Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಎಲ್ರೂ ಶೂಟಿಂಗ್ ಗಿಂತ ಮೊದಲು ರಿಹರ್ಸಲ್ ಮಾಡಿ ಡ್ಯಾನ್ಸ್ ಮಾಡ್ತಾರೆ. ಆದ್ರೆ ದರ್ಶನ್ ಮಾತ್ರ ಯಾವುದೇ ರಿಹರ್ಸಲ್ ಇಲ್ಲದೆ ಪರ್ಫೆಕ್ಟ್ ಆಗಿ ಡ್ಯಾನ್ಸ್ ಮಾಡ್ತಾರೆ ಎಂದ ನಟಿ ನಿಮಿಕಾ ರತ್ನಾಕರ್.

Posted on January 3, 2023 By Kannada Trend News No Comments on ಎಲ್ರೂ ಶೂಟಿಂಗ್ ಗಿಂತ ಮೊದಲು ರಿಹರ್ಸಲ್ ಮಾಡಿ ಡ್ಯಾನ್ಸ್ ಮಾಡ್ತಾರೆ. ಆದ್ರೆ ದರ್ಶನ್ ಮಾತ್ರ ಯಾವುದೇ ರಿಹರ್ಸಲ್ ಇಲ್ಲದೆ ಪರ್ಫೆಕ್ಟ್ ಆಗಿ ಡ್ಯಾನ್ಸ್ ಮಾಡ್ತಾರೆ ಎಂದ ನಟಿ ನಿಮಿಕಾ ರತ್ನಾಕರ್.

 

ಸದ್ಯಕ್ಕೆ ಕರ್ನಾಟಕದ ಪುಷ್ಪವತಿ ಎಂದು ಕರೆಸಿಕೊಡುತ್ತಿರುವ ನಟಿ ನಿಮಿಕಾ ರತ್ನಾಕರ್ ಅವರು ಕ್ರಾಂತಿ ಸಿನಿಮಾದ ಹಾಡೊಂದರ ಕುರಿತು ಮಾತನಾಡಿದ್ದಾರೆ. ದರ್ಶನ್ ಅವರ ಬಹು ನಿರೀಕ್ಷಿತ ಚಿತ್ರವಾದ ಕ್ರಾಂತಿ ಸಿನಿಮಾವು ಈ ವರ್ಷದ ಮೊದಲ ಸ್ಟಾರ್ ಸಿನಿಮಾ ವಾಗಿ ಜನವರಿ 26ರಂದು ರಾಜ್ಯದಾದ್ಯಂತ ಬಿಡುಗಡೆ ಆಗುತ್ತಿದೆ. ಈ ಸಿನಿಮಾದ ಪ್ರಚಾರ ಕಾರ್ಯದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಚಿತ್ರತಂಡವು ಹಮ್ಮಿಕೊಂಡಿದ್ದು ಆಡಿಯೋ ರಿಲೀಸ್ ಅನ್ನು ವಿಶೇಷವಾಗಿ ಮಾಡುತ್ತಿದೆ.

ಕರ್ನಾಟಕದ ಪ್ರಮುಖ ಸಿಟಿಗಳಲ್ಲಿ ಒಂದೊಂದು ಹಾಡನ್ನು ರಿಲೀಸ್ ಮಾಡುವ ಮೂಲಕ ವಿಶೇಷತೆಯನ್ನು ತೋರುತ್ತಿದೆ. ಈ ಸಿನಿಮಾದ ಎರಡನೇ ಹಾಡು ಬೊಂಬೆ ಬೊಂಬೆ ಎನ್ನುವ ಹಾಡನ್ನು ಹೊಸಪೇಟೆಯಲ್ಲಿ ರಿಲೀಸ್ ಮಾಡಿದ್ದರು. ಅದಾದ ಬಳಿಕ ಹುಬ್ಬಳ್ಳಿಯಲ್ಲಿ ಮೂರನೇ ಹಾಡು ಪುಷ್ಪವತಿ ರಿಲೀಸ್ ಆಗಿದೆ.

ಈ ಹಾಡು ರಿಲೀಸ್ ಆದ ದಿನದಿಂದ ನಿಮಿಕಾ ರತ್ನಾಕರ್ ಅವರು ಕರ್ನಾಟಕದಲ್ಲಿ ಬಹಳ ಫೇಮಸ್ ಆಗುತ್ತಿದ್ದಾರೆ. ಇವರನ್ನು ಎಲ್ಲರೂ ತಮ್ಮ ಕ್ರಷ್ ಎಂದು ಮೀಮ್ಸ್ ಕೂಡ ಮಾಡುತ್ತಿದ್ದಾರೆ. ನಿಮಿಕಾ ರತ್ನಾಕರ್ ಅವರು ಈ ಹಿಂದೆ ರಾಮಧ್ಯಾನ ಮತ್ತು ಅಬ್ಬರ ಎನ್ನುವ ಸಿನಿಮಾಗಳಲ್ಲಿ ಅಭಿನಯಿಸಿದ್ದರೂ ಸಹ ಪುಷ್ಪವತಿ ಹಾಡು ಇವರಿಗೆ ಹೆಚ್ಚಿನ ಹೆಸರು ತಂದು ಕೊಟ್ಟಿದೆ. ಈ ಹಾಡು ರಿಲೀಸ್ ಆದ ಮೇಲೆ ಇವರನ್ನು ಜನ ಪುಷ್ಪವತಿ ಎಂದೇ ಕರೆಯುತ್ತಿದ್ದಾರೆ.

ಈ ಬಗ್ಗೆ ಕೆಲವು ವಿಶೇಷ ವಿಷಯಗಳನ್ನು ಹಂಚಿಕೊಂಡಿರುವ ಅವರು ತಮಗೆ ಚಾನ್ಸ್ ಸಿಕ್ಕ ಕುರಿತು ಹಾಗೂ ದರ್ಶನ್ ಅವರ ಡ್ಯಾನ್ಸ್ ಕುರಿತು ಕೂಡ ಮಾತನಾಡಿದ್ದಾರೆ. ಬೆಂಗಳೂರಿನ ಖಾಸಗಿ ಕಂಪನಿ ಉದ್ಯೋಗಿ ಆಗಿದ್ದ ಇವರು ಉದ್ಯೋಗದ ಜೊತೆ ಮಾಡಲಿಂಗ್ ಅಲ್ಲೂ ಕೂಡ ಆಕರ್ಷಣೆ ಹೊಂದಿದ್ದರು. ಇದರ ಸಲುವಾಗಿ ಕೊರಿಯಾಗೆ ಹೋಗಬೇಕಾದ ಸಂದರ್ಭ ಬಂದಾಗ ರಜೆ ಕೊಡದ ಕಾರಣ ತಮ್ಮ ಉದ್ಯೋಗವನ್ನು ತ್ಯಜಿಸಿ ಪೂರ್ಣ ಪ್ರಮಾಣದಲ್ಲಿ ಮಾಡಲಿಂಗ್ ಅಲ್ಲಿ ತೊಡಗಿಸಿಕೊಂಡರು.

ಆದರೆ ಈ ಡ್ಯಾನ್ಸ್ ಅಡಿಶನ್ ಗೆ ಹೋಗುವ ಸಂದರ್ಭದಲ್ಲಿ ಅವರು ದರ್ಶನ್ ಚಿತ್ರದ ಪ್ರಮುಖ ಹಾಡಿಗೆ ಸೆಲೆಕ್ಟ್ ಆಗುತ್ತಾರೆ ಎಂದು ಅಂದುಕೊಂಡಿರಲಿಲ್ಲವಂತೆ. ಇದು ನನ್ನ ಅದೃಷ್ಟ ಎಂದು ಹೇಳಿಕೊಳ್ಳುತ್ತಿರುವ ನಟ ದರ್ಶನ್ ಅವರು ಡ್ಯಾನ್ಸ್ ಕುರಿತು ಈ ರೀತಿ ಹೇಳಿದ್ದಾರೆ. ನಾವೆಲ್ಲರೂ ನಮ್ಮ ಹಾಡಿನ ಶೂಟಿಂಗ್ ಇರುವ ಮೂರು ನಾಲ್ಕು ದಿನಗಳಿಗಿಂತ ಮುಂಚೆಯಿಂದಲೇ ರಿಹರ್ಸಲ್ ಮಾಡಿಕೊಡುತ್ತಿದ್ದೆವು.

ಆದರೆ ದರ್ಶನ್ ಅವರು ಯಾವುದೇ ಅಭ್ಯಾಸ ಮಾಡದೆ ಸ್ಪಾಟ್ ಅಲ್ಲಿ ಬಂದು ಕೊರಿಯೋಗ್ರಾಫರ್ ಏನು ಹೇಳಿಕೊಡುತ್ತಾರೆ ಅದನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುತ್ತಿದ್ದರು ಎಂದು ಹೇಳಿದ್ದಾರೆ. ಮೂಲತಃ ಮಂಗಳೂರು ಬೆಡಗಿ ಆಗಿರುವ ನಿಮಿಕಾ ರತ್ನಾಕರ್ ಅವರು ತಮ್ಮ ಇಂಜಿನಿಯರಿಂಗ್ ವೃತ್ತಿ ತೊರೆದು ಹಿರೋಯಿನ್ ಆಗಿ ಕನ್ನಡ ಚಲನಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಉಪೇಂದ್ರ ಅವರ ಮುಂದಿನ ಚಿತ್ತವಾದ ತ್ರಿಶೂಲ ಸಿನಿಮಾದಲ್ಲಿ ಕೂಡ ಪ್ರಮುಖ ಪಾತ್ರದಲ್ಲಿ ನಿಮಿಕಾ ಅವರು ಇರಲಿದ್ದಾರೆ ಎನ್ನುವ ಮಾಹಿತಿಗಳು ಕೂಡ ಇವೆ.

ಸದ್ಯಕ್ಕೆ ಇವರು ಅಭಿನಯಿಸಿರುವ ಪುಷ್ಪವತಿ ಹಾಡು ಬಹಳ ಟ್ರೆಂಡಿಂಗ್ ಅಲ್ಲಿ ಇದ್ದು ಎಲ್ಲರೂ ಸಹ ಈ ಹಾಡಿಗೆ ರೀಲ್ಸ್ ಮಾಡಿ ಪ್ರಚಾರ ನೀಡುತ್ತಿದ್ದಾರೆ. ಹಾಡು ನೋಡಿದ ಬಳಿಕ ಕೆಲವರು ಇದರ ಅರ್ಥದ ವಿರುದ್ಧವಾಗಿ ಕೂಡ ಮಾತನಾಡಿ ಹಾಡಿನ ಬಗ್ಗೆ ವಿವಾದವನ್ನು ಸೃಷ್ಟಿ ಮಾಡಿದ್ದಾರೆ. ಈ ಹಾಡು ಸಿನಿಮಾ ಕ್ರೇಝ್ ಹೆಚ್ಚಿಸಿದ್ದು ಎಲ್ಲರೂ ದರ್ಶನ್ ಅವರ ಕ್ರಾಂತಿ ಸಿನಿಮಾ ರಿಲೀಸ್ ಆಗುವುದಕ್ಕಾಗಿ ಕಾಯುತ್ತಿದ್ದಾರೆ.

Entertainment Tags:Challenging star darshan, D Boss, Darshan, Kranti, Nimika Rathnakar
WhatsApp Group Join Now
Telegram Group Join Now

Post navigation

Previous Post: ರೂಪೇಶ್ ಶೆಟ್ಟಿ ಜೊತೆ ಮದುವೆ ಆಗ್ತೀರಾ ಅಂತ ಮಾಧ್ಯಮದವರು ಕೇಳಿದಾಗ ಸಾನ್ಯಾ ಅಯ್ಯರ್ ಹೇಳಿದ್ದೇನು ಗೊತ್ತ.? ನಿಜಕ್ಕೂ ಆಶ್ಚರ್ಯ ಆಗುತ್ತೆ.
Next Post: ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದ ಹಾಗೆಯೇ ದರ್ಶನ್ ವಿರುದ್ಧ ಚಪ್ಪಲಿ ಎಸೆದವನಿಗೆ ಖಡಕ್ ಎಚ್ಚರಿಕೆ ಕೊಟ್ಟ ರೂಪೇಶ್ ರಾಜಣ್ಣ, ಇವರ ಮಾತಿನಲ್ಲಿ ಎಷ್ಟು ಸತ್ಯಾಂಶವಿದೆ ನೋಡಿ.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore