Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಎಷ್ಟೇ ದುಡಿಮೆ ಇದ್ದರೂ ಕೈಯಲ್ಲಿ ಹಣ ನಿಲ್ಲುತ್ತಿಲ್ಲ ಎಂದರೆ ಅದಕ್ಕೆ ಮುಖ್ಯ ಕಾರಣ ಇದೇ ನೋಡಿ.!

Posted on October 20, 2023 By Kannada Trend News No Comments on ಎಷ್ಟೇ ದುಡಿಮೆ ಇದ್ದರೂ ಕೈಯಲ್ಲಿ ಹಣ ನಿಲ್ಲುತ್ತಿಲ್ಲ ಎಂದರೆ ಅದಕ್ಕೆ ಮುಖ್ಯ ಕಾರಣ ಇದೇ ನೋಡಿ.!

 

ಎಷ್ಟೇ ದುಡಿಮೆಯಿದ್ದರೂ ಕೈಯಲ್ಲಿ ಹಣ ನಿಲ್ಲುತ್ತಿಲ್ಲ ಎಂದರೆ ಈ ಅಭ್ಯಾಸಗಳನ್ನು ತಕ್ಷಣಕ್ಕೆ ಬಿಟ್ಟುಬಿಡಿ ಎನ್ನುತ್ತಾರೆ ಚಾಣಕ್ಯ ಈ ಜಗತ್ತಿನಲ್ಲಿ ಈಗ ಎಲ್ಲರೂ ನೋಡುವುದು ಹಣವನ್ನು. ಹಣ ಎಲ್ಲರಿಗೂ ಬೇಕು. ನಮ್ಮ ಬಳಿ ಹಣ ಇದೆಯೋ, ಇಲ್ಲವೋ ಎಂಬುದು ಬಹಳ ಮುಖ್ಯವಾಗುತ್ತದೆ. ಚಾಣಕ್ಯರ ಪ್ರಕಾರ ನಾವು ಈ ಕೆಲವು ಅಭ್ಯಾಸಗಳನ್ನು ರೂಢಿಸಿ ಕೊಂಡರೆ ಹಣ ಎಂದಿಗೂ ನಮ್ಮ ಕೈ ಬಿಟ್ಟು ಹೋಗುವುದಿಲ್ಲ.

ಈ ಜಗತ್ತಿನಲ್ಲಿ ಬದುಕುತ್ತಿರುವ ಪ್ರತಿಯೊಬ್ಬ ಮನುಷ್ಯನಿಗೂ ಹಣ ಬೇಕು. ಎಲ್ಲರೂ ಊಟ, ಬಟ್ಟೆಗಾಗಿ ದುಡಿಯುತ್ತಾರೆ. ಆದರೆ ಕೆಲವರು ಎಷ್ಟೇ ಸಂಪಾದನೆ ಮಾಡಿದರೂ ಹಣ ಅವರ ಕೈಯಲ್ಲಿ ನಿಲ್ಲುವುದಿಲ್ಲ. ಸಂಪತ್ತು ಹೆಚ್ಚಾಗುವುದಿಲ್ಲ. ಚಾಣಕ್ಯ ಇದಕ್ಕೆ ಕೆಲವು ಕಾರಣಗಳನ್ನು ನೀಡುತ್ತಾರೆ. ಈ ಕೆಳಗಿನ ಅಭ್ಯಾಸಗಳನ್ನು ಹೊಂದಿರುವ ಜನರಿಗೆ ಸಂಪತ್ತು ಎಂದಿಗೂ ಒಲಿಯುವುದಿಲ್ಲ ಅವರು ತಮ್ಮ ಇಡೀ ಜೀವನವನ್ನು ಬಡತನದಲ್ಲಿ ಕಳೆಯುತ್ತಾರೆ.

ಹಾಗಾದರೆ ಬಡತನಕ್ಕೆ ಕಾರಣವಾಗುವ ಅಂಶಗಳು ಯಾವುವು ಎಂಬುದನ್ನು ಈಗ ತಿಳಿಯೋಣ.!

* ಸೂರ್ಯೋದಯದ ನಂತರ ಏಳುವ ಅಭ್ಯಾಸ: ಆಚಾರ್ಯ ಚಾಣಕ್ಯರ ಪ್ರಕಾರ, ಬೆಳಿಗ್ಗೆ ತಡವಾಗಿ ಏಳುವುದು ಲಕ್ಷ್ಮೀದೇವಿಗೆ ಕೋಪ ತರಿಸುತ್ತದೆ. ಸೂರ್ಯೋದಯದ ನಂತರವೂ ಹಾಸಿಗೆಯನ್ನು ಬಿಡದ ವ್ಯಕ್ತಿಯ ಬಳಿ ಹಣ ನಿಲ್ಲಲ್ಲು ಸಾಧ್ಯವೇ ಇಲ್ಲ. ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ಉಲ್ಲೇಖಿಸಿದಂತೆ, ಬೆಳಿಗ್ಗೆ ತಡವಾಗಿ ಏಳುವ ಜನರು ಎಂದಿಗೂ ಸಿರಿತನದಲ್ಲಿ ಬದುಕುವುದಿಲ್ಲ ಮತ್ತು ತಾಯಿ ಲಕ್ಷ್ಮೀಯ ಅನುಗ್ರಹವನ್ನು ಎಂದಿಗೂ ಪಡೆಯುವುದಿಲ್ಲ.

* ಶಾರೀರಿಕ ಕೊಳಕು ಇರುವವರು:- ಶಾರೀರಿಕ ಸ್ವಚ್ಛತೆ ಇಲ್ಲದವರ ಜೊತೆ ನಾವೇ ನಿಲ್ಲುವುದಿಲ್ಲ, ಇನ್ನು ಸಂಪತ್ತಿನ ಅಧಿದೇವತೆ ಹೇಗೆ ನಿಲ್ಲುತ್ತಾಳೆ. ಕೊಳಕು ಬಟ್ಟೆ ಧರಿಸಿ, ಹಲ್ಲುಜ್ಜದೆ, ಸ್ವಚ್ಛವಾಗಿ ಇರದವರ ಜೊತೆ ಅಥವಾ ಅಂತಹವರ ಮನೆಯಲ್ಲಿ ಲಕ್ಷ್ಮೀದೇವಿ ಎಂದಿಗೂ ಇರುವುದಿಲ್ಲ ಎಂದು ಆಚಾರ್ಯ ಚಾಣಕ್ಯ ಹೇಳಿದ್ದರು. ಹಾಗಾಗಿ ಹಣ, ಸಂಪತ್ತು ಗಳಿಸಲು ಮೈ, ಮನಸ್ಸು ಎರಡೂ ಸ್ವಚ್ಛವಾಗಿರುವುದು ಬಹಳ ಮುಖ್ಯ.

* ಅಗತ್ಯಕ್ಕಿಂತಲೂ ಹೆಚ್ಚು ಆಹಾರ ಸೇವಿಸುವುದು:- ಚಾಣಕ್ಯರ ನೀತಿಶಾಸ್ತ್ರದ ಪ್ರಕಾರ, ಅಗತ್ಯಕ್ಕಿಂತ ಹೆಚ್ಚು ಆಹಾರವನ್ನು ಸೇವಿಸುವುದು ಬಡತನಕ್ಕೆ ಕಾರಣವಾಗುತ್ತದೆ. ಅಗತ್ಯಕ್ಕಿಂತ ಹೆಚ್ಚು ತಿನ್ನುವವರ ಆರೋಗ್ಯ ಹದಗೆಡುತ್ತದೆ. ಆರೋಗ್ಯ ಹದಗೆಟ್ಟಲೆ ಆಸ್ಪತ್ರೆಗೆ ಹೋಗಬೇಕು. ನಾವು ಕಷ್ಟಪಟ್ಟು ದುಡಿದ ದುಡ್ಡನ್ನೆಲ್ಲಾ ಊಟ, ಆಸ್ಪತ್ರೆಗೆ ಖರ್ಚು ಮಾಡಿದರೆ ಆ ಹಣ ಎಲ್ಲಿಂದ ಬರುತ್ತೆ? ದೇಹಕ್ಕೆ ಬೇಕಾದಷ್ಟು ಆಹಾರವನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು.

* ಕಠೋರವಾಗಿ ಮಾತನಾಡುವವರು:- ಮನುಷ್ಯ ಸದಾ ಮಧುರವಾಗಿ ಮಾತನಾಡಬೇಕು ಎಂದು ಚಾಣಕ್ಯ ನೀತಿಯಲ್ಲಿ ಆಚಾರ್ಯ ಚಾಣಕ್ಯ ಹೇಳಿದ್ದಾರೆ. ಮಧುರವಾಗಿ ಮಾತನಾಡುವವರನ್ನು ಎಲ್ಲರೂ ಇಷ್ಟಪಡುತ್ತಾರೆ. ಸಮಾಜದಲ್ಲಿ ಸದಾ ಗೌರವ ಸಿಗುತ್ತದೆ. ಕಠಿಣ ಪದಗಳು ಜನ ರೊಂದಿಗಿನ ಸಂಬಂಧವನ್ನು ಹಾಳುಮಾಡುತ್ತವೆ. ನಿಮ್ಮ ಒರಟು ಮಾತುಗಳು ಇನ್ನೊಬ್ಬರ ಹೃದಯವನ್ನು ನೋಯಿಸಬಹುದು. ಅದರ ಪಾಪವು ನಿಮ್ಮ ಸಂಪತ್ತನ್ನು ಸುತ್ತಿಕೊಳ್ಳುತ್ತದೆ. ಅಂತಹ ಮನೆಯಲ್ಲಿ ಲಕ್ಷ್ಮೀ ಎಂದಿಗೂ ವಾಸಿಸುವುದಿಲ್ಲ ಎಂದು ಚಾಣಕ್ಯ ಹೇಳುತ್ತಾರೆ.

* ದುಂದುವೆಚ್ಚ ಮಾಡಬಾರದು:- ಹಣ ಸಂಪಾದಿಸುವುದು ಸುಲಭದ ಕೆಲಸವಲ್ಲ. ಯಶಸ್ವಿ ವ್ಯಕ್ತಿಯಾಗುವುದು ಕೂಡ ಸುಲಭವಲ್ಲ. ಯಶಸ್ವಿ ಯಾಗಲು, ಕುಟುಂಬ ಮತ್ತು ವೃತ್ತಿಪರ ಜೀವನವನ್ನು ಹೇಗೆ ನಿರ್ವಹಿಸ ಬೇಕು ಎಂಬುದನ್ನು ಸಹ ತಿಳಿದಿರಬೇಕು. ಹಣ ತಾನಾಗಿಯೇ ಬರುವುದಿಲ್ಲ. ಕಷ್ಟಪಟ್ಟು ದುಡಿಯಬೇಕು. ಹಣವನ್ನು ಹೇಗೆ ಇಟ್ಟುಕೊಳ್ಳ ಬೇಕೆಂದು ಸಹ ನೀವು ತಿಳಿದಿರಬೇಕು. ಯಾವುದೇ ದುಂದುವೆಚ್ಚಗಳನ್ನು ಮಾಡಬಾರದು. ದುಂದು ವೆಚ್ಚಗಳನ್ನು ಮಾಡುವವರ ಬಳಿ ಹಣ ಎಂದಿಗೂ ನಿಲ್ಲುವುದಿಲ್ಲ ಎಂದು ಚಾಣಕ್ಯ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Useful Information
WhatsApp Group Join Now
Telegram Group Join Now

Post navigation

Previous Post: ಈ ರೀತಿ ಲಕ್ಷಣಗಳಿದ್ರೆ ಎಚ್ಚರ ಥೈರಾಯ್ಡ್ ಬರುತ್ತೆ.!
Next Post: ಮಂಡಿ ಕೀಲು ಸೊಂಟ ನೋವುಗಳಿಗೆ ಈ ರಸವನ್ನು ಹಚ್ಚಿದರೆ 20 ದಿನದಲ್ಲಿ ವಾಸಿಯಾಗುತ್ತದೆ.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore