ನನ್ ಮುಖ ನೋಡಿದ್ ತಕ್ಷಣ ಸಿಗರೇಟ್ ಸೇದ್ತಿಯಾ ಅಂತ ಪಟ್ ಅಂತ ವಿಷ್ಣು ಸರ್ ಕೇಳ್ಬಿಟ್ರು. ಅವರಲ್ಲಿ ಒಂದು ವಿಶೇಷ ಶಕ್ತಿ ಇತ್ತು ಎಂದು ದಾದ ಬಗ್ಗೆ ಮಾತನಾಡಿದ ನಟ ನವೀನ್ ಕೃಷ್ಣ
ಕದಂಬ ಸಿನಿಮಾದಿಂದ ಕಲಿತ ಅಭಿನಯ ಹಾಗೂ ವಿಷ್ಣುವರ್ಧನ್ ಅವರಿಂದ ಕಲಿತ ಪಾಠವನ್ನು ಹೇಳಿಕೊಂಡ ನವೀನ್ ಕೃಷ್ಣ. ಸಾಹಸ ಸಿಂಹ ವಿಷ್ಣುವರ್ಧನ್ ಇಡೀ ಕರುನಾಡೇ ಕೊಂಡಾಡುವಂತೆ ಮಾಣಿಕ್ಯ. ಪ್ರೀತಿಯಿಂದ ಎಲ್ಲರೂ ಇವರನ್ನು ದಾದಾ ಎಂದು ಕರೆಯುತ್ತಾರೆ. ಹೆಸರಿಗೆ ತಕ್ಕಂತೆ ಇವರು ಒಬ್ಬ ಅಣ್ಣನ ಸ್ಥಾನದಲ್ಲಿ ಇದ್ದುಕೊಂಡು ಎಲ್ಲರಿಗೂ ಮಾರ್ಗದರ್ಶನ ನೀಡುತ್ತಾರೆ. ಹಿರಿಯರು ಕಿರಿಯರು ಎನ್ನುವ ಯಾವ ಭೇದ ಇಲ್ಲದೆ ಎಲ್ಲರನ್ನೂ ಸಮಾನವಾಗಿ ಕಾಣುವ ಇವರ ವ್ಯಕ್ತಿತ್ವಕ್ಕೇ ಅವರೇ ಸಾಟಿ. ಅವರ ಜೊತೆ ಅಭಿನಯ ಮಾಡಿರುವ ಅವರ ಚಿತ್ರಗಳಲ್ಲಿ ಕೆಲಸ…