Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ತಮಿಳುನಟ ಆರ್ಯ ಅಪ್ಪು ಬಗ್ಗೆ ಮಾತನಾಡಿದ್ದು ಕೇಳಿ ವೇದಿಕೆ ಮೇಲೆ ಕ’ಣ್ಣೀರು ಹಾಕಿದ ಅಶ್ವಿನಿ ಪುನೀತ್ ರಾಜಕುಮಾರ್.

Posted on June 30, 2022 By Kannada Trend News No Comments on ತಮಿಳುನಟ ಆರ್ಯ ಅಪ್ಪು ಬಗ್ಗೆ ಮಾತನಾಡಿದ್ದು ಕೇಳಿ ವೇದಿಕೆ ಮೇಲೆ ಕ’ಣ್ಣೀರು ಹಾಕಿದ ಅಶ್ವಿನಿ ಪುನೀತ್ ರಾಜಕುಮಾರ್.

ತಮಿಳುನ ಖಾಸಗಿ ಚಾನಲ್ ಒಂದು ಅಲ್ಲಿಯ ನಟರುಗಳಿಗೆ ಹಾಗೂ ಕಲಾವಿದರು ಗಳಿಗೆ ಅವಾರ್ಡ್ ಕೊಡುವ ಕಾರ್ಯಕ್ರಮ ಒಂದನ್ನು ಹಮ್ಮಿಕೊಂಡಿತ್ತು. ಇದರಲ್ಲಿ ವಿಶೇಷತೆ ಏನೆಂದರೆ ಕನ್ನಡದ ಅಭಿಮಾನಿಗಳ ದೇವರು ಪುನೀತ್ ರಾಜಕುಮಾರ್ ಅವರ ಪ್ರಶಸ್ತಿಯನ್ನು ಕೂಡ ಅವರ ಹೆಸರಿನಲ್ಲಿ ನಟರಿಗೆ ಕೊಡಲು ನಿರ್ಧರಿಸಲಾಗಿತ್ತು. ಮತ್ತು ಈ ಕಾರ್ಯಕ್ರಮಕ್ಕಾಗಿ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೂ ಕೂಡ ಆಹ್ವಾನಿಸಲಾಗಿತ್ತು. ಮತ್ತು ಯಾವಾಗಲೂ ಪುನೀತ್ ರಾಜಕುಮಾರ್ ಅವರ ಹಿಂದೆ ಬೆನ್ನೆಲುಬಾಗಿ ನಿಲ್ಲುತ್ತಿದ್ದ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಎಂದಿಗೂ ಕೂಡ ಕ್ಯಾಮೆರ ಮುಂದೆ ಮಾತನಾಡಲು ಹಾಗೂ ವೇದಿಕೆ ಮೇಲೆ ನಿಂತು ಮಾತನಾಡಲು ಇಚ್ಛೆ ಪಟ್ಟವರಲ್ಲ. ಆದರೂ ಕೂಡ ಪುನೀತ್ ರಾಜಕುಮಾರ್ ಅವರ ಅನುಪಸ್ಥಿತಿಯಲ್ಲಿ ಅವರ ಹೆಸರಿನ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಜವಾಬ್ದಾರಿ ಅಶ್ವಿನಿ ಅವರ ಹೆಗಲಿಗಿದೆ.

ಹೀಗಾಗಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಪುನೀತ್ ರಾಜಕುಮಾರ್ ಅವರಿಗೆ ಸಂಬಂಧಪಟ್ಟ ಎಲ್ಲ ಕಾರ್ಯಕ್ರಮಗಳನ್ನು ಕೂಡ ಭಾಗವಹಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ಅಶ್ವಿನಿ ಅವರಿಗೆ ಶಿವಣ್ಣ ಮತ್ತು ರಾಘಣ್ಣ ಸೇರಿದಂತೆ ಪುನೀತ್ ರಾಜಕುಮಾರ್ ಅವರ ಇಡೀ ಕುಟುಂಬವೇ ಅವರಿಗೆ ತುಂಬಾ ಸಪೋರ್ಟ್ ನೀಡುತ್ತಿದೆ. ಹಾಗಾಗಿ ಅಶ್ವಿನಿ ಅವರು ಪುನೀತ್ ರಾಜಕುಮಾರ್ ಅವರಿಗೆ ನೀಡುತ್ತಿರುವ ಎಲ್ಲಾ ಸನ್ಮಾನ ಹಾಗೂ ಅವಾರ್ಡ್ ಗಳನ್ನು ಅವರ ಪರವಾಗಿ ಕುಟುಂಬದ ಸಮ್ಮುಖದಲ್ಲಿ ಸ್ವೀಕರಿಸುತ್ತಿದ್ದಾರೆ. ಮೊನ್ನೆಯಷ್ಟೇ ಮೈಸೂರು ವಿಶ್ವವಿದ್ಯಾನಿಲಯವು ಪುನೀತ್ ರಾಜಕುಮಾರ್ ಅವರಿಗೆ ಗೌರವ ಡಾಕ್ಟರೇಟ್ ಕೂಡ ನೀಡಿತ್ತು. ಅದನ್ನು ಅಶ್ವಿನಿ ಅವರು ಸ್ವೀಕರಿಸಿದ್ದರು. ಮತ್ತು ಪುನೀತ್ ರಾಜಕುಮಾರ್ ಅವರ ಹೆಸರಿನಿಂದ ಯಾವುದೇ ಅವಾರ್ಡ್ ಕೊಟ್ಟರು ಆ ಕಾರ್ಯಕ್ರಮಗಳಿಗೆ ಅಶ್ವಿನಿ ಅವರನ್ನು ಆಹ್ವಾನಿಸಿದರೆ ತಪ್ಪದೆ ಅವುಗಳನ್ನು ನೀಡಲು ಭಾಗವಹಿಸುತ್ತಿದ್ದಾರೆ.

ಇತ್ತೀಚೆಗೆ ಕನ್ನಡದ ಕಿರುತೆರೆ ಡ್ಯಾನ್ಸಿಂಗ್ ರಿಯಾಲಿಟಿ ಶೋ ಅಲ್ಲಿ ಪುನೀತ್ ಅವರ ಸ್ಟ್ಯಾಚ್ಯು ಮಾಡಿಸಿ ಅದನ್ನೇ ಟ್ರೋಫಿ ಆಗಿ ಕೊಡಲು ಕಾರ್ಯಕ್ರಮ ಆಯೋಜಕರು ಯೋಜಿಸಿದ್ದರು. ಆ ಕಾರ್ಯಕ್ರಮದಲ್ಲೂ ಕೂಡ ಅಶ್ವಿನಿ ಅವರು ಕಾಣಿಸಿಕೊಂಡಿದ್ದರು. ಅದೇ ಅವರು ಮೊದಲ ಬಾರಿಗೆ ಕಿರುತೆರೆ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದು ಅದು ಕೂಡ ಅಪ್ಪು ಅವರ ಸಲುವಾಗಿ. ಈಗ ಅಪ್ಪು ಅವರ ಖ್ಯಾತಿಯು ಕರ್ನಾಟಕ ಮಾತ್ರವಲ್ಲದೆ ಭಾರತದ ಇತರ ರಾಜ್ಯಗಳು ಹಾಗೂ ವಿಶ್ವದಾದ್ಯಂತ ಪ್ರಚಲಿತವಾಗಿದೆ. ಹೀಗಾಗಿ ಅಪ್ಪು ಅವರ ವ್ಯಕ್ತಿತ್ವ, ಪ್ರತಿಭೆ ಮತ್ತು ಸಮಾಜ ಸೇವೆ ಬಗ್ಗೆ ಇಡೀ ಪ್ರಪಂಚಕ್ಕೆ ಜಗಜ್ಜಾಹಿರಾಗಿದೆ. ಅವರಿಗೆ ಗೌರವ ನೀಡುವ ಸಲುವಾಗಿ ಸಾಧ್ಯವಾದಷ್ಟು ಎಲ್ಲರೂ ಕೂಡ ಅಂತಹ ಅವಕಾಶಗಳಿಗಾಗಿ ಕಾಯುತ್ತಿದ್ದಾರೆ. ತಮಿಳುನಾಡಿನಲ್ಲೂ ಕೂಡ ತಮಿಳಿನ ಖಾಸಗಿ ಚಾನೆಲ್ ಒಂದು ಈ ರೀತಿಯ ಒಂದು ಕಾರ್ಯಕ್ರಮ ಏರ್ಪಡಿಸಿತ್ತು.

ಕಾರ್ಯಕ್ರಮದಲ್ಲಿ ಆರ್ಯ ಅವರಿಗೆ ಪುನೀತ್ ರಾಜಕುಮಾರ್ ಅವರ ಪ್ರಶಸ್ತಿಯನ್ನು ಪುನೀತ್ ಅವರ ಪತ್ನಿ ಅಶ್ವಿನಿ ಅವರ ಕೈಯಿಂದ ಕೊಡಿಸಲಾಯಿತು. ಅವಾರ್ಡ್ ಸ್ವೀಕರಿಸಿದ ಬಳಿಕ ಆರ್ಯ ಅವರು ಪುನೀತ್ ಅವರ ಬಗ್ಗೆ ಮಾತನಾಡಿ ಪುನೀತ್ ಅವರಿಗಿದ್ದ ಟ್ಯಾಲೆಂಟ್ ಎನರ್ಜಿ ಡಾನ್ಸ್ ಯಾವುದರಲ್ಲೂ ಕೂಡ ನಾನು 5% ಕೂಡ ಇಲ್ಲ, ಇಂಡಸ್ಟ್ರಿಯಲ್ಲಿ ಇರುವ ಎಲ್ಲಾ ಎನರ್ಜಿ ಅವರೊಬ್ಬರಲ್ಲಿತ್ತು. ಇದು ಇಡೀ ಕನ್ನಡ ಇಂಡಸ್ಟ್ರಿಗೆ ಸಲ್ಲಬೇಕಾದ ಗೌರವವಾಗಿದೆ ಮತ್ತು ಅಶ್ವಿನಿ ಪುನೀತ್ ರಾಜಕುಮಾರ್ ಅವರನ್ನು ಕೂಡ ನಾನು ಗೌರವಿಸುತ್ತೇನೆ. ಅವರು ತುಂಬಾ ಧೈರ್ಯವಂತ ಮಹಿಳೆ. ಅವರ ಕೈಯಿಂದ ಅವಾರ್ಡ್ ನನಗೆ ಸಿಗುತ್ತಿರುವುದು ನನ್ನ ಅದೃಷ್ಟ ಎಂದುಕೊಳ್ಳುತ್ತೇನೆ ಎಂದು ಮಾತನಾಡಿದ್ದಾರೆ. ಮತ್ತು ಇದನ್ನೇ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಅಶ್ವಿನಿ ಅವರ ಬಗ್ಗೆ ನಿಮ್ಮ ಅಭಿಪ್ರಾಯವೇನು.? ದಯವಿಟ್ಟು ಕಾಮೆಂಟ್ ಮುಖಾಂತರ ನಮಗೆ ತಿಳಿಸಿ ಈ ಮಾಹಿತಿಯನ್ನು ತಪ್ಪದೆ ಶೇರ್ ಮತ್ತು ಲೈಕ್ ಮಾಡಿ ಧನ್ಯವಾದಗಳು ಸ್ನೇಹಿತರೆ.

Cinema Updates Tags:Appu, Arya, Ashwini, Ayesha
WhatsApp Group Join Now
Telegram Group Join Now

Post navigation

Previous Post: ಸಂಜನಾ ಗಲ್ರಾನಿ ತಮ್ಮ ಮಗುವಿಗೆ ಇಟ್ಟ ಹೆಸರೇನು ಗೊತ್ತಾ.? ಈ ಹೆಸರಿನ ಅರ್ಥ ಕೇಳಿದರೆ ನಿಜಕ್ಕೂ ತಲೆ ತಿರುಗುತ್ತೆ.
Next Post: ವಿಕ್ರಾಂತ್ ರೋಣ ಸಿನಿಮಾದ ರಾ ರಾ ರಕ್ಕಮ್ಮ ಹಾಡಿಗೆ ವಿಷ್ಣುದಾದ ಹಾಗೂ ಜಯಮಾಲಿನಿಯ ಅದ್ಭುತ ಡ್ಯಾನ್ಸ್ ಪರ್ಫಾರ್ಮೆನ್ಸ್.!! ಈ ಹಾಡು ಹೇಗೆ ಸಿಂಕ್ ಮಾಡಿದ್ದಾರೆ ನೋಡಿ ನಕ್ಕು ನಕ್ಕು ಸುಸ್ತಾಗ್ತಿರ

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore