ನವೆಂಬರ್ 11 ರಂದು ಕನ್ನಡದ ನಟಿ ರಾಧಿಕಾ ಕುಮಾರಸ್ವಾಮಿ ಅವರ ಹುಟ್ಟಿದ ಹಬ್ಬ ಇತ್ತು. 36 ವರ್ಷಗಳನ್ನು ಪೂರೈಸುತ್ತಿರುವ ರಾಧಿಕಾ ಕುಮಾರಸ್ವಾಮಿ ಅವರು ಈ ವರ್ಷದ ಹುಟ್ಟುಹಬ್ಬ ಆಚರಣೆಯನ್ನು ಕುಟುಂಬದವರ ಜೊತೆ ಸೇರಿ ವೃದ್ಧಾಶ್ರಮಕ್ಕೆ ಭೇಟಿ ಕೊಟ್ಟು ಅಲ್ಲಿ ಇರುವ ನೊಂದ ವೃದ್ಧರ ಜೊತೆ ಆಚರಿಸಿಕೊಳ್ಳುವ ಮೂಲಕ ಅರ್ಥಪೂರ್ಣವಾಗಿ ಸೆಲೆಬ್ರೇಶನ್ ಮಾಡಿದ್ದಾರೆ.
ಈ ಬಗ್ಗೆ ತಮ್ಮ instagram ಖಾತೆಯಲ್ಲಿ ವಿಡಿಯೋ ಒಂದನ್ನು ಮಾಡಿ ಹಂಚಿಕೊಂಡಿರುವ ರಾಧಿಕಾ ಕುಮಾರಸ್ವಾಮಿ ಅವರು ವೃದ್ಧಾಶ್ರಮದಲ್ಲಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳಲು ಮಾಡಿದ ಯೋಜನೆ ಬಗ್ಗೆ ಸಾಲು ಸಾಲು ಬರಹಗಳನ್ನು ಬರೆದಿದ್ದಾರೆ. ನನ್ನ ಹುಟ್ಟುಹಬ್ಬವನ್ನು ವೃದ್ಧಾಶ್ರಮದಲ್ಲಿ ಆಚರಿಸಲು ದೇವರು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ನಾನು ಧನ್ಯವಾದಗಳು ಹೇಳುತ್ತೇನೆ.
ನಾನು ನಮ್ಮ ಅಜ್ಜಿ ಅಮ್ಮ ಅಣ್ಣಂದಿರು ಸೇರಿ ವೃದ್ದಾಶ್ರಮದಲ್ಲಿ ಅವರಿಗೆಲ್ಲಾ ಅಡುಗೆ ಮಾಡಿ ಬಡಿಸಿ ಆಚರಣೆ ಮಾಡಿದೆವು. ಇಂತಹ ಒಂದು ಮರೆಯಲಾಗದ ಅನುಭವವನ್ನು, ದಿನವನ್ನು ನಾನು ಪಡೆದುಕೊಂಡೆ. ಅಲ್ಲಿರುವ ಹಲವರ ಕಣ್ಣುಗಳಲ್ಲಿ ಅವರ ಒಂಟಿತನದ ನೋವು ಕಾಣುತ್ತಿತ್ತು, ಹಲವರು ಅದನ್ನು ನಮ್ಮೊಂದಿಗೆ ಹಂಚಿಕೊಂಡರು. ತಮ್ಮ ಕುಟುಂಬದ ಸದಸ್ಯರಿಂದಲೇ ಪ್ರೀತಿಯಿಂದ ವಂಚಿತರಾಗಿ ಹಲವು ಜನ ಅಲ್ಲಿದ್ದಾರೆ.
ಅವರ ನೋವು ವಿವರಿಸಲಾಗದಷ್ಟು ಆಳವಾಗಿದೆ. ಹಾಗಾಗಿ ನಾನು ಈ ಜನರೇಶನ್ ಎಲ್ಲರಲ್ಲೂ ಕೇಳಿಕೊಳ್ಳುತ್ತಿದ್ದೇನೆ ನಿಮ್ಮ ನಿಮ್ಮ ಮನೆಯಲ್ಲಿ ಇರುವ ವೃದ್ಧರನ್ನು ಪ್ರೀತಿಯಿಂದ ಕಾಣಿ, ಅಕ್ಕರೆಯಿಂದ ಕಾಳಜಿ ಮಾಡಿ ಅವರೆಲ್ಲರೂ ಪ್ರತ್ಯಕ್ಷವಾಗಿ ಕಾಣುತ್ತಿರುವ ದೇವರುಗಳು. ಅವರ ಜೊತೆ ಸಾಧ್ಯವಷ್ಟು ಸಮಯ ಕಳೆಯಿರಿ ಅವರನ್ನು ನೋಯಿಸಬೇಡಿ ಅವರನ್ನು ವೃದ್ದಾಶ್ರಮಕ್ಕೆ ಕಳುಹಿಸಬೇಡಿ ಎಂದು ಅರ್ಥಪೂರ್ಣವಾಗಿ ಪೋಸ್ಟಿಗೆ ಬರಹವನ್ನು ಕೂಡ ಬರೆದಿದ್ದಾರೆ.
ವೃದ್ದಾಶ್ರಮದಲ್ಲಿ ಕೇಕ್ ಕಟ್ ಮಾಡಿ ಅದನ್ನು ವೃದ್ಧರಿಗೆ ತಿನ್ನಿಸುತ್ತಿರುವ ದೃಶ್ಯಗಳು ಮತ್ತು ವೃದ್ಧರ ಜೊತೆ ಕೈ ಹಿಡಿದು ಬೆನ್ನು ಸವರಿ ಮಾತನಾಡಿ ಅವರಿಗೆ ಸಮಾಧಾನ ಮಾಡುತ್ತಿರುವ ದೃಶ್ಯಗಳು ಎಲ್ಲರಿಗೂ ಕೂಡ ಪ್ರತ್ಯೇಕವಾಗಿ ಸಿಹಿತಿಂಡಿಯ ಬಾಕ್ಸ್ ಗಳನ್ನು ನೀಡಿರುವುದು ಆ ವಿಡಿಯೋದಲ್ಲಿ ಸೆರೆಯಾಗಿದೆ. ಇದರೊಂದಿಗೆ ಆಶ್ರಮಕ್ಕೆ ಬೇಕಾದ ಸಾಮಗ್ರಿಗಳು ಮತ್ತು ಆಹಾರದ ಸಾಮಾನುಗಳನ್ನು ಕೂಡ ನಟಿ ಕೊಟ್ಟಿದ್ದಾರೆ.
ಹಲವು ವರ್ಷಗಳವರೆಗೆ ಅಜ್ಞಾತದಲ್ಲಿದ್ದ ನಟಿ ರಾಧಿಕಾ ಕುಮಾರಸ್ವಾಮಿ ಇತ್ತೀಚಿಗೆ ಸಾಮಾಜಿಕವಾಗಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಹುಟ್ಟುಹಬ್ಬವನ್ನು ಈ ರೀತಿ ಅವರು ನೊಂದವರ ಜೊತೆ ಸಮಯ ಕಳೆಯುತ್ತ ಆಚರಿಸಿರುವುದು ಅವರ ಅಭಿಮಾನಿಗಳಲ್ಲಿ ಅವರ ಮೇಲಿನ ಗೌರವವನ್ನು ಇಮ್ಮಡಿಗೊಳಿಸಿದೆ ಅಲ್ಲದೆ ಅನೇಕ ಜನರು ಕೂಡ ಇಂತಹ ವಿಷಯವನ್ನು ಆದರ್ಶವಾಗಿ ತೆಗೆದುಕೊಂಡು ಅವರು ಸಹ ಅವರ ಹುಟ್ಟುಹಬ್ಬವನ್ನು ದುಂದು ವೆಚ್ಚ ಮಾಡದೆ ಈ ರೀತಿ ವೃದ್ಧಾಶ್ರಮ ಅಥವಾ ಅನಾಥಾಶ್ರಮಗಳಲ್ಲಿ ಮಾಡುವ ಯೋಜನೆ ಮಾಡುತ್ತಾರೆ.
ಇದರ ಜೊತೆಗೆ ಅವರು ಮಾಡಿದ ಪೋಸ್ಟಲ್ಲಿ ಅವರು ಹಂಚಿಕೊಂಡಿರುವ ವಿಷಯ ಕೂಡ ಹಲವರ ಮನವನ್ನು ತಟ್ಟಲಿದೆ. ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಂಡಿರುವುದು ಅಲ್ಲದೆ ಸಮಾಜದಲ್ಲಿ ಆಗುತ್ತಿರುವ ಆಗುಹೋಗುಗಳನ್ನು ಮನದಲ್ಲಿಟ್ಟುಕೊಂಡು ಮನೆಯಲ್ಲಿರುವ ವೃದ್ಧರ ಮೌಲ್ಯ ತಿಳಿಸಿಕೊಡುವ ಪ್ರಯತ್ನವನ್ನು ಮಾಡಿರುವುದು ಶ್ಲಾಘನಾರ್ಹ ಇದನ್ನು ನೋಡಿದ ಬಳಿಕ ಒಂದಷ್ಟು ಮನಗಳಲ್ಲಿ ಮತ್ತು ಮನೆಗಳಲ್ಲಿ ಆದರೂ ಬದಲಾವಣೆ ಕಂಡುಬಂದರೂ ಅದು ಈಕೆ ಮಾಡಿದ ಪ್ರಯತ್ನಕ್ಕೆ ಸಿಕ್ಕ ಸಾರ್ಥಕತೆ.
ಇತ್ತೀಚಿನ ದಿನಗಳಲ್ಲಿ ಸೆಲೆಬ್ರಿಟಿಗಳು ಇಂತಹ ಒಳ್ಳೊಳ್ಳೆ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದು ಸಮಾಜದಲ್ಲಿ ಉತ್ತಮ ಬದಲಾವಣೆ ತರಲು ಪ್ರಯತ್ನ ಮಾಡುತ್ತಿರುವುದು ಕರ್ನಾಟಕದ ಪಾಲಿಗೆ ಒಳ್ಳೆಯ ಇನಿಷಿಯೇಟ್ ಆಗಿದೆ. ರಾಧಿಕಾ ಕುಮಾರಸ್ವಾಮಿ ಮಾಡಿದ ಈ ಕಾರ್ಯ ನಿಮಗೆ ಇಷ್ಟ ಆದರೆ ತಪ್ಪದೇ ಲೈಕ್ ಕೊಟ್ಟು ಶೇರ್ ಮಾಡಿ ಹಾಗೂ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ