Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ರಿಯಾಲಿಟಿ ಶೋ ಮುಗಿಯಿತು ಈಗ ಜಾಹೀರಾತಿನಲ್ಲಿ ಕಾಣಿಸಿಕೊಂಡ ವಂಶಿಕಾ ಮಗಳನ್ನು ಮುಂದಿಟ್ಟುಕೊಂಡು ಹಣ ಸಂಪಾದನೆ ಮಾಡುತ್ತಿದ್ದಾರ ಮಾಸ್ಟರ್ ಆನಂದ್.?

Posted on July 24, 2022 By Kannada Trend News No Comments on ರಿಯಾಲಿಟಿ ಶೋ ಮುಗಿಯಿತು ಈಗ ಜಾಹೀರಾತಿನಲ್ಲಿ ಕಾಣಿಸಿಕೊಂಡ ವಂಶಿಕಾ ಮಗಳನ್ನು ಮುಂದಿಟ್ಟುಕೊಂಡು ಹಣ ಸಂಪಾದನೆ ಮಾಡುತ್ತಿದ್ದಾರ ಮಾಸ್ಟರ್ ಆನಂದ್.?

ವಂಶಿಕಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ನನ್ನಮ್ಮ ಸೂಪರ್ ಸ್ಟಾರ್ ಎಂಬ ಕಾರ್ಯಕ್ರಮದ ಮೂಲಕ ಕರ್ನಾಟಕದ ಅತ್ಯಂತ ಪ್ರಖ್ಯಾತಿc ಪಡೆದಂತಹ ವಂಶಿಕಾ ಎಂದರೆ ಎಲ್ಲರೂ ಕೂಡ ಬಹಳ ಇಷ್ಟ ಪಡುತ್ತಾರೆ. ಆಕೆಯ ನಟನೆ ಆಕೆಯ ಅಭಿನಯ ಆಕೆಯ ಮಾತು ಆಕೆಯ ಡಾನ್ಸ್ ಎಲ್ಲವನ್ನು ಕೂಡ ಬಹಳಷ್ಟು ಇಷ್ಟಪಡುತ್ತಾರೆ. ವಂಶಿಕಾ ಇದೇ ಮೊದಲ ಬಾರಿಗೆ ನನ್ನ ಸೂಪರ್ ಸ್ಟಾರ್ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿದಳು. ತಾನು ಭಾಗವಹಿಸಿದ ಒಂದೇ ಒಂದು ಕಾರ್ಯಕ್ರಮದಲ್ಲಿ ಇಷ್ಟು ಜನಪ್ರಿಯತೆ ಗಳಿಸುತ್ತಾಳೆ ಅಂತ ಯಾರಿಗೂ ಕೂಡ ತಿಳಿದಿರಲಿಲ್ಲ ಆದರೆ ತನ್ನ ತಂದೆಯಂತೆ ನಟನೆಗೂ ಸೈ ಎಂದು ತೋರಿಸಿಕೊಟ್ಟಿದ್ದಾಳೆ. ನನಮ್ಮ ಸೂಪರ್ ಸ್ಟಾರ್ ಎಂಬ ಕಾರ್ಯಕ್ರಮ ಮುಗಿದ ನಂತರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮತ್ತೊಂದು ಕಾರ್ಯಕ್ರಮ ಪ್ರಾರಂಭವಾಗುತ್ತದೆ. ಗಿಚ್ಚಿ ಗಿಲಿ ಗಿಲಿ ಎಂಬ ಕಾರ್ಯಕ್ರಮದಲ್ಲೂ ಕೂಡ ನಟಿ ವಂಶಿಕಾ ಅಭಿನಯಿಸುತ್ತಾಳೆ ಆಕೆಯ ಡೈಲಾಗ್ ಡೆಲಿವರಿ ಕೇಳಿ ಅದೆಷ್ಟು ಬಾರಿ ಜಡ್ಜಸ್ ಗಳು ಕೂಡ ಮಾರು ಹೋಗಿದ್ದಾರೆ.

ಅಷ್ಟು ಅಚ್ಚುಕಟ್ಟಾಗಿ ವಂಶಿಕಾ ಡೈಲಾಗ್ ಗಳನ್ನು ಹೇಳುತ್ತಾಳೆ ವಂಶಿಕಾ ಬರುತ್ತಿದ್ದಾಳೆ ಅಂದರೆ ಮುಗೀತು, ಕರ್ನಾಟಕದದ್ಯಂತ ಎಲ್ಲರೂ ಕೂಡ ಟಿವಿ ಮುಂದೆ ಕುಳಿತುಕೊಳ್ಳುತ್ತಾರೆ ಅಷ್ಟು ಜನಪ್ರಿಯತೆಯನ್ನು ಈಕೆ ಗಳಿಸಿಕೊಂಡಿದ್ದಾಳೆ. ಇವೆಲ್ಲವೂ ಒಂದು ಕಡೆಯಾದರೆ ಇದೀಗ ನಟಿ ವಂಶಿಕ ಅವರು ವಿಭಿನ್ನವಾಗಿ ಮತ್ತೊಂದು ಸಾಹಸಕ್ಕೆ ಕೈ ಹಾಕಿದ್ದಾರೆ ಹೌದು, ಅದೇನೆಂದರೆ ಇದೀಗ ನಟಿ ವಂಶಿಕ ಅವರು ವೀಕ್ಸ್ ಜಾಹಿರಾತು ಒಂದರಲ್ಲಿ ಕಾಣಿಸಿಕೊಂಡಿದ್ದಾರೆ. ಎರಡು ರಿಯಾಲಿಟಿ ಶೋ ಗಳಲ್ಲಿ ಭಾಗವಹಿಸಿದ ನಂತರ ವಂಶಿಕಾಗೆ ಈಗ ಎಲ್ಲಿಲ್ಲದ ಬೇಡಿಕೆ ಇದೆ ಕೇವಲ ರಿಯಾಲಿಟಿ ಶೋಗಳಲ್ಲಿ ಮಾತ್ರವಲ್ಲದೇ ಜಾಹಿರಾತಿನಲ್ಲಿಯೂ ಕೂಡ ಸಿಕ್ಕಾಪಟ್ಟೆ ಬೇಡಿಕೆಯ ಬಗ್ಗೆ ಗಳಿಸಿಕೊಂಡಿದ್ದಾರೆ. ಈ ಕಾರಣಕ್ಕಾಗಿಯೇ ಸದ್ಯಕ್ಕೆ ವಿಕ್ಸ್ ಅಡ್ವಟೈಸ್ಮೆಂಟ್ ನಲ್ಲೂ ಕೂಡ ಕಾಣಿಸಿಕೊಂಡಿದ್ದಾರೆ ಈ ಜಾಹೀರಾತಿನಲ್ಲಿ ಕೇವಲ ವಂಶಿಕ ಮಾತ್ರವಲ್ಲದೆ ಅವರ ತಾಯಿ ಯಶಸ್ವಿನಿ ಹಾಗೂ ತಂದೆ ಮಾಸ್ಟರ್ ಆನಂದ್ ಮೂವರು ಕೂಡ ಕಾಣಿಸಿಕೊಂಡಿದ್ದಾರೆ. ಈ ಜಾಹೀರಾತು ಈಗಾಗಲೇ ಪ್ರಸಾರಗೊಳ್ಳುತ್ತಿದೆ ಇದನ್ನು ನೋಡಿದಂತಹ ವಂಶಿಕ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

View this post on Instagram

A post shared by Master Anand (@iam_masteranand)

ಆದರೆ ಕೆಲವೊಂದು ನೆಟ್ಟಗರು ಮಾತ್ರ ವಂಶಿಕಾಳನ್ನು ಮುಂದಿಟ್ಟುಕೊಂಡು ಮಾಸ್ಟರ್ ಆನಂದ್ ಹಣವನ್ನು ಸಂಪಾದನೆ ಮಾಡುತ್ತಿದ್ದಾನೆ ಎಂದು ಕಿಡಿ ಕಾರಿದ್ದಾರೆ. ಹೌದು ವಂಶಿಕಲಾ ವಿದ್ಯಾಭ್ಯಾಸದ ಬಗ್ಗೆ ಗಮನ ವಹಿಸುತ್ತಿಲ್ಲ ಆಕೆಯನ್ನು ಕೇವಲ ಮನರಂಜನ ದೃಷ್ಟಿಯಿಂದ ಮಾತ್ರ ಬಳಕೆ ಮಾಡಿಕೊಳ್ಳುತ್ತಿದ್ದಾರೆ ರಿಯಾಲಿಟಿ ಶೋಗಳು ಮುಕ್ತಾಯವಾಯಿತು. ಈಗ ಜಾಹಿರಾತಿನಲ್ಲಿ ಹಣವನ್ನು ಸಂಪಾದನೆ ಮಾಡುತ್ತಿದ್ದರೆ ಮುಂದೊಂದು ದಿನ ಧಾರವಾಹಿ ಸಿನಿಮಾ ಈ ರೀತಿ ಸಂಪೂರ್ಣವಾಗಿ ಆಕೆಯನ್ನು ಒಂದು ಎಂಟರ್ಟೈನ್ಮೆಂಟ್ ಕಾರ್ಖಾನೆಯನ್ನಾಗಿ ಮಾರ್ಪಾಡು ಮಾಡಬಹುದೆಂದು ನಟಿಗಳು ಆ.ಕ್ರೋ.ಶ.ವನ್ನು ವ್ಯಕ್ತಪಡಿಸಿದ್ದಾರೆ. ಮಕ್ಕಳು ಮನರಂಜನೆ ವಿದ್ಯಾಭ್ಯಾಸ ಕ್ರೀಡೆ ಎಲ್ಲದರಲ್ಲೂ ಕೂಡ ಮುಂದಿರಬೇಕು ಆದರೆ ಅದ್ಯಾಕೋ ವಂಶಿಕಾ ಅವರು ಮಾತ್ರ ಸಂಪೂರ್ಣವಾಗಿ ತಮ್ಮ ಮನರಂಜನ ಕ್ಷೇತ್ರದಲ್ಲಿಯೇ ಹೆಚ್ಚಾಗಿ ಗುರುತಿಸಿಕೊಳ್ಳುತ್ತಿದ್ದಾರೆ ಎಂಬುದು ನೆಟ್ಟಿಗರ ಅಭಿಪ್ರಾಯವಾಗಿದೆ.

ಆದರೆ ಇದ್ಯಾವುದೇ ಟೀಕೆಗಳಿಗೂ ಕೂಡ ಮಾಸ್ಟರ್ ಆನಂದಾಗಲಿ ಯಶಸ್ವಿನಿಯವರಾಗಲಿ ತಲೆ ಕೆಡಿಸಿಕೊಂಡಿಲ್ಲ. ನಾವು ಮಗಳ ಪ್ರತಿಭೆಗೆ ಬೆಲೆ ಕೊಡುತ್ತೇವೆ ಹೊರತು ಆಕೆಯ ಸಂಪಾದನೆಗೆ ನಾವು ಎಂದಿಗೂ ಕೂಡ ಆಸೆ ಪಟ್ಟಿಲ್ಲ ದೇವರು ನಮಗೆ ಬೇಕಾದಷ್ಟು ಹಣ ಆಸ್ತಿ ಅಂತಸ್ತು ನೀಡಿದ್ದಾನೆ ಮಗಳ ಹಣದಿಂದ ಬದುಕಬೇಕಾದಂತಹ ಅನಿವಾರ್ಯ ನಮಗೇನು ಇಲ್ಲ ಎಂದು ನೆಟ್ಟಿಗರಿಗೆ ತಿರುಗೇಟು ನೀಡಿದ್ದಾರೆ. ಆದರೂ ವಂಶಿಕ ಕೇವಲ ಈ ರೀತಿ ರಿಯಾಲಿಟಿ ಶೋ ಜಾಹೀರಾತು ಕಿರುತೆರೆಗೆ ಸಂಬಂಧಪಟ್ಟಂತಹ ವೇದಿಕೆಗಳಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದು ಮಕ್ಕಳ ಬೆಳವಣಿಗೆ ಮೇಲೆ ಹೆಚ್ಚು ಪರಿಣಾಮವನ್ನು ಬೀರಬಹುದು ಎಂಬುದು ನಮ್ಮ ಅಭಿಪ್ರಾಯ. ವಂಶಿಕಳಾ ಈ ನಿಲುವಿನ ಬಗ್ಗೆ ನಿಮ್ಮ ಅಭಿಪ್ರಾಯವೇನು.? ಮಾಸ್ಟರ್ ಆನಂದ್ ಮಾಡುತ್ತಿರುವುದು ತಪ್ಪ ಅಥವಾ ಸರಿಯಾಗಿ ಎಂಬುದನ್ನು ಕಾಮೆಂಟ್ ಮುಖಾಂತರ ನಮಗೆ ತಿಳಿಸಿ ಈ ಮಾಹಿತಿಯನ್ನು ಶೇರ್ ಮಾಡಿ ಮತ್ತು ಲೈಕ್ ಮಾಡಿ ಧನ್ಯವಾದಗಳು ಸ್ನೇಹಿತರೆ.

View this post on Instagram

A post shared by Master Anand (@iam_masteranand)

Entertainment Tags:Master Anand, Vamshika Anjani Kashyap, Yashashwini Anand
WhatsApp Group Join Now
Telegram Group Join Now

Post navigation

Previous Post: ಅತಿ ಹೆಚ್ಚು ದಾನ ಧರ್ಮ ಮಾಡಿದ ನಟ ಯಾರು ಗೊತ್ತಾ.? ಎನ್.ಜಿ.ಓ ಬಹಿರಂಗ ಪಡಿಸಿದ ಈ ನಿಖರ ಮಾಹಿತಿ ನೋಡಿ ಪಕ್ಕಾ ಶಾ-ಕ್ ಆಗ್ತೀರಾ
Next Post: ಬೆಳ್ಳಂಬೆಳಿಗ್ಗೆ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ಅಭಿಮಾನಿಗಳಿಗೆ ಸಂತಸ ಸುದ್ದಿ ನೀಡಿದ ಡಿ ಬಾಸ್.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore