Home Entertainment Jaggesh: ನನ್ನ ಮಗನ ಕಾರು ಅ.ಪ.ಘಾ.ತ.ಕ್ಕೆ “ಬುಧಭಕ್ತಿ” ಕಾರಣ, ನನ್ನ ತಮ್ಮ ಕೋಮಲ್ ಸಿನಿಮಾಗಳು ಸೋಲುವುದಕ್ಕೆ “ಕೇತುದಸೆ” ಕಾರಣ ಎಂದ ಜಗ್ಗೇಶ್

Jaggesh: ನನ್ನ ಮಗನ ಕಾರು ಅ.ಪ.ಘಾ.ತ.ಕ್ಕೆ “ಬುಧಭಕ್ತಿ” ಕಾರಣ, ನನ್ನ ತಮ್ಮ ಕೋಮಲ್ ಸಿನಿಮಾಗಳು ಸೋಲುವುದಕ್ಕೆ “ಕೇತುದಸೆ” ಕಾರಣ ಎಂದ ಜಗ್ಗೇಶ್

0
Jaggesh: ನನ್ನ ಮಗನ ಕಾರು ಅ.ಪ.ಘಾ.ತ.ಕ್ಕೆ “ಬುಧಭಕ್ತಿ” ಕಾರಣ, ನನ್ನ ತಮ್ಮ ಕೋಮಲ್ ಸಿನಿಮಾಗಳು ಸೋಲುವುದಕ್ಕೆ “ಕೇತುದಸೆ” ಕಾರಣ ಎಂದ ಜಗ್ಗೇಶ್

ನವರಸ ನಾಯಕ ಜಗ್ಗೇಶ್ ಅವರು ದೈವ ಭಕ್ತರು ಎಂಬ ವಿಚಾರ ತಿಳಿದೇ ಇದೆ ಇದರ ಜೊತೆಗೆ ಇವರು ಭವಿಷ್ಯ ರಾಶಿ ಹಾಗೂ ಜಾತಕವನ್ನು ಅಪಾರವಾಗಿ ನಂಬುತ್ತಾರೆ ಎಂಬುದಕ್ಕೆ ಇದೀಗ ಮತ್ತೊಂದು ಸಾಕ್ಷಿ ದೊರಕಿದೆ. ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ ಕಳೆದ ವರ್ಷ ನಟ ಜಗ್ಗೇಶ್ ಅವರ ದ್ವಿತೀಯ ಪುತ್ರ ಯತಿರಾಜ್ ಅವರ ಕಾರು ಅ.ಪ.ಘಾ.ತ.ವಾ.ದ ವಿಚಾರ ತಿಳಿದೇ ಇದೆ. ಈ ಕಾರು ಎಷ್ಟರ ಮಟ್ಟಿಗೆ ಅ.ಪ.ಘಾ.ತ.ವಾ.ಗಿ.ತ್ತು ಅಂದರೆ ಈ ಕಾರನ್ನು ಮತ್ತೆ ರೆಡಿ ಮಾಡಲು ಕೂಡ ಸಾಧ್ಯವಾಗುವುದಿಲ್ಲ ಅಷ್ಟೊಂದು ಡ್ಯಾಮೇಜ್ ಆಗಿತ್ತು.

ವಿಚಿತ್ರ ಏನೆಂದರೆ ಇವರ ಪುತ್ರನಿಗೆ ಕಿಂಚಿತ್ತು ಕೂಡ ಗಾಯ ಆಗಿರಲಿಲ್ಲ ಮತ್ತು ಜಗ್ಗೇಶ್ ಪುತ್ರ ಈ ಸಮಯದಲ್ಲಿ ನಡೆದುಕೊಂಡಂತಹ ರೀತಿ ಬಹಳನೆ ವಿಚಿತ್ರವಾಗಿತ್ತು ಇವರು ನಡೆದುಕೊಂಡ ರೀತಿ ಸಿಕ್ಕಾಪಟ್ಟೆ ಟ್ರೋಲ್ ಕೂಡ ಆಗಿದ್ದರು. ಈ ಸಮಯದಲ್ಲಿ ನಟ ಜಗ್ಗೇಶ್ ಅವರು ಯಾವುದೇ ರೀತಿಯಾದಂತಹ ಪ್ರತಿಕ್ರಿಯೆಯನ್ನು ನೀಡಿರಲಿಲ್ಲ ಆದರೆ ಯತಿರಾಜ ಅವರಿಗೆ ನಿನಗೆ ಸಮಯ ಸರಿಯಾಗಿಲ್ಲ ಬುಧ ಭಕ್ತಿ ಇದೆ ಹಾಗಾಗಿ ನೀನು ತುಂಬಾ ಹುಷಾರಾಗಿ ಇರಬೇಕು ಎಂದು ಮುಂಚೆಯೇ ಎಚ್ಚರಿಕೆ ನೀಡಿದರಂತೆ.

ಈ ಕಾರಣಕ್ಕಾಗಿಯೇ ಕೊರೋನಾ ಟೈಮ್ ನಲ್ಲಿ ಲಾಕ್ ಡೌನ್ ಇದ್ದಾಗ ಕಾರಣ ಯತಿರಾಜ್ ಅವರು ಮನೆಯಿಂದ ಹೊರ ಹೋಗುವುದಕ್ಕೆ ಬಹಳ ಭಯ ಪಡುತ್ತಿದ್ದರಂತೆ. ಅನವಶ್ಯಕವಾಗಿ ಎಲ್ಲಿಗೂ ಕೂಡ ಹೋಗುತ್ತಿರಲಿಲ್ಲವಂತೆ ಆದರೆ ಅದೊಂದು ದಿನ ಮಾತ್ರ ತನ್ನ ಸ್ನೇಹಿತನಿಗೆ ಕರೆ ಮಾಡಿ ಬಿರಿಯಾನಿ ಮಾಡು ತಿನ್ನಬೇಕು ಅಂತ ಅನಿಸುತ್ತಿದೆ ಎಂದು ಹೇಳಿ ಕಾರ್ ನಿಂದ ಹೊರಟು ಫಾರ್ಮರ್ಸ್ ಕಡೆಗೆ ಹೋದರಂತೆ. ಬುಧ ಭಕ್ತಿ ಇರುವ ಕಾರಣ ಆತನ ಗ್ರಹ ಗತಿಗಳು ಸರಿಯಾಗಿ ಇಲ್ಲದೆ ಇರುವುದರಿಂದ ಕಾರು ಅ.ಪ.ಘಾ.ತ.ವಾ.ಗಿ.ದೆ ಎಂದು ಹೇಳಿದ್ದಾರೆ.

ನಿಜಕ್ಕೂ ಅವರು ಹೇಳಿದಂತಹ ಈ ಮಾತು ಇದೀಗ ಸಂಚಲನವನ್ನು ಮೂಡಿಸುತ್ತಿದೆ ಇದು ಒಂದು ಕಡೆಯಾದರೆ ಮತ್ತೊಂದು ಕಡೆ ನಟ ಜಗ್ಗೇಶ್ ಅವರ ತಮ್ಮ ಕೋಮಲ್ ಅವರ ಬಗ್ಗೆಯೂ ಕೂಡ ಭವಿಷ್ಯ ನುಡಿದಿದ್ದರಂತೆ. ಹೌದು ಕೋಮಲ್ ಅವರಿಗೆ ಕೇತು ಗ್ರಸ್ತ ಇರುವುದರಿಂದ ಆದ ಯಾವುದೇ ಸಿನಿಮಾ ಮಾಡಿದರು ಕೂಡ ಹಿಟ್ ಆಗುವುದಿಲ್ಲ ಇದರಿಂದ ಸಾಕಷ್ಟು ನಷ್ಟ ಅನುಭವಿಸಬೇಕಾಗುತ್ತದೆ ಎಂಬ ವಿಚಾರ ಜಗ್ಗೇಶ್ ಅವರಿಗೆ ಮೊದಲೇ ತಿಳಿದಿತ್ತಂತೆ.

ಈ ಕಾರಣಕ್ಕಾಗಿಯೇ ನಟ ಕೋಮಲ್ ಅವರಿಗೆ ನೀನು ಏಳು ವರ್ಷಗಳ ಕಾಲ ಸಿನಿಮಾದಲ್ಲಿ ನಟನೆ ಮಾಡಬೇಡ ಎಂದು ಬುದ್ಧಿವಾದ ಹೇಳಿದರಂತೆ. ಅಣ್ಣನ ಮಾತಿಗೆ ಕಟ್ಟು ಬಿದ್ದಂತಹ ಕೋಮಲ್ ಅವರು ಅವರ ಆಜ್ಞೆಯಂತೆ ಸಿನಿಮಾ ರಂಗದಿಂದ ಬರೋಬ್ಬರಿ ಏಳು ವರ್ಷಗಳ ಕಾಲ ದೂರ ಉಳಿದಿದ್ದರೂ. ಇದೀಗ ಕೋಮಲ್ ಅವರ ಕೇತು ಗ್ರಸ್ತ ಸಮಯ ಮುಗಿದಿದೆ ಹಾಗಾಗಿ ಇನ್ನು ಮುಂದೆ ಕೋಮಲ್ ಯಾವುದೇ ಸಿನಿಮಾ ಮಾಡಿದರು ಕೂಡ ಸೂಪರ್ ಹಿಟ್ ಆಗುತ್ತದೆ ಕೋಮಲನ್ನು ಯಾರಿಂದಲೂ ಕೂಡ ತಡೆದು ನಿಲ್ಲಿಸಲು ಸಾಧ್ಯವಿಲ್ಲ ಎಂದು ಜಗ್ಗೇಶ್ ಹೇಳಿದ್ದಾರೆ‌.

ಇದಕ್ಕೆ ಪುಷ್ಟಿ ನೀಡಲು ಇದೀಗ ನಮೋ ಭೂತಾತ್ಮ ಭಾಗ 2 ಎಂಬ ಸಿನಿಮಾದ ಚಿತ್ರೀಕರಣದಲ್ಲಿ ಕೋಮಲ್ ಅವರು ಪಾಲ್ಗೊಂಡಿದ್ದಾರೆ ಒಟ್ಟಾರೆಯಾಗಿ ಹೇಳುವುದಾದರೆ ನಟ ನಟಿಯರು ಕೂಡ ಹೇಗೆ ದೇವರನ್ನು ನಂಬುತ್ತಾರೋ ಅದೇ ರೀತಿ ಭವಿಷ್ಯ ಜಾತಕ ಹಾಗೂ ರಾಶಿ ಫಲಗಳನ್ನು ನಂಬುತ್ತಾರೆ ಎಂಬುದಕ್ಕೆ ಜಗ್ಗೇಶ್ ಅವರೇ ಇದೀಗ ನೈಜ ಉದಾರಣೆ ಅಂತ ಹೇಳಬಹುದು ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ.

LEAVE A REPLY

Please enter your comment!
Please enter your name here