ಅಪ್ಪನ ಎದುರೇ ಸಾಧು ಕೋಕಿಲ ರವರಿಗೆ ಹೊಡೆದ ನಟ ಪ್ರಜ್ವಲ್ ದೇವರಾಜ್ ನಟ ಪ್ರಜ್ವಲ್ ದೇವರಾಜ್ ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಅವರ ಮುಂದಿನ ‘ಅಬ್ಬರ’ ಸಿನಿಮಾ ರಿಲೀಸ್ಗೆ ರೆಡಿ ಆಗಿದೆ ನವೆಂಬರ್ 18ರಂದು ಈ ಸಿನಿಮಾ ತೆರೆಗೆ ಬರುತ್ತಿದೆ. ಅದಕ್ಕೂ ಮುನ್ನ ಟ್ರೇಲರ್ ರಿಲೀಸ್ ಮಾಡಿ, ಚಿತ್ರದ ಬಗೆಗಿನ ಕುತೂಹಲವನ್ನು ಚಿತ್ರತಂಡ ಹೆಚ್ಚು ಮಾಡಿದೆ. ನಟ ಪ್ರಜ್ವಲ್ ದೇವರಾಜ್ ಅವರ ತಂದೆ, ಹಿರಿಯ ನಟ ದೇವರಾಜ್ ಅವರು ಟ್ರೇಲರ್ ಲಾಂಚ್ ಮಾಡಿ, ಮಗನ ಚಿತ್ರಕ್ಕೆ ಶುಭ ಕೋರಿದ್ದಾರೆ.
ನಂತರ ಚಿತ್ರದ ಬಗ್ಗೆ ಮಾತನಾಡಿದ ದೇವರಾಜ್, ‘ಟ್ರೇಲರ್ ಹಾಗೂ ಹಾಡುಗಳು ತುಂಬಾ ಚೆನ್ನಾಗಿ ಮೂಡಿಬಂದಿವೆ. ಮಗನ ಬಗ್ಗೆ ಈ ಚಿತ್ರದ ಮೂವರು ನಾಯಕಿಯರು ಒಳ್ಳೆಯ ಮಾತುಗಳನ್ನು ಹೇಳಿದಾಗ, ಒಬ್ಬ ತಂದೆಯಾಗಿ ನನಗೆ ತುಂಬಾ ಖುಷಿಯಾಯ್ತು. ಕನ್ನಡ ಚಿತ್ರರಂಗಕ್ಕೆ ಈಗ ಶುಕ್ರದೆಸೆ ಬಂದಿದೆ. ಇಡೀ ದೇಶ ಹೊಗಳುತ್ತಿದೆ. ರಾಮ್ ನಾರಾಯಣ್ ಜೊತೆ ನಾನೂ ಕೆಲಸ ಮಾಡಿದ್ದೇನೆ. ಅವರು ಬರೆದಿರುವ ಡೈಲಾಗ್ಗಳು ತುಂಬಾ ಚೆನ್ನಾಗಿರುತ್ತವೆ. ಅವರು ಹೇಳುವ ಮಾತಲ್ಲಿ ನಾಟಕೀಯತೆ ಕಾಣಲಿಲ್ಲ’ ಎಂದು ಹೇಳಿದರು.
ಈ ಚಿತ್ರದ ಒಂದು ಸನ್ನಿವೇಶದಲ್ಲಿ ನಟ ಪ್ರಜ್ವಲ್ ದೇವರಾಜ್ ಅವರು ಸಾಧು ಕೋಕಿಲ ರವರಿಗೆ ಹಾಸ್ಯದ ಸನ್ನಿವೇಶಕ್ಕಾಗಿ ಕೆನ್ನೆಗೆ ಹೊಡೆಯ ಬೇಕಾಗಿರುತ್ತದೆ ಅದಕ್ಕಾಗಿ ಪ್ರಜ್ವಲ್ ದೇವರಾಜ್ ರವರು ತನ್ನ ತಂದೆ ದೇವರಾಜ್ ಅವರ ಮುಂದೆ ಸಿನಿಮಾಗಾಗಿ ನಟಿಸಿದ್ದಾರೆ. ಚಿತ್ರದ ಕುರಿತು ಹೆಚ್ಚಿನ ಮಾಹಿತಿ ಹಂಚಿಕೊಂಡ ನಟ ಪ್ರಜ್ವಲ್ ದೇವರಾಜ್, ‘ಸಿನಿಮಾ ರಿಲೀಸ್ ಹತ್ತಿರವಾಗುತ್ತಿದ್ದಂತೆಯೇ ಎಕ್ಸೈಟ್ಮೆಂಟ್ ಜಾಸ್ತಿ ಇರುತ್ತೆ ಆದರೆ ಈ ಸಿನಿಮಾ ಮಾಡಿದ ಮೇಲೆ ನೆಮ್ಮದಿ ಕಾಣಿಸುತ್ತಿದೆ.
ಈ ಚಿತ್ರ ಇಷ್ಟು ಚೆನ್ನಾಗಿ ಬರಲು ಇಡೀ ತಂಡದ ಶ್ರಮವೇ ಕಾರಣ ನನಗೆ ಈ ಸಿನಿಮಾದಲ್ಲಿ ಮೂರು ವಿಭಿನ್ನವಾದ ಪಾತ್ರಗಳಿದ್ದು, ಕಾಮಿಡಿ, ಎಂಟರ್ಟೈನಿಂಗ್ ಜೊತೆಗೆ ಒಂದು ರಿವೆಂಜ್ ಥಾಟ್ ಚಿತ್ರದಲ್ಲಿದೆ. ಅದು ಚಿತ್ರದ ಕೊನೇವರೆಗೂ ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸುತ್ತಲೇ ಇರುತ್ತದೆ. ಮನುಷ್ಯ ಯಾವಾಗಲೂ ಜಾಗೃತನಾಗಿರಬೇಕು ಎನ್ನುವುದೇ ಚಿತ್ರದ ಸಂದೇಶ’ ಎಂದು ಹೇಳಿದರು.
ನವೆಂಬರ್ 18ಕ್ಕೆ ಅಬ್ಬರ ಬಿಡುಗಡೆಯಾಗುತ್ತಿದೆ, ಎಕ್ಸೈಟ್ಮೆಂಟ್ ಇದೆ ಒಂದೊಂದು ಸೀನ್, ಫೈಟ್, ಹಾಡಿಗೆ ಜನ ಏನು ಹೇಳಬಹುದು ಎಂಬ ಕುತೂಹಲವು ಚಿತ್ರತಂಡಕ್ಕೆ ಇದೆ. ಆದರೆ ಸಿನಿಮಾ ಗೆದ್ದೇ ಗೆಲ್ಲುತ್ತದೆ ಎಂಬ ಭರವಸೆಯಂತೂ ಖಂಡಿತ ಇದೆ ಎಂದು ಡೈನಮಿಕ್ಕಿಂಗ್ ದೇವರಾಜ್ ರವರು ತಿಳಿಸಿದ್ದಾರೆ. ಈ ಸಿನಿಮಾ ಪ್ರತಿ ಹಂತದಲ್ಲೂ ಚೆನ್ನಾಗಿಯೇ ಬಂದಿದೆ ಹಾಡಿನ ಸಮಯದಲ್ಲಿ ನಾಯಕಿ ನಿಮಿಕಾಗೆ ಕಾಲು ಪೆಟ್ಟಾಗಿದ್ದರೂ ತೋರಿಸಿಕೊಳ್ಳದೆ ಅಭಿನಯಿಸಿದ್ದಾರೆ.
ಚಿತ್ರದ ಟೈಟಲ್ ಅನ್ನು ಡಾ. ಶಿವರಾಜ್ಕುಮಾರ್ ಅವರು ರಿಲೀಸ್ ಮಾಡಿದ್ದರು. ಸದ್ಯ ಟ್ರೈಲರ್ ಅನ್ನು ದೇವರಾಜ್ ಅವರು ರಿಲೀಸ್ ಮಾಡಿದ್ದಾರೆ. ನಿರ್ಮಾಪಕರ ಹೆಸರೂ ಬಸವರಾಜ್, ಸಿನಿಮಾಗೆ ರಾಜ್ ಎನ್ನುವ ಹೆಸರು ಶಕ್ತಿಯಾಗಿ ನಿಂತಿದೆ’ ಎಂದು ಹೇಳೀದರು ನಿರ್ದೇಶಕ ಕೆ. ರಾಮ್ ನಾರಾಯಣ್ ರವರು ಸಂದರ್ಶನ ಒಂದರಲ್ಲಿ ಹೇಳಿದ್ದಾರೆ. ಈ ಸಿನಿಮಾದಲ್ಲಿ ರವಿಶಂಕರ್, ಶೋಭರಾಜ್, ಶಂಕರ್ ಅಶ್ವತ್ಥ್, ವಿಕ್ಟರಿ ವಾಸು, ಕೋಟೆ ಪ್ರಭಾಕರ್ ಮಂತಾದವರು ನಟಿಸಿದ್ದಾರೆ.
ಪ್ರಜ್ವಲ್ಗೆ ನಾಯಕಿಯರಾಗಿ ನಿಮಿಕಾ ರತ್ನಾಕರ್, ಲೇಖಾಚಂದ್ರ ಹಾಗೂ ರಾಜಶ್ರೀ ಪೊನ್ನಪ್ಪ ಇದ್ದಾರೆ. ಹಾಡುಗಳಿಗೆ ರವಿ ಬಸ್ರೂರು ಸಂಗೀತ ನೀಡಿದ್ದಾರೆ. ಜೆ.ಕೆ.ಗಣೇಶ್ ಛಾಯಾಗ್ರಹಣ ಮಾಡಿದ್ದು, ಸಿ. ಅಂಡ್ ಎಂ.ಮೂವೀಸ್ ಲಾಂಛನದಲ್ಲಿ ಬಸವರಾಜ್ ಮಂಚಯ್ಯ ಅವರು ಸಿನಿಮಾವನ್ನು ನಿರ್ಮಿಸಿದ್ದಾರೆ. ಪ್ರಜ್ವಲ್ ದೇವರಾಜ್ ಸಾಧುಕೋಕಿಲ ಅವರಿಗೆ ಒಡೆಯುವ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲಾಗಿದೆ ಇದನ್ನು ನೋಡಿದಂತಹ ಅಭಿಮಾನಿಗಳು ನಿಜಕ್ಕೂ ಒಂದು ಕ್ಷಣ ಶಾಕ್ ಆಗಿದ್ದಾರೆ ಆದರೆ ಇದು ಶೂಟಿಂಗ್ ಆಗಿ ಮಾಡಿದ ಸನ್ನಿವೇಶವಾಗಿದೆ ಹಾಗಾಗಿ ಇದನ್ನು ಅಭಿಮಾನಿಗಳು ಅನ್ಯತಾ ಭಾವಿಸಬಾರದು ಎಂದು ಪ್ರಜ್ವಲ್ ದೇವರಾಜ್ ಅವರು ಹೇಳಿಕೆ ಕೊಟ್ಟಿದ್ದಾರೆ.