Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ವಿವಾಹ ವಿಳಂಬವಾಗುತ್ತಿದೆಯೇ? ಶೀಘ್ರವಾಗಿ ಕಂಕಣ ಬಲ ಕೂಡಿ ಬರಲು ಈ ಸಿಂಪಲ್ ರೆಮಿಡಿ ಮಾಡಿ ಸಾಕು.!

Posted on May 29, 2024 By Kannada Trend News No Comments on ವಿವಾಹ ವಿಳಂಬವಾಗುತ್ತಿದೆಯೇ? ಶೀಘ್ರವಾಗಿ ಕಂಕಣ ಬಲ ಕೂಡಿ ಬರಲು ಈ ಸಿಂಪಲ್ ರೆಮಿಡಿ ಮಾಡಿ ಸಾಕು.!

 

ಮದುವೆ ಎನ್ನುವುದು ಜೀವನದ ಒಂದು ಪ್ರಮುಖ ಘಟ್ಟ. ಬದುಕಿಗೆ ನಿಜವಾದ ಅರ್ಥ ಸಿಗುವುದೇ ಮದುವೆ ಆದ ಮೇಲೆ. ಹಾಗೆ ಪ್ರತಿಯೊಬ್ಬರ ಬದುಕಿನಲ್ಲಿಯೂ ಇದಕ್ಕೆ ಒಂದು ಪ್ರಮುಖ ಸ್ಥಾನ ಇದ್ದೇ ಇದೆ. ಆದರೆ ಎಲ್ಲರಿಗೂ ಸರಿಯಾದ ವಯಸ್ಸಿಗೆ ಮದುವೆ ಆಗುವ ಯೋಗ ಇರುವುದಿಲ್ಲ.

ಕೆಲವರಿಗೆ ಎಷ್ಟೇ ವರ್ಷಗಳಿಂದ ಸಂಬಂಧ ನೋಡುತ್ತಿದ್ದರೂ ಕೂಡಿಬರುವುದಿಲ್ಲ, ಇನ್ನೆಷ್ಟೋ ಜನರಿಗೆ ಪದೇಪದೇ ಮದುವೆ ಹಂತಕ್ಕೆ ಬಂದು ಮದುವೆ ಮುರಿದು ಬೀಳುತ್ತಿರುತ್ತದೆ. ಹೀಗೆ ಸಮಸ್ಯೆಗಳು ಎದುರಾಗುವುದಕ್ಕೆ ಜ್ಯೋತಿಷ್ಯದ ಪ್ರಕಾರ ಸಪ್ತಮ ಸ್ಥಾನ, ಪಂಚಮ ಸ್ಥಾನ ಹಾಗೂ ಕುಟುಂಬದ ಸ್ಥಾನವಾದ ಎರಡನೇ ಮನೆಯಲ್ಲಿ ಅಡಚಣೆ ಇರುವುದೇ ದೋಷಗಳಿರುವುದೇ ಕಾರಣ ಎಂದು ಹೇಳಲಾಗುತ್ತದೆ.

ಇನ್ನು ಇವುಗಳ ಪರಿಹಾರದ ಬಗ್ಗೆ ಹೇಳುವುದಾದರೆ ಯಂತ್ರ ಮಂತ್ರದಿಂದ ವಿವಾಹ ವಿಳಂಭ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಶಿವ ಪಾರ್ವತಿ ಯಾಗ, ಗಣಪತಿ ಹೋಮ, ಕಾತ್ಯಾಯಿನಿ, ಹೋಮ ಶಿವ ಪಾರ್ವತಿ ಕಲ್ಯಾಣ ಸ್ತೋತ್ರ ಹೇಳುವುದು ಹೀಗೆ ಹತ್ತಾರು ಸಲಹೆಗಳನ್ನು ವೈದಿಕ ಸಂಪ್ರದಾಯದ ಪ್ರಕಾರವಾಗಿ ಸೂಚಿಸಲಾಗುತ್ತದೆ.

ಈ ಸುದ್ದಿ ಓದಿ:- ಗೃಹಲಕ್ಷ್ಮಿ ಮಹಿಳೆಯರಿಗೆ ಬಿಗ್ ಶಾ ಕ್ ! ರಾತ್ರೋರಾತ್ರಿ ಸರ್ಕಾರದಿಂದ ಹೊಸ ರೂಲ್ಸ್, ಇನ್ನು ಮುಂದೆ ಇಂತಹ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಬರಲ್ಲ.!

ಇವುಗಳಿಗೆ ಹೆಚ್ಚು ಕಟ್ಟು ನಿಟ್ಟಿನ ನಿಯಮ ಹಾಗೂ ಸಮಯ ಮತ್ತು ಹಣದ ವಿನಿಯೋಗವನ್ನು ಮಾಡಲೇಬೇಕು. ಇದ್ಯಾವುದೂ ಇಲ್ಲದೆ ಸಿಂಪಲ್ ಆಗಿಯೇ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ನೀವು ಎದುರು ನೋಡುತ್ತಿದ್ದರೆ ನಾವು ಹೇಳುತ್ತಿರುವ ಈ ಸರಳ ಟ್ರಿಕ್ ಪಾಲಿಸಿ ನೋಡಿ ಸಾಕು.

ಬಹಳ ನಂಬಿಕೆ ಇಟ್ಟು ಶ್ರದ್ಧೆಯಿಂದ ಈ ಒಂದು ಚಟುವಟಿಕೆ ಮಾಡಿ ನಂತರ ನಿಮ್ಮ ಜೀವನದಲ್ಲಿ ಆಗುವ ಬದಲಾವಣೆಯನ್ನು ಕಂಡು ನೀವೇ ಆಶ್ಚರ್ಯಗೊಳ್ಳುತ್ತೀರಿ. ಒಂದು ದಿನ ನೀವು ಶುಭ ಮುಂಜಾನೆ ಎದ್ದು ಮಡಿಯಾಗಿ ನಿಮ್ಮ ಮನೆ ದೇವರಿಗೆ ದೀಪ ಹಚ್ಚಿ ಪ್ರಾರ್ಥನೆ ಸಲ್ಲಿಸಿ ಯಾವುದಾದರೂ ಪಾರ್ಕಿನ ಹತ್ತಿರ ಅಥವಾ ಊರಿಂದ ಆಚೆ ಇರುವ ನಿರ್ಜನ ಪ್ರದೇಶವನ್ನು ತಲುಪಿ.

ನೀವು ಈ ಒಂದು ತಂತ್ರ ಮಾಡುವ ಸಮಯದಲ್ಲಿ ನಿಮ್ಮನ್ನು ಯಾರು ಗಮನಿಸದೇ ಇರುವುದೇ ಒಳ್ಳೆಯದು. ಒಂದು ಪ್ರಶಾಂತ ಸ್ಥಳದಲ್ಲಿ ಹುಡುಕಿ ಕುಳಿತುಕೊಂಡು ಕೆಳಮುಖವಾಗಿ ತ್ರಿಭುಜಗಳನ್ನು ಬರೆಯಿರಿ. ಈ ರೀತಿ ನೀವು ಎರಡು ತ್ರಿಭುಜವನ್ನು ಕೆಳಮುಖವಾಗಿರುವಂತೆ ಬರೆಯಬೇಕು ಇವು ಒಂದರ ಕೆಳಗೆ ಒಂದು ಇರಬೇಕು ಮತ್ತು ಎರಡರ ಒಳಗೂ ಕೂಡ ನಿಮ್ಮ ಹೆಸರನ್ನು ಬರೆಯಬೇಕು.

ಈ ಸುದ್ದಿ ಓದಿ:- ಮನೆಯಲ್ಲಿ ಕಷ್ಟ ಕಳೆದು ಹಣ, ಬಂಗಾರ ಹರಿದು ಬರಬೇಕೆಂದರೆ ಇದೊಂದು ಕೆಲಸ ಮಾಡಿ ಸಾಕು.!

ಇದಾದ ಮೇಲೆ ಹೂಗಳಿಂದ ಅಲಂಕರಿಸಿ ಧೂಪದೀಪದಿಂದ ಆ ತ್ರಿಭುಜವನ್ನು ಪೂಜಿಸಿ ಯಾವುದಾದರೂ ಒಂದು ಸಿಹಿ ಪದಾರ್ಥವನ್ನು ನಿಮ್ಮ ಬಾಯಿಯ ಒಳಗೆ ಇಟ್ಟುಕೊಳ್ಳಬೇಕು. ಬೆಲ್ಲ ಸಕ್ಕರೆ ಅಥವಾ ಯಾವುದೇ ಮನೆಯಿಂದ ತೆಗೆದುಕೊಂಡ ಹೋದ ಸಿಹಿ ತಿನಿಸು ಅಥವಾ ಅಂಗಡಿಯಿಂದ ತಂದ ಚಾಕಲೇಟ್ ಇಟ್ಟುಕೊಂಡು ಓ ಜಾಲ ಓ ಜಾಲ ಎನ್ನುವ ಮಂತ್ರವನ್ನು 7 ಬಾರಿ ಹೇಳಬೇಕು.

ನಂತರ ಅಲ್ಲಿಂದ ಹೊರಟು ಬರಬೇಕು. ನೀವು ಮೊದಲ ಬಾರಿಗೆ ಇದನ್ನು ಮಾಡಿದ ತಕ್ಷಣವೇ ನಿಮಗೆ ಇದರ ಸಕರಾತ್ಮಕ ಪರಿಣಾಮ ಎಷ್ಟಿದೆ ಎನ್ನುವುದು ತಿಳಿಯುತ್ತದೆ. ನಂತರ ನೀವು ಆ ಜಾಗಕ್ಕೆ ಹೋಗಲೇಬಾರದು ಎನ್ನುವ ಯಾವುದೇ ನಿಯಮ ಇಲ್ಲ ಇದೊಂದು ಯಾವುದೇ ಅಡ್ಡ ಪರಿಣಾಮ ಇರದಂತಹ ತಂತ್ರ ವಿದ್ಯೆಯ ಪೂಜೆಯಾಗಿದೆ.

ಹಾಗಾಗಿ ಯಾವುದೇ ಭಯವಿಲ್ಲದೆ ಯಾರು ಯಾವುದೇ ಸಮಯದಲ್ಲಿ ಈ ಮೇಲೆ ತಿಳಿಸಿದ ವಿಧಾನದ ಮೂಲಕ ಈ ಒಂದು ಚಟುವಟಿಕೆ ಮಾಡಿ ಫಲಿತಾಂಶ ಕಾಣಬಹುದು. ನೀವು ಟ್ರೈ ಮಾಡಿ ನಂತರ ರಿಸಲ್ಟ್ ಅನ್ನು ಕಮೆಂಟ್ ಮಾಡಿ ತಿಳಿಸಿ.

Useful Information
WhatsApp Group Join Now
Telegram Group Join Now

Post navigation

Previous Post: ಗೃಹಲಕ್ಷ್ಮಿ ಮಹಿಳೆಯರಿಗೆ ಬಿಗ್ ಶಾ ಕ್ ! ರಾತ್ರೋರಾತ್ರಿ ಸರ್ಕಾರದಿಂದ ಹೊಸ ರೂಲ್ಸ್, ಇನ್ನು ಮುಂದೆ ಇಂತಹ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಬರಲ್ಲ.!
Next Post: ಮನೆ, ಜಮೀನು, ಫ್ಲಾಟ್ ಇರುವ ಆಸ್ತಿಗಳ ಮಾಲೀಕರಿಗೆ ಹೊಸ ರೂಲ್ಸ್ ಜಾರಿ.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore