ದೇಹದ ತೂಕ ಕಡಿಮೆ ಆಗುವುದು ಹಾಗೂ ಹೆಚ್ಚಾಗುವುದು ನೈಸರ್ಗಿಕವಾಗಿ ಆಗಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಹೊರಗಿನಿಂದ ನ್ಯೂಟ್ರಿಷನ್ ಸಪ್ಲಿಮೆಂಟ್ಗಳು ಟಾನಿಕ್ ಟ್ಯಾಬ್ಲೆಟ್ ಗಳು ಇವುಗಳ ಮೂಲಕ ಅವೈಜ್ಞಾನಿಕವಾಗಿ ಇದ್ದಕ್ಕಿದ್ದಂತೆ ದಪ್ಪ ಆಗುವುದು ಹಾಗೂ ಅತಿಯಾದ ವ್ಯಾಯಾಮ ಮಾಡಿ ಮತ್ತು ತೂಕ ಕಡಿಮೆ ಆಗುವುದಕ್ಕೂ ಕೂಡ ಔಷಧಿಗಳನ್ನು ಸೇವಿಸಿ ಇದಕ್ಕಿದ್ದಂತೆ ಸಣ್ಣ ಆಗುವುದು ಮಾಡುತ್ತಿದ್ದಾರೆ.
ಆದರೆ ಇದು ಆರೋಗ್ಯದ ಮೇಲೆ ಬಹಳ ಗಂಭೀರವಾದ ಪರಿಣಾಮ ಬೀರುತ್ತದೆ. ಇದು ಸರಿಯಾದ ಪದ್ಧತಿ ಅಲ್ಲ, ಈ ರೀತಿ ಬಹಳ ಸಣ್ಣ ಇರುವವರು ದಪ್ಪಗಾಗುವ ಅವಶ್ಯಕತೆ ಇದ್ದರೆ ಅಥವಾ ದಪ್ಪಗಾಗಬೇಕು ಎನ್ನುವ ಇಚ್ಛೆ ಇದ್ದರೆ ನಾವು ತಿನ್ನುವ ಆಹಾರದ ಮೂಲಕವೇ ಅದನ್ನ ಹೆಚ್ಚಿಗೆ ಮಾಡಿಕೊಳ್ಳಬೇಕು. ಹಾಗಾಗಿ ಈ ಅಂಕಣದಲ್ಲಿ ಹೇಗೆ ದೇಹದ ತೂಕವನ್ನು ಹೆಚ್ಚು ಮಾಡಿಕೊಳ್ಳಬಹುದು ಎನ್ನುವುದರ ಬಗ್ಗೆ ಟಿಪ್ಸ್ ಹಾಗೂ ಟ್ರಿಕ್ಸ್ ಗಳನ್ನು ಹೇಳಿಕೊಡುತ್ತಿದ್ದೇವೆ.
ದೇಹದ ತೂಕ ದಪ್ಪ ಆಗಬೇಕು ಎಂದರೆ ಅದು ಬರಿ ದೇಹಕ್ಕೆ ಸಂಬಂಧಿಸಿದ್ದು ಮಾತ್ರವಲ್ಲದೇ ಮಾನಸಿಕವಾಗಿ ಕೂಡ ಆರೋಗ್ಯವಾಗಿದ್ದಾಗ ಮಾತ್ರ ಇದು ಸಾಧ್ಯವಾಗುತ್ತದೆ. ಯಾವಾಗಲೂ ಚಿಂತೆಯಲ್ಲಿರುವ ವ್ಯಕ್ತಿ ದಪ್ಪಗಾಗಲು ಸಾಧ್ಯವಿಲ್ಲ. ಹಾಗಾಗಿ ಜೀವನದಲ್ಲಿ ಬರುವ ದುಃ’ಖ, ನೋ’ವು ಸಮಸ್ಯೆ ಇವುಗಳನ್ನು ಯಾವಾಗಲೂ ಮನಸ್ಸಿನಲ್ಲಿ ತುಂಬಿಕೊಂಡು ಇರಬಾರದು.
ಈ ರೀತಿ ಇದ್ದಾಗ ಎಷ್ಟೇ ತಿಂದರೂ ಕೂಡ ಅದು ದೇಹಕ್ಕೆ ಧಕ್ಕುವುದಿಲ್ಲ. ಹಾಗಾಗಿ ಮೊದಲು ಯಾವ ಸಮಸ್ಯೆಯಿಂದ ಮನಸ್ಸಿಗೆ ಚಿಂತೆಯಾಗಿದೆ ಅದನ್ನು ಪರಿಹರಿಸಿಕೊಳ್ಳಬೇಕು, ನಾವು ನಗುನಗುತ್ತಾ ಸಂತೋಷವಾಗಿದ್ದಾಗ ಆರೋಗ್ಯವಾಗಿ ಇರುತ್ತೇವೆ ಮತ್ತು ನಮ್ಮ ದೇಹದ ತೂಕವು ಸಮತೋಲನದಲ್ಲಿರುತ್ತದೆ.
ಇದನ್ನು ಹೊರತುಪಡಿಸಿ ಆಹಾರ ಪದಾರ್ಥಗಳ ಬಗ್ಗೆ ಹೇಳುವುದಾದರೆ ತುಪ್ಪವು ದೇಹದ ತೂಕ ಹೆಚ್ಚಿಸುವುದಕ್ಕೆ ಮತ್ತು ದೇಹವನ್ನು ಆರೋಗ್ಯವಾಗಿ ಇಡುವುದಕ್ಕೆ ಉತ್ತಮವಾದ ಒಂದು ಔಷಧಿಯಾಗಿದೆ ಎಂದು ಹೇಳಬಹುದು. ಹಾಗಾಗಿ ತಪ್ಪದೆ ಪ್ರತಿದಿನವೂ ಸಾಧ್ಯವಾದರೆ ಮೂರು ಹೊತ್ತು ಕೂಡ ತುಪ್ಪವನ್ನು ಊಟಕ್ಕೆ ಹಾಕಿಕೊಂಡು ಸೇವಿಸಬೇಕು.
ಜೊತೆಗೆ ಈಗಿನ ಕಾಲದಲ್ಲಿ ತರಕಾರಿ, ಸೊಪ್ಪು, ಕಾಳುಗಳು ಇವುಗಳನ್ನು ತಿನ್ನುವುದೇ ಜನರು ಮರೆತಿದ್ದಾರೆ. ಈ ತರಕಾರಿ ಬೇಡ ಆ ಸೊಪ್ಪು ಬೇಡ ಈ ರೀತಿ ಉತ್ತಮವಾದದ್ದನ್ನು ಬಿಟ್ಟು ಐಸ್ ಕ್ರೀಮ್ , ಚಾಕಲೇಟ್ ಕಾರ್ಬೋನಿಕ್ ಡ್ರಿಂಕ್ಗಳು ಈ ರೀತಿ ಬೇಡದ್ದನ್ನು ಸೇವಿಸುವದರಿಂದ ದೇಹ ದುರ್ಬಲವಾಗುತ್ತಿದೆ.
ಅತಿ ಹೆಚ್ಚು ಹೆಚ್ಚು ಜಿಮ್ ಮಾಡುವುದರಿಂದ ದೇಹ ದಪ್ಪವಾಗುತ್ತದೆ ಎಂದುಕೊಳ್ಳುವುದು ಕೂಡ ತಪ್ಪು. ವ್ಯಾಯಾಮ ಮಾಡುವುದರಿಂದ ಸುಲಭವಾಗಿ ದೇಹವನ್ನು ಸಣ್ಣ ಮಾಡಲು ಆಗುವುದಿಲ್ಲ, ದಪ್ಪ ಮಾಡಲು ಆಗುವುದಿಲ್ಲ ಮತ್ತು ಅಷ್ಟು ವ್ಯಾಯಾಮದ ಅವಶ್ಯಕತೆಯೂ ಇಲ್ಲ. ಒಬ್ಬ ವ್ಯಕ್ತಿಯು ಶ್ರಮಪಟ್ಟು ಕೆಲಸ ಕಾರ್ಯ ಮಾಡುತ್ತಿದ್ದರೆ ಆತ ದಿನದ ಅರ್ಧ ತಾಸು ಮುಂಜಾನೆಯಲ್ಲಿ ಸರಳ ವ್ಯಾಯಾಮ ಮಾಡಿದರೆ ಸಾಕು.
ಇನ್ನು ಕೆಲವರಿಗೆ ತಿಂದ ತಕ್ಷಣ ಮಲಗುವುದರಿಂದ ದಪ್ಪ ಆಗುತ್ತೇವೆ ಎನ್ನುವ ಭಾವನೆ ಇದೆ ಅದು ಕೂಡ ತಪ್ಪು. ಮನಸ್ಸಿನಲ್ಲಿ ನೂರೆಂಟು ಯೋಚನೆ ತುಂಬಿಕೊಂಡು ತಿಂದ ತಕ್ಷಣ ಮಲಗುತ್ತೇವೆ ಎಂದುಕೊಳ್ಳುತ್ತಾರೆ, ಆ ರೀತಿ ಆಗುವುದಿಲ್ಲ. ನಮ್ಮ ಜಠರಾಗ್ನಿಯಲ್ಲಿ ಜೀರ್ಣಕ್ರಿಯೆಗೆ ಬೇಕಾದ ಎನರ್ಜಿ ಕ್ರಿಯೇಟ್ ಆಗಬೇಕು ಈ ರೀತಿ ಜಠರ ಕ್ರಿಯಾಶೀಲವಾಗಿರುವುದರಿಂದ ನಾವು ತಿಂದ ಆಹಾರವು ಸರಿಯಾಗಿ ರೀತಿಯಲ್ಲಿ ಜೀರ್ಣವಾಗಿ.
ಆ ಮೂಲಕ ಅದು ದೇಹದ ಅಂಗಗಳಿಗೆ ತಲುಪಿ ಇವುಗಳ ಮೂಲಕ ದೇಹಕ್ಕೆ ಶಕ್ತಿ ಹಾಗೂ ಮೆದುಳಿಕೆ ಚುರುಕುತನ ಬರುತ್ತದೆ ಅದನ್ನು ಹೊರತುಪಡಿಸಿ ನೈಸರ್ಗಿಕವಾಗಿ ಬಿಟ್ಟು ಕೃತಕವಾಗಿ ನಾವು ಏನೇ ಮಾಡಿದರು ಕೂಡ ಅದು ಹೊರಗಿನಿಂದ ಆಗಿರುತ್ತದ ಇವತ್ತು ದೇಹದ ಒಳಗಡೆ ಅದರ ಪರಿಣಾಮ ಶಾಶ್ವತವಾಗಿರುವುದಿಲ್ಲ ಮತ್ತು ಆರೋಗ್ಯಕರವಾಗಿರುವುದಿಲ್ಲ.