Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ವೃಶ್ಚಿಕ ರಾಶಿಯವರಿಗೆ ಗುರುಬಲ ಆರಂಭ.! ಏನೆಲ್ಲಾ ಯೋಗಗಳಿವೆ ನೋಡಿ.!

Posted on April 18, 2024 By Kannada Trend News No Comments on ವೃಶ್ಚಿಕ ರಾಶಿಯವರಿಗೆ ಗುರುಬಲ ಆರಂಭ.! ಏನೆಲ್ಲಾ ಯೋಗಗಳಿವೆ ನೋಡಿ.!

 

ವೃಶ್ಚಿಕ ರಾಶಿಯವರಿಗೆ ಮೇ 1ನೇ ತಾರೀಖಿನಿಂದ ಗುರು ಬಲ ಪ್ರಾರಂಭವಾಗುತ್ತಿದೆ. ಹಾಗೂ ಮುಂದಿನ ವರ್ಷ 2025 ಮೇ 1ನೇ ವಾರದ ತನಕ ಗುರುಬಲ ಇರುವಂತದ್ದು. ಒಂದು ವರ್ಷ ಸುಧೀರ್ಘ ವಾದಂತಹ ಗುರುಬಲ ಇರುತ್ತದೆ. ಕೃತಿಕ ನಕ್ಷತ್ರ ಮೊದಲನೇ ಪಾದ ಮೇಷ ರಾಶಿಯಿಂದ ಗುರು ಗ್ರಹ ಕೃತಿಕ ನಕ್ಷತ್ರ ಎರಡನೇ ಪಾದ ವೃಷಭ ರಾಶಿಗೆ ಗುರು ಸಂಚಾರವಾಗುತ್ತಾ ಇದೆ.

ಹಾಗಾದರೆ ನೀವು ಯಾವ ರೀತಿಯಲ್ಲಿ ಅಭಿವೃದ್ಧಿಯನ್ನು ಹೊಂದುತ್ತೀರಿ ಹಾಗೂ ಯಾವ ಯಾವ ರೀತಿ ಪರಿಹಾರವನ್ನು ಮಾಡಿಕೊಳ್ಳಬೇಕು. ಅದರಲ್ಲೂ ಜೀವನದಲ್ಲಿ ಇದರಾಗುವಂತಹ ಯಾವುದೇ ಕಷ್ಟಗಳನ್ನು ದೂರ ಮಾಡಿಕೊಳ್ಳಬೇಕು ಎಂದರೆ ಏನೆಲ್ಲಾ ನಿಯಮಗಳನ್ನು ಅನುಸರಿಸಬೇಕಾಗುತ್ತದೆ ವೃಶ್ಚಿಕ ರಾಶಿಯವರು ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.

ನಿಮಗೆ ಧನಾದಿಪತಿ ಕುಟುಂಬಾಧಿಪತಿ ಪಂಚಮಾಧಿಪತಿ ಗುರುಗ್ರಹ. ವೃಶ್ಚಿಕ ರಾಶಿಯವರು ಸಾಮಾನ್ಯವಾಗಿ ಹಠವಾದಿಗಳು, ಮುಂಗೋಪಿ ಗಳು ಎಂದೇ ಹೇಳಬಹುದು. ಏಕೆoದರೆ ಇವರು ತಕ್ಷಣವೇ ಯಾವುದೇ ಒಂದು ತೀರ್ಮಾನವನ್ನು ಯೋಚಿಸದೇ ತೆಗೆದುಕೊಳ್ಳುತ್ತಾರೆ ಇವರ ತೀರ್ಮಾನವನ್ನು ಬೇರೆ ಯಾರು ಕೂಡ ಬದಲಾಯಿಸಲು ಸಾಧ್ಯವಿಲ್ಲ ಆದ್ದರಿಂದ ಇವರು ಅತಿ ಹೆಚ್ಚಾಗಿ ಸಣ್ಣಪುಟ್ಟ ವಿಚಾರಕ್ಕೂ ಕೂಡ ಕೋಪಗೊಳ್ಳುತ್ತಾರೆ.

ಈ ಸುದ್ದಿ ಓದಿ:- ನಿಶ್ಯಕ್ತಿ, ಸುಸ್ತು, ಕಣ್ಣು ಉರಿ, ಏನೇ ಇರಲಿ ಈ ಮನೆ ಮದ್ದು ಬಳಸಿ ತಕ್ಷಣವೇ ಕಡಿಮೆಯಾಗುತ್ತದೆ.!

ಆದ್ದರಿಂದಲೇ ಇವರನ್ನು ಹಠವಾದಿಗಳು ಮುಂಗೋಪಿಗಳು ಎಂದು ಕರೆಯುತ್ತಾರೆ. ಆದರೆ ಮೇ ಒಂದನೇ ತಾರೀಕು 2024 ರಿಂದ ಮೇ 1ನೇ ತಾರೀಕು 2025 ಮೊದಲನೇ ವಾರದ ತನಕ ವೃಶ್ಚಿಕ ರಾಶಿಯವರು ಶಾಂತ ಸ್ವಭಾವವಾಗಿ ಇರುತ್ತಾರೆ. ಇವರು ಯಾವುದಕ್ಕೂ ಕೂಡ ಹೆಚ್ಚು ಕೋಪಗೊಳ್ಳುವುದಿಲ್ಲ ಸಮಾಧಾನವಾಗಿ ಎಲ್ಲಾ ರೀತಿಯ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿರುತ್ತಾರೆ. ಬೇರೆಯವರ ಎಲ್ಲ ಕಷ್ಟಗಳನ್ನು ಸಹ ಸಮಾಧಾನವಾಗಿ ಕೇಳುತ್ತೀರಿ.

ಹಾಗೂ ತಮ್ಮ ಕೈಲಾದಷ್ಟು ಸಹಾಯವನ್ನು ಕೂಡ ಇವರು ಮಾಡುತ್ತಾರೆ. ಗುರುಬಲ ಪ್ರಾರಂಭವಾದ ಮೇಲೆ ಮೊದಲನೆಯದಾಗಿ ನಿಮ್ಮ ವ್ಯಕ್ತಿತ್ವ ದಲ್ಲಿ, ನಿಮ್ಮ ಜೀವನ ಶೈಲಿ, ನಿಮ್ಮ ಯೋಚನಾ ಸ್ವಭಾವ ಎಲ್ಲದರಲ್ಲಿ ಯೂ ಕೂಡ ಬದಲಾವಣೆ ಉಂಟಾಗುತ್ತದೆ. ದೇವರನ್ನೇ ನಂಬುವುದಿಲ್ಲ ಎನ್ನುವಂತಹ ಮಾತುಗಳನ್ನು ಆಡುತ್ತಿದ್ದಂತಹ ವೃಶ್ಚಿಕ ರಾಶಿಯವರು ಮೇ 1ನೇ ತಾರೀಖಿನ ನಂತರ ಅತಿಯಾಗಿ ದೇವರ ಮೇಲೆ ನಂಬಿಕೆ ಯನ್ನು ಇಡುತ್ತಾರೆ.

ಪ್ರತಿನಿತ್ಯ ದೇವರ ಪೂಜೆಯನ್ನು ಮಾಡುವುದರ ಮೂಲಕ ಯಾವುದೆಲ್ಲ ಪುಣ್ಯಕ್ಷೇತ್ರಗಳು ಇದೆ ಎನ್ನುವುದನ್ನು ತಿಳಿದುಕೊಂಡು ಅಲ್ಲೆಲ್ಲವೂ ಸಹ ಪ್ರಯಾಣ ಮಾಡುವ ಸಂದರ್ಭಗಳು ಕೂಡ ಬರುತ್ತದೆ. ಯಾವುದೇ ಕಾರಣಕ್ಕೂ ಯಾರು ಕೂಡ ಸುಳ್ಳನ್ನು ಹೇಳಬಾರದು ಬೇರೆಯವರ ಮೇಲೆ ಕೆಟ್ಟ ಮಾತುಗಳನ್ನು ಆಡಿ ಅಪಪ್ರಚಾರ ಮಾಡಬಾರದು ಎನ್ನುವಂತಹ ಸ್ವಭಾವಗಳನ್ನು ಸಹ ನೀವು ಹೊಂದುತ್ತೀರಿ.

ಈ ಸುದ್ದಿ ಓದಿ:- ಹಳೆ ಸೀರೆಯಲ್ಲಿ ಒಂದು ರೂಪಾಯಿ ಖರ್ಚು ಇಲ್ಲದೆ ಡೋರ್ ಮ್ಯಾಟ್ ತಯಾರಿಸಿ

ಜೊತೆಗೆ ನಿಮ್ಮ ಸುತ್ತಮುತ್ತಲೂ ಕೂಡ ಎಷ್ಟೇ ಜನ ನಿಮಗೆ ಕೆಟ್ಟದ್ದನ್ನು ಬಯಸಿದರು ನೀವು ಅವರಿಗೆ ಒಳ್ಳೆಯದನ್ನೇ ಬಯಸುತ್ತೀರಿ. ನಿಮ್ಮ ಆರ್ಥಿಕತೆ ಆದಷ್ಟು ಸುಧಾರಿಸುತ್ತದೆ ಅರ್ಥಾಷ್ಟಮ ಶನಿಯಿಂದಾಗಿ ಬಹಳಷ್ಟು ವೃಶ್ಚಿಕ ರಾಶಿಯ ಜನರಿಗೆ ಇದ್ದಕ್ಕಿದ್ದ ಹಾಗೆ ಆರ್ಥಿಕ ಸಂಕಷ್ಟಗಳು ಎದುರಾಗಿತ್ತು.

ಆದರೆ ಇನ್ನು ಮುಂದೆ ಅದೆಲ್ಲವೂ ಕೂಡ ಸರಿ ಹೋಗುತ್ತದೆ ನೀವು ಆ ಒಂದು ಸಂದರ್ಭದಲ್ಲಿ ಬೇರೆಯವರಿಂದ ಸಾಲ ಪಡೆದುಕೊಂಡಿದ್ದರೆ ಅವೆಲ್ಲವನ್ನು ಸಹ ತೀರಿಸುವ ದಾರಿಗಳು ಸಹ ಸಿಗುತ್ತದೆ. ಹಾಗೂ ಸ್ವಲ್ಪ ದಿನದಲ್ಲಿ ನೀವು ಸಂಪಾದನೆ ಮಾಡಿದಂತಹ ಹಣಕಾಸಿನಲ್ಲಿ ಒಂದಷ್ಟು ಆಸ್ತಿಯನ್ನು ಸಹ ಮಾಡುತ್ತೀರಿ.

ಕೌಟುಂಬಿಕ ಕಲಹಗಳು ಇದ್ದರೆ ಅದು ಪರಿಹಾರವಾಗುತ್ತದೆ ಹೀಗೆ ಇನ್ನು ಎಷ್ಟೇ ಸಮಸ್ಯೆಗಳಿದ್ದರೂ ಕೂಡ ಅದನ್ನು ದೂರ ಮಾಡಿಕೊಳ್ಳುವುದಕ್ಕೆ ನೀವು ಗುರುವಿನ ಆರಾಧನೆ ಮಾಡುವುದು ಬಹಳ ಮುಖ್ಯವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Useful Information

Post navigation

Previous Post: ನಿಶ್ಯಕ್ತಿ, ಸುಸ್ತು, ಕಣ್ಣು ಉರಿ, ಏನೇ ಇರಲಿ ಈ ಮನೆ ಮದ್ದು ಬಳಸಿ ತಕ್ಷಣವೇ ಕಡಿಮೆಯಾಗುತ್ತದೆ.!
Next Post: ಬೆಂಗಳೂರು ಸಾರಿಗೆ ವ್ಯವಸ್ಥೆಗೆ ಸಂಸದ ಪಿ.ಸಿ ಮೋಹನ್​ ಭರಪೂರ ಕೊಡುಗೆ

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore