Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ತಾತನ ಥರಾನೇ ಖಡಕ್ ಡೈಲಾಗ್ ಹೊಡೆದ ವಜ್ರಮುನಿ ಮೊಮ್ಮಗ. ಈ ವಿಡಿಯೋ ನೋಡಿ ನಿಜಕ್ಕೂ ಬೆರಗಾಗಿ ಹೋಗ್ತಿರಾ.

Posted on April 11, 2023 By Kannada Trend News No Comments on ತಾತನ ಥರಾನೇ ಖಡಕ್ ಡೈಲಾಗ್ ಹೊಡೆದ ವಜ್ರಮುನಿ ಮೊಮ್ಮಗ. ಈ ವಿಡಿಯೋ ನೋಡಿ ನಿಜಕ್ಕೂ ಬೆರಗಾಗಿ ಹೋಗ್ತಿರಾ.

ಚಂದನವನ ಈವರೆಗೆ ಅನೇಕ ನಾಯಕ ನಟರುಗಳನ್ನು ಕಂಡಿದೆ. ಆದರೆ ನಾಯಕ ನಟರಿಗೆ ಸರಿಸಮಾನವಾಗಿ ಸೆಡ್ಡು ಹೊಡೆದು ನಿಲ್ಲುತ್ತಿದ್ದ ಖಳನಾಯಕನ ಪಾತ್ರದಲ್ಲಿ ಖ್ಯಾತಿ ಪಡೆದವರು ಬೆರಳೆಣಿಕೆಯಷ್ಟು ಮಂದಿ ಮಾತ್ರ. ಇಂಥವರ ಸಾಲಿನಲ್ಲಿ ಚಂದನವನ ಎಂದು ಮರೆಯದ ಕಲಾವಿದ ಎಂದರೆ ನಟಭೈರವ ನಟಭಯಂಕರ ವಜ್ರಮುನಿ ಅವರು. ವಜ್ರಮುನಿ ಅವರ ನಿಜವಾದ ಹೆಸರು ಸದಾನಂದ ಸಾಗರ್.

ಆದರೆ ತೆರೆ ಮೇಲೆ ಅವರು ಅಬ್ಬರಿಸುತ್ತಿದ್ದ ರೀತಿ ನೋಡಿ ಸಿನಿಮಾ ರಂಗಕ್ಕೆ ಬಂದ ಮೇಲೆ ಅವರ ಹೆಸರನ್ನು ವಜ್ರಮುನಿ ಎಂದು ಬದಲಾಯಿಸಲಾಯಿತು. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ನಂಬರ್ ಒನ್ ಗಳ ನಾಯಕ ಎಂದರೆ ಇಂದಿಗೂ ಕೂಡ ಅವರೇ ಅವರ ಕೆರಳಿದ ಮುಖ, ಕೆಂಪು ಕಣ್ಣುಗಳು, ಕಂಚಿನ ಕಂಠ, ಡೈಲಾಗ್ ಹೊಡೆಯುತ್ತಿದ್ದ ಆ ಪರಿ ವಿಲನ್ ಪಾತ್ರಕ್ಕೆ ಹೇಳಿ ಮಾಡಿಸಿದ ರೀತಿ ಇತ್ತು.

ಅಣ್ಣಾವ್ರ ಜೊತೆಗೆ ಸರಿ ಸಮಾನವಾಗಿ ನಿಂತು ಪೈಪೋಟಿ ಕೊಡುತ್ತಿದ್ದ ಖಳನಾಯಕಎಂದರೆ ವಜ್ರಮುನಿ ಅವರು ವಜ್ರಮುನಿ ಮತ್ತು ಅಣ್ಣಾವ್ರ ಕಾಂಬಿನೇಷನ್ನಲ್ಲಿ ಅದೆಷ್ಟೋ ಚಿತ್ರಗಳು ಸೂಪರ್ ಹಿಟ್ ಆಗಿವೆ. ಒಂದು ಕಾಲದಲ್ಲಿ ಸಿನಿಮಾಗೆ ಖಳನಾಯಕ ಎಂದರೆ ವಜ್ರಮುನಿ ಅವರು ಒಬ್ಬರೇ ಎನ್ನುವಷ್ಟರ ಮಟ್ಟಿಗೆ ಅವರ ಖ್ಯಾತಿ ಬೆಳಗಿತ್ತು.

ವಜ್ರಮುನಿ ಇಲ್ಲದೆ ಕನ್ನಡ ಸಿನಿಮಾಗಳಲ್ಲಿ ನೆಗೆಟಿವ್  ಶೇಡ್ ಅನ್ನು ಅಷ್ಟು ನ್ಯಾಯಬದ್ಧವಾಗಿ ತೋರಿಸಲು ಆಗೋದೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಆ ಖಳನಾಯಕನ ಪಾತ್ರಕ್ಕೆ ಅವರು ಹಾಸುಹೊಕ್ಕಾಗಿದ್ದರು. ಆದರೆ ನಿಜ ಜೀವನದ ಅವರ ವ್ಯಕ್ತಿತ್ವ ಇದಕ್ಕೆ ತದ್ವಿರುದ್ಧವಾಗಿತ್ತು. ಅವರ ಮೂಲ ಹೆಸರಾದ ಸದಾನಂದ ಸಾಗರ್ ಎನ್ನುವ ಹೆಸರಿಗೆ ತಕ್ಕ ಹಾಗೆ ಸದಾ ಸರಳತೆ ಕರುಣೆ ಸಹೃದಯ ಹೊಂದಿದ್ದ ಇವರು ಅತಿ ಕಡಿಮೆ ವಯಸ್ಸಿಗೆ ಅನಾರೋಗ್ಯ ಕಾರಣಕ್ಕಾಗಿ ಮರಣಕ್ಕೀಡಾದರು.

ಇದ್ದಷ್ಟು ದಿನ ತಮ್ಮ ಜೀವಮಾನದ ಅತಿ ಹೆಚ್ಚು ಸಮಯವನ್ನು ಕನ್ನಡ ಸಿನಿಮಾ ಇಂಡಸ್ಟ್ರಿ ಕಟ್ಟಲು ತೇದಿದ್ದಾರೆ ಎಂದೂ ಹೇಳಬಹುದು. ಮೂರು ದಶಕಗಳವರೆಗೆ ಸುಮಾರು 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ವಜ್ರಮುನಿ ಅವರ ಪ್ರತಿಯೊಂದು ಸಿನಿಮಾದ ಆಕ್ಟಿಂಗ್ ಕೂಡ ಅವಿಸ್ಮರಣೆಯ. ಆದರೆ ಅವರಂತೆ ಅವರ ಯಾವ ಮಕ್ಕಳನ್ನು ಕೂಡ ಅವರು ಇಂಡಸ್ಟ್ರಿಗೆ ಕರೆತರಲಿಲ್ಲ.

ಆದರೆ ಈಗ ಅವರ ಕುಟುಂಬದ ಮತ್ತೊಂದು ಕುಡಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದೆ. ವಜ್ರಮುನಿ ಅವರ ಮೂರನೇ ಮಗನಾದ ಜಗದೀಶ್ ಅವರ ಪುತ್ರ ಆಕರ್ಷ್ ಸಂಜು ವಜ್ರ ಎನ್ನುವವರು ಬಾಲ ಕಲಾವಿದನಾಗಿ ಕನ್ನಡ ಸಿನಿಮಾ ಇಂಡಸ್ಟ್ರಿಯ ದಾರಿ ಹಿಡಿದಿದ್ದಾರೆ. ಬಹು ವರ್ಷಗಳ ಕಾಲ ಕನ್ನಡ ಸಿನಿಮಾ ಇಂಡಸ್ಟ್ರಿಯಿಂದ ಬ್ರೇಕ್ ತೆಗೆದುಕೊಂಡು ಕಮ್ ಬ್ಯಾಕ್ ಆಗಿರುವ ನಟ ಕೋಮಲ್ ಅವರು ನಟಿಸುತ್ತಿರುವ ಎಲಾ ಕುನ್ನಿ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಆಕರ್ಷ್ ಸಂಜು ವಜ್ರು ಕೂಡ ಅಭಿನಯಿಸಲಿದ್ದಾರಂತೆ.

ಎಲಾ ಕುನ್ನಿ ಚಿತ್ರಕ್ಕೆ ಅಡಿ ಬರಹದಲ್ಲಿ ಮೆರಾ ನಾಮ್ ವಜ್ರುಮುನಿ ಎಂದು ಬರೆಯಲಾಗಿದೆಯಂತೆ. ಎಲಾ ಕುನ್ನಿ ಎನ್ನುವುದು ಅವರ ಫೇಮಸ್ ಡೈಲಾಗ್ ಈಗ ಇದೇ ಟೈಟಲಲ್ಲಿ ಚಿತ್ರ ತಯಾರಾಗುತ್ತಿದ್ದು ಕೋಮಲ್ ಅವರೊಂದಿಗೆ ಜಗ್ಗೇಶ್ ಪುತ್ರ ಯತಿರಾಜ್ ಕೂಡ ಮುಖ್ಯ ಭೂಮಿಯಲ್ಲಿ ಇರಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ಇತ್ತೀಚೆಗೆ ಬೆಂಗಳೂರಿನ ಪ್ರಸನ್ನ ಗಣಪತಿ ದೇವಾಲಯದಲ್ಲಿ ಈ ಚಿತ್ರದ ಮುಹೂರ್ತ ಕಾರ್ಯಕ್ರಮ ನಡೆಯಿತು. ಆ ಸಮಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವಜ್ರುಮುನಿ ಮೊಮ್ಮಗ ಆಕಾಶ್ ತಾತ ವಜ್ರುಮುನಿ ಅವರ ಪ್ರಚಂಡ ರಾವಣನ ಡೈಲಾಗ್ ಹೊಡೆದು ಎಲ್ಲರ ಗಮನ ಸೆಳೆದಿದ್ದಾರೆ. ಈ ವಿಡಿಯೋವನ್ನು ನೋಡಿ ವಜ್ರಮುನಿ ಮೊಮ್ಮಗನ ನಟನೆ ಬಗ್ಗೆ ನಿಮ್ಮ ಅಭಿಪ್ರಾಯವನ್ನು  ಕಾಮೆಂಟ್ ಮಾಡಿ ತಿಳಿಸಿ.

Entertainment Tags:Pouranik, Vajramuni
WhatsApp Group Join Now
Telegram Group Join Now

Post navigation

Previous Post: ಸಿನಿಮಾದವರಿಗೆ ಹೆಣ್ಣು ಕೊಡಲ್ಲ ಅಂದಿದ್ದಕ್ಕೆ ಸಿಡಿದೆದ್ದ ನಟ ಡಾಲಿ. ನಿಜ ಜೀವನದಲ್ಲಿ ಹೆಣ್ಣು ಕೊಡದಿದ್ರೆ ಏನಂತೆ ತೆರೆ ಮೇಲೆ ಹತ್ತು ಮದುವೆ ಆಗ್ತೀನಿ ಎಂದು ಬ್ರೋಕರ್ ಮೇಲೆ ಗರಂ ಆದ ಧನಂಜಯ್.
Next Post: ದರ್ಶನ್ ಒಂದು ಜಾಹೀರಾತಿನಲ್ಲಿ ನಟನೆ ಮಾಡೋಕೆ ತೆಗೆದುಕೊಳ್ಳುವ ಸಂಭಾವನೆ ಎಷ್ಟು ಗೊತ್ತಾ.?

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore