Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಕುಚಿಕೋ ಗೆಳಯನಿಗಾಗಿ ಸ್ವತಃ ಸುದೀಪ್ ಅವರೆ ಡಿ ಬಾಸ್ ಅವರ ಕ್ರಾಂತಿ ಸಿನಿಮಾ ಪ್ರೋಮೊಷನ್ ಮಾಡುತ್ತಿದ್ದಾರೆ.

Posted on January 19, 2023 By Kannada Trend News No Comments on ಕುಚಿಕೋ ಗೆಳಯನಿಗಾಗಿ ಸ್ವತಃ ಸುದೀಪ್ ಅವರೆ ಡಿ ಬಾಸ್ ಅವರ ಕ್ರಾಂತಿ ಸಿನಿಮಾ ಪ್ರೋಮೊಷನ್ ಮಾಡುತ್ತಿದ್ದಾರೆ.

 

ಕರ್ನಾಟಕದಾದ್ಯಂತ ಈಗ ಕ್ರಾಂತಿ ಸಿನಿಮಾದ ಸಂಭ್ರಮವೇ ಮನೆ ಮಾಡಿದೆ, ಜನವರಿ 26ರಂದು ಗಣರಾಜ್ಯೋತ್ಸವದ ಪ್ರಯುಕ್ತ ಬಿಡುಗಡೆಯಾಗುತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹು ನಿರೀಕ್ಷಿತ ಚಿತ್ರವಾದ ಇದನ್ನು ನಾನಾ ರೀತಿಯಲ್ಲಿ ಚಿತ್ರತಂಡ ಈಗಾಗಲೇ ಪ್ರಮೋಷನ್ ಮಾಡುತ್ತಿದೆ. ಟೈಲರ್, ಟೀಸರ್, ಆಡಿಯೋ ಲಾಂಚ್ ಎಲ್ಲವನ್ನು ಸಹ ವಿಭಿನ್ನ ಬಗೆಯಲ್ಲಿ ಮಾಡಿ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಅವರು ತೊಡಗಿಕೊಂಡಿದ್ದರೆ.

ಇತ್ತ ಅಭಿಮಾನಿಗಳು ಸಹ ತಮ್ಮ ನೆಚ್ಚಿನ ದಚ್ಚುಗಾಗಿ ತಾವು ಸಿನಿಮಾ ಪ್ರಚಾರ ಮಾಡುವುದರ ಕಡೆ ಬಿಝಿ ಆಗಿದ್ದಾರೆ. ಕ್ರಾಂತಿ ಸೆಟ್ಟೇರಿದ ಸಿನಿಮಾದಿಂದಲೂ ಸಹ ಮಾಧ್ಯಮಗಳಿಗೆ ಸೆಡ್ಡು ಹೊಡೆದು ದರ್ಶನ್ ಅವರ ಬೆನ್ನಿಗೆ ನಿಂತಿರುವ ಅವರ ಸೆಲೆಬ್ರಿಟಿಗಳು ಪ್ರತಿಯೊಬ್ಬರೂ ಕೂಡ ವಿಭಿನ್ನ ಬಗೆಯಲ್ಲಿ ತಮಗೆ ತಿಳಿದಂತೆ ಸಿನಿಮಾವನ್ನು ಪ್ರಚಾರ ಮಾಡುತ್ತಿದ್ದಾರೆ ಈಗ ಸಿನಿಮಾ ಬಗ್ಗೆ ಪ್ರಚಾರ ಮಾಡುವಂತೆ ಇತರೆ ಸ್ಟಾರ್ಗಳ ಬಳಿ ಕೇಳಲು ಸಹ ಹೋಗುತ್ತಿದ್ದಾರೆ.

ಅದರಲ್ಲಿ ಮುಖ್ಯವಾಗಿ ಸುದೀಪ್ ಅವರು ಒಂದು ಕಾಲದಲ್ಲಿ ದರ್ಶನ್ ಅವರೆಗೆ ಬಹಳ ಆತ್ಮೀಯರಾಗಿದ್ದವರು. ಅಂಬರೀಶ್ ಹಾಗೂ ವಿಷ್ಣುವರ್ಧನ್ ಅವರನ್ನು ಬಿಟ್ಟರೆ ಕನ್ನಡ ಚಿತ್ರರಂಗದ ದಿಗ್ಗಜರುಗಳು ಎಂದು ಇವರನ್ನೇ ಕರೆಯಲಾಗುತ್ತಿತ್ತು. ದರ್ಶನ್ ಅವರು ಕೌಟುಂಬಿಕ ಕಲಹದ ಹಿನ್ನೆಲೆ ಜೈಲು ಸೇರಿದ ಸಂದರ್ಭದಲ್ಲಿ ಅವರ ಸಾರಥಿ ಸಿನಿಮಾದ ಸಾರಥ್ಯ ವಹಿಸಿಕೊಂಡು ಅವರಿಗೆ ಜೊತೆಯಾಗಿ ನಿಂತದ್ದು ಸುದೀಪ್ ಅವರು.

ಸ್ವತಃ ಇದನ್ನು ದರ್ಶನ ಅವರ ಸಹೋದರ ದಿನಕರ್ ಅವರೇ ಹಲವು ಇಂಟರ್ವೂಳಲ್ಲಿ ಹೇಳಿಕೊಂಡಿದ್ದಾರೆ. ನಂತರದ ದಿನಗಳಲ್ಲಿ ಇಬ್ಬರು ಸಹ ಅಣ್ಣತಮ್ಮಂದಿರಕ್ಕಿಂತ ಹೆಚ್ಚಾಗಿ ಒಂದೇ ಕಡೆ ಊಟ ಮಾಡಿ, ಒಂದೇ ಕಾರಿನಲ್ಲಿ ಓಡಾಡಿಕೊಂಡು, ಬೈಕ್ನಲ್ಲಿ ರಾಲಿ, ಟ್ರಿಪ್ ಹೀಗೆಲ್ಲ ಜೊತೆ ಜೊತೆಯಾಗಿ ಹೋಗುತ್ತಿದ್ದರು. ಆದರೆ ಅದು ಯಾವ ಕೆಟ್ಟ ದೃಷ್ಟಿ ಇವರ ಸ್ನೇಹದ ಮೇಲೆ ಬಿತ್ತು ಗೊತ್ತಿಲ್ಲ. ಮಧ್ಯೆ ಇದ್ದವರ ಕಾಣದ ಕೈಗಳ ಆಟದಿಂದ ಆಪ್ತ ಸ್ನೇಹಿತರು ದೂರ ದೂರವಾಗಿದ್ದಾರೆ.

ಆದರೂ ಕೂಡ ಇಬ್ಬರ ಮನಸ್ಸಿನಲ್ಲಿ ಸ್ನೇಹ ಕಡಿಮೆ ಆಗಿಲ್ಲ. ಈಗಲೂ ಸಹ ಕ್ರಾಂತಿ ಸಿನಿಮಾದ ಪ್ರಚಾರದ ವೇಳೆ ಆದ ದರ್ಶನ್ ಅವರ ಮೇಲಿನ ಹಲ್ಲೆಯ ಕುರಿತು ಕೂಡ ಸುದೀಪ್ ಅವರು ಧ್ವನಿ ಎತ್ತಿದ್ದಾರೆ. ಅವರ ಟ್ವೀಟ್ಗೆ ದರ್ಶನ್ ಅವರು ಕೂಡ ರೀ ಟ್ವೀಟ್ ಮಾಡಿ ಧನ್ಯವಾದ ಹೇಳಿದ್ದಾರೆ. ಹೀಗಾಗಿ ಮತ್ತೆ ಇವರಿಬ್ಬರ ನಡುವೆ ಸ್ನೇಹ ಚಿಗರೊಡೆಯುತ್ತದೆಯಾ ಮತ್ತೆ ಒಂದಾಗುತ್ತಾರಾ ಎಂದು ಇಬ್ಬರ ಅಭಿಮಾನಿಗಳು ಸಹ ಹಾತೊರೆಯುತ್ತಿದ್ದಾರೆ.

ಹಾಗಾಗಿ ಇಬ್ಬರನ್ನು ಒಂದು ಮಾಡಬೇಕು ಎಂದು ನಿರ್ಧರಿಸುವ ದರ್ಶನ್ ಅಭಿಮಾನಿ ಒಬ್ಬ ಸುದೀಪ್ ಅವರ ಮನೆ ಬಳಿ ಹೋಗಿ ತಮ್ಮ ಡಿ ಬಾಸ್ ಸಿನಿಮಾವನ್ನು ಪ್ರಚಾರ ಮಾಡುವಂತೆ ಕೇಳಿಕೊಳ್ಳಲು ಹೋಗಿದ್ದಾರೆ. ಆದರೆ ಆ ಸಂದರ್ಭದಲ್ಲಿ ಸುದೀಪ್ ಅವರು ಅಂದು ಅವರ ಮನೆಯಲ್ಲಿ ಇಲ್ಲದ ಕಾರಣ ಆ ಕೆಲಸ ಆಗಿಲ್ಲ. ಆದರೆ ಖಂಡಿತವಾಗಿಯೂ ಸುದೀಪ್ ಅವರು ಅಂದು ಆ ಅಭಿಮಾನಿಗೆ ಸಿಕ್ಕಿದರೆ ಕ್ರಾಂತಿ ಸಿನಿಮಾದ ಕುರಿತು ಮಾತನಾಡುತ್ತಿದ್ದರು ಎನ್ನುವುದು ಎಲ್ಲರಿಗೂ ತಿಳಿದಿದೆ.

ಇನ್ನು ಸಹ ಸಿನಿಮಾ ಬಿಡುಗಡೆಗೆ ಬಹಳ ಸಮಯವಿದೆ ಈಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಸುದೀಪ್ ಅವರ ಮೇಲೆ ಮುಂದೆ ದರ್ಶನ್ ಅಭಿಮಾನಿ ಪ್ರಚಾರಕ್ಕಾಗಿ ಕೇಳಲು ಹೋಗಿದ್ದ ವಿಡಿಯೋ ಅವರಿಗೆ ತಲುಪಿದರೆ ಸುದೀಪ್ ಅವರು ಈ ಕುರಿತು ಮಾತನಾಡಬಹುದು ಎಂದು ಎಲ್ಲರೂ ಎದುರು ನೋಡುತ್ತಿದ್ದಾರೆ. ಆದಷ್ಟು ಬೇಗ ಇವರಿಬ್ಬರ ನಡುವಿನ ಮನಸ್ತಾಪ ದೂರವಾಗಲಿ, ಕ್ರಾಂತಿ ಸಿನಿಮಾಗೆ ಗೆಲುವಾಗಲಿ ಎಂದು ಅಭಿಮಾನಿಗಳಾಗಿ ನಾವೆಲ್ಲ ಹರಸೋಣ.

https://youtu.be/P3VQ0uY-XTM

Entertainment Tags:Darshan, Kiccha sudeep, Kranti
WhatsApp Group Join Now
Telegram Group Join Now

Post navigation

Previous Post: ಇಂಡಸ್ಟ್ರಿಯಲ್ಲಿ ಒಂದೇ ಒಂದೂ ದುಶ್ಚಟ ಇಲ್ದೆ ಇರುವ ಏಕೈಕ ವ್ಯಕ್ತಿ ಅಂದ್ರೆ ಇವರೊಬ್ರು ಮಾತ್ರ ಎಂದು ಹೇಳಿದ ಸಾಧುಕೋಕಿಲ. ಆ ವ್ಯಕ್ತಿ ಯಾರು ಗೊತ್ತ.?
Next Post: ನಾನೇನು ಬೇರೆ ದೇಶಕ್ಕೆ ಜೈಕಾರ ಹಾಕಿದ್ನಾ, ದರ್ಶನ್ ಬಿಟ್ಟರೆ ನೆಕ್ಸ್ಟ್ ನನ್ನೆ ಟಾರ್ಗೆಟ್ ಮಾಡ್ತಿದ್ದಾರೆ ಎಂದು ತಿರುಗಿ ಬಿದ್ದ ರಚಿತಾ ರಾಮ್.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore