Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಈ ವಾಸ್ತು ನಿಯಮಗಳು ನಿಮ್ಮ ಬದುಕನ್ನೇ ಬದಲಾಯಿಸುತ್ತದೆ, ಪ್ರತಿಯೊಬ್ಬರಿಗೂ ಕೂಡ ಇದು ತಿಳಿದಿರಲೇಬೇಕು.!

Posted on April 6, 2024 By Kannada Trend News No Comments on ಈ ವಾಸ್ತು ನಿಯಮಗಳು ನಿಮ್ಮ ಬದುಕನ್ನೇ ಬದಲಾಯಿಸುತ್ತದೆ, ಪ್ರತಿಯೊಬ್ಬರಿಗೂ ಕೂಡ ಇದು ತಿಳಿದಿರಲೇಬೇಕು.!

 

ಇತ್ತೀಚಿನ ದಿನಗಳಲ್ಲಿ ವಾಸ್ತು ಎನ್ನುವ ವಿಚಾರದ ಬಗ್ಗೆ ಹೆಚ್ಚು ಕೇಳುತ್ತಿದ್ದೇವೆ ಆದರೆ ಇದು ಟ್ರೆಂಡಿಂಗ್ ವಿಷಯ ಅಲ್ಲ ಇದು ಬಹಳ ಪುರಾತನವಾದ ವಿಷಯವಾಗಿದೆ. ಹಿರಿಯರು ವಾಸ್ತು ಹೆಸರಿನಲ್ಲಿ ನಮಗೆ ವೈಜ್ಞಾನಿಕವಾಗಿ ಮತ್ತು ಸಾಂಪ್ರದಾಯಿಕವಾಗಿ ಅನುಕೂಲಕರವಾಗುವಂತಹ ಸಾಕಷ್ಟು ನಿಯಮಗಳನ್ನು ರೂಪಿಸಿದ್ದಾರೆ.

ಇವುಗಳನ್ನು ಪಾಲಿಸುವುದರಿಂದ ದೈಹಿಕ ಆರೋಗ್ಯ ಮಾನಸಿಕ ಆರೋಗ್ಯ ಮತ್ತು ಹಣಕಾಸಿನ ಪರಿಸ್ಥಿತಿಯು ಕೂಡ ಬಹಳ ಉತ್ತಮವಾಗುತ್ತದೆ. ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ಸಮೃದ್ಧಿ ಎಲ್ಲವನ್ನು ಕಾಣಬಹುದು ವಾಸ್ತು ಎನ್ನುವುದು ಬಹಳ ಸರಳ ವಿಚಾರವಾಗಿದೆ.

ಆದರೆ ಇದನ್ನು ನಮ್ಮ ದಿನನಿತ್ಯದ ಕಾರ್ಯಗಳಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡರು ಹೆಚ್ಚು ಲಾಭ ಮಾಡಿಕೊಡುವಂತಹ ವಿಷಯ. ಹಾಗಾಗಿ ಪ್ರತಿಯೊಬ್ಬ ಜನಸಾಮಾನ್ಯರಿಗೂ ಕೂಡ ತಿಳಿಯಲೇಬೇಕಾದ ಕೆಲವು ವಾಸ್ತು ನಿಯಮಗಳ ಬಗ್ಗೆ ಈ ಲೇಖನದಲ್ಲಿ ಮಾಹಿತಿ ಹಂಚಿಕೊಳ್ಳುತ್ತಿದ್ದೇವೆ.

ಈ ಸುದ್ದಿ ಓದಿ:- ಮಾರ್ಚ್ 9 ಯುಗಾದಿ ಹಬ್ಬದ ದಿನದಂದು ಈ ಒಂದು ತಪ್ಪು ಮಾಡಿದರೆ ವರ್ಷಪೂರ್ತಿ ಕಷ್ಟ

* ಧಾರ್ಮಿಕ ಶಾಸ್ತ್ರದ ಪ್ರಕಾರ ಒಬ್ಬ ವ್ಯಕ್ತಿಯು ಮಂಚದ ಮೇಲೆ ಕುಳಿತು ಊಟ ತಿನ್ನುವುದು ಒಳ್ಳೆಯದಲ್ಲ, ಅದು ದರಿದ್ರ ತರುತ್ತದೆ, ವಾಸ್ತು ಕೂಡ ಇದನ್ನು ದೋಷ ಎಂದು ಹೇಳುತ್ತದೆ. ನೆಲದ ಮೇಲೆ ಚಾಪೆ ಹಾಕಿಕೊಂಡು ಕುಳಿತುಕೊಂಡು ಊಟ ಮಾಡುವ ವ್ಯಕ್ತಿಯು ಆರೋಗ್ಯವಂತನಾಗಿರುತ್ತಾನೆ ಆತನ ಅಂಗಾಂಗಗಳ ರಕ್ತ ಸಂಚಾರದ ಮೇಲೆ ಇದು ಬಹಳ ಉತ್ತಮ ಪರಿಣಾಮಗಳನ್ನು ಬೀರುತ್ತದೆ. ಇದು ಕೂಡ ಒಂದು ರೀತಿಯ ವಾಸ್ತುವಿಗೆ ಸಂಬಂಧಿಸಿದ ವಿಷಯವೇ ಆಗಿದೆ.

*ಊಟ ಮಾಡುವ ಒಟ್ಟಿಗೆ ಮೂರು ರೊಟ್ಟಿ ಮೂರು ಚಪಾತಿ ಈ ರೀತಿ ಮೂರರ ಸಂಖ್ಯೆಯನ್ನು ಒಟ್ಟಿಗೆ ತೆಗೆದುಕೊಳ್ಳಬಾರದು ಅದು ಶುಭವಲ್ಲ ಎಂದು ತಿಳಿಸಲಾಗಿದೆ.
* ಆಹಾರವನ್ನು ಯಾವಾಗಲೂ ಪೂರ್ವ ಅಥವಾ ಉತ್ತರಕ್ಕೆ ಮುಖ ಮಾಡಿ ತೆಗೆದುಕೊಳ್ಳಬೇಕು ಇವೆರಡು ದೇವರ ನಿದರ್ಶನ ಮಾಡಿದ ದಿಕ್ಕುಗಳು ಎಂದು ತಿಳಿಸಲಾಗಿದೆ, ಪಶ್ಚಿಮಾಭಿಮುಖವಾಗಿ ಕುಳಿತು ಆಹಾರ ಸೇವನೆ ಮಾಡಿದರೆ ಆತನ ಋಣಭಾರ ಹೆಚ್ಚಾಗುತ್ತದೆ ಎಂದು ಹೇಳುತ್ತಾರೆ.

* ವಾಸ್ತು ಪ್ರಕಾರವಾಗಿ ಮನೆ ನೈರುತ್ಯ ದಿಕ್ಕಿನಲ್ಲಿ ಚಪ್ಪಲಿ ಹಾಗೂ ಬೂಟುಗಳನ್ನು ಇಡಬೇಕು. ಈ ದಿಕ್ಕು ಭೂಮಿಯ ಅಂಶಕ್ಕೆ ಸಂಬಂಧಿಸಿದೆ ಹಾಗಾಗಿ ಇಲ್ಲಿ ಇಡುವುದು ಸೂಕ್ತ ಎಂದು ನಿರ್ಧರಿಸಲಾಗಿದೆ. ಆದರೆ ಯಾವುದೇ ಕಾರಣಕ್ಕೂ ಮನೆಯ ಈಶಾನ್ಯ ದಿಕ್ಕಿನಲ್ಲಿ ಈ ರೀತಿ ಚಪ್ಪಲಿ ಹಾಗೂ ಶೂಗಳನ್ನು ಬಿಡಬಾರದು. ಈ ದಿಕ್ಕಿನಲ್ಲಿ ಪೂಜಾ ಗೃಹ, ಧ್ಯಾನ ಮಂದಿರ ಇತ್ಯಾದಿಗಳನ್ನು ಮಾತ್ರ ಕಟ್ಟಬೇಕು. ಹಾಗೆ ಈ ಚಪ್ಪಲಿ ಬಿಡುವ ಅಥವಾ ಶೂ ಇಡುವ ರ್ಯಾಕ್ ಗಳನ್ನು ಪೂಜಾ ಮನೆ / ಅಡುಗೆಮನೆ ಪಕ್ಕ ಇಡಲೇಬಾರದು ಇದರಿಂದ ಕೂಡ ವಾಸ್ತುದೋಷ ಉಂಟಾಗುತ್ತದೆ ಎಂದು ಹೇಳಲಾಗಿದೆ.

ಈ ಸುದ್ದಿ ಓದಿ:-ಈ 5 ರಾಶಿಯ ಹೆಣ್ಣು ಮಕ್ಕಳು, ಗಂಡನ ಮನೆಯ ಅದೃಷ್ಟ ದೇವತೆಗಳಂತೆ.!

* ತುಳಸಿ ಗಿಡಕ್ಕೆ ಆಯುರ್ವೇದ, ಧಾರ್ಮಿಕ ಶಾಸ್ತ್ರ, ವಾಸ್ತು ಶಾಸ್ತ್ರ ‌ ಎಲ್ಲದರಲ್ಲೂ ಕೂಡ ಬಹಳ ಪವಿತ್ರವಾದ ಸ್ಥಾನ ನೀಡಲಾಗಿದೆ. ಈ ತುಳಸಿ ಗಿಡವನ್ನು ಮನೆ ಮುಂದೆ ನಿಟ್ಟು ಪೋಷಿಸುವುದರಿಂದ ಎಲ್ಲಾ ರೀತಿಯ ಗೃಹ ದೋಷಗಳನ್ನು ನಿವಾರಣೆ ಆಗಲಿದೆ.

* ಯಾವುದೇ ಕಾರಣಕ್ಕೂ ಅರಳಿ ಗಿಡವನ್ನು ಮನೆ ಅಕ್ಕ ಪಕ್ಕ ನೆಡಬಾರದು. ಅದರ ನೆರಳು ಕೂಡ ಮನೆ ಮೇಲೆ ಬೀಳಬಾರದು ಒಂದು ವೇಳೆ ಗೋಡೆಯಲ್ಲಿ ಅರಳಿ ಗಿಡ ಬರುತ್ತಿದ್ದರೆ ಅದನ್ನು ವಿಧಿ ವಿಧಾನದ ಮೂಲಕ ತೆರವುಗೊಳಿಸಿ ಬೇರೆ ಕಡೆ ನೆಡಬೇಕು. ಇದು ಮನೆಯಲ್ಲಿ ಮ’ನ’ಸ್ತಾ’ಪ, ಕಿ’ರಿ’ಕಿ’ರಿ ಹೆಚ್ಚಾಗುವಂತೆ ಮಾಡಿ ವಾಸ್ತುದೋಷವನ್ನು ಹೆಚ್ಚಿಸುತ್ತದೆ ಎಂದು ಹೇಳುತ್ತಾರೆ. ಈ ವಿಚಾರದ ಬಗ್ಗೆ ಇನ್ನಷ್ಟು ಉಪಯುಕ್ತ ಮಾಹಿತಿ ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.

Useful Information
WhatsApp Group Join Now
Telegram Group Join Now

Post navigation

Previous Post: ಮಾರ್ಚ್ 9 ಯುಗಾದಿ ಹಬ್ಬದ ದಿನದಂದು ಈ ಒಂದು ತಪ್ಪು ಮಾಡಿದರೆ ವರ್ಷಪೂರ್ತಿ ಕಷ್ಟ
Next Post: ಯುಗಾದಿ ಹಬ್ಬದ ದಿನದಂದು ಸಿಂಪಲ್ಲಾಗಿ ದೇವರ ಮುಂದೆ ಕೈಮುಗಿದು ಹೀಗೆ ಕೇಳಿದರೆ ಸಾಕು, ಈ ವರ್ಷವೆಲ್ಲಾ ಮುಟ್ಟಿದ್ದು ಬಂಗಾರವಾಗುತ್ತದೆ.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore