Home Useful Information ಈ ಕ್ಷೇತ್ರದಲ್ಲಿ ತೀರ್ಥ ಸ್ನಾನ ಮಾಡಿ ಹರಕೆ ಕಟ್ಟಿಕೊಂಡು ಮನೆಗೆ ಹೋದರೆ ನೀವು ತಲುಪುವುದರ ಒಳಗೆ ಸಮಸ್ಯೆ ಪರಿಹಾರ ಆಗುವುದು ಗ್ಯಾರಂಟಿ.!

ಈ ಕ್ಷೇತ್ರದಲ್ಲಿ ತೀರ್ಥ ಸ್ನಾನ ಮಾಡಿ ಹರಕೆ ಕಟ್ಟಿಕೊಂಡು ಮನೆಗೆ ಹೋದರೆ ನೀವು ತಲುಪುವುದರ ಒಳಗೆ ಸಮಸ್ಯೆ ಪರಿಹಾರ ಆಗುವುದು ಗ್ಯಾರಂಟಿ.!

0
ಈ ಕ್ಷೇತ್ರದಲ್ಲಿ ತೀರ್ಥ ಸ್ನಾನ ಮಾಡಿ ಹರಕೆ ಕಟ್ಟಿಕೊಂಡು ಮನೆಗೆ ಹೋದರೆ ನೀವು ತಲುಪುವುದರ ಒಳಗೆ ಸಮಸ್ಯೆ ಪರಿಹಾರ ಆಗುವುದು ಗ್ಯಾರಂಟಿ.!

 

ನಮ್ಮ ಸಂಸ್ಕೃತಿಯಲ್ಲಿ ಮನುಷ್ಯನ ಎಲ್ಲಾ ರೀತಿಯ ಸಮಸ್ಯೆಗಳಿಗೂ ಕೂಡ ಪರಿಹಾರ ನೀಡುವ ಶಕ್ತಿ ಭಗವಂತನಲ್ಲಿ ಮಾತ್ರ ಇರುವುದು ಎನ್ನುವುದನ್ನು ನಂಬಿದ್ದೇವೆ. ಹಾಗೆಂದ ಮಾತ್ರಕ್ಕೆ ನೇರವಾಗಿ ದೇವರೇ ಬಂದು ನಮ್ಮ ಸಮಸ್ಯೆ ಬಗೆ ಹರಿಸುವುದಿಲ್ಲ. ಆತನಿಗೆ ಪ್ರಾರ್ಥಿಸಿದರೆ ಭಕ್ತಿಯಿಂದ ಕೇಳಿಕೊಂಡರೆ ಮನುಷ್ಯ ಸಹಜವಾಗಿ ಬರುವ ಕಷ್ಟಗಳನ್ನು ಎದುರಿಸುವ ಶಕ್ತಿ ನಮಗೆ ಬರುತ್ತದೆ.

ಹೀಗೆ ಪರೋಕ್ಷವಾಗಿ ಭಗವಂತ ಯಾವುದಾದರೂ ರೂಪದಲ್ಲಿ ಬಂದು ಸಮಸ್ಯೆ ಪರಿಹರಿಸುತ್ತಾನೆ ಮತ್ತು ನಮ್ಮತ್ತ ತನ್ನ ಕೃಪೆ ತೋರುತ್ತಾನೆ ಎನ್ನುವುದು ನಂಬಿಕೆ. ಈ ನಂಬಿಕೆಯಿಂದಲೇ ವ್ರತ, ಪೂಜೆ, ಆಚರಣೆ, ಹೋಮ, ಹವನ, ಪುಣ್ಯಕ್ಷೇತ್ರ ದರ್ಶನ ತೀರ್ಥ ಸ್ಥಾನ ಇಂತಹ ಆಚರಣೆಗಳೆಲ್ಲವೂ ನಡೆಯುವುದು. ಹೀಗೆ ಭಗವಂತನನ್ನು ನೆನೆದು ಕೇಳಿಕೊಂಡವರಿಗೆ ಸಮಸ್ಯೆ ಬಗೆ ಹರಿಯುವುದರಲ್ಲಿ ಯಾವುದೇ ಅನುಮಾನವಿಲ್ಲ.

ಈ ಸುದ್ದಿ ಓದಿ:- ಬಿಪಿ ಶುಗರ್ ಇದ್ದವರು ಇದನ್ನು ಪಾಲಿಸಿ, ಮೆಡಿಕಲ್ ಶಾಪ್ ನಲ್ಲಿ ಸಿಗುವುದು ಡಾಕ್ಟರ್ ಹೇಳಿದ್ದು ಮಾತ್ರ ಔಷಧವಲ್ಲ.!

ಹೀಗೆ ಮನುಷ್ಯನು ಮೊರೆಯಿಟ್ಟು ಕೇಳಿಕೊಂಡರೆ ಅವರ ಕೋರಿಕೆಯನ್ನು ಅದೇ ದಿನದೊಳಗೆ ಪೂರೈಸುವ ಪವಾಡಗಳು ನಡೆಯುವ ಪುಣ್ಯ ಸ್ಥಳಗಳು ಕೂಡ ನಮ್ಮ ನಾಡಿನಲ್ಲಿ ಸಾಕಷ್ಟಿವೆ. ರಾಜ್ಯದ ಹಲವು ಭಾಗಗಳಲ್ಲಿ ಇಂತಹ ಕ್ಷೇತ್ರಗಳು ಇದ್ದು ಇದರ ಖ್ಯಾತಿ ಇಂದು ಗಡಿದಾಟಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಮತ್ತು ದೇಶದ ವಿವಿಧ ಮೂಲಗಳಿಂದ ಭಕ್ತಾದಿಗಳು ಬರುತ್ತಾ ಲೋಕ ವಿಖ್ಯಾತಿಯಾಗುತ್ತಿರುವ ಕ್ಷೇತ್ರಗಳು ಬಹಳಷ್ಟಿವೆ.

ಈ ಪಟ್ಟಿಗೆ ಸೇರುತ್ತಿದೆ ನಮ್ಮ ಮಂಡ್ಯ ಜಿಲ್ಲೆಯ ಪಾಂಡಪುರ ತಾಲೂಕಿನ ಕೆ.ಬೆಟ್ಟ ಹಳ್ಳಿಯಲ್ಲಿರುವ ಮತ್ತು ಹುಲಿಕೆರೆ ಮಧ್ಯ ಭಾಗದಲ್ಲಿ ಬರುವ ಶ್ರೀ ವಿಜಯ ಕಾಳಿ ಪವಾಡ ಬಸವಪ್ಪನವರ ಪುಣ್ಯಕ್ಷೇತ್ರ ಈ ಪುಣ್ಯಕ್ಷೇತ್ರದ ವಿಶೇಷತೆ ಏನೆಂದರ ಅಮಾವಾಸ್ಯೆ ಮತ್ತು ಹುಣ್ಣಿಮೆ ದಿನಗಳಲ್ಲಿ ತಾಯಿ ವಿಜಯ ಕಾಳಿ ಅಮ್ಮನವರಿಗೆ ಉಷಾ ಕಾಲದಲ್ಲಿ ಅಭಿಷೇಕ ನಡೆಯುತ್ತದೆ.

ಈ ಸುದ್ದಿ ಓದಿ:-ಈ ಮಂತ್ರವನ್ನು ಜಪ ಮಾಡಿ ಸಾಕು, ಮಕ್ಕಳಾಗದೇ ಇದ್ದವರಿಗೆ ಮಕ್ಕಳಾಗುವ ಯೋಗ ಬರುತ್ತದೆ…

ಇದು ಬಹಳ ವಿಶೇಷವಾದ ಪೂಜೆಯಾಗಿದೆ ಈ ಪೂಜೆ ನಡೆದ ಬಳಿಕ ಬರುವ ಭಕ್ತರಿಗೆ ತೀರ್ಥ ಸ್ಥಾನ ಮಾಡಲು ಅವಕಾಶ ಮಾಡಿಕೊಡಲಾಗಿದೆ. ಈ ಸಮಯದಲ್ಲಿ ಅರಿಶಿಣದ ನೀರನ್ನು ಭಕ್ತಾದಿಗಳ ಮೇಲೆ ಹಾಕಲಾಗುತ್ತದೆ. ಈ ನೀರಿಗೆ ಎಷ್ಟು ಶಕ್ತಿ ಇದೆ ಎಂದರೆ ನೀವು ಯಾವ ರೀತಿಯ ಸಮಸ್ಯೆಗಳ ಪರಿಹಾರಕ್ಕಾಗಿ ಕೇಳಿ ಹರಕೆ ಕಟ್ಟಿಕೊಳ್ಳಲು ಬಂದಿರುತ್ತೀರೋ ಅದು ನೀರನ್ನು ಹಾಕಿಸಿಕೊಂಡು ಮನೆಗೆ ತಲುಪುವಷ್ಟರಲ್ಲೇ ನಡೆದಿರುವ ಉದಾಹರಣೆಗಳು ಇವೆ.

ಆರೋಗ್ಯ ಸಮಸ್ಯೆಗಳು, ಕೌಟುಂಬಿಕ ಸಮಸ್ಯೆಗಳು, ಹಣಕಾಸಿನ ವಿಚಾರಗಳು, ಸಂತಾನ ಸಮಸ್ಯೆ, ಮಕ್ಕಳ ವಿದ್ಯಾಭ್ಯಾಸದ ತೊಂದರೆಗಳು, ಗಂಡನ ಕುಡಿತದ ಚಟ ಬಿಡಿಸಲು ಹರಕೆ ಈ ರೀತಿ ನಾನಾ ಕಾರಣಕ್ಕಾಗಿ ಬಂದು ಇಲ್ಲಿ ಹರಕೆ ಕಟ್ಟಿಕೊಂಡು ನೀರು ಹಾಕಿಸಿಕೊಂಡು ತೀರ್ಥ ಸ್ನಾನ ಮಾಡಿ ಹೋಗುತ್ತಾರೆ.

ಈ ಸುದ್ದಿ ಓದಿ:-ಮಹಿಳೆಯರಿಗೆ ಕೆಲವು ಕಿವಿ ಮಾತುಗಳು. ಇವುಗಳನ್ನು ಪಾಲಿಸಿದರೆ ನಿಮಗೆ ಬರುವ ಎಷ್ಟೋ ಕಷ್ಟಗಳಿಂದ ಪಾರಾಗಬಹುದು.!

ಕೆಲವರಿಗೆ ಮನೆ ತಲುಪುವೊಳಗೆ ಫಲ ಸಿಕ್ಕಿದರೆ ಇನ್ನೂ ಕೆಲವರಿಗೆ ಮೂರು ಸ್ನಾನಗಳು, 5 ಸ್ನಾನಗಳು ಈ ರೀತಿ ಇಲ್ಲಿರುವ ಅರ್ಚಕರೇ ಸೂಚಿಸುತ್ತಾರೆ. ಆ ಪ್ರಕಾರವಾಗಿ ಬಂದು ಮನಸ್ಪೂರ್ತಿಯಾಗಿ ನಂಬಿಕೆ ಇಟ್ಟು ಹರಕೆ ಮಾಡಿಕೊಂಡು ನೀರು ಹಾಕಿಸಿಕೊಂಡು ಹೋದರೆ ಖಂಡಿತ ಸಮಸ್ಯೆ ಪರಿಹಾರ ಆಗುತ್ತದೆ.

ಪ್ರತಿ ಅಮವಾಸ್ಯೆಯಂದು ಪ್ರತ್ಯಂಗಿರಾ ಹೋಮ ಕೂಡ ನಡೆಯುತ್ತದೆ ಮೂರು ಬಾರಿ ಬಂದು ಈ ಹೋಮಗಳಲ್ಲಿ ಭಾಗಿಯಾದವರ ಸಮಸ್ಯೆಗಳು ಕೂಡ ತಾಯಿಯ ಕೃಪಾಕಟಾಕ್ಷದಿಂದ ಪರಿಹಾರವಾಗಿರುವ ಉದಾಹರಣೆಗಳಿವೆ. ಇಷ್ಟು ಪವಾಡ ಸದೃಶವಾದ ಈ ದೇವಾಲಯಕ್ಕೆ ಸಾಧ್ಯವಾದರೆ ನೀವು ಕೂಡ ಒಮ್ಮೆ ಕುಟುಂಬದೊಡನೆ ಭೇಟಿ ಕೊಡಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.

ದೇವಸ್ಥಾನದ ಸಂಪರ್ಕ ಸಂಖ್ಯೆ:
9731652666 / 9632333433

https://youtu.be/rwxWS_Z0_K0?si=fheqrLEhdT20RRfd

LEAVE A REPLY

Please enter your comment!
Please enter your name here