ನಮ್ಮಲ್ಲಿ ಕೆಲವರು ಎಷ್ಟೋ ಜನ ಕೆಲವೊಂದು ಸಮಯದಲ್ಲಿ ಹಣ ಕಾಸಿನ ಅನುಕೂಲ ಇಲ್ಲದೆ ಇದ್ದಂತಹ ಸಮಯದಲ್ಲಿ ಬೇರೆಯವರಿಂದ ಹಣವನ್ನು ಸಾಲದ ರೂಪವಾಗಿ ತೆಗೆದುಕೊಂಡಿರುತ್ತಾರೆ. ಆದರೆ ಅವರು ಎಷ್ಟೇ ಪ್ರಯತ್ನ ಪಟ್ಟರು ಕೂಡ ಆ ಸಾಲವನ್ನು ಅವರು ತೀರಿಸಲು ಸಾಧ್ಯವಾಗುವುದಿಲ್ಲ.
ಹೀಗೆ ಹಲವಾರು ರೀತಿಯ ತೊಂದರೆಗಳನ್ನು ಅವರು ತಮ್ಮ ಜೀವನದಲ್ಲಿ ಎದುರಿಸುತ್ತಿರುತ್ತಾರೆ. ಅದು ಕೇವಲ ಹಣ ಕಾಸಿನ ವಿಚಾರವಾಗಿ ಅಲ್ಲದೆ ಇನ್ನು ಹಲವಾರು ರೀತಿಯ ಸಮಸ್ಯೆಗಳನ್ನು ತಮ್ಮ ಜೀವನದಲ್ಲಿ ಎದುರಿಸುತ್ತಿರುತ್ತಾರೆ. ಕೆಲವೊಂದಷ್ಟು ಜನರಿಗೆ ತಮ್ಮ ವ್ಯಾಪಾರ ವ್ಯವಹಾರದಲ್ಲಿ ನಷ್ಟ ಉಂಟಾಗುವಂತದ್ದು ಇನ್ನು ಕೆಲವೊಂದಷ್ಟು ಜನರಿಗೆ ಮನೆಯಲ್ಲಿ ಯಾವುದೇ ರೀತಿಯ ನೆಮ್ಮದಿ ಇಲ್ಲದೆ ಇರುವಂತದ್ದು.
ಪತಿ ಪತ್ನಿಯರ ನಡುವೆ ಮನಸ್ತಾಪ ಉಂಟಾಗುವುದು ನಿಮ್ಮ ಮಕ್ಕಳ ವಿದ್ಯಾಭ್ಯಾಸದಲ್ಲಿ ತೊಂದರೆ ಉಂಟಾಗುವುದು. ನೀವು ಯಾವುದೇ ವ್ಯಾಪಾರ ವ್ಯವಹಾರ ಮಾಡಿದರು ಕೂಡ ಅದರಲ್ಲಿ ಯಾವುದೇ ರೀತಿಯ ಹೆಚ್ಚಿನ ಯಶಸ್ಸು ಕಾಣದೆ ಇರುವುದು. ಹೀಗೆ ಹಲವಾರು ರೀತಿಯ ಸಮ ಸ್ಯೆಗಳನ್ನು ಅನುಭವಿಸುತ್ತಿರುತ್ತೀರಿ ಆದರೆ ಈ ಎಲ್ಲಾ ಸಮಸ್ಯೆಗಳನ್ನು ದೂರ ಮಾಡಿಕೊಳ್ಳುವುದಕ್ಕೆ ಕೆಲವೊಂದಷ್ಟು ಜನ ಹಲವಾರು ದೇವಸ್ಥಾನಗಳಿಗೆ ಹೋಗಿ ಎಲ್ಲ ರೀತಿಯ ಪೂಜೆ ಮಾಡಿಸುತ್ತಾರೆ.
ಆದರೂ ಕೂಡ ಕೆಲವೊಂದು ಸಂದರ್ಭದಲ್ಲಿ ನೀವು ಎಷ್ಟೇ ಪೂಜೆ ಮಾಡಿದರು ಅದಕ್ಕೆ ಪರಿಹಾರ ಎನ್ನುವುದು ಸಿಗುವುದಿಲ್ಲ. ಹೌದು ಅವರು ಆ ಸಮಯಕ್ಕೆ ಎದುರಾಗುವಂತಹ ಸಂಕಷ್ಟಗಳನ್ನು ಎದುರಿಸ ಲೇಬೇಕಾಗುತ್ತದೆ ಹಾಗಾದರೆ ಈ ದಿನ ನಿಮ್ಮ ಜೀವನದಲ್ಲಿ ಎದುರಾಗು ವಂತಹ ಇಂತಹ ಹಲವಾರು ರೀತಿಯ ಸಮಸ್ಯೆಗಳನ್ನು ಹೇಗೆ ದೂರ ಮಾಡಿಕೊಳ್ಳುವುದು.
ಇದಕ್ಕೆ ನೀವು ಯಾವ ಒಂದು ದೇವರ ಆರಾಧನೆಯನ್ನು ಮಾಡಬೇಕು ಹಾಗೂ ಯಾವ ಬೀಜಾಕ್ಷರಿ ಮಂತ್ರವನ್ನು ಪಠಿಸಬೇಕು, ಜೊತೆಗೆ ಯಾವ ಒಂದು ಅದೃಷ್ಟ ಸಂಖ್ಯೆಗಳನ್ನು ಯಾವ ಬಣ್ಣದಿಂದ ಬರೆದು ನೀವು ಹೇಳಬೇಕಾಗುತ್ತದೆ. ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.
ಹಾಗಾದರೆ ಮೊದಲು ಯಾವ ದೇವಿಯ ಆರಾಧನೆಯನ್ನು ಮಾಡಬೇಕಾ ಗುತ್ತದೆ ಎಂದು ನೋಡುವುದಾದರೆ ಶ್ರೀ ವಾರಹಿ ದೇವಿಯ ಆರಾಧನೆ ಯನ್ನು ಮಾಡಬೇಕಾಗುತ್ತದೆ ಹೌದು. ಪ್ರತಿನಿತ್ಯ ನೀವು ವಾರಾಹಿ ದೇವಿಯ ಮಂತ್ರವನ್ನು ಹೇಳುವುದರ ಮೂಲಕ ಹಾಗೂ ವರಾಹಿ ದೇವಿಯ ಪೂಜೆಯನ್ನು ಮಾಡುವುದರ ಮೂಲಕ ನೀವು ನಿಮ್ಮ ಎಲ್ಲಾ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದಾಗಿದೆ.
ಹಾಗಾದರೆ ಆ ಒಂದು ಮಂತ್ರ ಯಾವುದು ಹಾಗೂ ಆ ಒಂದು ಸಂಖ್ಯೆ ಯಾವುದು ಎನ್ನುವುದನ್ನು ಈಗ ತಿಳಿಯೋಣ. “ಶ್ರೀಂ 528” ಎನ್ನುವ ಈ ಮಂತ್ರ ಹಾಗೂ ಸಂಖ್ಯೆಯನ್ನು ನೀವು ಒಂದು ಬಿಳಿ ಹಾಳೆಯ ಮೇಲೆ ಕೆಂಪು ಬಣ್ಣದ ಪೆನ್ ನಿಂದ ಬರೆಯಬೇಕು ಇದನ್ನು ನೀವು ಹೇಳುತ್ತಾ ವಾರಾಹಿ ದೇವಿಯನ್ನು ಆರಾಧನೆ ಮಾಡಬೇಕು.
ಪ್ರತಿನಿತ್ಯ ನೀವು ಪೂಜೆ ಮಾಡುವಂತಹ ಸಮಯದಲ್ಲಿ ಇದನ್ನು ಹೇಳುತ್ತಾ ಬರುವುದರಿಂದ ನಿಮ್ಮ ಜೀವನದಲ್ಲಿ ಬರುವಂತಹ ಎಲ್ಲಾ ಕಷ್ಟ ಸಮಸ್ಯೆಗಳು ಸಹ ಸಂಪೂರ್ಣವಾಗಿ ದೂರವಾಗುತ್ತದೆ. ಅಷ್ಟಕ್ಕೂ ಈ ಸಂಖ್ಯೆಗೂ ಇದಕ್ಕೂ ಏನು ಸಂಬಂಧ ಇದೆ ಎಂದು ನೀವು ಕೇಳಬಹುದು.
ಆದರೆ ಈ ಸಂಖ್ಯೆಯನ್ನು ಕೂಡಿದರೆ ನಿಮಗೆ 6 ಬರುತ್ತದೆ. ಅದು ನಿಮ್ಮ ಶುಕ್ರ ಭಗವಾನರ ಸಂಕೇತವಾಗಿದ್ದು ಶುಕ್ರದೇವ ನಮ್ಮ ಜೀವನದಲ್ಲಿ ಎದುರಾಗುವಂತಹ ಎಲ್ಲ ಸಮಸ್ಯೆಗಳನ್ನು ಸಹ ದೂರ ಮಾಡುವಂತಹ ಶಕ್ತಿ ಹೊಂದಿದ್ದಾನೆ. ಆದ್ದರಿಂದ ಈ ಸಂಖ್ಯೆಗಳನ್ನು ಬರೆಯುವುದರ ಮೂಲಕ ನೀವು ಪ್ರತಿನಿತ್ಯ ಪೂಜೆಯನ್ನು ಮಾಡಬೇಕಾಗುತ್ತದೆ.