Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಈ ವಸ್ತುವನ್ನು ಮನೆಗೆ ತಂದು ತಿಲಕ ಮಾಡಿ ಹಣೆಗೆ ಹಚ್ಚಿಕೊಂಡರೆ ಸಾಕು, ಕಷ್ಟಗಳು ಕಡಿಮೆಯಾಗಿ ಬದಲಾವಣೆಯಾಗುವುದು ಖಚಿತ. ಬೇಕಾದರೆ ನೀವೇ ಪರೀಕ್ಷಿಸಿ ನೋಡಿ.!

Posted on December 30, 2023 By Kannada Trend News No Comments on ಈ ವಸ್ತುವನ್ನು ಮನೆಗೆ ತಂದು ತಿಲಕ ಮಾಡಿ ಹಣೆಗೆ ಹಚ್ಚಿಕೊಂಡರೆ ಸಾಕು, ಕಷ್ಟಗಳು ಕಡಿಮೆಯಾಗಿ ಬದಲಾವಣೆಯಾಗುವುದು ಖಚಿತ. ಬೇಕಾದರೆ ನೀವೇ ಪರೀಕ್ಷಿಸಿ ನೋಡಿ.!

 

ಜೀವನದಲ್ಲಿ ಮನುಷ್ಯನಿಗೆ ಮನುಷ್ಯ ಸಹಜವಾದ ಸಾಕಷ್ಟು ಸಮಸ್ಯೆಗಳು ಬರುತ್ತವೆ. ತನ್ನ ಶಕ್ತಿ ಮೀರಿ ತನ್ನ ಹಾಗೂ ಕುಟುಂಬದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದಕ್ಕೆ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಪ್ರಯತ್ನ ಪಡುತ್ತಾನೆ ಆದರೆ ಭಗವಂತನ ಅನುಗ್ರಹ ಇಲ್ಲದೆ ಸಂಪೂರ್ಣವಾಗಿ ನಾವು ಸಮಸ್ಯೆಗಳಿಂದ ಹೊರಬರುವುದು ಹಾಗೂ ನೆಮ್ಮದಿಯಾಗಿ ಬದುಕುವುದು ಅಸಾಧ್ಯ.

ಇಂತಹ ಸಮಯದಲ್ಲಿ ನಮಗಿರುವ ಕ’ಷ್ಟಗಳನ್ನು ದೇವರ ಬಳಿ ಹೇಳಿಕೊಳ್ಳಬೇಕು ಅವರು ಕರುಣೆ ತೋರುವಂತೆ ಕೇಳಿಕೊಳ್ಳಬೇಕು ಮತ್ತು ದೇವರ ಬಲ ಹೆಚ್ಚಾಗುವಂತೆ ನಾವು ಕೆಲಸ ಕಾರ್ಯಗಳನ್ನು ಮಾಡಬೇಕು ಇಂತಹ ಸಮಯದಲ್ಲಿ ಕೆಲವು ಉಪಾಯಗಳು ಕೂಡ ಅನುಕೂಲಕ್ಕೆ ಬರುತ್ತವೆ.

ದೇವರ ಕೃಪಾಕಟಾಕ್ಷ ದೊರೆಯುವಂತಹ ಕೆಲಸ ಸಣ್ಣ ಉಪಾಯಗಳನ್ನು ಮಾಡಿ ಭಗವಂತನ ಆಶೀರ್ವಾದದಿಂದ ಎಲ್ಲಾ ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸಬಹುದು ಮತ್ತು ಅವುಗಳಿಂದ ಹೊರಬರಲು ದಾರಿಗಳನ್ನು ಹುಡುಕಬಹುದು. ಅದೇ ರೀತಿಯಾಗಿ ಇಂದು ನಾವು ಈ ಅಂಕಣದಲ್ಲಿ ಒಂದು ವಿಶೇಷ ಮಾಹಿತಿ ಬಗ್ಗೆ ತಿಳಿಸಿ ಕೊಡುತ್ತಿದ್ದೇವೆ.

ನಿಮಗೆ ಏನಾದರೂ ಶತ್ರುಗಳ ಕಾಟ ಹೆಚ್ಚಾಗಿದ್ದರೆ, ನಿಮ್ಮ ಕುಟುಂಬದ ಮೇಲೆ ಮಾಟ ಮಂತ್ರ ಪ್ರಯೋಗ ಆಗಿದ್ದರೆ, ದೃಷ್ಟಿ ದೋಷದಿಂದ ಮನೆಯಲ್ಲಿ ಕಿರಿಕಿರಿ, ಅ’ಶಾಂ’ತಿ, ಜ’ಗ’ಳ ಮುಂತಾದ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಜೀವನದಲ್ಲಿ ನೆಮ್ಮದಿ ಇಲ್ಲ ಎಂದರೆ ಮನಸ್ಸಿನ ನೆಮ್ಮದಿಗಾಗಿ ಹಾಗೂ ಆರೋಗ್ಯ ಸಮಸ್ಯೆ ಇದ್ದರೆ ಆರೋಗ್ಯದ ವೃದ್ಧಿಗಾಗಿ, ಹಣಕಾಸಿನ ಸಮಸ್ಯೆಗಳಿಗೆ ಪರಿಹಾರವಾಗಲು.

ಮಕ್ಕಳು ವಿದ್ಯಾಭ್ಯಾಸದಲ್ಲಿ ಉನ್ನತಿ ಹೊಂದಲು, ವ್ಯಾಪಾರ ವ್ಯವಹಾರ ಚಟುವಟಿಕೆಗಳಲ್ಲಿ ಏಳಿಗೆಯಾಗಲು ಇನ್ನು ಮುಂತಾದ ಎಲ್ಲಾ ತೊಂದರೆಗಳಿಗೂ ಪರಿಹಾರವಾಗಿ ಈ ಒಂದು ಚಟುವಟಿಕೆ ಮಾಡಬಹುದು. ಬಹಳ ನಂಬಿಕೆಯಿಂದ ಭಕ್ತಿಯಿಂದ ಮನಸ್ಸಿನಲ್ಲಿ ಕಾಲಭೈರವೇಶ್ವರ ಹಾಗೂ ತಾಯಿ ಚಾಮುಂಡೇಶ್ವರಿಯನ್ನು ನನಗೆ ಪ್ರಾರ್ಥಿಸಿ ಇದನ್ನು ಮಾಡಬೇಕು.

ಅರಿಶಿನದ ಕೊಂಬು ಎಲ್ಲರಿಗೂ ಗೊತ್ತಿದೆ, ಇದೇ ರೀತಿಯಾಗಿ ಕಪ್ಪು ಅರಿಶಿನದ ಕೊಂಬು ಇದೆ. ಇದು ಗ್ರಂಥಿಗೆ ಅಂಗಡಿಗಳಲ್ಲಿ ದೊಡ್ಡ ದೊಡ್ಡ ಮಾರ್ಕೆಟ್ ಗಳಲ್ಲಿ ಸಿಗುತ್ತದೆ. ಇದನ್ನು ಕೇಳಿ ಖರೀದಿಸಿ ತನ್ನಿ ಆದರೆ ಖರೀದಿಸುವಾಗ ಕೆಲ ನಿಯಮಗಳು ಇವೆ. ಇದನ್ನು ಖರೀದಿಸಿ ಮನೆಗೆ ತರುವ ದಿನ ನಿಮ್ಮ ಮನೆಯಲ್ಲಿ ಮಾಂಸಹಾರ ಮಾಡಿರಬಾರದು, ಇಡೀ ಮನೆಯನ್ನು ಶುದ್ಧ ಮಾಡಿ ಮಡಿಯಾಗಿ ಇಟ್ಟುಕೊಂಡಿರಬೇಕು.

ಹೆಣ್ಣು ಮಕ್ಕಳಿದ್ದರೆ ಅವರಿಗೆ ತಿಂಗಳ ಸಮಸ್ಯೆ ಇರಬಾರದು. ಮಂಗಳವಾರ ಅಥವಾ ಶುಕ್ರವಾರ ತಂದರೆ ಒಳ್ಳೆಯದು. ಅಥವಾ ಅಮಾವಾಸ್ಯೆ ಮತ್ತು ಹುಣ್ಣಿಮೆ ದಿನಗಳಂದು ಈ ರೀತಿ ಕಪ್ಪು ಅರಿಶಿನದ ಕೊಂಬನ್ನು ಖರೀದಿಸಿ ಮನೆಗೆ ತಂದರೆ ಅದರ ಫಲ ಇನ್ನು ದುಪ್ಪಟ್ಟಾಗುತ್ತದೆ.

ಈ ರೀತಿ ಮನೆಗೆ ತಂದ ಮೇಲೆ ಮನೆಯಲ್ಲಿ ದೇವರಕೋಣೆಯಲ್ಲಿ ಇಟ್ಟು ನಿಮ್ಮ ಮನೆ ದೇವರ ಹೆಸರು ಹಾಗೂ ಕಾಲಭೈರವೇಶ್ವರ ಮತ್ತು ಚಾಮುಂಡಿ ತಾಯಿಯ ಹೆಸರು ಹೇಳಿ ದೀಪವನ್ನು ಹಚ್ಚಿ ನಿಮ್ಮ ಕುಟುಂಬದ ಸಮಸ್ಯೆಗಳನ್ನು ಹೇಳಿಕೊಂಡು ಅದು ಪರಿಹಾರ ಆಗುವಂತೆ ಮಾಡಿ ಎಂದು ಭಕ್ತಿಯಿಂದ ಕೇಳಿಕೊಳ್ಳಿ.

ಈಗ ಆರಿಶಿಣದ ಕೊಂಬನ್ನು ಉಜ್ಜಿ ಪುಡಿ ಮಾಡಿಕೊಳ್ಳಿ, ಆ ಪುಡಿಯನ್ನು ಪ್ರತಿನಿತ್ಯ ಹಾಲು ಅಥವಾ ನೀರಿನ ಜೊತೆ ಸೇರಿಸಿ ಮನೆ ಮಂದಿ ಎಲ್ಲರೂ ತಿಲಕದ ರೀತಿ ಹಚ್ಚಿಕೊಳ್ಳುವುದರಿಂದ ಈ ಮೇಲಿನ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ. ಯಾವಾಗಲೂ ಕಾಲಭೈರವೇಶ್ವರ ಚಾಮುಂಡೇಶ್ವರಿಯ ಆಶೀರ್ವಾದ ನಿಮ್ಮ ಮನೆ ಸದಸ್ಯರ ಮೇಲೆ ಇರುತ್ತದೆ.

ಆದರೆ ಇದನ್ನ ತಿಲಕ ಮಾಡಿ ಹಣೆಗೆ ಹಚ್ಚುವ ದಿನವು ಕೂಡ ಮಾಂಸಹಾರ ಸೇವನೆ ಮಾಡಿರಬಾರದು, ಸ್ನಾನ ಮಾಡಿ ಮಡಿಯಾಗಿರುವ ದಿನದಂದು ಮಾತ್ರ ಇದನ್ನು ಹಣೆಗೆ ಹಚ್ಚಬೇಕು. ದೇವರ ಕೋಣೆ ಬಿಟ್ಟು ಬೇರೆ ಎಲ್ಲೂ ಕೂಡ ಇದನ್ನು ಇಡಬಾರದು. ಈ ಸುಲಭ ಉಪಾಯ ಮಾಡಿ ಪರಿಹಾರ ಕಂಡುಕೊಳ್ಳಿ.

Astrology
WhatsApp Group Join Now
Telegram Group Join Now

Post navigation

Previous Post: ಶನಿ ದೃಷ್ಟಿಯಿಂದ ಪಾರಾಗಲು ಈ ಉಪಾಯ ಮಾಡಿ ಜೀವನಪೂರ್ತಿ ಶನಿ ಕಾಟ ಇರಲ್ಲ.!
Next Post: ದಾನ ಮಾಡುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತ.? ದಾನ ಯಾರಿಗೆ, ಯಾವಾಗ, ಹೇಗೆ ಕೊಡಬೇಕು ಎಂಬುದನ್ನು ಪ್ರತಿಯೊಬ್ಬರೂ ತಿಳಿದುಕೊಂಡಿರಬೇಕು ಇಲ್ಲದಿದ್ದರೆ ಪುಣ್ಯ ಲಭಿಸುವುದಿಲ್ಲ.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore