ಗುರುವಾರ ಎಂದರೆ ಎಲ್ಲಾ ಸಾಯಿ ಭಕ್ತರಿಗೆ ಒಂದು ಶುಭವಾದಂತಹ ಒಳ್ಳೆಯ ದಿನ ಎಂದು ಹೇಳಬಹುದು ಹೌದು ಗುರುವಾರದ ದಿನ ಸಾಯಿ ಬಾಬಾ ಅವರನ್ನು ಪೂಜೆ ಮಾಡುವುದರ ಮೂಲಕ ಹಾಗೂ ಸಾಯಿ ದೇವಸ್ಥಾನಗಳಿಗೆ ಹೋಗಿ ದೇವರ ದರ್ಶನವನ್ನು ಮಾಡಿ ಬರುವುದರ ಮೂಲಕ ತಮ್ಮ ದಿನವನ್ನು ಪ್ರಾರಂಭ ಮಾಡುತ್ತಾರೆ.
ಹಾಗೂ ಆ ದಿನ ಸಾಯಿ ಬಾಬಾರನ್ನು ಪೂಜೆ ಮಾಡುವುದರಿಂದ ನಮ್ಮ ಎಲ್ಲಾ ಕಷ್ಟಗಳು ದೂರವಾಗುತ್ತದೆ ಹಾಗೂ ನಮಗೆ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆಯಿಂದ ಪ್ರತಿಯೊಬ್ಬರೂ ಕೂಡ ಸಾಯಿ ದೇವಸ್ಥಾನಗಳಿಗೆ ಹೋಗಿ ದರ್ಶನ ಮಾಡಿ ಅಲ್ಲಿ ಪೂಜೆಯನ್ನು ಮಾಡಿಸಿಕೊಂಡು ಬರುತ್ತಾರೆ.
ಹೌದು ಪ್ರತಿ ಗುರುವಾರದ ದಿನ ಸಾಯಿಬಾಬಾ ಹಾಗೂ ರಾಘವೇಂದ್ರ ಸ್ವಾಮಿಗಳಿಗೆ ಬಹಳ ವಿಶೇಷವಾದಂತಹ ದಿನ ಎಂದೇ ಹೇಳಬಹುದು ಆ ಒಂದು ದಿನ ನಾವು ಕೆಲವೊಂದು ಪೂಜಾ ವಿಧಾನಗಳನ್ನು ಮಾಡುವುದರಿಂದ ನಮ್ಮ ಜೀವನದಲ್ಲಿ ಎದುರಾಗುವಂತಹ ಕಷ್ಟಗಳನ್ನು ಸಹ ದೂರ ಮಾಡಿಕೊಳ್ಳಬಹುದು ಎಂದು ಹೇಳಬಹುದು.
ಹಾಗಾಗಿ ಪ್ರತಿಯೊಬ್ಬರೂ ಕೂಡ ಆ ಒಂದು ದಿನ ಬಹಳ ವಿಶೇಷವಾದಂತಹ ಪೂಜೆಯನ್ನು ಮಾಡುವುದರ ಮೂಲಕ ಹಾಗೂ ಇನ್ನೂ ಕೆಲವೊಂದಷ್ಟು ಜನ ಉಪವಾಸವನ್ನು ಮಾಡುವುದರ ಮೂಲಕ ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳುವುದಕ್ಕೆ ಹಲವಾರು ವಿಧಾನಗಳನ್ನು ಅನುಸರಿಸುತ್ತಿರುತ್ತಾರೆ. ಅದೇ ರೀತಿಯಾಗಿ ಈ ದಿನ ನಾವು ಹೇಳಲು ಬಯಸುವಂತಹ ಈ ಒಂದು ವಿಧಾನವನ್ನು ನೀವು ಗುರುವಾರದ ದಿನ ಮಾಡಿದ್ದೆ ಆದರೆ ನಿಮ್ಮ ಜೀವನದಲ್ಲಿ ಇರುವಂತಹ ಕಷ್ಟಗಳು ಸಹ ದೂರವಾಗುತ್ತದೆ.
ಅದರಲ್ಲೂ ಈ ಗುರುವಾರ ನಿಂಬೆಹಣ್ಣಿನಿಂದ ಈ ಒಂದು ಸರಳ ಉಪಾಯವನ್ನು ನೀವು ಮಾಡಿದ್ದೆ ಆದರೆ ನಿಮ್ಮ ಜೀವನದಲ್ಲಿ ಎಂತದ್ದೇ ಕಷ್ಟ ಇರಲಿ ಎಂತದ್ದೇ ನೋವು ಇರಲಿ ಅದು ಕೆಲವೇ ಕೆಲವು ಸಮಯದಲ್ಲಿ ದೂರವಾಗುತ್ತದೆ. ಅಂದರೆ ಅದಕ್ಕೆ ಪರಿಹಾರ ಎನ್ನುವುದು ಸಿಗುತ್ತದೆ ಅದೆಲ್ಲದಕ್ಕೂ ಕೂಡ ಸಾಯಿಬಾಬಾ ಅವರೇ ಕಾರಣಕರ್ತರು ಹಾಗಾಗಿ ಈಗ ನಾವು ಹೇಳುವ ಈ ಒಂದು ಸರಳ ಉಪಾಯ ಅಂದರೆ ತಂತ್ರವನ್ನು ಮಾಡಿದರೆ ಸಾಕು. ಹಾಗಾದರೆ ಆ ಒಂದು ಸರಳ ಉಪಾಯ ಹೇಗೆ ಮಾಡುವುದು ಯಾವ ಸಮಯದಲ್ಲಿ ಮಾಡುವುದು ಹಾಗೂ ಯಾವುದೆಲ್ಲ ಪದಾರ್ಥಗಳು ಬೇಕಾಗುತ್ತದೆ ಎಂದು ಈ ಕೆಳಗೆ ತಿಳಿಯೋಣ.
* ಇದಕ್ಕೆ ಬೇಕಾಗುವಂತಹ ಪದಾರ್ಥ ಕೇವಲ ಮೂರು ನಿಂಬೆಹಣ್ಣು ಹಾಗೂ 2 ಹಸಿಮೆಣಸಿನಕಾಯಿ ಒಂದು ದಾರಕ್ಕೆ ಒಂದು ನಿಂಬೆಹಣ್ಣು ಒಂದು ಹಸಿ ಮೆಣಸಿನಕಾಯಿ ಒಂದು ನಿಂಬೆಹಣ್ಣು ಒಂದು ಹಸಿ ಮೆಣಸಿನಕಾಯಿ ಇಷ್ಟನ್ನು ಒಂದು ದಾರದಲ್ಲಿ ಸೇರಿಸಿ ಅದನ್ನು ದೇವರ ಮನೆಯಲ್ಲಿ ಇಟ್ಟು ಗಂಧ ಅರಿಶಿಣ ಕುಂಕುಮವನ್ನು ಹಾಕಿ ಪೂಜೆ ಮಾಡಿ ಆನಂತರ ಅದನ್ನು ನಿಮ್ಮ ಮನೆಯ ಮುಖ್ಯದ್ವಾರಕ್ಕೆ ಕಟ್ಟಬೇಕು.
* ಈ ರೀತಿ ಕಟ್ಟುವುದರಿಂದ ನಿಮ್ಮ ಮನೆಯಲ್ಲಿ ಯಾವುದೇ ರೀತಿಯ ಕಷ್ಟದ ಪರಿಸ್ಥಿತಿ ಇದ್ದರೂ ಅದರಲ್ಲೂ ಹಣಕಾಸಿನ ಸಮಸ್ಯೆ ಇದ್ದರೆ, ಮನೆಯಲ್ಲಿ ಜಗಳಗಳು ಮನಸ್ತಾಪಗಳು ಉಂಟಾಗುತ್ತಿದ್ದರೆ, ಮನೆಯಲ್ಲಿ ಅಶಾಂತಿ ಇದ್ದರೆ ಅದೆಲ್ಲವೂ ಸಹ ದೂರವಾಗುತ್ತದೆ ಅದರಲ್ಲೂ ಕೆಲವೊಮ್ಮೆ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಇದ್ದರೆ ಈ ರೀತಿಯ ಎಲ್ಲಾ ಪರಿಸ್ಥಿತಿಗಳು ಸಂಭವಿಸುತ್ತಿರುತ್ತದೆ ಹಾಗಾಗಿ ಮನೆಯಲ್ಲಿರು ವಂತಹ ನಕಾರಾತ್ಮಕ ಶಕ್ತಿಯನ್ನು ಇದು ದೂರ ಮಾಡುತ್ತದೆ ಎಂದು ಹೇಳಬಹುದು.
* ಆನಂತರ ಇನ್ನೊಂದು ನಿಂಬೆ ಹಣ್ಣನ್ನು ನಿಮ್ಮ ದೇವರ ಮನೆಯಲ್ಲಿ ಇಟ್ಟು ನಿಮ್ಮ ಮನೆಯಲ್ಲಿರುವಂತಹ ಎಲ್ಲ ಕಷ್ಟ ದೂರವಾಗಲಿ ಎಂದು ಹೇಳಿ ಪೂಜೆಯನ್ನು ಮಾಡಿ ನಿಮ್ಮ ಮನೆಯ ಮುಖ್ಯವಾದ ಎರಡು ಭಾಗಕ್ಕು ಸ್ವಲ್ಪ ಸ್ವಲ್ಪ ಕಲ್ಲುಪ್ಪನ್ನು ಹಾಕಿ ಆನಂತರ ನಿಂಬೆ ಹಣ್ಣನ್ನು ಕತ್ತರಿಸಿ ಒಂದಕ್ಕೆ ಅರಿಶಿಣ ಒಂದಕ್ಕೆ ಕುಂಕುಮ ಹಾಕಿ ಅದನ್ನು ಆ ಕಲ್ಲುಪ್ಪಿನ ಮೇಲೆ ಇಡಬೇಕು. ಈ ರೀತಿ ಇಟ್ಟು ಆನಂತರ ನಿಂಬೆ ಹಣ್ಣನ್ನು ನಿಮ್ಮ ಮನೆಯ ಮುಖ್ಯದ್ವಾರದ ಮೇಲ್ಭಾಗಕ್ಕೆ ಕಟ್ಟಬೇಕು ಎಲ್ಲ ರೀತಿಯ ಕಷ್ಟಗಳು ಸಹ ಕೆಲವೇ ಗಂಟೆಗಳಲ್ಲಿ ದೂರವಾಗುತ್ತದೆ.