Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ತಾವೇ ಎತ್ತ ಸ್ವಂತ ಮಕ್ಕಳಿಂದ ತಂದೆ ತಾಯಿ ಯಾಕೆ ಕಷ್ಟ ಅನುಭವಿಸುತ್ತಾರೆ ಗೊತ್ತ.? ನಿಮ್ಮ ಹೊಟ್ಟೆಯಲ್ಲಿ ಹುಟ್ಟಿ ಬಂದು ಆ ಮಗು ಯಾರು ಗೊತ್ತ.? ಜೀವನದ ಕಟು ಸತ್ಯ ಇದು

Posted on July 20, 2023 By Kannada Trend News No Comments on ತಾವೇ ಎತ್ತ ಸ್ವಂತ ಮಕ್ಕಳಿಂದ ತಂದೆ ತಾಯಿ ಯಾಕೆ ಕಷ್ಟ ಅನುಭವಿಸುತ್ತಾರೆ ಗೊತ್ತ.? ನಿಮ್ಮ ಹೊಟ್ಟೆಯಲ್ಲಿ ಹುಟ್ಟಿ ಬಂದು ಆ ಮಗು ಯಾರು ಗೊತ್ತ.? ಜೀವನದ ಕಟು ಸತ್ಯ ಇದು

 

ಪ್ರತಿಯೊಬ್ಬ ತಂದೆ ತಾಯಿ ಹಾಗೂ ಮಕ್ಕಳು ತಿಳಿದುಕೊಳ್ಳಲೇಬೇಕಾದ ಮಾಹಿತಿಗಳು.! ಹಿಂದೊಮ್ಮೆ ಒಬ್ಬ ವ್ಯಕ್ತಿ ತನ್ನ ಹೆಂಡತಿ ಹಾಗೂ ಸಂಸಾರದ ಜೊತೆ ಸಂತೋಷದಿಂದ ಜೀವಿಸುತ್ತಿದ್ದ. ಉತ್ತಮ ಸಂಸ್ಕಾರವಂತ ಹಾಗೂ ಸದ್ಭಾವನೆ ತುಂಬಿದಂತಹ ಮನೆತನದಿಂದ ಬಂದಿದ್ದಂತಹ ಆ ವ್ಯಕ್ತಿ ತನ್ನ ಮನೆಯಲ್ಲಿ ಯಾವುದೇ ಬಗೆಯ ಹೋಮ ಹವನ ಯಾಗ ಯಜ್ಞ ಇತ್ಯಾದಿಗಳನ್ನು ಆಚರಿಸುತ್ತಿರಲಿಲ್ಲ. ಬದಲಿಗೆ ಆತ ತನಗೆ ಇಷ್ಟ ಬಂದ ಕೆಲಸವನ್ನು ಮಾಡುತ್ತಾ ಅದರಲ್ಲಿ ನಿರತನಾಗುತ್ತಿದ್ದ ಹೀಗಿರುವಾಗ ಆತನ ಪತ್ನಿ ಗರ್ಭವತಿಯಾಗುತ್ತಾಳೆ.

ತಾನೀಗ ಮಗುವಿನ ತಂದೆಯಾಗುತ್ತಿದ್ದೇನೆ ಅದರ ಭವಿಷ್ಯಕ್ಕಾಗಿ ಹಾಗೂ ಸಂಸಾರದ ಹೆಚ್ಚಿನ ಮುತುವರ್ಜಿ ಗಾಗಿ ಇನ್ನು ಹೆಚ್ಚಿನ ಹಣವನ್ನು ಸಂಪಾದನೆ ಮಾಡಬೇಕು ಎಂದು ಆತ ನಿರ್ಧರಿಸಿ ಪಕ್ಕದ ಊರಿಗೆ ಕೆಲಸ ಮಾಡುವ ಸಲುವಾಗಿ ಹೋಗುತ್ತಾನೆ. ದಾರಿ ಮಧ್ಯ ಆತನಿಗೆ ಒಂದು ಸುಂದರವಾದ ಆಕರ್ಷಕ ವಾದಂತಹ ಋಷಿಗಳ ಆಶ್ರಮ ಕಾಣಸಿಗುತ್ತದೆ. ಅದರಲ್ಲಿ ಒಬ್ಬ ಮುನಿ ತನ್ನ ಶಿಷ್ಯರ ಜೊತೆ ವಾಸವಿದ್ದರು.

ಆ ಆಶ್ರಮ ನೋಡಿ ದಂತಹ ಈತನಿಗೆ ತಾನು ಕೂಡ ಅಲ್ಲಿಗೆ ಹೋಗುವ ಮನಸ್ಸಾಗುತ್ತದೆ. ತಕ್ಷಣ ಆತ ಆಶ್ರಮದ ಬಳಿ ಬಂದು ಆ ಗುರುವಿಗೆ ನಮಸ್ಕರಿಸಿ ಗುರುವರ್ಯ ತಾನು ಕೂಡ ನಿಮ್ಮೊಡನೆ ಈ ಶಿಷ್ಯರ ಜೊತೆ ಇದ್ದು ನೀವು ಬೋಧಿಸುವ ವಿಷಯಗಳನ್ನು ಕಲಿಯುವುದಕ್ಕೆ ಆಸಕ್ತನಾಗಿದ್ದೇನೆ ನನಗೂ ಕೂಡ ಕಲಿಸಿಕೊಡಿ ಎಂದು ಕೇಳಿಕೊಳ್ಳುತ್ತಾನೆ. ಇನ್ನು ಆ ಗುರುವು ಸಾಮಾನ್ಯವಾಗಿರಲಿಲ್ಲ ಅವರು ಮಹಾ ತಪೋವಂತನಾಗಿದ್ದರು.

ತ್ರಿಕಾಲ ಜ್ಞಾನಿಯಾಗಿದ್ದಂತಹ ಅವರಿಗೆ ತಿಳಿಯದ ವಿಷಯವೇ ಇರಲಿಲ್ಲ. ಹೀಗಿರುವಾಗ ತನಗೆ ಕಲಿಸಿ ಕೊಡಿ ಎಂದು ಬೇಡಿಕೊಂಡಂತಹ ವ್ಯಕ್ತಿಯ ಕಡೆಗೆ ಈ ಗುರು ಈ ರೀತಿ ಹೇಳುತ್ತಾರೆ. ನೋಡಪ್ಪ ನಾನು ನಿನಗೆ ಕಲಿಸುವುದಕ್ಕೆ ಸಿದ್ಧ ಆದರೆ ನಾನು ನಿನಗೆ ಮಂತ್ರೋಪದೇಶವನ್ನು ಮಾಡಬೇಕು ಎಂದರೆ ನನ್ನದೊಂದು ಶರತ್ತು ಇದೆ. ನಾನು ಹೇಳಿದ್ದನ್ನು ನೀನು ಮಾಡಬೇಕು ಆಗ ಮಾತ್ರ ನಿನಗೆ ಇಲ್ಲಿ ಕಲಿಯುವುದಕ್ಕೆ ಮುಕ್ತ ಅವಕಾಶ ಎಂದು ಹೇಳುತ್ತಾರೆ.

ತಕ್ಷಣ ಈತ ಗುರುವಿನ ಮಾತಿಗೆ ತಲೆಯಾಡಿಸಿ ನೀವು ಹೇಳಿದಂತೆ ನಾನು ಕೇಳುತ್ತೇನೆ ಅದೇನು ಮಾಡಬೇಕು ಹೇಳಿ ಎಂದು ಹೇಳಿದ. ಆಗ ಗುರು ನಿನಗೆ ಇಷ್ಟರಲ್ಲಿಯೇ ಸುಂದರವಾದ ತೇಜೋವಂತ ಗಂಡು ಮಗು ಜನಿಸುತ್ತದೆ. ಅದು ಜನಿಸಿದ ಕೂಡಲೇ ಅದನ್ನು ತಂದು ನೀನು ನಮ್ಮ ಆಶ್ರಮದಲ್ಲಿ ಬಿಟ್ಟು ಅದರ ಬಾಧ್ಯತೆಯನ್ನು ನನಗೆ ಒಪ್ಪಿಸಬೇಕು ಎಂದು ಹೇಳುತ್ತಾರೆ. ಗುರುಗಳ ಮಾತಿನಿಂದ ಆರಂಭದಲ್ಲಿ ಆ ವ್ಯಕ್ತಿ ಗೊಂದಲಕ್ಕೆ ಒಳಪಟ್ಟರು ಕೂಡ.

ಗುರುವಿನ ಆಜ್ಞೆಯನ್ನು ಮೀರಬಾರದು ಎಂದು ಭಾವಿಸಿ ಸರಿ ಗುರುಗಳೇ ಹಾಗೆ ಆಗಲಿ ಎಂದು ಕೈ ಮುಗಿದು ಅಲ್ಲಿಂದ ಹಾಗೆ ತನ್ನ ಮನೆಗೆ ಹೊರಟಿದ್ದ. ಮನೆಗೆ ಹೋಗಿ ಈ ವಿಷಯವನ್ನು ತನ್ನ ಪತ್ನಿಗೆ ತಿಳಿಸಿದಾಗ ತನ್ನ ಮಗುವಿನಿಂದ ದೂರವಾಗಲು ಬಯಸದ ಆಕೆ ಇದಕ್ಕೆ ಒಪ್ಪಲಿಲ್ಲ. ಆಗ ಈತ ನೋಡು ಅವರು ಮಹಾಜ್ಞಾನಿಗಳು ಅಂಥವರ ಆಶ್ರಮದಲ್ಲಿ ನಮ್ಮ ಮಗ ಬೆಳೆದರೆ ಆತ ಮುಂದೆ ದೊಡ್ಡ ವ್ಯಕ್ತಿಯಾಗುತ್ತಾನೆ ಎಂದು ಮಡದಿಯನ್ನು ಹೇಗೋ ಒಪ್ಪಿಸಿದ್ದ.

ಕ್ರಮೇಣ ಕೆಲವು ದಿನಗಳ ಬಳಿಕ ಅವರಿಗೆ ಒಂದು ಸುಂದರವಾದ ಗಂಡು ಮಗು ಜನಿಸುತ್ತದೆ. ಗುರುಗಳ ಆದೇಶದಂತೆ ಆತನನ್ನು ತಂದು ಆಶ್ರಮಕ್ಕೆ ಬಿಡುವುದಕ್ಕೆ ಅವರ ಮಗುವಿನ ಜೊತೆ ಈ ಋಷಿಯ ಆಶ್ರಮಕ್ಕೆ ಬರುತ್ತಾರೆ. ಗುರುವಿನ ಮುಂದೆ ಬಂದು ನಿಂತಂತಹ ಅವರು ತಮ್ಮ ಮಗುವನ್ನು ಆ ಗುರುವಿಗೆ ಒಪ್ಪಿಸುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Useful Information
WhatsApp Group Join Now
Telegram Group Join Now

Post navigation

Previous Post: ಎಷ್ಟೇ ತೊಳೆದರೂ ಸ್ವಚ್ಛ ಆಗದ ನಿಮ್ಮ ಬಾತ್ರೂಮ್ ಕನ್ನಡಿ ತರಹ ಹೊಳೆಯೋ ಹಾಗೆ ಮಾಡೋ ಸೂಪರ್ ಟ್ರಿಕ್.!
Next Post: ಕುರುಕ್ಷೇತ್ರದಲ್ಲಿ ಭಾಗವಹಿಸಿದ ಅಷ್ಟು ಜನಕ್ಕೆ ಊಟ ಹೇಗೆ ತಯಾರಾಗುತ್ತಿತ್ತು ಗೊತ್ತಾ.?

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore