Home Entertainment ಕೊನೆಗೂ ಅಭಿಮಾನಿಗಳ ಆಸೆಯನ್ನು ಈಡೇರಿಸಿದ ರಮ್ಯ ಏನದು ಗೊತ್ತಾ.?

ಕೊನೆಗೂ ಅಭಿಮಾನಿಗಳ ಆಸೆಯನ್ನು ಈಡೇರಿಸಿದ ರಮ್ಯ ಏನದು ಗೊತ್ತಾ.?

0
ಕೊನೆಗೂ ಅಭಿಮಾನಿಗಳ ಆಸೆಯನ್ನು ಈಡೇರಿಸಿದ ರಮ್ಯ ಏನದು ಗೊತ್ತಾ.?

ಮೋಹಕತಾರೆ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅಂದರೆ ಎಲ್ಲರಿಗೂ ಕೂಡ ಅಚ್ಚುಮೆಚ್ಚು ಸುಮಾರು ಎರಡು ದಶಕಗಳ ಕಾಲ ಕನ್ನಡ ಚಿತ್ರರಂಗವನ್ನು ಆಳಿದ್ದಾರೆ ಅಂತ ಹೇಳಿದರು ಕೂಡ ತಪ್ಪಾಗಲಾರದು. 2002ರಲ್ಲಿ ತೆರೆಕಂಡ ಅಪ್ಪು ಎಂಬ ಸಿನಿಮಾದ ಮೂಲಕ ನಾಯಕ ನಟಿಯಾಗಿ ಅಭಿನಯ ಮಾಡುವುದರ ಮೂಲಕ ಸ್ಯಾಂಡಲ್ವುಡ್ ಗೆ ಪಾದರ್ಪಣೆ ಮಾಡಿದರು. ಈ ಸಿನಿಮಾದ ನಂತರ ಒಂದರ ಹಿಂದೆ ಮತ್ತೊಂದರಂತೆ ಹಲವಾರು ಸಿನಿಮಾದಲ್ಲಿ ನಟನೆ ಮಾಡಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್, ಗೋಲ್ಡನ್ ಸ್ಟಾರ್ ಗಣೇಶ್ ಕಿಚ್ಚ ಸುದೀಪ್, ಲೂಸ್ ಮಾದ ಯೋಗೇಶ್, ಉಪೇಂದ್ರ, ಸುನಿಲ್ ರಾವ್, ದುನಿಯಾ ವಿಜಯ್, ರಾಘವೇಂದ್ರ ರಾಜ್‌ಕುಮಾರ್ ಹೀಗೆ ಕನ್ನಡದ ಹಲವು ದಿಗ್ಗಜರ ನಾಯಕನಟರ ಜೊತೆ ತೆರೆಯನ್ನು ಹಂಚಿಕೊಂಡಿದ್ದಾರೆ.

2017ರ ವರೆಗೂ ಕೂಡ ನಟಿ ರಮ್ಯಾ ಅವರ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು ಆದರೆ 2017ರ ನಂತರ ಯಾವ ಸಿನಿಮಾದಲ್ಲಿಯೂ ಕೂಡ ಕಾಣಿಸಿಕೊಳ್ಳುವುದಿಲ್ಲ ಚಿತ್ರರಂಗದಿಂದ ದೂರ ಉಳಿದರು ಅಂತ ಹೇಳಿದರು ಕೂಡ ತಪ್ಪಾಗಲಾರದು. ಇದರಿಂದ ರಮ್ಯಾ ಅಭಿಮಾನಿಗಳು ಬೇಸರವನ್ನು ವ್ಯಕ್ತಪಡಿಸಿದ್ದರು ಅಷ್ಟೇ ಅಲ್ಲದೆ ತಮ್ಮ ನೆಚ್ಚಿನ ನಟಿಯ ಸಿನಿಮಾಗಾಗಿ ಕಾದು ಕುಳಿತಿದ್ದರು. ಕಳೆದ ವರ್ಷ ಅಪ್ಪು ಅವರ ಅಗಲಿಕೆಯ ಒಂದು ವಾರದ ಹಿಂದೆ ಎಷ್ಟೇ ಮತ್ತೆ ನಾನು ಸಿನಿಮಾ ಗೆ ಮತ್ತೆ ಕಮ್ ಬ್ಯಾಕ್ ಮಾಡುತ್ತೇನೆ ಉತ್ತಮ ಕಥೆ ಮತ್ತು ನನಗೆ ಹೊಂದಾಣಿಕೆಯಾಗುವಂತಹ ಪಾತ್ರ ಸಿಕ್ಕರೆ ಖಂಡಿತವಾಗಿಯೂ ಕೂಡ ಮತ್ತೆ ನಟನೆಗೆ ಹಿಂತಿರುಗಲಿದ್ದೇನೆ ಎಂದು ಹೇಳಿದ್ದರು. ಅಷ್ಟೇ ಅಲ್ಲದೆ ಅಪ್ಪು ಅವರ ಜೊತೆಯೇ ಸ್ಕ್ರೀನ್ ಶೇರ್ ಮಾಡುತ್ತೇನೆ ಅಂತ ಹೇಳಿಕೊಂಡಿದ್ದರು.

ಅದರೆ ವಿಧಿ ಬರಹ ಬೇರೆ ರೀತಿಯ ಇತ್ತು ರಮ್ಯಾ ಅವರು ಕಮ್ ಬ್ಯಾಕ್ ಮಾಡುವುದಕ್ಕಿಂತ ಮುಂಚೆ ಅಪ್ಪು ಅವರು ನಮ್ಮೆಲ್ಲರನ್ನು ಬಿಟ್ಟು ಅಗಲಿದ ಈ ವಿಚಾರವನ್ನು ಸ್ವತಃ ರಮ್ಯಾ ಅವರೇ ಹೇಳಿಕೊಂಡಿದ್ದರು. ಆದರೆ ರಮ್ಯ ಅವರು ಇದೀಗ ಮತ್ತೊಂದು ಮಹತ್ತರವಾದಂತಹ ವಿಚಾರವನ್ನು ಘೋಷಿಸಿದ್ದಾರೆ. ಹೌದು ರಮ್ಯಾ ಅವರ ಈ ಮಾತಿನಿಂದಾಗಿ ಅಭಿಮಾನಿಗಳು ಹರ್ಷವನ್ನು ವ್ಯಕ್ತಪಡಿಸಿದ್ದಾರೆ ನಟಿ ರಮ್ಯಾ ಅವರು ಇತ್ತೀಚಿಗಷ್ಟೇ ಹೊಸದೊಂದು ಉದ್ಯಮವನ್ನು ಪ್ರಾರಂಭಿಸಿದರು. ಆಪಲ್ ಬಾಕ್ಸ್ ಪ್ರೊಡಕ್ಷನ್ ಹೌಸ್ ಅನ್ನು ಆರಂಭಿಸುವುದಾಗಿ ಹೇಳಿಕೊಂಡಿದ್ದರು ಹೌದು ತಮ್ಮದೇ ಆದ ಪ್ರೊಡಕ್ಷನ್ ಹೌಸ್ ಆರಂಭಿಸಿ ಆ ಮೂಲಕ ಸಿನಿಮಾ ನಿರ್ಮಾಣದಲ್ಲಿ ತೊಡಗಿದ್ದಾರೆ ರಮ್ಯಾ.

ಇದೀಗ ತಮ್ಮದೇ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಸಿನಿಮಾದಲ್ಲಿ ನಾಯಕಿ ನಟಿಯಾಗಿಯೂ ಕೂಡ ರಮ್ಯಾ ಅಭಿನಯಿಸುತ್ತಿದ್ದಾರೆ. ವಿಜಯ ದಶಮಿಯ ಶುಭ ದಿನದಂದು ಈ ಸುದ್ದಿಯನ್ನು ಅಭಿಮಾನಿಗಳಿಗೆ ನೀಡಿದ್ದಾರೆ. ರಾಜ್ ಬಿ ಶೆಟ್ಟಿ ಅವರ ಜೊತೆಗೆ ರಮ್ಯಾ ಅವರು ತಮ್ಮ ಸೆಕೆಂಡ್ ಇನ್ನಿಂಗ್ಸ್ ನ ಮೊದಲ ಪ್ರಾಜೆಕ್ಟ್ ಮಾಡುತ್ತಿದ್ದಾರೆ ಸ್ವಾತಿ ಮುತ್ತಿನ ಮಳೆ ಹನಿಯೇ ಎನ್ನುವ ಸಿನಿಮಾ ಟೈಟಲ್ ಇದೀಗ ರಿವೀಲ್ ಆಗಿದೆ. ಈ ಸಿನಿಮಾದಲ್ಲಿ ರಮ್ಯಾ ಅವರ ಜೊತೆಗೆ ಒಂದು ಮೊಟ್ಟೆಯ ಕಥೆ ಖ್ಯಾತಿಯ ರಾಜ್ ಬಿ ಶೆಟ್ಟಿ ಅಭಿನಯಿಸುತ್ತಿದ್ದಾರೆ ಅಷ್ಟೇ ಅಲ್ಲ ಈ ಸಿನಿಮಾದ ಕಥೆ ಹಾಗೂ ನಿರ್ದೇಶನ ಕೂಡ ಶೆಟ್ಟಿ ಅವರದ್ದೇ ತನಗೆ ಇಷ್ಟವಾಗುವ ಕಥೆ ಸಿಕ್ಕರೆ ನಾನು ಮತ್ತೆ ಅಭಿನಯಿಸುತ್ತೇನೆ ಅಂತ ಈ ಹಿಂದೆ ರಮ್ಯಾ ಅನೌನ್ಸ್ ಮಾಡಿದ್ದರು.

ಅದರಂತೆಯೇ ಇದೀಗ ಒಂದು ಉತ್ತಮ ಕಥೆ ಹೊಂದಿರುವ ಸಿನಿಮಾದಲ್ಲಿ ಅಭಿನಯಿಸುವುದರ ಮೂಲಕ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಮತ್ತೆ ಮೋಹಕ ತಾರೆ ಲಭಿಸಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ನಟಿಯರಮ್ಯ ಅವರ ಚಿತ್ರರಂಗಕ್ಕೆ ಮತ್ತೆ ಕಂಬ್ಯಾಕ್ ಮಾಡುತ್ತಿರುವುದನ್ನು ಕೇಳಿದಂತಹ ಅಭಿಮಾನಿಗಳು ಸಂತಸವನ್ನು ವ್ಯಕ್ತಪಡಿಸಿದ್ದಾರೆ. ರಮ್ಯಾ ಅವರಿಗೆ ಈ ಸಿನಿಮಾದ ಮೂಲಕ ದೊಡ್ಡ ಸಕ್ಸಸ್ ದೊರೆಯಲ್ಲಿ ಎಂದು ಹೇಳುತ್ತಿದ್ದರೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಮೆಂಟ್ ಮುಖಾಂತರ ತಿಳಿಸಿ ಹಾಗೂ ನೀವು ಕೂಡ ರಮ್ಯಾ ಅಭಿಮಾನಿಗಳಾಗಿದ್ದರೆ ಅವರಿಗೆ ಅಭಿನಂದನೆಯನ್ನು ಸಲ್ಲಿಸಿ ಧನ್ಯವಾದಗಳು ಸ್ನೇಹಿತರೆ

LEAVE A REPLY

Please enter your comment!
Please enter your name here