ಪ್ರತಿಯೊಬ್ಬರಿಗೂ ಕೂಡ ತಮ್ಮ ಜೀವನದಲ್ಲಿ ನಾನು ಕೂಡ ಎಲ್ಲರಂತೆ ಉತ್ತಮವಾದ ಜೀವನವನ್ನು ನಡೆಸಬೇಕು ಎಲ್ಲರಂತೆ ನಾನು ಐಷಾರಾಮಿಯಾಗಿ ಬದುಕಬೇಕು ಎಲ್ಲರೂ ನನ್ನನ್ನು ಒಂದು ದೊಡ್ಡ ಸ್ಥಾನದಲ್ಲಿ ನೋಡಬೇಕು ಎಂದು ಆಸೆ ಪಡುತ್ತಿರುತ್ತಾರೆ ಆದರೆ ಕೆಲವೊಂದಷ್ಟು ಜನ ಎಷ್ಟೇ ಪ್ರಯತ್ನ ಪಟ್ಟರು ಎಷ್ಟೇ ಶ್ರಮ ಪಟ್ಟರು ಕೂಡ ತಾವು ಮಾಡುವಂತಹ ಕೆಲಸ ಕಾರ್ಯದಲ್ಲಿ ಯಶಸ್ವಿಯನ್ನು ಪಡೆಯಲು ಸಾಧ್ಯವಾಗುವುದಿಲ್ಲ.
ಹಾಗೂ ಕೆಲವೊಂದಷ್ಟು ಜನ ಎಷ್ಟೇ ಯಶಸ್ವಿಯನ್ನು ಪಡೆದುಕೊಂಡರು ಅವರನ್ನು ಒಳ್ಳೆಯ ರೀತಿಯಲ್ಲಿ ಅವರಿಗೆ ಉತ್ತಮವಾದ ಪ್ರಶಂಸೆಯನ್ನು ಕೊಡುವುದಿಲ್ಲ. ಹಾಗಾಗಿ ಅಂಥವರು ನಾವು ಎಷ್ಟೇ ಕಷ್ಟಪಟ್ಟರು ನಮಗೆ ಉತ್ತಮವಾದ ಹೆಸರು ಸಿಗುತ್ತಿಲ್ಲ ಎಂದು ಬೇಸರಗೊಂಡಿರುತ್ತಾರೆ.
ಇದು ಕೇವಲ ನಿಮ್ಮ ಕೆಲಸ ಮಾಡುವಂತಹ ಸ್ಥಳದಲ್ಲಿ ನಡೆಯುವಂತಹ ಘಟನೆ ಆಗಿರಬಹುದು ಅಥವಾ ಮನೆಯಲ್ಲಿರುವಂತಹ ಸದಸ್ಯರು ನಿಮ್ಮ ಮೇಲೆ ಯಾವುದೇ ರೀತಿಯ ಪ್ರೀತಿ ವಿಶ್ವಾಸ ಇಟ್ಟುಕೊಳ್ಳದೆ ಇರುವುದು ಅಂದರೆ ನೀವು ಎಷ್ಟೇ ರೀತಿಯ ಅಂದರೆ ಅವರಿಗೆ ಇಷ್ಟವಾಗುವಂತಹ ಪದಾರ್ಥಗಳನ್ನು ತಂದು ಕೊಟ್ಟರು ಅವರನ್ನು ನೀವು ಎಷ್ಟೇ ಪ್ರೀತಿ ವಿಶ್ವಾಸದಿಂದ ನೋಡಿಕೊಂಡರು ಅವರು ನಿಮ್ಮ ಮೇಲೆ ಹೆಚ್ಚು ಪ್ರೀತಿ ವಿಶ್ವಾಸವನ್ನು ತೋರುತ್ತಿಲ್ಲ ಎಂದು ಕೆಲವೊಂದಷ್ಟು ಜನ ಬೇಸರಗೊಂಡಿರುತ್ತಾರೆ.
ಆದರೆ ಈ ರೀತಿಯ ಪರಿಸ್ಥಿತಿಗಳು ಎಲ್ಲರ ಮನೆಯಲ್ಲಿಯೂ ಸಹ ಇರುವುದಿಲ್ಲ ಕೆಲವೊಂದಷ್ಟು ಜನರ ಮನೆಯಲ್ಲಿ ಈ ರೀತಿಯ ಪರಿಸ್ಥಿತಿಗಳು ಇರುತ್ತದೆ. ಅಂತಹ ಸಮಯದಲ್ಲಿ ಈ ದಿನ ನಾವು ಹೇಳುವಂತಹ ಈ ಒಂದು ಪರಿಹಾರ ಮಾರ್ಗ ಅಂದರೆ ಈ ಒಂದು ತಂತ್ರವನ್ನು ಮಾಡಿಕೊಳ್ಳುವುದರ ಮೂಲಕ ಈ ರೀತಿಯ ಎಲ್ಲಾ ತೊಂದರೆಗಳನ್ನು ಸಹ ದೂರ ಮಾಡಿಕೊಳ್ಳಬಹುದು.
ಹೌದು ನಮ್ಮ ಸುತ್ತಮುತ್ತ ಇರುವಂತಹ ವಸ್ತುಗಳಿಗೆ ಹಾಗೂ ನಮ್ಮ ಮನೆಯಲ್ಲಿ ಇರುವಂತಹ ಕೆಲವೊಂದು ಪದಾರ್ಥಗಳಿಗೆ ಇಂಥಹ ಎಲ್ಲಾ ಸಮಸ್ಯೆಗಳನ್ನು ದೂರ ಮಾಡುವಂತಹ ಒಂದು ಪ್ರಭಲವಾದ ಶಕ್ತಿ ಇದೆ. ಹಾಗಾದರೆ ಈ ದಿನ ನಮ್ಮ ಜೀವನದಲ್ಲಿ ನಾವು ಎಷ್ಟೇ ರೀತಿಯ ಅಭಿವೃದ್ಧಿಯನ್ನು ಹೊಂದಿದರು ನಮ್ಮನ್ನು ಯಾರು ಗುರುತಿಸುತ್ತಿಲ್ಲ.
ಮನೆಯಲ್ಲಿ ನಮ್ಮನ್ನು ಪ್ರೀತಿ ವಿಶ್ವಾಸದಿಂದ ನೋಡಿಕೊಳ್ಳುತ್ತಿಲ್ಲ ನಾವು ಅವರನ್ನು ಇಷ್ಟಪಟ್ಟ ಹಾಗೆ ಅವರು ನಮ್ಮನ್ನು ಇಷ್ಟಪಡುತ್ತಿಲ್ಲ ಎಂದ ಸಮಯದಲ್ಲಿ ಇಂಥವರು ಯಾವ ವಿಧಾನ ಅನುಸರಿಸಬೇಕು ಎಂದು ನೋಡುವುದಾದರೆ. ನಿಮ್ಮ ಸುತ್ತಮುತ್ತ ಸಾಮಾನ್ಯವಾಗಿ ಸಿಗುವಂತಹ ಮುಟ್ಟಿದರೆ ಮುನಿ ಸೊಪ್ಪನ್ನು ತೆಗೆದುಕೊಂಡು ಬರಬೇಕು ಜೊತೆಗೆ ಕಾಡು ಬಾದಾಮಿಯ ಎಲೆಯನ್ನು ಸಹ ತರಬೇಕು ಇವೆರಡನ್ನು ಸಹ ನೀವು ಪಚ್ಚ ಕರ್ಪೂರದಿಂದ ಸಂಪೂರ್ಣವಾಗಿ ಸುಡಬೇಕು.
ಈ ರೀತಿ ಸುಟ್ಟಂತಹ ಈ ಮಿಶ್ರಣವನ್ನು ನೀವು ಒಂದು ಡಬ್ಬಿಯಲ್ಲಿ ಹಾಕಿ ಅದಕ್ಕೆ ಅರಿಶಿನ ಕುಂಕುಮ ಮತ್ತಷ್ಟು ಪಚ್ಚಕರ್ಪೂರ ಹಾಗೂ ಗ್ರಂಥಿಗೆ ಅಂಗಡಿಯಲ್ಲಿ ನಿಮಗೆ ಗೋರಂಜನ ಎನ್ನುವಂತಹ ಪದಾರ್ಥ ಸಿಗುತ್ತದೆ ಇಷ್ಟನ್ನು ಸಹ ಮಿಶ್ರಣ ಮಾಡಿ ಇದನ್ನು ನಿಮ್ಮ ಹಣೆಗೆ ಅಥವಾ ಎಡ ಹುಬ್ಬಿಗೆ ಹಚ್ಚುವುದರಿಂದ ಈ ರೀತಿಯ ಸಮಸ್ಯೆ ಇದ್ದವರು ಪರಿಹಾರ ವನ್ನು ಕಂಡುಕೊಳ್ಳಬಹುದು.
ಅಂದರೆ ನಿಮ್ಮ ಮೇಲೆ ಅವರಿಗೆ ಯಥೇಚ್ಛ ವಾದ ಪ್ರೀತಿ ಬರುತ್ತದೆ, ಹಾಗೂ ಎಲ್ಲರಿಗೂ ದೃಷ್ಟಿಯು ನಿಮ್ಮ ಮೇಲೆ ಬೀಳುತ್ತದೆ ಹಾಗೂ ನೀವು ಏನೇ ಸಾಧನೆ ಮಾಡಿದರೂ ಎಲ್ಲರೂ ನಿಮ್ಮನ್ನು ಗುರುತಿಸುವ ಹಾಗೆ ಸಮಯ ಬದಲಾಗುತ್ತದೆ ಹಾಗೂ ನೀವು ಪಟ್ಟಂತಹ ಕಷ್ಟಕ್ಕೆ ಸರಿಯಾದ ಪ್ರತಿಫಲ ಎನ್ನುವುದು ಸಿಗುತ್ತದೆ.
ಇದರಿಂದ ನಿಮಗೆ ಮತ್ತಷ್ಟು ಸಂತೋಷ ಉಂಟಾಗುತ್ತದೆ. ಹಾಗಾಗಿ ಇಂತಹ ಸಮಸ್ಯೆ ಅನುಭವಿಸುತ್ತಿರುವವರು ಈ ಒಂದು ತಂತ್ರವನ್ನು ಮಾಡಿಕೊಳ್ಳುವುದರಿಂದ ಉತ್ತಮವಾದ ಪರಿಹಾರವನ್ನು ನೀವು ಕಂಡುಕೊಳ್ಳಬಹುದಾಗಿದೆ.