Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

75 ದಿನ ಪೈಟಿಂಗ್ ಸೀನ್ ಮಾಡ್ದೆ, 25 ದಿನ ಸಾಂಗ್ ಶೂಟ್ ಮಾಡ್ದೆ ಅಂತ ಹೇಳೋ ಶೋಕಿ ನನ್ಗೂ ಇಲ್ಲ, ದರ್ಶನ್ ಗೂ ಇಲ್ಲ. ಯಾವ ಸಿನಿಮಾದ ಬಗ್ಗೆ ಗೊತ್ತಾ ಇವರು ಮಾತನಾಡಿದ್ದು.?

Posted on January 8, 2023 By Kannada Trend News No Comments on 75 ದಿನ ಪೈಟಿಂಗ್ ಸೀನ್ ಮಾಡ್ದೆ, 25 ದಿನ ಸಾಂಗ್ ಶೂಟ್ ಮಾಡ್ದೆ ಅಂತ ಹೇಳೋ ಶೋಕಿ ನನ್ಗೂ ಇಲ್ಲ, ದರ್ಶನ್ ಗೂ ಇಲ್ಲ. ಯಾವ ಸಿನಿಮಾದ ಬಗ್ಗೆ ಗೊತ್ತಾ ಇವರು ಮಾತನಾಡಿದ್ದು.?

 

ಶೈಲಜಾ ನಾಗ್ ಹಾಗೂ ಬಿ ಸುರೇಶ್ ಅವರು ನಿರ್ಮಾಣ ಮಾಡಿ ನಿರ್ದೇಶನ ಮಾಡುತ್ತಿರುವ ಕ್ರಾಂತಿ ಈ ವರ್ಷದ ಬಹು ನಿರೀಕ್ಷಿತ ಚಿತ್ರ. ಇದೇ ಜನವರಿ 26ರಂದು ಈ ವರ್ಷದ ಪ್ರಥಮ ಸ್ಟಾರ್ ಸಿನಿಮಾ ಆಗಿ ರಿಲೀಸ್ ಆಗುತ್ತಿರುವ ಕ್ರಾಂತಿ ಸಿನಿಮಾದ ಬಗ್ಗೆ ಈಗಾಗಲೇ ಹೈಪ್ ಕ್ರಿಯೇಟ್ ಆಗಿದೆ. ದಿನೇ ದಿನೇ ನಾನಾ ವಿಷಯಗಳಿಂದ ಕ್ರಾಂತಿ ಕುರಿತ ಕುತೂಹಲ ಹೆಚ್ಚಾಗುತ್ತಿದ್ದು ಇದೀಗ ಟ್ರೈಲರ್ ಕೂಡ ರಿಲೀಸ್ ಮಾಡಲಾಗಿದೆ.

ಹಲವು ದಿನಗಳಿಂದ ಈ ಸಿನಿಮಾದ ನಾಯಕ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸೇರಿದಂತೆ ನಿರ್ಮಾಪಕ ಶೈಲಜಾ ನಾಗ್, ಬಿ ಸುರೇಶ್, ಹರಿಕೃಷ್ಣ, ರಚಿತಾ ರಾಮ್ ಮುಂತಾದ ಎಲ್ಲರೂ ಸಿನಿಮಾ ಬಗ್ಗೆ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಈಗ ಟೈಲರ್ ರಿಲೀಸ್ ಆದ ಮೇಲೆ ಮತ್ತೊಮ್ಮೆ ಸುದ್ದಿಗೋಷ್ಠಿಯಲ್ಲಿ ಕರೆಸಿ ಸಿನಿಮಾ ಕುರಿತ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

ಇದೇ ಇಂಟರ್ವ್ಯೂ ಅಲ್ಲಿ ಶೈಲಜಾ ನಾಗ್ ಅವರು ಬಹಳ ಖಾರವಾಗಿ ಪ್ರಶ್ನೆ ಒಂದಕ್ಕೆ ಉತ್ತರಿಸಿದ್ದಾರೆ. ಅವರು ಮಾತನಾಡಿರುವ ವಿಡಿಯೋ ಬೈಟಿಂಗ್ಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು ಬಹುಶಃ ಸಿನಿಮಾದಲ್ಲಿ ದರ್ಶನ್ ಎನ್ನುವ ಕಾರಣಕ್ಕೆ ಅಷ್ಟು ಅದ್ದೂರಿಯಾಗಿ ಮಾಡಿದ್ದೀರಾ ಎನ್ನುವ ಪ್ರಶ್ನೆಯನ್ನು ಕೇಳಿರಬಹುದು ಅದಕ್ಕಾಗಿ ಈ ರೀತಿ ಉತ್ತರ ಬಂದಿರಬಹುದು ಎಂದು ಊಹಿಸಲಾಗಿದೆ.

ಈ ಬೈಟಿಂಗ್ ಅಲ್ಲಿ ಶೈಲಜಾ ನಾಗ್ ಅವರು ಸ್ವಲ್ಪ ಕೋಪಗೊಂಡ ಉತ್ತರಿಸಿದ್ದಾರೆ ಅವರು ಆಡಿರುವ ಮಾತುಗಳು ಹೀಗಿವೆ. ಆ ರೀತಿ ಶೋಕಿ ನನಗೂ ಇಲ್ಲ ದರ್ಶನ್ ಗೂ ಇಲ್ಲ. ನಾನು ಸಹ ಧಾರಾವಾಹಿಗಳಲ್ಲಿ ನಟನೆ ಮಾಡಿಕೊಂಡು ತಂತ್ರಜ್ಞೆ ಆಗಿ ಕೆಲಸ ಮಾಡಿಕೊಂಡು ನಿರ್ದೇಶನ ಮಾಡಿಕೊಂಡು ಬಂದವಳು. ನನಗೆ ಕಸಗುಡಿಸುವುದಕ್ಕೂ ಬರುತ್ತದೆ, ವ್ಯಾಪಾರ ಮಾಡುವುದಕ್ಕೂ ಬರುತ್ತದೆ.

ನಾವು ಸೂಕ್ಷ್ಮತೆಯನ್ನು ಅರಿತವರು ಕಂಟೆಂಟ್ ನಮಗೆ ಮುಖ್ಯ ಹಣ ಅಲ್ಲ ಮತ್ತು ಯಜಮಾನ ಸಿನಿಮಾ ಆಗಲಿ ಕ್ರಾಂತಿ ಸಿನಿಮಾ ಆಗಲಿ, ಸಿನಿಮಾ ಗೆ ಏನು ಬೇಕೋ ಅದನ್ನು ನಾವು ಕೊಡುತ್ತೇವೆ. ದರ್ಶನ್ ಅವರೂ ಕೂಡ ಎಪ್ಪತೈದು ದಿನ ಫೈಟಿಂಗ್ 25 ದಿನ ಡ್ಯಾನ್ಸ್ ಎಂದುಕೊಂಡು ಭಾಗಿಯಾಗುವಂತಹ ನಟ ಅಲ್ಲ. ಸಿನಿಮಾ ಕಥೆ ಕೇಳಿದ ದಿನದಿಂದಲೇ ಆ ಪಾತ್ರಕ್ಕೆ ಬೇಕಾದ ತಯಾರಿಯಲ್ಲಿ ಅವರು ತೊಡೆದುಕೊಳ್ಳುತ್ತಾರೆ.

ಒಂದರ್ಥದಲ್ಲಿ ಪಾತ್ರವೇ ಅವರಾಗಿ ಬಿಡುತ್ತಾರೆ ಹಾಗಾಗಿ ಆ ಪಾತ್ರಕ್ಕೆ ಅವರಿಗೆ ಸೈಕಲ್ ಬೇಕಾದ್ರೆ ಸೈಕಲ್, ಏರೋಪ್ಲೇನ್ ಬೇಕಾದರೆ ಏರೋಪ್ಲೇನ್ ಆ ರೀತಿ ವ್ಯವಸ್ಥೆ ಮಾಡುತ್ತೇವೆ ಹೊರತು ದುಡ್ಡು ಹಾಕಿ ದುಡ್ಡು ತೆಗೆಯುವುದಕ್ಕೆ ಅಲ್ಲ. ನಾವು ಖಂಡಿತವಾಗಿಯೂ ಕಂಟೆಂಟ್ ಗೆ ಹೆಚ್ಚು ಗಮನ ಕೊಟ್ಟಿರುವುದು ಮತ್ತು ನೀವೆಲ್ಲಾ ಈ ರೀತಿ ಪ್ರಶ್ನೆ ಕೇಳುವುದಕ್ಕಾಗಿ ನಾನು ಹೇಳುತ್ತಿದ್ದೇನೆ ದರ್ಶನ್ ಅಂತಹ ಒಬ್ಬ ಮೇರು ನಟ ಸೂಪರ್ ಸ್ಟಾರ್ ಇಟ್ಟುಕೊಂಡು ನಾವು ಐದು, ಹತ್ತು ಕೋಟಿ ಸಿನಿಮಾ ಮಾಡುವುದಕ್ಕೆ ಆಗುತ್ತದೆಯೇ.

ನಾವು ಸಹ ಅವರಿಗೆ ತಕ್ಕ ಹಾಗೆ ಜೊತೆಗೆ ಪಾತ್ರದ ಅವಶ್ಯಕತೆ ಅರಿತು ಮಾಡಬೇಕು. ದೊಡ್ಡ ಬಜೆಟ್ ಸಿನಿಮಾ ಮಾಡಿದರೆ ದೊಡ್ಡ ಹಿಟ್ ಆಗುವುದು ಎನ್ನುವ ಜಮಾನ ಹೋಗಿ ಎಷ್ಟೋ ವರ್ಷ ಆಯ್ತು. ಈಗ ನೀವೇ ಕಂಡಿದ್ದೀರಾ ಸಣ್ಣ ಬಜೆಟಿನ ಸಿನಿಮಾ ಕೂಡ ಎಷ್ಟು ಕೋಟಿ ಗಳಿಕೆ ಕಾಣುತ್ತಿದೆ ಎಂದು ಕಾರಣ ಸಿನಿಮಾ ಕಂಟೆಂಟ್. ನಮ್ಮ ಸಿನಿಮಾದಲ್ಲಿ ಸಹಾ ಹಣ ಎನ್ನುವುದು ಬಿಟ್ಟು ಕಂಟೆಂಟ್ ಎನ್ನುವುದಕ್ಕೆ ಬೆಲೆ ಕೊಟ್ಟಿರುವುದು ಎನ್ನುವುದು ಇದರಿಂದ ಸ್ಪಷ್ಟ ಎಂದಿದ್ದಾರೆ.

ಇನ್ನು ನಿಮ್ಮೆಲ್ಲರಿಗೂ ತಿಳಿದಿರುವಂತೆ ಧ್ರುವ ಸರ್ಜಾ ಅಭಿನಯದ ಮಾರ್ಟಿನ್ ಸಿನಿಮಾದ ಕ್ಲೈಮಾಕ್ಸ್ ಫೈಟಿಂಗ್ ಸೀನ್ ಅನ್ನು ಚಿತ್ರೀಕರಣ ಮಾಡುವುದಕ್ಕೆ ಬರೋಬ್ಬರಿ 57 ದಿನ ತೆಗೆದುಕೊಂಡಿರುವ ವಿಚಾರ ನಿಮಗೆ ತಿಳಿದೇ ಇದೆ. ಈ ವಿಚಾರವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಶೈಲಜಾ ನಾ್ ಅಗವರು ಆ ರೀತಿ ಪ್ರತಿಕ್ರಿಯೆ ನೀಡಿದರು ಏನೋ ತಿಳಿದಿಲ್ಲ ಆದರೆ. ಕ್ರಾಂತಿ ಸಿನಿಮಾದ ಬರುವುದಕೆಗಾಗಿ ಸಾಕಷ್ಟು ಜನ ಅಭಿಮಾನಿಗಳು ಕಾತುರದಿಂದ ಕಾದಿರುವುದಂತೂ ಸತ್ಯ ದರ್ಶನ್ ಈ ಬಾರಿ ಕ್ರಾಂತಿ ಸಿನಿಮಾ ಬಿಡುಗಡೆ ಮಾಡುವುದಕ್ಕೆ ಸಾಕಷ್ಟು ಎದುರೇಟನ್ನು ತಡೆಹಿಡಿಯಬೇಕಿದೆ.

Entertainment Tags:D Boss, Darshan, Kranti, Sailaja Nag
WhatsApp Group Join Now
Telegram Group Join Now

Post navigation

Previous Post: ಕ್ರಾಂತಿ ಸಿನಿಮಾ ಟ್ರೈಲರ್ ಲಾಂಚ್ ಮಾಡುವ ಸಮಯದಲ್ಲಿ ಬೇಸರ ಮಾಡಿಕೊಂಡು ವೇದಿಕೆಯಿಂದ ಕೆಳಗಿಳಿದ ದರ್ಶನ್ ಕಾರಣವೇನು ಗೊತ್ತ.?
Next Post: ದರ್ಶನ್ ವಿರುದ್ಧ ಪಿತೂರಿ ಮಾಡುವವರಿಗೆ ಖಡಕ್ ಎಚ್ಚರಿಕೆ ಕೊಟ್ಟ ಮುಖ್ಯಮಂತ್ರಿ ಚಂದ್ರ.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore