Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಎರಡನೇ ಮದುವೆಯ ಬಗ್ಗೆ ಪ್ರಸ್ತಾವನೆ ಮಾಡಿದ ನಟಿ ಮೇಘನಾ ರಾಜ್.

Posted on August 19, 2022 By Kannada Trend News No Comments on ಎರಡನೇ ಮದುವೆಯ ಬಗ್ಗೆ ಪ್ರಸ್ತಾವನೆ ಮಾಡಿದ ನಟಿ ಮೇಘನಾ ರಾಜ್.

ನಿಮ್ಮೆಲ್ಲರಿಗೂ ತಿಳಿದಿರುವಂತೆ ಮೇಘನಾ ರಾಜ್ ಮತ್ತು ಚಿರಂಜೀವಿ ಸರ್ಜಾ ಅವರು ಪರಸ್ಪರ ಒಬ್ಬರನ್ನೊಬ್ಬರು 10 ವರ್ಷಗಳ ಕಾಲ ಪ್ರೀತಿಸಿ ಮೂರು ವರ್ಷಗಳ ಕಾಲ ದಾಂಪತ್ಯ ಜೀವನವನ್ನು ನಡೆಸಿದರು. ಇನ್ನು ಮೇಘನಾ ರಾಜ್ ಅವರು ಮೂಲತಃ ಕ್ರಿಶ್ಚಿಯನ್ ಕುಟುಂಬಕ್ಕೆ ಸೇರಿದವರು ಚಿರಂಜೀವಿ ಸರ್ಜಾ ಅವರು ಹಿಂದೂ ಕುಟುಂಬಕ್ಕೆ ಸೇರಿದವರು. ಆದರೂ ಕೂಡ ಪ್ರೀತಿ ಎಂಬುದಕ್ಕೆ ಯಾವುದೇ ಜಾತಿ ಭೇದ ಮತವಿಲ್ಲ ಎಂಬ ಕಾರಣದಿಂದಾಗಿ ಇಬ್ಬರೂ ಕೂಡ ಪರಸ್ಪರ ಕುಳಿತುಕೊಂಡು ಮಾತನಾಡಿ ಮನೆವರ ಒಪ್ಪಿಗೆಯನ್ನು ಪಡೆದು ಅದ್ದೂರಿಯಾಗಿ ಮದುವೆಯಾದರೂ. ಹೌದು ಎರಡು ಧರ್ಮದವರಿಗೂ ಕೂಡ ಯಾವುದೇ ರೀತಿಯಾದಂತಹ ಧರ್ಮ ಸಂಕಟ ಉಂಟಾಗುವುದು ಬೇಡ ಅಂತ ಮೊದಲು ಕ್ರಿಶ್ಚಿಯನ್ ಪದ್ದತಿಯಲ್ಲಿ ಚರ್ಚ್ ನಲ್ಲಿ ಉಂಗುರವನ್ನು ಬದಲಾಯಿಸಿಕೊಳ್ಳುವುದರ ಮೂಲಕ ಮದುವೆಯಾದರು ತದನಂತರ ಹಿಂದೂ ಸಂಪ್ರದಾಯದಂತೆ ಮಾಂಗಲ್ಯ ಧಾರಣೆಯನ್ನು ಕೂಡ ಮಾಡಿಸಿಕೊಂಡರು.

ಮದುವೆಯಾದ ನಂತರ ಮೂರು ವರ್ಷಗಳ ಕಾಲ ಸುಖ ಜೀವನವನ್ನು ನಡೆಸಿದರು ಆದರೆ ಜೂನ್ 7ನೇ ತಾರೀಕು 2020ನೇ ಇಸ್ವಿಯಲ್ಲಿ ಮೇಘನಾ ರಾಜ್ ಅವರ ಬದುಕಿನಲ್ಲಿ ಎಂದು ಕಂಡು ಕೇಳರಿಯದ ಕಾರಣ ದಿನ ಬಂತು ಅಂತಾನೆ ಹೇಳಬಹುದು. ಏಕೆಂದರೆ ಇದೇ ದಿನ ಚಿರಂಜೀವಿ ಸರ್ಜಾ ಅವರು ಮಧ್ಯಾಹ್ನ 1:45 ನಿಮಿಷದ ಹೊತ್ತಿಗೆ ಹೃದಯ.ಘಾ‌.ತ.ದಿಂದ ವಿ.ಧಿ.ವ.ಶ.ರಾಗುತ್ತಾರೆ. ಈ ಸಂದರ್ಭದಲ್ಲಿ ಮೇಘನಾ ರಾಜ್ ಅವರು ನಾಲ್ಕು ತಿಂಗಳ ಗರ್ಭಿಣಿಯಾಗಿರುತ್ತಾರೆ ಇಂತಹ ಸಂ.ಕ.ಷ್ಟ.ದ ಪರಿಸ್ಥಿತಿ ಯಾವ ಹೆಣ್ಣು ಮಕ್ಕಳಿಗೂ ಕೂಡ ಬರಬಾರದು. ಏಕೆಂದರೆ ಒಂದು ಕಡೆ ಪತಿ ಅ.ಗ.ಲಿ.ಕೆ ಮತ್ತೊಂದು ಕಡೆ ತಾಯಿಯಾಗುತ್ತಿರುವಂತಹ ಸಂಭ್ರಮ ಇವೆರಡನ್ನು ಕೂಡ ನಿಭಾಯಿಸುವುದಕ್ಕೆ ಮೇಘನಾ ರಾಜ್ ಅವರಿಗೆ ಬಹಳಾನೇ ಕ.ಷ್ಟವಾಯಿತು.

ಹೇಗೋ ತಮ್ಮ ಮಗುವಿನ ಮುಖವನ್ನು ನೋಡಿಕೊಂಡು ಮೇಘನಾ ರಾಜ್ ಅವರು ಜೀವನ ಸಾಗಿಸುವುದಕ್ಕೆ ಪ್ರಾರಂಭಿಸುತ್ತಾರೆ ಚಿರು ಅವರು ಅಗಲಿದ ಐದು ತಿಂಗಳ ಬಳಿಕ ಮೇಘನಾ ರಾಜ್ ಅವರು ಗಂಡು ಮಗು ಒಂದಕ್ಕೆ ಜನ್ಮ ನೀಡುತ್ತಾರೆ. ಸದ್ಯಕ್ಕೆ ಮೇಘನಾ ರಾಜ್ ಅವರು ಮಗುವಿನ ಲಾಲನೇ ಪಾಲನೆ ಪೋಷಣೆಯಲ್ಲಿ ತೊಡಗಿಕೊಂಡಿದ್ದಾರೆ. ಒಂದೆರಡು ವರ್ಷ ಚಿತ್ರರಂಗದಿಂದ ದೂರ ಉಳಿದಂತಹ ಮೇಘನಾ ರಾಜ್ ಅವರು ಇದೀಗ ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಕೆಲವು ಜಾಹೀರಾತಿನಲ್ಲಿಯೂ ಕೂಡ ನಟನೆ ಮಾಡುತ್ತಿದ್ದಾರೆ ಸಿನಿಮ ರಂಗಕ್ಕೂ ಕೂಡ ಕಂಬ್ಯಾಕ್ ನೀಡಿದ್ದಾರೆ. ಹೌದು ಪನ್ನಗ ಭರಣ ಅವರ ನಿರ್ದೇಶನದ ಸಿನಿಮಾ ಒಂದರಲ್ಲಿ ಮೇಘನಾ ರಾಜ್ ಅವರು ನಾಯಕ ನಟಿಯಾಗಿ ಅಭಿನಯಿಸುತ್ತಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ಹಳೆಯ ನೋವನ್ನು ಅಲ್ಲ ಮರೆತು ಇದೀಗ ತಮ್ಮ ವೃತ್ತಿ ಜೀವನಕ್ಕೆ ಮರಳಿ ಬಂದಿದ್ದಾರೆ. ಈ ಸಮಯದಲ್ಲಿ ಮೇಘನಾ ರಾಜ್ ಅವರು ಹಿಂದಿ ಕಾರ್ಯಕ್ರಮ ಒಂದಕ್ಕೆ ಭಾಗವಹಿಸುತ್ತಾರೆ ಅಲ್ಲಿ ಮೇಘನಾ ರಾಜ್ ಅವರ ಮದುವೆಯ ವಿಚಾರದ ಬಗ್ಗೆ ಕೆಲವೊಂದಿಷ್ಟು ಪ್ರಶ್ನೆಗಳನ್ನು ಕೇಳುತ್ತಾರೆ.

ಹೌದು ಮೇಘನಾ ರಾಜ್ ಅವರನ್ನು ನೀವು ಎರಡನೇ ಮದುವೆಯಾಗುತ್ತೀರಾ ಈ ಒಂದು ಮದುವೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂಬ ಪ್ರಶ್ನೆಯನ್ನು ಕೇಳುತ್ತಾರೆ. ಈ ವಿಚಾರಕ್ಕೆ ಮೇಘನಾ ರಾಜ್ ಅವರು ಎರಡು ರೀತಿಯಾದಂತಹ ಉತ್ತರವನ್ನು ನೀಡುತ್ತಾರೆ. ನನ್ನ ಸುತ್ತಲೂ ಇರುವಂತಹ ಜನರಲ್ಲಿ ಎರಡು ಗುಂಪುಗಳು ಇವೆ ಒಂದು ಗುಂಪುಗಳು ಮದುವೆಯಾಗು ಜೀವನ ಇನ್ನು ಮುಂದೆ ಬಹಳ ಇದೆ, ಇಷ್ಟು ಚಿಕ್ಕವಯಸ್ಸಿಗೆ ಒಂಟಿ ಜೀವನ ಸಾಗಿಸುವುದು ತುಂಬಾನೇ ಕಷ್ಟ ನಿನ್ನನ್ನು ಅರ್ಥ ಮಾಡಿಕೊಳ್ಳುವಂತಹ ವ್ಯಕ್ತಿ ಸಿಕ್ಕರೆ ನೀನು ಮದುವೆಯಾಗುವುದರಲ್ಲಿ ತಪ್ಪೇನಿಲ್ಲ ಎಂದು ಹೇಳುವಂತಹ ಒಂದು ಸಮೂಹವಿದೆ. ಅದೇ ರೀತಿ ಬೇರೊಂದು ಮದುವೆ ಬೇಡ ನಿನ್ನ ಮಗನ ಸಂತೋಷದಲ್ಲಿ ಜೀವನವನ್ನು ನೆಡೆಸು ಎಂದು ಹೇಳುವ ಗುಂಪು ಇದೆ. ಈ ಎರಡು ಗುಂಪಿನವರ ಮಾತಿನಲ್ಲಿ ನಾನು ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದೇ ನನಗೆ ತಿಳಿಯುತ್ತಿಲ್ಲ ಗೊಂದಲಮಯವಾದ ಜೀವನವನ್ನು ಸಾಗಿಸುತ್ತಿದ್ದೇನೆ.

ಆದರೆ ಚಿರಂಜೀವಿ ಸರ್ಜಾ ಯಾವಾಗಲೂ ಒಂದು ಮಾತು ಹೇಳುತ್ತಿದ್ದರು ನೀನು ಯಾರ ಮಾತನ್ನು ಕೇಳಬೇಡ ನಿನ್ನ ಮನಸ್ಸಿನ ಮಾತನ್ನು ಮಾತ್ರ ಕೇಳು. ನಿನ್ನ ಮನಸ್ಸು ಯಾವುದನ್ನು ಬಯಸುತ್ತದೆಯೋ ಅದನ್ನು ಮಾತ್ರ ಮಾಡು ಬೇರೆಯವರ ಮಾತಿಗೆ ತಲೆ ತೂಗಬೇಡ ಅಂತ ಹೇಳುತ್ತಿದ್ದರು. ಹಾಗಾಗಿ ನಾನು ಚಿರು ಅವರನ್ನು ನೆನಪಿಸಿಕೊಳ್ಳುತ್ತೇನೆ ಅವರು ಹೇಳಿದಂತಹ ಮಾತನ್ನು ಯಾವಾಗಲೂ ಕೂಡ ಸ್ಮರಿಸಿಕೊಳ್ಳುತ್ತೇನೆ. ನನ್ನ ಮನಸ್ಸು ಇನ್ನೂ ಕೂಡ ಎರಡನೇ ಮದುವೆಯತ್ತ ವಾಲಿಲ್ಲ ಹಾಗಾಗಿ ನಾನು ಆ ವಿಚಾರದ ಬಗ್ಗೆ ಗಮನ ಹರಿಸುವುದಿಲ್ಲ. ಒಂದು ವೇಳೆ ನನ್ನ ಮನಸ್ಸಿನಲ್ಲಿ ಎರಡನೇ ಮದುವೆ ಯೋಚನೆ ಬಂದರೆ ಖಂಡಿತವಾಗಿಯೂ ಕೂಡ ಅದರ ಬಗ್ಗೆ ಯೋಚಿಸಿ ಒಳ್ಳೆಯ ನಿರ್ಧಾರವನ್ನೇ ತೆಗೆದುಕೊಳ್ಳುತ್ತೇನೆ. ಸದ್ಯಕ್ಕೆ ಆ ವಿಚಾರದಿಂದ ದೂರ ಉಳಿಯುವುದಕ್ಕೆ ಇಷ್ಟಪಡುತ್ತೇನೆ ನಾನು ನನ್ನ ಮಗನ ಭವಿಷ್ಯದ ಬಗ್ಗೆ ಯೋಚನೆ ಮಾಡಬೇಕಿದೆ. ಆತನಿಗೆ ಒಂದು ಉತ್ತಮ ಭವಿಷ್ಯವನ್ನು ಕಲ್ಪಿಸಿ ಕೊಡಬೇಕಾಗಿದೆ ಹಾಗಾಗಿ ಚಿತ್ರರಂಗಕ್ಕೆ ಮರಳಿ ಬಂದಿದ್ದೇನೆ ಒಳ್ಳೆಯ ಸಿನಿಮಾವನ್ನು ನೀಡಬೇಕು ಒಳ್ಳೆಯ ಬದುಕನ್ನು ನನ್ನ ಮಗನಿಗೆ ಕಟ್ಟಿಕೊಡಬೇಕು ಎಂಬುದಷ್ಟೇ ನನ್ನ ಆಶಯ ಎಂದು ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ.

ನಿಜಕ್ಕೂ ಮೇಘನಾ ರಾಜ್ ಅವರು ಹೇಳಿದಂತಹ ಈ ಮಾತನ್ನು ಕೇಳಿದರೆ ಕಣ್ಣಂಚಲ್ಲಿ ನೀರು ಬರುವುದು ಸಹಜ ಏಕೆಂದರೆ ಸಾಮಾನ್ಯವಾಗಿ ಸೆಲೆಬ್ರಿಟಿಗಳು ಮದುವೆಯಾದ ಮೂರು ತಿಂಗಳಿಗೆ ಆರು ತಿಂಗಳಿಗೆ ವಿ.ಚ್ಛೇ.ದ.ನ ಕೊಡುತ್ತಿರುವುದನ್ನು ನೀವು ನೋಡಿರಬಹುದು. ಅಷ್ಟೇ ಅಲ್ಲದೆ ವಿ.ಚ್ಛೇ.ದ.ನ ಕೊಟ್ಟ ಎರಡೇ ತಿಂಗಳಿಗೆ ಬೇರೆ ಮದುವೆಯಾಗುವುದನ್ನು ನೀವು ನೋಡಿರಬಹುದು ಆದರೆ ಚಿರು ಅವರು ಆದರೆ ಎರಡು ವರ್ಷದ ಮೇಲಾಗಿದೆ ಆದರೂ ಕೂಡ ಮೇಘನಾ ರಾಜ್ ಇನ್ನು ಕೂಡ ಒಂಟಿ ಜೀವನವನ್ನು ಸಾಗಿಸುತ್ತಿದ್ದಾರೆ. ಎರಡನೇ ಮದುವೆಯ ಬಗ್ಗೆ ಯೋಚನೆ ಮಾಡಿಲ್ಲ ಇದೆಲ್ಲವನ್ನು ನೋಡುತ್ತಿದ್ದರೆ ನಿಜಕ್ಕೂ ಇವರಿಬ್ಬರ ಪ್ರೀತಿ ಎಂತಹದು ಎಂಬುದು ಅರ್ಥವಾಗುತ್ತದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ಮೇಘನಾ ರಾಜ್ ಅವರು ಮತ್ತೊಂದು ಮದುವೆಯಾಗುವುದು ಸೂಕ್ತನಾ ಅಥವಾ ಇಲ್ಲವೇ ಎಂಬುದನ್ನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

Entertainment Tags:Meghana chiru, Meghana raj, Raayan
WhatsApp Group Join Now
Telegram Group Join Now

Post navigation

Previous Post: ಜೊತೆ ಜೊತೆಯಲಿ ಧಾರವಾಹಿ ತಂಡದ ಜೊತೆ ಕಿರಿಕ್ ಮಾಡಿಕೊಂಡು ಧಾರವಾಹಿಯಿಂದ ಹೋರ ನಡೆದ ಅನಿರುದ್ಧ್ ಕಿರುತೆರೆಯಿಂದ ಬ್ಯಾನ್
Next Post: ಕೊನೆಗೂ ಶಿವಣ್ಣನನ್ನು ಭೇಟಿ ಮಾಡಿದ ಕಾಫಿ ನಾಡು ಚಂದು.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore