ಇತ್ತೀಚಿನ ದಿನಗಳಲ್ಲಿ ವಿವಾಹಕ್ಕೂ ಮೊದಲು ಸ್ತ್ರೀ/ ಪುರುಷರು ಏನೇ ಮಾಡಿರಲಿ ಅದು ಬೇಡದ ವಿಷಯ ಕನಿಷ್ಟ ವಿವಾಹದ ನಂತರವಾದರೂ ನಮ್ಮಂತೆ ನಡೆದು ಕೊಳ್ಳಲೆಂದು ಬಯಸುತ್ತೇವೆ. ಪ್ರೇಮ ನಿಸ್ವಾರ್ಥ ಪ್ರೀತಿ ಸುವ ವ್ಯಕ್ತಿತ್ವಗಳು ಸ್ವಾರ್ಥವಾಗುತ್ತವೆ ಯಾಕೆ ಹೀಗೆ ? ಇದು ನನ್ನದು ಈಕೆ ನನ್ನವಳು ನನಗೆ ಸೇರಿದವಳು ನನಗೆ ಮಾತ್ರ ಸ್ವಂತ ಇಂತ ಭಾವನೆ ನಮ್ಮಲ್ಲಿ ಹುಟ್ಟುತ್ತದೆ.
ಅದೆ ರೀತಿ ನಮ್ಮ ಪ್ರೇಯಸಿಯ ಮನಸ್ಸಿನಲ್ಲೂ ಇದೇ ಭಾವನೆಗಳು ಹುಟ್ಟುತ್ತವೆ. ನೀವು ಪ್ರೀತಿಸಿದ ಯಾವುದೇ ವ್ಯಕ್ತಿಯಾಗಿರಲಿ ಕಾಲ ಕ್ರಮೇಣ ಅವರು ಮತ್ತೊಬ್ಬರನ್ನು ನೋಡುತ್ತಾರೆ ಇಷ್ಟ ಪಡುತ್ತಾರೆ, ಮಾತನಾಡಿಸುತ್ತಾರೆ. ಸ್ನೇಹ ಸಂಬಂಧಗಳನ್ನು ಮಾಡಿಕೊಳ್ಳುತ್ತಾರೆ. ಇದು ನಮಗೆ ಅಸೂಯೆ ಕಾಡುತ್ತದೆ ಮನಸ್ಸಿನಲ್ಲಿ ಗೊಂದಲ ಗದ್ದಲ ಗಲಾಟೆಗಳು ಅನುಮಾನಗಳು ಉದ್ಭವಿಸುತ್ತದೆ.
ಯಾಕೆ ಹೀಗೆ ? ಪ್ರೇಮದ ಆಳವನ್ನು ಅರಿಯಲು ಪ್ರಯತ್ನಿಸಿ, ಪ್ರೇಮ ಕರ್ತವ್ಯವಲ್ಲ, ಕರ್ತವ್ಯ ಒಂದು ಹೊರೆ! ಪ್ರೀತಿ ಅನ್ನೋದು ಬಹಳ ಪವಿತ್ರವಾದದ್ದು ಅದನ್ನು ತಪ್ಪು/ ಸರಿ ಅನ್ನೋ ಅಧಿಕಾರ ಯಾರಿಗೂ ಇಲ್ಲ ಹಾಗೆ ನೋಡಿದರೆ ಈ ಪ್ರಪಂಚದಲ್ಲಿ 100 % ಪರಿಪೂರ್ಣ ವ್ಯಕ್ತಿ ಯಾರೂ ಇರುವುದಿಲ್ಲ.
ಹಾಗಾಗಿ ಮದುವೆಯಾದ ನಂತರ ಒಬ್ಬರಿಗೊ ಬ್ಬರು ಹೊಂದಾಣಿಕೆ ಮಾಡಿಕೊಂಡು ಜೀವನ ಸಾಗಿಸಲು ಸಹಜವಾಗಿ ಮಾನಸಿಕವಾಗಿ ಸಿದ್ಧರಾಗಿರಬೇಕು. ಅದನ್ನು ಬಿಟ್ಟು ಹೊರಗಿನ ಸಂಬಂಧ ಗಳಿಗೆ ಕೈಚಾಚಬಾರದು ಇದು ಹೆಣ್ಣುಮಕ್ಕಳಿಗೆ ಮಾತ್ರವಲ್ಲ ಗಂಡಸ ರಿಗೂ ಕೂಡ ಅನ್ವಹಿಸುತ್ತದೆ. ದಾಂಪತ್ಯ ಅನ್ನೋ ವಾಹನಕ್ಕೆ ಎರಡು ಚಕ್ರದಂತಿರುವ ಪತಿ ಪತ್ನಿ ಎಂಬು ವವರಲ್ಲಿ ಒಬ್ಬರು ಅಲುಗಾಡಿದರೂ ಸಂಸಾರ ಅನ್ನೋ ಗಾಯನದಲ್ಲಿ ಲಯತಪ್ಪಿ ಅಪಸ್ವರ ಕಾಣಿಸಿಕೊಳ್ಳುತ್ತದೆ.
ಆದ್ದರಿಂದ ಇಬ್ಬರೂ ಕೂಡ ಎಂತದ್ದೇ ಪರಿಸ್ಥಿತಿ ಬರಲಿ ಎಷ್ಟೇ ಕಷ್ಟ ಇರಲಿ, ಅದನ್ನು ಇಬ್ಬರು ಗಮನದಲ್ಲಿಟ್ಟುಕೊಂಡು ಪರಸ್ಪರ ಪ್ರೀತಿ-ವಿಶ್ವಾಸದಿಂದ ಇರುವುದು ಬಹಳ ಮುಖ್ಯವಾಗಿರುತ್ತದೆ. ಯಾವುದೇ ವಿಚಾರವನ್ನು ಕೂಡ ಹೆಚ್ಚು ಅನುಮಾನಿಸಬಾರದು ಬದಲಿಗೆ ಯಾವುದೇ ರೀತಿಯ ಗೊಂದಲ ಇದ್ದರೂ ಕೂಡ ಅದನ್ನು ಮಾತನಾಡುವುದರ ಮೂಲಕ ನಿಮ್ಮ ಗೊಂದಲಗಳಿಗೆ ಉತ್ತರವನ್ನು ಕಂಡುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.
ಬದಲಿಗೆ ಅದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಇಬ್ಬರ ನಡುವೆ ಮನಸ್ತಾಪ ತಂದುಕೊಳ್ಳುವುದು ತಪ್ಪು. ಇದರಿಂದ ನಿಮ್ಮ ಪ್ರೀತಿ ವಿಶ್ವಾಸ ದೂರವಾಗುವುದಷ್ಟೇ ಅಲ್ಲದೆ ನಿಮ್ಮ ಮನಸ್ಸಿನ ನೆಮ್ಮದಿಯು ಕೂಡ ಹಾಳಾಗುತ್ತದೆ. ಆದ್ದರಿಂದ ಇಂತಹ ಯಾವುದೇ ಕೆಟ್ಟ ಆಲೋಚನೆಗಳನ್ನು ನೀವು ನಿಮ್ಮ ಮನಸ್ಸಿನಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದಲ್ಲ.
ಅದೇ ರೀತಿಯಾಗಿ ಇಬ್ಬರ ನಡುವೆ ಒಂದು ಒಳ್ಳೆಯ ಸಂಬಂಧ ಇರಬೇಕು ಹಾಗೂ ಇಬ್ಬರ ನಡುವೆ ಯಾವುದೇ ರೀತಿಯ ಅನುಮಾನ ಎನ್ನುವ ವಿಷಯ ಬರಬಾರದು. ಆಗ ಆ ಮನೆಯಲ್ಲಿ ಸಮಸ್ಯೆ ಉಂಟಾಗುವುದಕ್ಕೆ ಮೂಲ ಕಾರಣವಾಗುತ್ತದೆ. ಆದ್ದರಿಂದ ಯಾವುದೇ ವಿಚಾರಗಳ ಬಗ್ಗೆಯೂ ಕೂಡ ಗಂಡ ಆಗಲಿ ಹೆಂಡತಿಯಾಗಲಿ ಅನುಮಾನ ಪಡದೆ ಪ್ರತಿಯೊಂದು ವಿಚಾರಗಳನ್ನು ಕೂಡ ಕೂಲಂಕುಶವಾಗಿ ವಿಚಾರಣೆ ಮಾಡುತ್ತಾ ಇಬ್ಬರಲ್ಲಿಯೂ ಪರಸ್ಪರ ಪ್ರೀತಿ ವಿಶ್ವಾಸ ಬಾಂಧವ್ಯ ಇರು ವುದು ಬಹಳ ಮುಖ್ಯವಾಗಿರುತ್ತದೆ.
ಹಾಗೇನಾದರೂ ಇಬ್ಬರಲ್ಲಿಯೂ ಕೂಡ ಭಿನ್ನಾಭಿಪ್ರಾಯ ಇದ್ದರೆ ಸಂಸಾರ ಎನ್ನುವ ನೌಕೆ ಬೀಳುತ್ತದೆ. ಬಹಳ ಹಿಂದಿನ ದಿನಗಳಲ್ಲಿ ಗಂಡ ಹೆಂಡತಿ ಇಬ್ಬರೂ ಕೂಡ ಒಂದೇ ಸಮನೆ ಒಂದೇ ರೀತಿಯ ಮನೋಭಾವನೆಯನ್ನು ಹೊಂದಿರುತ್ತಿದ್ದರು. ಅವರಿಬ್ಬರ ನಡುವೆ ಯಾವುದೇ ರೀತಿಯ ಕಷ್ಟ ಸುಖ ಖುಷಿ ಬಂದರು ಕೂಡ ಎಲ್ಲವನ್ನು ಎಲ್ಲರೂ ಸಮನಾಗಿ ಹಂಚಿಕೊಳ್ಳುತ್ತಿದ್ದರು. ಆದ್ದರಿಂದ ಅಂದು ಯಾರಲ್ಲಿಯೂ ಕೂಡ ಇಂತಹ ಮನೋಭಾವನೆ ಇರಲಿಲ್ಲ. ಆದರೆ ಇತ್ತೀಚಿನ ದಿನದಲ್ಲಿ ಹಲವಾರು ರೀತಿಯ ವಿಚಾರದ ಬಗ್ಗೆ ಮಾತುಕತೆ ಬರುತ್ತಿದ್ದು ಇದರಿಂದ ಈ ರೀತಿಯ ಪರಿಸ್ಥಿತಿಗಳು ಉಂಟಾಗುತ್ತಿದೆ ಎಂದೇ ಹೇಳಬಹುದು.