ಪರ ಭಾಷಿಕ ನಟಿಯರಾಗಿ ಬಂದು ಕನ್ನಡಿಗರೇ ಎನ್ನುವ ಮಟ್ಟಕ್ಕೆ ಕನ್ನಡಿಗರಿಂದ ಪ್ರೀತಿ ಪಡೆದ ಕೆಲವೇ ಕೆಲವು ನಟಿಯರಲ್ಲಿ ಸುಹಾಸಿನಿ ಅವರ ಹೆಸರು ಸೇರುತ್ತದೆ. ಸುಹಾಸಿನಿ ಮತ್ತು ವಿಷ್ಣುವರ್ಧನ್ ಕನ್ನಡ ಚಿತ್ರರಂಗ ಕಂಡ ಯಶಸ್ವಿ ಜೋಡಿ. ಜೊತೆಗೆ ವಿಷ್ಣುವರ್ಧನ್ ಮತ್ತು ರಾಜೇಂದ್ರ ಸಿಂಗ್ ಬಾಬು ಅವರು ಕನ್ನಡ ಚಿತ್ರ ಪ್ರಪಂಚದ ಲಕ್ಕಿ ಕಾಂಬಿನೇಷನ್.
ಈ ಲೆಜೆಂಡರಿ ಡೈರೆಕ್ಟರ್ ನಿರ್ದೇಶನ ಮತ್ತು ಆ ತಾರೆಗಳ ಮುಖ್ಯ ಭೂಮಿಕೆಯಲ್ಲಿ ಬಂದ ಎಲ್ಲಾ ಸಿನಿಮಾಗಳು ಕೂಡ ಸೂಪರ್ ಹಿಟ್ ಸಿನಿಮಾಗಳೇ. ಇಂತಹ ಸಿನಿಮಾಗಳಲ್ಲಿ ಒಂದು ಮುತ್ತಿನ ಹಾರ ಸಿನಿಮಾ. ಇಂದಿಗೂ ಕೂಡ ನಮ್ಮ ಕನ್ನಡದ ಜನತೆ ದೇಶಪ್ರೇಮ ಕಥೆ ಹೊಂದಿರುವ ಸಿನಿಮಾಗಳು ಎಂದ ಕೂಡಲೇ ಮುತ್ತಿನ ಹಾರ ಸಿನಿಮಾವನ್ನು ಮೊದಲಿಗೆ ನೆನೆಸಿಕೊಳ್ಳುತ್ತಾರೆ. ಅಷ್ಟರ ಮಟ್ಟಿಗೆ ಇಷ್ಟು ದಶಕಗಳು ಕಳೆದಿದ್ದರೂ ಕೂಡ ಆ ಸಿನಿಮಾ ಜನರ ಮನಸ್ಸಲ್ಲಿ ಸ್ಥಾನ ಗಿಟ್ಟಿಸಿ ಕೊಂಡಿದೆ.
ಆದರೆ ಈ ಸಿನಿಮಾದಲ್ಲಿ ಅಭಿನಯಿಸಿದ ತಪ್ಪಿಗಾಗಿ ಸುಹಾಸಿನಿ ಅವರು ಚಪ್ಪಲಿ ತೆಗೆದುಕೊಂಡು ಹೊಡೆದುಕೊಂಡಿದ್ದರಂತೆ. ಇದನ್ನು ಸ್ವತಃ ಈ ಸಿನಿಮಾದ ನಿರ್ದೇಶಕರಾದ ಆದ ರಾಜೇಂದ್ರ ಸಿಂಗ್ ಬಾಬು ಅವರು ವಿಷ್ಣು ಸೇವಾ ಸಮಿತಿ ಆಯೋಜಿಸಿದ್ದ ಕಾರ್ಯಕ್ರಮ ಒಂದರಲ್ಲಿ ವೇದಿಕೆ ಮೇಲೆ ಹೇಳಿಕೊಂಡಿದ್ದಾರೆ. ಇದಕ್ಕೆ ಕಾರಣ ಇಷ್ಟೇ ವಿಷ್ಣುವರ್ಧನ್ ಒಬ್ಬ ಡೈರೆಕ್ಟರ್ ಆಕ್ಟರ್ ಎನ್ನುವುದರಲ್ಲಿ ಯಾವುದೇ ಎರಡು ಮಾತಿಲ್ಲ ಯಾಕೆಂದರೆ ವಿಷ್ಣುವರ್ಧನ್ ಅವರು ಅಭಿನಯಿಸುವಾಗ ಆ ಶಾಟ್ 50 ಪರ್ಸೆಂಟ್ ಓಕೆ ಆಗಿದ್ದರೆ ತೆರೆ ಮೇಲೆ ಅದನ್ನು ನೋಡುವಾಗ ಅವರ ಪರ್ಫಾರ್ಮೆನ್ಸ್ ನೂರಕ್ಕೆ ನೂರಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿರುತ್ತದೆ ಎನ್ನುವುದನ್ನು ಹಲವಾರು ನಿರ್ದೇಶಕರು ಒಪ್ಪಿಕೊಂಡಿದ್ದಾರೆ.
ಹೀಗೆ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡುವ ಇವರು ಆ ಸೀನ್ ಗಳಿಗಾಗಿ ಎಂತಹ ಸನ್ನಿವೇಶಗಳನ್ನು ಬೇಕಾದರೂ ಎದುರಿಸುವ ಧೈರ್ಯ ಮಾಡಿದ್ದಾರೆ. ಇದೇ ಕಾರಣಕ್ಕೆ ರಾಜೇಂದ್ರ ಸಿಂಗ್ ಬಾಬು ಅವರು ಅಷ್ಟು ತನ್ನನ್ನು ತಾನು ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ಮತ್ತೊಬ್ಬ ಸ್ಟಾರ್ ಕನ್ನಡದಲ್ಲಿ ಇಲ್ವೇ ಇಲ್ಲ, ಆ ತಾಕತ್ತು ಯಾರಿಗೂ ಇಲ್ಲ ಎಂದು ಕೂಡ ಆ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಜೊತೆಗೆ ಮುತ್ತಿನ ಹಾರ ಸಿನಿಮಾ ದೊಡ್ಡ ಚಾಲೆಂಜ್ ಆಗಿತ್ತು ಅದು ಅಷ್ಟು ನೈಜವಾಗಿ ಬರಲು ಚಿತ್ರೀಕರಣ ಅಷ್ಟು ನೈಜವಾಗಿ ನಡೆದಿದ್ದೇ ಕಾರಣ. 52 ಡಿಗ್ರಿ ಸೆಲ್ಸಿಯಸ್ ಅಲ್ಲಿ ಮಿಲ್ಟಿ ಸೂಟ್ ತೊಟ್ಟು ಮರಳು ಗಾಡಿನಲ್ಲಿ ವಿಷ್ಣು ನಿಂತಿರುತ್ತಿದ್ದ, ಆದರೆ ಸುಹಾಸಿನಿ ಪಾಪ ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲಾಗದೆ ಒದ್ದಾಡುತ್ತಿದ್ದರು. ಒಂದೊಂದು ಬಾರಿ ನಾನು ಇಲ್ಲೇ ಇದ್ದರೆ ಸತ್ತೇ ಹೋಗುತ್ತೇನೆ ಎಂದು ಜೋರಾಗಿ ಅಳುತ್ತಿದ್ದರು.
ಒಮ್ಮೆ ನನ್ನ ಮೇಲೆ ಕೋಪ ಮಾಡಿಕೊಂಡು ಅಲ್ಲೇ ಇದ್ದ ಅವರ ಚಪ್ಪಲಿ ತೆಗೆದುಕೊಂಡು ಹೊಡೆದುಕೊಂಡಿದ್ದರು. ಯಾಕಾದರೂ ಈ ಸಿನಿಮಾ ಒಪ್ಪಿಕೊಂಡೆನೋ ಗೊತ್ತಿಲ್ಲ ನನ್ನ ಕರ್ಮ ಎಂದು ಗಲಾಟೆ ಮಾಡುತ್ತಿದ್ದರು. ಆಗ ನಾನು ಮತ್ತು ವಿಷ್ಣುವರ್ಧನ್ ಅವರು ಹೋಗಿ ಅವರನ್ನು ಸಮಾಧಾನ ಪಡಿಸಿ ಸಂತೈಸುವ ಪ್ರಯತ್ನ ಮಾಡಿದೆವು ಸಿನಿಮಾ ತೆರೆ ಮೇಲೆ ಬಂದಾಗ ಹೆಮ್ಮೆ ಪಡುತ್ತೀರಾ ಎಂದು ಹೇಳಿದ್ದೆವು. ಅದು ಹಾಗೆ ಆಯ್ತು. ಇಂದಿಗೂ ಸಹ ಸುಹಾಸಿನಿ ಮುತ್ತಿನ ಹಾರ ಸಿನಿಮಾ ತನ್ನ ಕೆರಿಯರ್ ನ ಅತ್ಯುತ್ತಮ ಸಿನಿಮಾ ಎಂದು ಹೇಳಿಕೊಳ್ಳುತ್ತಾರೆ. ನಾವು ಅಂದುಕೊಂಡ ರೀತಿಯೇ ಜನಕ್ಕೆ ಆ ಸಿನಿಮಾ ಕೂಡ ರೀಚ್ ಆಗಿತ್ತು ಇದಕ್ಕೆಲ್ಲ ಕಾರಣ ವಿಷ್ಣುವರ್ಧನ್ ಎಂದು ಹೇಳಿದ್ದಾರೆ.