ಹಣಕಾಸಿನ ಸಮಸ್ಯೆ, ದೃಷ್ಟಿ ದೋಷ, ನೆಗೆಟಿವ್ ಶಕ್ತಿ ಮನೆಯಲ್ಲಿ ಹೆಚ್ಚಾಗಿದ್ದರೆ ಮಂಗಳವಾರದ ದಿನ ಈ ತಂತ್ರ ಮಾಡಿ ಸಾಕುಚಮತ್ಕಾರ ನಡೆಯುತ್ತದೆ.!

 

ನಿಮ್ಮ ಮನೆಯಲ್ಲಿ ಹಣಕಾಸಿನ ಬಾದೆಗಳು ಹೆಚ್ಚಾಗುತ್ತಾ ಇದ್ದರೆ, ಮನೆಯಲ್ಲಿ ಪ್ರತಿನಿತ್ಯ ಕಲಹಗಳು ಹೆಚ್ಚಾಗುತ್ತಾ ಇದ್ದರೆ, ಮನೆಯಲ್ಲಿ ಮಾನಸಿಕ ನೆಮ್ಮದಿ ಇಲ್ಲ ಯಾವಾಗಲೂ ಕಿರಿಕಿರಿ ಕಲಹಗಳು ಹೆಚ್ಚಾಗುತ್ತದೆ, ಮಾಡುವಂತಹ ಕೆಲಸ ಕಾರ್ಯಗಳಲ್ಲಿ ವಿಪರೀತವಾದ ನಷ್ಟಗಳು ಎದುರಾಗುತ್ತಿದ್ದರೆ, ಮನೆಯಲ್ಲಿ ಯಾವುದೇ ರೀತಿಯಾದಂತಹ ಏಳಿಗೆ ಉಂಟಾಗುತ್ತಿಲ್ಲ ಎಂದರೆ ಮನೆಯಲ್ಲಿ ಭಯಂಕರವಾದoತಹ ನಕಾರಾತ್ಮಕ ಶಕ್ತಿಗಳು ತಾಂಡವ ಆಡುತ್ತಿದೆ ಎಂದರ್ಥ.

ಇಂತಹ ನರ ದೃಷ್ಟಿಗಳು ಅಂದರೆ ನೆಗೆಟಿವ್ ಎನರ್ಜಿಗಳು ನಮ್ಮ ಮನೆಯಿಂದ ದೂರ ಹೋಗಬೇಕು ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗಬೇಕು ಎಂದರೆ ಕಲ್ಲುಪ್ಪಿನಿಂದ ಈ ಎರಡು ವಿಶೇಷವಾದ ತಂತ್ರವನ್ನು ಮಾಡಿದರೆ ಸಾಕು ಮೇಲೆ ಹೇಳಿದ ಎಲ್ಲಾ ರೀತಿಯ ಸಮಸ್ಯೆಗಳನ್ನು ಸಹ ದೂರ ಮಾಡಿ ಕೊಳ್ಳಬಹುದು.

ಹಾಗಾದರೆ ಕಲ್ಲುಪ್ಪಿನಿಂದ ಈ ಒಂದು ತಂತ್ರವನ್ನು ಯಾವ ದಿನ ಮಾಡಬೇಕು ಹಾಗೂ ಯಾವ ವಿಧಾನವನ್ನು ಅನುಸರಿಸಿ ಮಾಡುವುದರಿಂದ ಯಾವೆಲ್ಲ ರೀತಿಯ ಬದಲಾವಣೆಗಳು ನಮ್ಮ ಮನೆಯಲ್ಲಿ ನಡೆಯುತ್ತದೆ ಎನ್ನುವುದರ ಸಂಪೂರ್ಣವಾದ ಮಾಹಿತಿ ಯನ್ನು ಈ ದಿನ ತಿಳಿಯೋಣ.

ಪರಿಹಾರ ಶಾಸ್ತ್ರದಲ್ಲಿ ಕಲ್ಲುಪ್ಪಿಗೆ ಬಹಳ ವಿಶೇಷವಾದಂತಹ ಸ್ಥಾನವಿದೆ. ಈ ಕಲ್ಲುಪ್ಪನ್ನು ಬಳಸಿ ಮನೆಯಲ್ಲಿರುವಂತಹ ದೃಷ್ಟಿ ದೋಷ, ನಕಾರಾ ತ್ಮಕ ಶಕ್ತಿ, ನರ ದೃಷ್ಟಿ ದೋಷ, ಇವೆಲ್ಲವನ್ನೂ ಸಹ ಸಂಪೂರ್ಣವಾಗಿ ತೊಡೆದು ಹಾಕಬಹುದಾಗಿದೆ. ಮನೆಯಲ್ಲಿ ಮಂಗಳವಾರದ ದಿನ ಅಥವಾ ಶನಿವಾರದ ದಿನ ಈ ಒಂದು ತಂತ್ರವನ್ನು ಕಲ್ಲುಪ್ಪಿನಿಂದ ಮಾಡಬೇಕಾಗುತ್ತದೆ. ಹಾಗಾದರೆ ಆ ತಂತ್ರವನ್ನು ಹೇಗೆ ಮಾಡಬೇಕು ಯಾವ ವಿಧಾನ ಅನುಸರಿಸಬೇಕು ಎಂದು ಈ ಕೆಳಗೆ ತಿಳಿಯೋಣ.

ಮೊದಲನೆಯ ತಂತ್ರ :- ಮೊದಲು ಒಂದು ಗಾಜಿನ ಲೋಟವನ್ನು ತೆಗೆದುಕೊಳ್ಳಬೇಕು ಅದರ ಒಳಗಡೆ ಸಂಪೂರ್ಣವಾಗಿ ನೀರನ್ನು ತುಂಬಿಸಿ ಆನಂತರ ನಿಮ್ಮ ಕೈಯಲ್ಲಿ ಒಂದು ಮುಷ್ಟಿಯಷ್ಟು ಕಲ್ಲುಪ್ಪನ್ನು ಆ ನೀರಿಗೆ ಹಾಕಬೇಕಾಗುತ್ತದೆ ನಂತರ ಉಪ್ಪು ಸಂಪೂರ್ಣವಾಗಿ ಕರಗಬೇಕು ಆನಂತರ ಆ ಒಂದು ಲೋಟವನ್ನು ನಿಮ್ಮ ಮನೆಯ ಯಾವುದಾದರೂ ಒಂದು ಮೂಲೆಯಲ್ಲಿ ಇರಿಸಬೇಕಾಗುತ್ತದೆ.

ಮೂಲೆಯಲ್ಲಿ ಇರಿಸುವಾಗ ಆ ಲೋಟದ ಮೇಲೆ ಒಂದು ತಟ್ಟೆಯನ್ನು ಮುಚ್ಚಿ 24 ಗಂಟೆಗಳು ಆ ಲೋಟ ಆ ಸ್ಥಳದಲ್ಲಿಯೇ ಇರುವ ಹಾಗೆ ನೋಡಿಕೊಳ್ಳಬೇಕಾಗುತ್ತದೆ. 24 ಗಂಟೆ ಬಳಿಕ ಆ ನೀರು ಬೇರೆ ಬಣ್ಣವನ್ನು ಹೊಂದಿದ್ದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಅಂದರೆ ನರದೋಷ ದೃಷ್ಟಿ ದೋಷ ಎನ್ನುವುದು ಇದೆ ಎಂಬ ಅರ್ಥವನ್ನು ಅದು ಸೂಚಿಸುತ್ತದೆ.

ಆನಂತರ ಆ ನೀರನ್ನು ನೀವು ಯಾರು ಓಡಾಡದ ಸ್ಥಳದಲ್ಲಿ ಹಾಕಬೇಕು ಅಥವಾ ನಿಮ್ಮ ಸಿಂಕ್ ಒಳಗೆ ಹಾಕಬೇಕು ಹಾಗೇನಾದರೂ ಆ ನೀರು ಯಾವುದೇ ಬಣ್ಣ ಬದಲಾಯಿಸಿಲ್ಲ ಎಂದರೆ ಆ ಮನೆಯಲ್ಲಿ ಯಾವುದೇ ರೀತಿಯ ದೃಷ್ಟಿ ದೋಷ ನರದೋಷ ಇಲ್ಲ ಎಂಬ ಅರ್ಥವನ್ನು ನೀವು ತಿಳಿದುಕೊಳ್ಳಬೇಕು.

ಎರಡನೆಯ ತಂತ್ರ ನಿಮ್ಮ ಮನೆಯ ಆಗ್ನೇಯ, ವಾಯುವ್ಯ, ಈಶಾನ್ಯ ನೈರುತ್ಯ ಈ ನಾಲ್ಕು ದಿಕ್ಕುಗಳಲ್ಲಿ ಒಂದು ಹಾಳೆಯನ್ನು ಇಟ್ಟು ಅದರ ಮೇಲೆ ಎರಡು ವೀಳ್ಯದೆಲೆ ಒಂದು ಹಿಡಿ ಕಲ್ಲುಪ್ಪನ್ನು ಇಟ್ಟು ನಿಮ್ಮ ಮನೆಯ ಕಿಟಕಿ ಬಾಗಿಲುಗಳನ್ನು ಒಂದು ಗಂಟೆಗಳ ಕಾಲ ಮುಚ್ಚಬೇಕು.

ಆನಂತರ ಒಂದು ಗಂಟೆಯ ಬಳಿಕ ಬಾಗಿಲುಗಳನ್ನು ತೆಗೆದು ಆ ಪೇಪರ್ ವೀಳ್ಯದೆಲೆ ಉಪ್ಪು ಎಲ್ಲವನ್ನು ಸಹ ಒಂದು ಕವರ್ ನಲ್ಲಿ ಹಾಕಿ ಯಾರು ಓಡಾಡದೇ ಇರುವ ಜಾಗಕ್ಕೆ ಹಾಕಬೇಕು. ಈ ರೀತಿ ಮಾಡುವುದ ರಿಂದಲೂ ಕೂಡ ನಿಮ್ಮ ಮನೆಯ ಮೇಲೆ ಯಾವುದೇ ರೀತಿಯ ನಕಾರಾತ್ಮಕ ಶಕ್ತಿಗಳು ಇದ್ದರೂ ಅವೆಲ್ಲವೂ ಕೂಡ ಸಂಪೂರ್ಣವಾಗಿ ದೂರವಾಗುತ್ತದೆ.

Leave a Comment

WhatsApp Group Join Now
Telegram Group Join Now