ಕಳೆದ ಕೆಲವು ದಿನಗಳಿಂದ ಕಿರುತರ ಲೋಕಕ್ಕೆ ಏನಾಗಿದಿಯೋ ಏನೋ ತಿಳಿದಿಲ್ಲ ಸದಾ ಕಾಲ ಒಂದಲ್ಲ ಒಂದು ಕಾಂಟ್ರವರ್ಸಿ ಎದುರಾಗುತ್ತಲೇ ಇರುತ್ತದೆ. ಹೌದು ನಟ ಚಂದನ ಅವರ ಪ್ರಕರಣ ಮುಗಿದ ನಂತರ ಕನ್ನಡ ಕಿರುತೆರೆ ಎಲ್ಲೋ ಕೂಡ ಇದೀಗ ಸಾಕಷ್ಟು ಸಮಸ್ಯೆಗಳು ಎದುರಾಗಿದೆ ನಿಮ್ಮೆಲ್ಲರಿಗೂ ತಿಳಿದಿರುವಂತೆ ಲಕ್ಷ್ಮಿ ಬಾರಮ್ಮ ಖ್ಯಾತಿಯ ನಟ ಚಂದ್ರನವರು ತೆಲುಗು ಟೆಕ್ನಿಷಿಯನ್ ಟೀಮ್ನೊಂದಿಗೆ ಕಿರಿಕ್ ಮಾಡಿಕೊಂಡು ತೆಲುಗು ಕಿರಿ ಕಡೆಯಿಂದ ಹೊರಬಂದರು ಇವರನ್ನು ಬ್ಯಾನ್ ಮಾಡಲಾಯಿತು. ಈ ಪ್ರಕರಣ ನಡೆದ ಕೆಲವೇ ಕೆಲವು ದಿನದಲ್ಲಿ ನಟನೆ ಮಾಡುವಂತಹ ಅನಿರುದ್ಧವರೂ ಕೂಡ ಧಾರಾವಾಹಿ ತಂಡದಿಂದ ಕಿರಿಕ್ ಮಾಡಿಕೊಂಡು ಹೊರ ಬಂದಿದ್ದಾರೆ ಎಂಬ ವಿಚಾರಗಳು ಹರಿದಾಡುತ್ತಿದ್ದವು.
ಈ ವಿಚಾರಕ್ಕೆ ಸಂಬಂಧಪಟ್ಟಂತೆ ಅನಿರುದ್ಧ ಹಾಗೂ ನಿರ್ದೇಶಕ ಆರೋರು ಜಗದೀಶ್ ಇಬ್ಬರೂ ಕೂಡ ಸುದ್ದಿಗೋಷ್ಠಿಯನ್ನು ನಡೆಸಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಅನಿರುಧ್ ರವರು ಜೊತೆ ಜೊತೆಯಲಿ ಧಾರಾವಾಹಿ ತಂಡದಿಂದ ಹೊರ ಬಿದ್ದಿದ್ದಾರೆ ಹಾಗಾಗಿ ಅವರ ಪಾತ್ರಕ್ಕೆ ಮತ್ತೊಬ್ಬ ನಟರನ್ನು ಆಯ್ಕೆ ಮಾಡಿಕೊಳ್ಳುತ್ತೇವೆ ಎಂದು ಸ್ವತಃ ಆರೂರು ಜಗದೀಶ್ ಅವರೇ ಹೇಳಿದ್ದಾರೆ. ಅನಿರುಧ್ ಅವರು ಮತ್ತೊಮ್ಮೆ ನನ್ನನ್ನು ಜೊತೆ ಜೊತೆಯಲಿ ಧಾರವಹಿ ತಂಡಕ್ಕೆ ಕರೆದರೆ ಖಂಡಿತವಾಗಿಯೂ ಕೂಡ ಶೂಟಿಂಗ್ ಹೋಗುತ್ತೇನೆ ಅಂತ ಅನಿರುಧ್ ಅವರು ಹೇಳಿದ್ದರು. ಈ ಪ್ರಕರಣ ತಣ್ಣಗಾಗುತ್ತಿದ್ದ ಹಾಗೆಯೇ ಮತ್ತೊಂದು ವಿಚಾರ ಇದೀಗ ಬುಗಿಲೆದ್ದಿದೆ ಅಂತಾನೆ ಹೇಳಬಹುದು.
ಹೌದು ಜೊತೆ ಜೊತೆಯಲಿ ಧಾರಾವಾಹಿಯ ಪ್ರಕರಣ ಹಾಗೂ ನಟ ಚಂದನ್ ಕುಮಾರ್ ಅವರಿಗೆ ಸಂಬಂಧಪಟ್ಟ ಪ್ರಕರಣ ಮುಗಿಯುತ್ತಿದ್ದ ಹಾಗೆ ಕಿರುತೆರೆಯಲ್ಲಿ ಮತ್ತೊಂದು ವಿವಾದ ಸೃಷ್ಟಿಯಾಗಿದೆ. ಯಾವುದೇ ಒಂದು ಧಾರಾವಾಹಿ ಮುನ್ನಡೆಯ ಬೇಕಾದರೆ ಅಲ್ಲಿ ಕ್ಯಾಮೆರಾ ಮ್ಯಾನ್ ಮತ್ತು ಟೆಕ್ನಿಷಿಯನ್ ಟೀಮ್ ತುಂಬಾನೇ ಮುಖ್ಯವಾಗಿರುತ್ತದೆ. ಇವೆರಡು ಟೀಮ್ ಇಲ್ಲ ಅಂದರೆ ಧಾರಾವಾಹಿಯನ್ನು ಚಿತ್ರೀಕರಣ ಮಾಡುವುದಕ್ಕೆ ಸಾಧ್ಯವೇ ಇಲ್ಲ. ಹಾಗಾಗಿ ಟೆಕ್ನಿಷಿಯನ್ ಟೀಮ್ ಮತ್ತು ಕ್ಯಾಮೆರಾ ಮ್ಯಾನ್ ಗಳ ಒಕ್ಕೂಟ ನಿರ್ದೇಶಕ ಮತ್ತು ನಿರ್ಮಾಪಕರ ಬಳಿ ಮಾತನಾಡಿ ನಮಗೆ ಸಂಬಳವನ್ನು ಸ್ವಲ್ಪ ಹೆಚ್ಚು ಮಾಡಿ ಅಂತ ಕೇಳಿಕೊಂಡಿದ್ದಾರೆ. ಆದರೆ ಏಕಾಏಕಿ ನಿರ್ದೇಶಕರು ಮತ್ತು ನಿರ್ಮಾಪಕರು ಯಾವುದೇ ಕಾರಣಕ್ಕೂ ಕೂಡ 10 ಪೈಸೆಯು ಸಂಬಳವನ್ನು ಹೆಚ್ಚು ಮಾಡುವುದಿಲ್ಲ ನೀವು ಏನಾದರೂ ಮಾಡಿಕೊಂಡು ಹೋಗಿ ಎಂದು ಅವರ ಮೇಲೆ ಹ-ಲ್ಲೆ ಮಾಡಿದ್ದಾರೆ.
ಅಷ್ಟೇ ಅಲ್ಲದೆ ಅವರನ್ನು ಆಫೀಸ್ ನಿಂದ ಹೊರ ದುಡಿದ್ದಾರೆ ಇದರಿಂದ ಮಾನಸಿಕವಾಗಿ ನೊಂದಂತಹ ಟೆಕ್ನಿಷಿಯನ್ ಟೀಮ್ ಇನ್ನು ಮುಂದೆ ಯಾವುದೇ ಕಾರಣಕ್ಕೂ ಕೂಡ ಯಾವುದೇ ಧಾರಾವಾಹಿಯ ಚಿತ್ರೀಕರಣ ನಡೆಯುವುದಿಲ್ಲ. ನಾವು ಇಲ್ಲದೆ ಇನ್ನು ಮುಂದೆ ಧಾರಾವಾಹಿ ಚಿತ್ರೀಕರಣ ಹೇಗೆ ನಡೆಯುತ್ತದೆ ಹೇಗೆ ಪ್ರಸಾರವಾಗುತ್ತದೆ ಎಂಬುದನ್ನು ನಾವು ನೋಡುತ್ತೇವೆ ದಯವಿಟ್ಟು ಎಲ್ಲಾ ಟೆಕ್ನಿಷಿಯನ್ ಟೀಮ್ ಗಳು ನಮಗೆ ಸಪೋರ್ಟ್ ಮಾಡಿ ನೀವು ಕೂಡ ಶೂಟಿಂಗ್ ನಲ್ಲಿ ಭಾಗವಹಿಸಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ ಸದ್ಯಕ್ಕೆ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಈ ವಿಡಿಯೋ ಹೊರ ಬರುತ್ತಿದ್ದ ಹಾಗೆ ಕೆಲವು ನೆಟ್ಟಿಗರು ಸಂತಸವನ್ನು ವ್ಯಕ್ತಪಡಿಸಿದ್ದಾರೆ ಇನ್ನು ಕೆಲವು ಸೀರಿಯಲ್ ಅಭಿಮಾನಿಗಳು ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಹೌದು ಚಿತ್ರೀಕರಣ ನಡೆಯದೇ ಇದ್ದರೆ ಇನ್ನು ಮುಂದೆ ತಮ್ಮ ನೆಚ್ಚಿನ ಸೀರಿಯಲ್ ನೋಡುವುದಕ್ಕೆ ಸಾಧ್ಯವಾಗುವುದಿಲ್ಲ ಎಂದು ಕೆಲವು ಅಭಿಮಾನಿಗಳು ನಿರಾಶೆ ಹೊಂದಿದ್ದಾರೆ. ಆದರೆ ಇನ್ನೂ ಕೆಲವು ಪುರುಷರು ಮತ್ತು ಮನೆಯಲ್ಲಿ ಇರುವಂತಹ ಹಿರಿಯರು ಸದ್ಯ ಈ ಒಂದು ಕಾರಣದಿಂದ ಧಾರಾವಾಹಿಗಳು ನಿಲ್ಲಲಿ ಎಂದು ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.