ಇತ್ತೀಚಿಗಷ್ಟೇ ನಡೆದ ಸಂದರ್ಶನ ಒಂದರಲ್ಲಿ ನಟಿ ಸಮಂತಾ ಅವರನ್ನು ಆರೋಗ್ಯದ ಬಗ್ಗೆ ಕೇಳಿದ್ದಕ್ಕೆ ನಾನಿನ್ನೂ ಸ.ತ್ತಿ.ಲ್ಲ ಎಂದು ಉತ್ತರ ಕೊಟ್ಟು ಕಣ್ಣೀರು ಹಾಕಿದ್ದಾರೆ ಅಷ್ಟಕ್ಕೂ ಸಮಂತವಾಗಿ ಏನಾಯಿತು? ಯಾವ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂಬುದನ್ನು ನೋಡೋಣ ಬನ್ನಿ. ಸೌತ್ ಇಂಡಿಯಾದ ಫೇಮಸ್ ನಟಿ ಸಮಂತ ಅವರು ಮೈಯಾಸಿಟಿಸ್ ಎನ್ನುವ ವಿಚಿತ್ರ ಖಾಯಿಲೆಯಿಂದ ಬಳಸುತ್ತಿದ್ದಾರೆ. ಈ ಬಗ್ಗೆ ಅವರೇ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಿಂದ ಅಭಿಮಾನಿಗಳೊಂದಿಗೆ ವಿಷಯ ಹಂಚಿಕೊಂಡಿದ್ದರು.
ಜಾಹೀರಾತು :- ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ಪಂಡಿತ್ : ಶ್ರೀ ಆರ್. ಎನ್. ಜೋಷಿ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ಮದುವೆ, ಗಂಡ-ಹೆಂಡತಿ ಕ.ಲ.ಹ ಲೈಂ.ಗಿ.ಕ ಸಮಸ್ಯೆ ಇನ್ನು ಹಲವಾರು ಸಮಸ್ಯೆಗಳಿಗೆ ಕೇರಳದ ಮಹಾ ದೇವತೆಗಳ ಪೂಜಾ ಶಕ್ತಿಯಿಂದ ಕೇವಲ 1 ದಿನದಲ್ಲಿ 100ಕ್ಕೆ 101% ರಷ್ಟು ಶಾಶ್ವತ ಪರಿಹಾರ ಶತಸಿದ್ಧ ಅಸಾಧ್ಯವಾದದ್ದು ಇಲ್ಲಿ ಸಾಧ್ಯ 8050846164
ಇದೊಂದು ಸ್ನಾಯು ಸೆಳೆತಕ್ಕೆ ಸಂಬಂಧಪಟ್ಟ ಕಾಯಿಲೆ ಆಗಿದ್ದು ಪ್ರಪಂಚದಾದ್ಯಂತ ಸಾವಿರಾರು ಮಂದಿ ಇದೇ ರೀತಿಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಸಮಂತ ಋತು ಪ್ರಭು ಅವರು ಕೂಡ ಇದಕ್ಕಾಗಿ ವಿದೇಶದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ತಮ್ಮ ಖಾಯಿಲೆ ಬಗ್ಗೆ ಅಭಿಮಾನಿಗಳೊಂದಿಗೆ ಹೇಳಿಕೊಂಡಿದ್ದರು. ಅವರ ಸೋಶಿಯಲ್ ಮೀಡಿಯಾ ಪೋಸ್ಟ್ ನೋಡಿ ಜೂನಿಯರ್ ಎನ್ಟಿಆರ್, ಮೆಘಾ ಸ್ಟಾರ್ ಚಿರಂಜೀವಿ ಸೇರಿದಂತೆ ಅನೇಕರು ಅದಕ್ಕೆ ಉತ್ತರ ಕೊಟ್ಟು ಆಕೆಗೆ ಖಾಯಿಲೆ ವಿರುದ್ಧ ಹೋರಾಡುವ ಧೈರ್ಯ ತುಂಬುವ ಪ್ರಯತ್ನ ಮಾಡಿದ್ದರು.
ಸದ್ಯಕ್ಕೆ ಯಶೋಧ ಸಿನಿಮಾ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿರುವ ಸಮಂತಾ ಖಾಯಿಲೆ ಬಗ್ಗೆ ಮತ್ತೊಮ್ಮೆ ಹೇಳಿಕೊಂಡಿದ್ದಾರೆ. ತನ್ನ ಟ್ಯಾಲೆಂಟ್ ಇಂದ ಕಷ್ಟಪಟ್ಟು ಈ ಮಟ್ಟಕ್ಕೆ ಬೆಳೆದಿರುವ ನಟಿ ಸಮಂತಾ ಇಂದು ಕಾಲಿವುಡ್, ಟಾಲಿವುಡ್ ಹಾಗೂ ಬಾಲಿವುಡ್ ಅಂಗಳದಲ್ಲೂ ಕೂಡ ಬಹಳ ಬೇಡಿಕೆ ಸೃಷ್ಟಿಕೊಂಡಿರುವ ನಟಿ. ಸಮಂತ ಅವರು ಬಹುತೇಕ ಎಲ್ಲಾ ಸ್ಟಾರ್ ನಟರುಗಳೊಂದಿಗೆ ತೆರೆ ಹಂಚಿಕೊಂಡಿದ್ದಾರೆ.
ಈ ವರ್ಷ ವೈವಾಹಿಕ ಜೀವನದಲ್ಲಿ ಏರುಪೇರು ಕಂಡ ಇವರು ನಾಗಚೈತನ್ಯ ಜೊತೆಗಿದ್ದ ಸಂಬಂಧವನ್ನು ಕಡಿದುಕೊಂಡರು. ಡೈವೋರ್ಸ್ ಆದ ಬಳಿಕವೂ ಕೂಡ ತಮ್ಮ ಕೆರಿಯರ್ ಕಡೆಗೆ ಹೆಚ್ಚಿನ ಗಮನ ಹರಿಸುತ್ತಿದ್ದ ಇವರು ತಮ್ಮ ಬೋಲ್ಡ್ ಪಾತ್ರಗಳಿಂದ ಸಾಕಷ್ಟು ಬಾರಿ ಟ್ರೋಲ್ ಗೂ ಕೂಡ ಒಳಗಾಗಿದ್ದರು. ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ತನ್ನ ಕೆಲಸವನ್ನಷ್ಟೇ ಮಾಡುತ್ತಿದ್ದ ಸಮಂತ ಅವರು ದಿಢೀರ್ ಎಂದು ಅನಾರೋಗ್ಯಕ್ಕೆ ತುತ್ತಾಗಿದ್ದು ಇದು ಅವರನ್ನು ಮಾನಸಿಕವಾಗಿ ಕುಗ್ಗುವಂತೆ ಮಾಡಿದೆ.
ಈ ಬಗ್ಗೆ ಅವರು ಹೇಳಿಕೊಂಡ ಮಾತುಗಳು ಹೀಗಿದ್ದವು ಯಶೋಧ ಬಾಡಿಗೆ ತಾಯ್ತನದ ಕಥೆ ಹೇಳುವ ಪ್ಯಾನ್ ಇಂಡಿಯಾ ಸಿನಿಮಾವಾಗಿ ಕನ್ನಡ ಸೇರಿದಂತೆ ಭಾರತದ ಪ್ರಮುಖ ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ತಮಿಳು ತೆಲುಗು ಭಾಷೆಯಲ್ಲಿ ಸಂದರ್ಶನ ನೀಡುತ್ತಿರುವ ಸಮಂತ ಅವರನ್ನು ನಿರೂಪಕಿ ಆರೋಗ್ಯ ವಿಚಾರವಾಗಿ ಪ್ರಶ್ನಿಸಿದರು ಆ ಸಮಯದಲ್ಲಿ ನಟಿ ಭಾವುಕರಾಗಿ ಉತ್ತರ ನೀಡಿದ್ದಾರೆ.
ನಾನು ನನ್ನ ಖಾಯಿಲೆ ಬಗ್ಗೆ ಪ್ರಚಾರ ಪಡಿಸುವ ಹಲವು ದಿನಗಳ ಮುಂದೆಯಿಂದಲೂ ಇದರ ವಿರುದ್ಧ ಹೋರಾಡುತ್ತಿದ್ದೇನೆ. ನಾನು ಮಾತ್ರ ಅಲ್ಲ ನನ್ನಂತೆ ಸಾವಿರಾರು ಮಂದಿ ಇದೇ ರೀತಿಯ ಅನೇಕ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ಎಷ್ಟೋ ದಿನ ನಾನು ಒಂದು ಹೆಜ್ಜೆ ಕೂಡ ಮುಂದೆ ಇಡಲು ಸಾಧ್ಯ ಆಗುವುದಿಲ್ಲ ಆದರೆ ಒಂದು ಕ್ಷಣ ಹಿಂದೆ ನೋಡಿದರೆ ನಾ ಇಷ್ಟು ದಿನ ತಳ್ಳಿಕೊಂಡು ಬಂದೆನಾ ಎನಿಸುತ್ತದೆ. ನಾನು ಅಷ್ಟು ಸುಲಭಕ್ಕೆ ಯಾವುದರಲ್ಲೂ ಸೋಲು ಒಪ್ಪಿಕೊಳ್ಳುವವಳು ಅಲ್ಲ.
ಈ ಖಾಯಿಲೆ ವಿರುದ್ಧವು ಕೂಡ ಹೋರಾಡುತ್ತೇನೆ. ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ನನ್ನ ಖಾಯಿಲೆ ಬಗ್ಗೆ ಟ್ರೋಲ್ ಮಾಡಿ ಅನೇಕ ರೀತಿಯಲ್ಲಿ ವಿಷಯ ಮಾಡಿಕೊಂಡು ಮಾತನಾಡುತ್ತಿದ್ದಾರೆ. ನಾನು ಹಾಸಿಗೆ ಹಿಡಿದಿದ್ದೇನೆ, ನನಗೆ ಪ್ರಾ.ಣಾ.ಪಾ.ಯ.ವಿ.ದೆ ಹೀಗೆಲ್ಲ ಬರೆದುಕೊಂಡು ಪ್ರಚಾರ ಮಾಡುತ್ತಾರೆ. ಆದರೆ ನಾನು ಆರೋಗ್ಯವಾದ ವಿಷಯದಲ್ಲಿ ಸೋತಿರಬಹುದು ಆದರೆ ನಾನಿನ್ನು ಸ.ತ್ತಿ.ಲ್ಲ. ಇದನ್ನು ಗೆದ್ದು ಬರುತ್ತೇನೆ ಎಂದು ಹೇಳುತ್ತಾ, ಭಾವುಕರಾಗಿದ್ದಾರೆ.
ಇದೇ ಶುಕ್ರವಾರ ಅವರ ಯಶೋದಾ ಸಿನಿಮಾ ರಿಲೀಸ್ ಆಗುತ್ತಿದ್ದು ಮತ್ತೊಂದು ಮಹಿಳಾ ಪ್ರಧಾನ ಚಿತ್ರ ಶಾಕುಂತಲ ಕೂಡ ಚಿತ್ರೀಕರಣ ಪೂರ್ತಿಗೊಂಡು ರಿಲೀಸ್ ಹಂತದಲ್ಲಿದೆ. ಇವರ ಅನಾರೋಗ್ಯ ಕಾರಣದಿಂದ ವಿಜಯ ದೇವರಕೊಂಡ ಅವರೊಂದಿಗೆ ಅಭಿನಯಿಸಬೇಕಾದ ಖುಷಿ ಚಿತ್ರೀಕರಣವನ್ನು ಮುಂದೂಡಲಾಗಿದೆಯಂತೆ. ನಟಿ ಆದಷ್ಟೂ ಬೇಗ ಸಮಸ್ಯೆ ಇಂದ ಹೊರಬರಲಿ ಎಂದು ಹಾರೈಸೋಣ. ನಟಿ ಸಮಂತಾ ಅವರು ಇತ್ತೀಚಿಗೆ ನಡೆದ ಸಂದರ್ಶನದಲ್ಲಿ ಮಾತನಾಡಿದ ವಿಡಿಯೋ ಈ ಕೆಳಗಿದೆ ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡಿ.
https://youtu.be/h9cH6C50FhQ