Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಈ ಮರದ ಒಂದು ಕಡ್ಡಿ ಮನೆಯಲ್ಲಿದ್ದರೆ ಸಾಕು ನಿಮ್ಮ ಸಾಲಗಳೆಲ್ಲಾ ತೀರಿ ಕುಬೇರರಾಗುತ್ತೀರಿ.!

Posted on April 22, 2024 By Kannada Trend News No Comments on ಈ ಮರದ ಒಂದು ಕಡ್ಡಿ ಮನೆಯಲ್ಲಿದ್ದರೆ ಸಾಕು ನಿಮ್ಮ ಸಾಲಗಳೆಲ್ಲಾ ತೀರಿ ಕುಬೇರರಾಗುತ್ತೀರಿ.!

 

ಈ ಪ್ರಕೃತಿಯೇ ಒಂದು ವಿಸ್ಮಯ. ಈ ಪ್ರಕೃತಿ ಎಷ್ಟು ಕುತೂಹಲಕಾರಿ ವಿಷಯಗಳನ್ನು ತನ್ನೊಡಲಲ್ಲಿ ಇಟ್ಟುಕೊಂಡಿದೆ ಎಂದರೆ ಸಹಸ್ರಾರು ವರ್ಷಗಳು ಕಳೆದರೂ ಕೂಡ ಇನ್ನು ಸಂಶೋಧನೆಗಳು ನಡೆಯುತ್ತಾ ಹೊಸ ವಿಷಯಗಳ ಆವಿಷ್ಕಾರ ಆಗುತ್ತಲೇ ಇದೆ. ಆಯಾ ಕಾಲಘಟ್ಟದಲ್ಲಿ ಜನರು ತಮಗೆ ಅರಿವಾದ, ಅವರು ಪರಿಹಾರ ಕಂಡ ಸಂಗತಿಗಳನ್ನು ದಾಖಲೆ ಮಾಡಿ ಹೋಗಿದ್ದಾರೆ.

ಈಗ ನಾವು ಇದನ್ನು ವಿಜ್ಞಾನ ಎಂದು ಕರೆದರು ನಮಗಿಂತ ನಮ್ಮ ಪೂರ್ವಿಕರು ಇದನ್ನು ಚೆನ್ನಾಗಿ ಬಲ್ಲವರಾಗಿದ್ದರು ಮತ್ತು ಇದಕ್ಕೆ ನಂಬಿಕೆಯ ಚೌಕಟ್ಟು ಹಾಕಿ ಆಚರಣೆಯಲ್ಲಿ ತಂದಿದ್ದರು ಎನ್ನುವುದನ್ನು ಅಲ್ಲಗಳೆಯಬಾರದು. ಕಾಲ ಕಳೆದ ಬಳಿಕ ನಮ್ಮ ನಿರ್ಲಕ್ಷದಿಂದಲೋ ಅಥವಾ ಇದನ್ನು ಸರಿಯಾಗಿ ಅರಿತುಕೊಳ್ಳಲಾಗದೆ ಸಮಸ್ಯೆಗಳಿಗೂ ಅಂಗೈ ನಲ್ಲಿ ಔಷಧಿ ಇಟ್ಟುಕೊಂಡು ಊರೆಲ್ಲಾ ಸುತ್ತುವಂತಾಯಿತು.

ಈ ಸುದ್ದಿ ಓದಿ:- ನಿಮ್ಮ ಮಗುವಿಗೆ ಈ ಹೆಸರಿಟ್ಟರೆ ತುಂಬಾ ಅದೃಷ್ಟ.!

ಈ ಪ್ರಕೃತಿಯ ಒಂದು ಔಷಧಿ. ಆಯುರ್ವೇದದಲ್ಲಿ ಮನುಷ್ಯನ ಯಾವುದೇ ಕಾಯಿಲೆಯನ್ನು ಪ್ರಕೃತಿಯಲ್ಲಿ ಸಿಗುವ ವಸ್ತುಗಳನ್ನು ಬಳಸಿಕೊಂಡು ಗುಣ ಮಾಡಬಹುದು, ಪ್ರಕೃತಿಯೇ ಔಷಧಿ ಎಂದು ಹೇಳಲಾಗಿದೆ.

ಈ ರೀತಿಯಾಗಿ ಆಯುರ್ವೇದದಲ್ಲಿ ಮಾತ್ರವಲ್ಲದೆ ಕೇವಲ ದೇಹಕ್ಕಾಗುವ ಕಾಯಿಲೆಗಳನ್ನು ಗುಣ ಮಾಡುವುದು ಮಾತ್ರವಲ್ಲದೆ ಮನುಷ್ಯನಿಗೆ ಆರ್ಥಿಕವಾಗಿ ಮತ್ತು ಕೌಟುಂಬಿಕವಾಗಿ ಉಂಟಾಗುವ ಸಂಘರ್ಷಗಳಿಗೂ ಕೂಡ ಪ್ರಕೃತಿಯಲ್ಲಿ ಪರಿಹಾರ ಇದ್ದೇ ಇದೆ. ಈ ಪ್ರಕೃತಿಯಲ್ಲಿರುವ ಗಿಡಮರ ಬಳ್ಳಿ ಹೂವು ಅಂದವನ್ನು ಮಾತ್ರವಲ್ಲದೆ ಔಷಧಿ ಗುಣ, ಆಹಾರಕ್ಕೆ ರುಚಿ ಮತ್ತು ಇನ್ನು ಕೆಲವು ಗಿಡ ಮರ ಬಳ್ಳಿಗಳು ದೈವಿಕ ಗುಣವನ್ನು ಹೊಂದಿವೆ.

ಭಗವಂತನ ಮೂಲಕ ಮಾತ್ರ ಪರಿಹರಿಸಲು ಸಾಧ್ಯವಾಗುವ ಮನುಷ್ಯನ ಕ’ಷ್ಟಕಾರ್ಪಣ್ಯಗಳಿಗೆ ಇಂತಹ ದೈವಿಕ ಶಕ್ತಿಯುಳ್ಳ ವಸ್ತುಗಳು ಪರಿಹಾರವಾಗಿ ಸಹಾಯಕವಾಗುತ್ತದೆ. ಇಂತಹದೇ ಒಂದು ದೈವಿಕ ಶಕ್ತಿಯುಳ್ಳ ಗಿಡದ ಒಂದು ಕಡ್ಡಿಯನ್ನು ಬಳಸಿ ಮನುಷ್ಯನಿಗೆ ಜೀವನದಲ್ಲಿ ಬರುವ ಅತಿ ದೊಡ್ಡ ಕ’ಷ್ಟವಾದ ಸಾಲದ ಸಮಸ್ಯೆಗೆ ಹೇಗೆ ಪರಿಹಾರ ಕಂಡುಕೊಳ್ಳುವುದು ಎನ್ನುವ ಆಸಕ್ತಿಕರ ಸಂಗತಿ ಬಗ್ಗೆ ಈ ಲೇಖನದಲ್ಲಿ ಮಾಹಿತಿ ಹಂಚಿಕೊಳ್ಳಲು ಬಯಸುತ್ತಿದ್ದೇವೆ.

ಈ ಸುದ್ದಿ ಓದಿ:- ನಿಮ್ಮ ಮಕ್ಕಳಿಗೆ ಈ ರೀತಿ ಹೆಸರು ಇಡಬೇಡಿ ಕಷ್ಟ ತಪ್ಪಿದಲ್ಲ.!

ಬಿಳಿ ಎಕ್ಕದ ಹೂವಿನ ಬಗ್ಗೆ ಎಲ್ಲರೂ ಕೇಳರುತ್ತೀರಿ. ಹಳ್ಳಿಗಳಲ್ಲಿ ಇರುವವರಿಗೆ ತಮ್ಮ ಮನೆ ಅಕ್ಕ ಪಕ್ಕ ಇದು ಸಿಗುತ್ತದೆ ಇನ್ನು ನಗರ ಪ್ರದೇಶದಲ್ಲಿರುವವರು ಶಿವನ ಪೂಜೆಗೆ ಗಣಪತಿಗೆ ಹಾರ ಮಾಡಿ ಹಾಕಲು ಹೂವಿನ ಅಂಗಡಿಯಲ್ಲಿ ಇದನ್ನು ಖರೀದಿಸಿರುತ್ತೀರಿ. ಈ ಹೂವಿಗೆ ಮಾತ್ರವಲ್ಲದೆ ಈ ಗಿಡದ ಬೇರುಕಡ್ಡಿ ಎಲೆ, ಹಾಲಿಗೂ ಕೂಡ ಅಪಾರವಾದ ಶಕ್ತಿ ಇದೆ ನಿಮ್ಮ ಸಾಲದ ಹೊರೆ ಇಳಿಸುವಂತಹ ಅಪಾರ ಶಕ್ತಿಯು ಈ ಗಿಡದಿಂದ ಮಾಡುವ ಒಂದು ಆಚರಣೆಗೆ ಇದೆ.

ಹೇಗಂದರೆ ಒಂದು ಹುಣ್ಣಿಮೆ ಅಥವಾ ಅಮಾವಾಸ್ಯೆ ದಿನದ ಹಿಂದಿನ ದಿನದಂದು ಮನೆಯನ್ನು ಸ್ವಚ್ಛ ಮಾಡಿ ಈ ಗಿಡದ ಕಡ್ಡಿಯನ್ನು ಮನೆಗೆ ತರಬೇಕು. ಐದು ಎಕ್ಕದ ಗಿಡದ ಕಡ್ಡಿಯನ್ನು ತಂದರೆ ಸಾಕು. ಗ್ರಂಥಿಕೆ ಅಂಗಡಿಗಳಲ್ಲೂ ಕೂಡ ಇದು ಸಿಗುತ್ತದೆ, ಇದನ್ನು ಗಿಡದಿಂದ ತರುವರಾದರೆ ಮೊದಲು ಗಣಪತಿಯನ್ನು ಪ್ರಾರ್ಥಿಸಿ, ನಂತರ ಎಕ್ಕದ ಗಿಡಕ್ಕೆ ಪೂಜೆ ಮಾಡಿ ನಂತರವಷ್ಟೇ ತರಬೇಕು.

ಈ ಸುದ್ದಿ ಓದಿ:- ಸಾಲ ಕೊಡುವಾಗ ಪಡೆಯುವಾಗ ಈ ಮ್ಯಾಜಿಕ್ ನಂಬ‌ರ್ ಹೇಳಿಕೊಳ್ಳಿ | ಸಾಲ ತೀರುತ್ತೆ, ಕೊಟ್ಟ ಹಣ ವಾಪಸ್ ಬರುತ್ತೆ.!

ಹೀಗೆ ಮಾಡುವಾಗ ಗಿಡಕ್ಕೆ ಕ್ಷಮೆ ಯಾಚಿಸಿ ಬರಬೇಕು. ಅಮಾವಾಸ್ಯೆ ದಿನ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಶುಚಿಯಾಗಿ ಮೊದಲು ಗಣಪತಿಗೆ ನಂಬಿಸಿ ಮನೆಯಲ್ಲಿ ದೇವರ ಪೂಜೆ ಮಾಡಿ ನಿಮ್ಮ ಕುಲದೇವರ ಇಷ್ಟ ದೇವರ ಪ್ರಾರ್ಥನೆ ಮಾಡಿ ತಾಯಿ ಮಹಾಲಕ್ಷ್ಮಿಯನ್ನು ಆರ್ಥಿಕ ಸಂಕಷ್ಟದಿಂದ ಪರಿಹರಿಸುವಂತೆ ಕೇಳಿ.

ಈ ಗಿಡದ ಕಡ್ಡಿಗಳನ್ನು ಒಂದು ಬಿಳಿ ದಾರದಿಂದ ಕಟ್ಟಿ ಅರಿಶಿಣ ಕುಂಕುಮ ಹಚ್ಚಿ ಪೂಜೆ ಮಾಡಿ ಮನೆಯ ಮುಖ್ಯದ್ವಾರದ ಮೇಲೆ ಮನೆ ಒಳಗಡೆಗೆ ಬರುವಾಗ ತಲೆ ಮೇಲೆ ಇರುವಂತೆ ಕಟ್ಟಬೇಕು ಮತ್ತು ಪ್ರತಿದಿನವೂ ಹೂವು ನೀರು ಇಟ್ಟು ಇದಕ್ಕೆ ಭಕ್ತಿಯಿಂದ ಪೂಜೆ ಮಾಡಿ ನಿಮ್ಮ ಕಷ್ಟ ಪರಿಹರಿಸುವಂತೆ ಕೇಳಿಕೊಳ್ಳಬೇಕು. ಈ ಸರಳ ಆಚರಣೆ ಮಾಡಿ ನಿಮ್ಮ ಹಣಕಾಸಿನ ಸಮಸ್ಯೆ ಹೇಗೆ ಪರಿಹಾರ ಆಗುತ್ತದೆ ಎಂದು ನೀವೇ ನೋಡಿ.

 

Useful Information

Post navigation

Previous Post: ಬಾಯಿಯಲ್ಲಿ ನೀರೂರಿಸುವ ಮಾವಿನಕಾಯಿ ತಿಳಿ ಸಾರು, ಮಾವಿನಕಾಯಿ ರಸಂ ಮಾಡುವ ವಿಧಾನ.!
Next Post: ಮೀನಾ ರಾಶಿಯವರ ಮೇ ತಿಂಗಳ ರಾಶಿ ಭವಿಷ್ಯ, ಈ ತಿಂಗಳಲ್ಲಿ ನೀವು ಮುಟ್ಟಿದ್ದೆಲ್ಲಾ ಚಿನ್ನ ಆದರೆ ಈ ವಿಚಾರವಾಗಿ ಎಚ್ಚರವಾಗಿರಬೇಕು.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore