Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಶುಭಸುದ್ದಿ ಹಂಚಿಕೊಂಡ ನಟ ರಾಮ್ ಚರಣ್ & ಉಪಾಸನಾ, ನೂರಾರು ಪ್ರಶ್ನೆಗಳಿಗೆ ಕೊನೆಗೂ ಉತ್ತರ ಕೊಟ್ಟ ದಂಪತಿಗಳು.

Posted on December 13, 2022 By Kannada Trend News No Comments on ಶುಭಸುದ್ದಿ ಹಂಚಿಕೊಂಡ ನಟ ರಾಮ್ ಚರಣ್ & ಉಪಾಸನಾ, ನೂರಾರು ಪ್ರಶ್ನೆಗಳಿಗೆ ಕೊನೆಗೂ ಉತ್ತರ ಕೊಟ್ಟ ದಂಪತಿಗಳು.

ಎಲ್ಲಾ ಸಂಕಷ್ಟಗಳನ್ನು ಮೆಟ್ಟಿನಿಂತ ಜೋಡಿ

ಚಿರಂಜೀವಿ ಕುಟುಂಬಕ್ಕೆ ಹೊಸ ಅತಿಥಿ ಆಗಮನ, ತಾತ ಆಗುತ್ತಿರುವ ವಿಷಯವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಮೆಗಾಸ್ಟಾರ್

ಮೆಗಾಸ್ಟಾರ್ ಚಿರಂಜೀವಿ ಅವರು ಇಂದು ತಾವು ಮತ್ತೊಮ್ಮೆ ತಾತ ಆಗುತ್ತಿರುವ ಸಂತಸದ ಸುದ್ದಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸದ್ಯಕ್ಕೆ ವೀರಯ್ಯ ವಲ್ತೇರು ಸಿನಿಮಾದ ಸಾಂಗ್ ಶೂಟಿಂಗ್ ಆಗಿ ವಿದೇಶದಲ್ಲಿ ಇರುವ ಚಿರಂಜೀವಿ ಅವರು ಅಲ್ಲಿಂದಲೇ ಈ ಸಂಭ್ರಮದ ಸುದ್ದಿಯನ್ನು ಹಂಚಿಕೊಂಡಿದ್ದು ಈಗ ಮೆಗಾಸ್ಟಾರ್ ಮನೆಯಲ್ಲಿ ಖುಷಿಯ ವಾತಾವರಣ ನಿರ್ಮಾಣ ಆಗಿದೆ.

ಮೆಗಾಸ್ಟಾರ್ ಚಿರಂಜೀವಿ ಅವರ ಪುತ್ರ ರಾಮಚರಣ್ ತೇಜ ಅವರು ಉಪಾಸನ ಎನ್ನುವವರನ್ನು ಮದುವೆ ಆಗಿ ಹತ್ತು ವರ್ಷಗಳು ಆಗಿತ್ತು. ಈಗ ಕಳೆದ ಐದು ತಿಂಗಳ ಹಿಂದೆ ಅಷ್ಟೇ ಹತ್ತನೇ ವರ್ಷದ ವಾರ್ಷಿಕೋತ್ಸವವನ್ನು ಕೂಡ ವಿದೇಶದಲ್ಲಿ ಬಹಳ ಗ್ರಾಂಡ್ ಆಗಿ ಆಚರಿಸಿಕೊಂಡಿದ್ದರು.

ಆದರೆ ಅವರಿಗೆ ಇನ್ನೂ ಮಕ್ಕಳಿಲ್ಲ ಎನ್ನುವ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಯಾವಾಗಲೂ ಚರ್ಚೆ ಆಗುತ್ತಿತ್ತು. ಉಪಾಸನ ಹಾಗೂ ರಾಮ್ ಚರಣ್ ಅವರು ಯಾವುದೇ ಸಂದರ್ಶನ ಎದುರಿಸಿದರು ಕೂಡ ಅಲ್ಲಿ ಈ ಕುರಿತಾದ ಪ್ರಶ್ನೆ ಬರುತ್ತಲೇ ಇತ್ತು. ಎಷ್ಟೋ ಬಾರಿ ರಾಮ್ ಚರಣ್ ತೇಜ ಅವರೇ ಮೌನವಾಗಿ ಸುಮ್ಮನಿದ್ದರೂ ಉಪಾಸನ ಮಾತ್ರ ಕೊನೆ ಕೊನೆಯಲ್ಲಿ ಖಾರವಾಗಿಯೇ ಉತ್ತರಿಸುತ್ತಿದ್ದರು.

ಮಕ್ಕಳನ್ನು ಹಡೆಯುವುದು ನನ್ನ ಪರ್ಸನಲ್ ವಿಷಯ ಈಗ ನಾನು ಏನೇ ಮಾತನಾಡಿದರು ವಿವಾದ ಆಗುತ್ತದೆ ಎಂದು ನನಗೆ ಗೊತ್ತಿದೆ. ಹಾಗೆ ನನ್ನ ಫೇರ್ ಲೈನ್ ಮೀರಿ ನಾನು ಯಾವ ಪ್ರಶ್ನೆಗಳಿಗೂ ಉತ್ತರಿಸಬೇಕಾದ ಅವಶ್ಯಕತೆ ಇಲ್ಲ. ಸಮಯ ಬಂದಾಗ ನಾನು ಎಲ್ಲವನ್ನು ಹೇಳುತ್ತೇನೆ ಎಂದು ತಿರುಗೇಟು ನೀಡುತ್ತಿದ್ದರು. ಇದೀಗ ಉಪಸನ ಹಾಗೂ ರಾಮ್ ಚರಣ್ ತೇಜ್ ಅವರು ಸಿಹಿ ಸುದ್ದಿ ಹೇಳಿರುವುದು ಎಲ್ಲರ ಪ್ರಶ್ನೆಗಳಿಗೆ ತೆರೆ ಬಿದ್ದಂತಾಗಿದೆ.

ಈ ವಿಷಯ ಕೇಳಿ ಚಿರಂಜೀವಿ ಮತ್ತು ರಾಮ್ ಚರಣ್ ತೇಜ ಅವರ ಅಭಿಮಾನಿಗಳು ಬಹಳ ಸಂತಸ ಪಟ್ಟಿದ್ದಾರೆ. ಉಪಾಸನ ಅವರು ಈ ಹಿಂದೆ ಸದ್ಗುರು ಬಳಿ ಸಂದರ್ಶನದಲ್ಲಿ ಕೂಡ ಇದೇ ವಿಷಯದ ಬಗ್ಗೆ ಪ್ರಶ್ನೆ ಕೇಳಿದ್ದರು. ನಾನು ಸಂತೋಷವಾಗಿಯೇ ನನ್ನ ಕುಟುಂಬದಲ್ಲಿ ಇದ್ದೇನೆ ಆದರೂ ಕೂಡ ಜನ ನನ್ನ ರಿಲೇಶನ್ಶಿಪ್ ಬಗ್ಗೆ ರಿಪ್ರೊಡ್ಯೂಸ್ ಬಗ್ಗೆ ರೂಲ್ ಆಫ್ ಲೈಫ್ ಬಗ್ಗೆ ಪ್ರಶ್ನೆ ಮಾಡುತ್ತಾರೆ.

ಇದರಿಂದ ನನಗೆ ಸಾಕಾಗಿದೆ ಎಂದು ತಮ್ಮ ಸಂಕಟವನ್ನು ತೋಡಿಕೊಂಡಿದ್ದರು. ಆ ವೇಳೆ ಸದ್ಗುರು ಭಾರತ ದೇಶದಲ್ಲಿ ಮಕ್ಕಳು ಹೆರುವ ಶಕ್ತಿ ಇದ್ದು ಕೂಡ ಮಕ್ಕಳನ್ನು ಹೆರದ ಹೆಣ್ಣು ಮಕ್ಕಳ ಬಗ್ಗೆ ನನಗೆ ವಿಶೇಷ ಗೌರವ ಇದೆ ಖಂಡಿತವಾಗಿ ಅಂತವರು ಸನ್ಮಾನಕ್ಕೆ ಭಾದ್ಯರು ಎಂದು ಹೇಳಿದ್ದರು ಇದು ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ವೈರಲ್ ಕೂಡ ಆಗಿತ್ತು.

ಉಪಾಸನ ಆ ರೀತಿ ಮನಸ್ಥಿತಿಯ ಎಲ್ಲಾ ಹೆಣ್ಣುಮಕ್ಕಳ ಪರವಾಗಿ ಪ್ರಶ್ನೆ ಕೇಳಿದ್ದರೂ ಮತ್ತು ಸದ್ಗುರು ಅವರ ಸಹ ಅದಕ್ಕೆ ಸರಿಯಾದ ಉತ್ತರ ಹೇಳಿದ್ದರು. ಆ ಸಂದರ್ಶನ ಆದಮೇಲೆ ಉಪಾಸನ ಅವರು ಮಕ್ಕಳನ್ನು ಹೆರದೇ ಹಾಗೇ ಇರುವ ನಿರ್ಧಾರವನು ಮಾಡಿಬಿಟ್ಟಿದ್ದಾರೆ ಎನ್ನುವ ಅನುಮಾನ ಕೂಡ ಇತ್ತು. ಇದೀಗ ಅಫಿಶಿಯಲ್ ಆಗಿ ಉಪಾಸನ ಹಾಗೂ ರಾಮ್ ಚರಣ್ ಅವರೇ ತಾವಿಬ್ಬರು ತಂದೆ ತಾಯಿ ಆಗುತ್ತಿರುವ ವಿಷಯವನ್ನು ಹಂಚಿಕೊಂಡಿದ್ದಾರೆ.

ತ್ರಿಬಲ್ ಆರ್ ಸಕ್ಸಸ್ ಇಂದ ಹೊರಬಂದ ರಾಮ್ ಚರಣ್ ಅವರು ಶಂಕರ್ ನಿರ್ದೇಶನದ ಸಿನಿಮಾ ಒಂದರಲ್ಲಿ ಈಗ ಅಭಿನಯಿಸುತ್ತಿದ್ದಾರೆ. ಅದರ ಸಲುವಾಗಿ ನ್ಯೂಜಿಲೆಂಡ್ ಗೆ ತೆರಳಿದ್ದಾರೆ ಅವರ ಮುಂದಿನ ಸಿನಿಮಾಗಳಿಗೆ ಶುಭವಾಗಲಿ ಹಾಗೂ ಶೀಘ್ರದಲ್ಲಿಯೇ ಸುಗಮವಾಗಿ ಜೂನಿಯರ್ ರಾಮ್ ಚರಣ್ ಅಥವಾ ಜೂನಿಯರ್ ಉಪಾಸನ ಅವರನ್ನು ಪಡೆಯಲಿ ಎಂದು ಹರಸೋಣ.

Entertainment Tags:Megastar cheeranjeevi, Ram charan teja, Upasana
WhatsApp Group Join Now
Telegram Group Join Now

Post navigation

Previous Post: ಗಟ್ಟಿಮೇಳ ಸೀರಿಯಲ್ ಅಧಿತಿ ಹಾಗೂ ಪಾರು ಸೀರಿಯಲ್ ಪ್ರೀತಮ್ ಮದುವೆ ಸಂಭ್ರಮ, ಮದುವೆಗೆ ಯಾರೆಲ್ಲಾ ಬಂದಿದ್ರು ನೋಡಿ.
Next Post: ನಟಿ ರಮ್ಯ ವಿರುದ್ಧ ದೂರು ದಾಖಲು, ಸಂಕಷ್ಟಕ್ಕೆ ಸಿಲುಕಿದ ರಮ್ಯ

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore