, ಪೊಲೀಸರು ಬೇರೆ ಪ್ರಕರಣಗಳಂತೆ ತನಿಖೆ ಮಾಡುತ್ತಾರೆ. ಎಲ್ಲಾ ನಾಗರಿಕರು ಇದರ ಉಪಯೋಗವನ್ನು ಪಡೆದುಕೊಳ್ಳಬಹುದಾಗಿದೆ.

Useful Information
WhatsApp Group Join Now
Telegram Group Join Now

Post navigation

Previous Post: ಸ್ಟೇಟ್ ಬ್ಯಾಂಕ್‌ನಲ್ಲಿ ಅಕೌಂಟ್ ಇದ್ದವರಿಗೆ ಭರ್ಜರಿ ನ್ಯೂಸ್, ವಿಚಾರ ಕೇಳುತ್ತಿದ್ದ ಹಾಗೇ ಬ್ಯಾಂಕ್ ನತ್ತ ಮುಗಿಬಿದ್ದ ಗ್ರಾಹಕರು.!
Next Post: SBI ಬ್ಯಾಂಕ್ ನಲ್ಲಿ ಖಾತೆ ಇದ್ದವರಿಗೆ ಇಂದಿನಿಂದ 5 ಹೊಸ ರೂಲ್ಸ್ ಜಾರಿ.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore