Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಹನುಮನಿಗೆ ಈ 6 ರಾಶಿಯವರು ಎಂದರೆ ಬಹಳ ಪ್ರೀತಿ, ಹನುಮನಿಗೂ ಈ ರಾಶಿಗಳಿಗೂ ಇರುವ ಸಂಬಂಧವೇನು.? ನಿಮ್ಮ ರಾಶಿಯು ಇದೆಯೇ ತಿಳಿದುಕೊಳ್ಳಿ…

Posted on February 28, 2024 By Kannada Trend News No Comments on ಹನುಮನಿಗೆ ಈ 6 ರಾಶಿಯವರು ಎಂದರೆ ಬಹಳ ಪ್ರೀತಿ, ಹನುಮನಿಗೂ ಈ ರಾಶಿಗಳಿಗೂ ಇರುವ ಸಂಬಂಧವೇನು.? ನಿಮ್ಮ ರಾಶಿಯು ಇದೆಯೇ ತಿಳಿದುಕೊಳ್ಳಿ…

ಹನುಮಂತ ಎಂದರೆ ತೀಕ್ಷ್ಣ ಬುದ್ಧಿ ಉಳ್ಳವ ಮತ್ತು ಅಷ್ಟೇ ತಾಳ್ಮೆ ಹಾಗೂ ನಿಸ್ವಾರ್ಥ ಮನೋಭಾವದ ವ್ಯಕ್ತಿತ್ವದವರು. ರಾಮನ ಭಂಟನಾದ ಈ ಆಂಜನೇಯನು ಶಕ್ತಿವಂತ, ಸಾಹಸವಂತ ಅಷ್ಟೇ ಕರುಣಾಳು ಮತ್ತು ಹೃದಯವಂತ ಕೂಡ. ರಾಮ ನಾಮವನ್ನೇ ತನ್ನ ಜೀವನದ ಸಾರ ಎಂದುಕೊಂಡು ರಾಮನ ಸೇವೆಯೇ ತನ್ನ ಬದುಕಿನ ಗುರಿಯೆನ್ನುವಂತೆ ಬದುಕಿದ ಮಾರುತಿಗೆ ಭಗವಂತ ಪೂಜ್ಯನೀಯ ಸ್ಥಾನ ಕೊಟ್ಟಿದ್ದಾನೆ.

ಇಂದು ಕಲಿಯುಗದಲ್ಲಿ ಪ್ರತಿ ಗ್ರಾಮದಲ್ಲೂ ಪ್ರತಿಯೊಬ್ಬರ ಮನೆ ಮನದಲ್ಲೂ ಆಂಜನೇಯನಿಗೆ ಗುಡಿ ಇದೆ. ಜೀವನದಲ್ಲಿ ಮನುಷ್ಯನಿಗೆ ಮನುಷ್ಯ ಸಹಜವಾದ ಯಾವುದೇ ಸಮಸ್ಯೆ ಬಂದರೂ ಮೊದಲು ಸ್ಪಂದಿಸುವ ವ್ಯಕ್ತಿ ಆಂಜನೇಯ ಎನ್ನುವ ಮಾತು ಕೂಡ ಪ್ರತೀತಿಯಲ್ಲಿ ಇದೆ. ಹಾಗಾಗಿ ಪ್ರತಿಯೊಬ್ಬರೂ ಆಂಜನೇಯನ ಕೃಪೆಗಾಗಿ ಮತ್ತು ಶನಿ ಪ್ರಭಾವ ಕಡಿಮೆ ಮಾಡಿಕೊಳ್ಳಲು ಆಂಜನೇಯನ ದರ್ಶನ ಮಾಡಿ ಪೂಜೆ, ಸೇವೆ ಸಲ್ಲಿಸುತ್ತಾರೆ.

ಜೈ ಭಜರಂಗಿ ಬಲಿ ಎನ್ನಲು ಮಕ್ಕಳಿಂದ ಹಿಡಿದು ಯುವಕರವರೆಗೆ ಎಲ್ಲರಿಗೂ ಕೂಡ ಬಹಳ ಇಷ್ಟ ಆದರೆ ಆಂಜನೇಯನಿಗೆ ಭಕ್ತರೆಲ್ಲಾ ಒಂದೇ. ತನ್ನನ್ನು ಮನದಲ್ಲಿ ನೆನೆಯುವ ಶ್ರದ್ಧೆಯಿಂದ ರಾಮ ಸೀತಾ ಲಕ್ಷ್ಮಣ ಸಮೇತವಾಗಿ ಪ್ರಾರ್ಥಿಸುವ ಪ್ರತಿಯೊಬ್ಬರ ಮೇಲೆ ಕೂಡ ಆಂಜನೇಯನ ಕೃಪಾಕಟಾಕ್ಷ ಇದ್ದೇ ಇರುತ್ತದೆ.

ಈ ಸುದ್ದಿ ಓದಿ:- ನಾಳೆ ಶಕ್ತಿಶಾಲಿ ಸಂಕಷ್ಟ ಚತುರ್ಥಿ, ಮಲಗುವ ಮುನ್ನ ಹಾಸಿಗೆ ಪಕ್ಕ ಇದನ್ನು ಇಟ್ಟು ಮಲಗಿದರೆ ದುಡ್ಡು ಹೇಗಾದರೂ ಕೈ ಸೇರುತ್ತದೆ…

ಆದರೆ ವಿಶೇಷವಾಗಿ ಐದು ರಾಶಿಯವರಿಗೆ ಆಂಜನೇಯ ಆಶೀರ್ವಾದ ಹೆಚ್ಚಾಗಿ ದೊರೆಯುತ್ತದೆ ಎಂದು ಹೇಳಲಾಗುತ್ತದೆ. ಯಾವ ರಾಶಿಯವರಿಗೆ ಈ ರೀತಿ ಆಂಜನೇಯನ ಅನುಗ್ರಹ ಹೆಚ್ಚು ದೊರೆಯುತ್ತದೆ ಮತ್ತು ಯಾವ ಸಂದರ್ಭದಲ್ಲಿ ಅವರು ಈ ಶಕ್ತಿ ಪಡೆಯಲು ಅಂಜನಿಪುತ್ರನನ್ನು ನೆನೆಯಬೇಕು ಎನ್ನುವುದನ್ನು ಈ ಅಂಕಣದಲ್ಲಿ ತಿಳಿಸಿಕೊಡುತ್ತಿದ್ದೇವೆ.

* ಮೇಷ ರಾಶಿ:- ಮೇಷ ರಾಶಿಯವರು ಬಹಳ ಅದೃಷ್ಟವಂತರು. ಮೇಷ ರಾಶಿಯವರು ಬಹಳ ಕೀರ್ತಿವಂತರಾಗುತ್ತಾರೆ ತುಂಬಾ ಜವಾಬ್ದಾರಿ ಸ್ಥಾನಗಳಲ್ಲಿ ಇರುತ್ತಾರೆ. ಇಂತಹ ಸಮಯದಲ್ಲಿ ಅವರಿಗೆ ಶತ್ರು ಬಾಧೆಯು ಕೂಡ ಇರುತ್ತದೆ ಈ ಸಮಯದಲ್ಲಿ ಅವರಿಗೆ ಬೆನ್ನಿನ ಹಿಂದೆ ಚೂರಿ ಹಾಕುವಂತಹ ವಿರೋಧಿಗಳು ಹುಟ್ಟಿಕೊಳ್ಳುತ್ತಾರೆ. ಈ ರೀತಿ ತಮ್ಮ ಕಣ್ಣಿಗೆ ಮಣ್ಣೆರಚಿ ಯಾರಾದರೂ ತೊಂದರೆ ಕೊಟ್ಟು ನೋವಿನಲ್ಲಿದ್ದಾಗ ಮನದಲ್ಲಿ ಆಂಜನೇಯನನ್ನು ನೆನೆದರೆ ಸಾಕು ಅವರಿಗೆ ಸಮಸ್ಯೆಯಿಂದ ಭಗವಂತನೇ ಹೊರ ತರುತ್ತಾನೆ.

* ಕಟಕ ರಾಶಿ:- ಕಟಕ ರಾಶಿಯವರು ಕೂಡ ಆಂಜನೇಯನನ್ನು ಪ್ರಾರ್ಥಿಸಿದರೆ ಬಹಳ ಬೇಗ ಆಂಜನೇಯ ಆಶೀರ್ವಾದ ದೊರೆಯುತ್ತದೆ. ಕಟಕ ರಾಶಿಯವರು ಹಣಕಾಸಿನ ವಿಚಾರದಲ್ಲಿ ಉತ್ತಮವಾಗಿರುತ್ತಾರೆ. ಆದರೆ ಯಾವುದೋ ಒಂದು ಸಂದರ್ಭದಲ್ಲಿ ಕಳೆದುಕೊಳ್ಳುವ ಅಥವಾ ಇನ್ಯಾವುದೇ ರೀತಿಯ ಹಣಕಾಸಿನ ಸಮಸ್ಯೆಯಲ್ಲಿ ಸಿಲುಕಿ ಬಿಡುತ್ತಾರೆ. ಈ ಸಮಯದಲ್ಲಿ ಭಕ್ತಿಯಿಂದ ಮಂಗಳವಾರ ಮತ್ತು ಶನಿವಾರದಂದು ಆಂಜನೇಯನ ನೆನೆಯಬೇಕು ಖಂಡಿತ ಪರಿಹಾರ ಸಿಗುತ್ತದೆ.

ಈ ಸುದ್ದಿ ಓದಿ:- ಉಪ್ಪಿನಿಂದ ಜನರು ಹೇಗೆ ಶ್ರೀಮಂತರಾಗುತ್ತಾರೆ ಎಂಬುವ ಸೀಕ್ರೆಟ್ ನೋಡಿ.!

* ಸಿಂಹ ರಾಶಿ:- ಸಿಂಹ ರಾಶಿಯವರ ವ್ಯಕ್ತಿತ್ವ ಎಲ್ಲರಿಗೂ ತಿಳಿದಿರುವಂತೆ ಬಹಳ ಸಾಹಸವಂತ ವ್ಯಕ್ತಿತ್ವ ಹೊಂದಿರುತ್ತಾರೆ. ಏನೇ ಆದರೂ ಮೊದಲು ಮುನ್ನುಗುತ್ತಾರೆ, ಇವರಿಗೆ ಜನಪ್ರಿಯತೆ ಹೆಚ್ಚಾಗುತ್ತದೆ. ಹಾಗೆಯೇ ಕೆಲವೊಮ್ಮೆ ಕೆಲಸದಲ್ಲಿ ಬಹಳ ಕಷ್ಟಕ್ಕೆ ಸಿಲುಕುತ್ತಾರೆ ಆಗ ಆಂಜನೇಯನನ್ನು ಪ್ರಾರ್ಥಿಸಬೇಕು.

* ಮಕರ ರಾಶಿ:- ಮಕರ ರಾಶಿಯವರು ಬಹಳ ಬೇಗ ಇನ್ನೊಬ್ಬರನ್ನು ನಂಬುತ್ತಾರೆ. ಇದೇ ನಂಬಿಕೆ ಅವರನ್ನು ಸಂಧಿಗ್ದ ಪರಿಸ್ಥಿತಿಯಲ್ಲಿ ಸಿಲುಕಿಸುತ್ತದೆ. ಈ ರೀತಿ ನಂಬಿಕೆಯಿಂದ ಮೋ’ಸ ಹೋಗಿ ಸಮಸ್ಯೆಗೆ ಸಿಕ್ಕ ಸಮಯದಲ್ಲಿ ಅದರಿಂದ ಹೊರಬರಲು ದಾರಿಯೇ ಕಾಣುತ್ತಿಲ್ಲ ಎಂದಾಗ ಭಕ್ತಿಯಿಂದ ಆಂಜನೇಯನನ್ನು ಸ್ಮರಿಸಿ ಭಗವಂತನೇ ನಿಮ್ಮ ಕೈ ಹಿಡಿದು ಸಮಸ್ಯೆಯಿಂದ ಹೊರ ತರುತ್ತಾನೆ.

* ಕುಂಭ ರಾಶಿ:- ಕುಂಭ ರಾಶಿಯವರು ಕೂಡ ಆಂಜನೇಯನಿಗೆ ಬಹಳ ಇಷ್ಟವಾದ ರಾಶಿಯವರು. ಕುಂಭ ರಾಶಿಯವರು ತಮಗೆ ಯಾವುದೇ ಸಮಸ್ಯೆ ಬಂದರೂ ಹನುಮಂತನನ್ನು ಸ್ಮರಿಸಿ ಹನುಮಂತನಿಗೆ ಇಷ್ಟವಾದ ವಸ್ತುಗಳನ್ನು ಅರ್ಪಿಸಿ ಪೂಜೆ ಮಾಡಿದರೆ ಯಾವ ಸಮಸ್ಯೆ ಇದ್ದರೂ ಅದರಿಂದ ಹೊರ ಬರುತ್ತಾರೆ.

Astrology
WhatsApp Group Join Now
Telegram Group Join Now

Post navigation

Previous Post: ನಾಳೆ ಶಕ್ತಿಶಾಲಿ ಸಂಕಷ್ಟ ಚತುರ್ಥಿ, ಮಲಗುವ ಮುನ್ನ ಹಾಸಿಗೆ ಪಕ್ಕ ಇದನ್ನು ಇಟ್ಟು ಮಲಗಿದರೆ ದುಡ್ಡು ಹೇಗಾದರೂ ಕೈ ಸೇರುತ್ತದೆ…
Next Post: ಮೀನ ರಾಶಿ ಬಗ್ಗೆ ನಿಮಗೆ ಗೊತ್ತಿರದ ಅಚ್ಚರಿ ಸಂಗತಿಗಳು ಇವು, ಈ ರಾಶಿಯವರಲ್ಲಿ ನಿಗೂಢತೆ ಹೆಚ್ಚು ಯಾಕೆ ಅಂತ ನೋಡಿ.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore