Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ನಟ ಅನಿರುಧ್ ಗೆ ಎದುರಾಯ್ತು ಮತ್ತೊಂದು ಸಂಕಷ್ಟ

Posted on December 9, 2022December 9, 2022 By Kannada Trend News No Comments on ನಟ ಅನಿರುಧ್ ಗೆ ಎದುರಾಯ್ತು ಮತ್ತೊಂದು ಸಂಕಷ್ಟ

ಅನಿರುಧ್ ನಟಿಸಿಬೇಕಿದ್ದ ಹೊಸ ಸೀರಿಯಲ್ ಕೈ ತಪ್ಪಿ ಹೋಗುತ್ತಿದೆ ಯಾಕೆ ಗೊತ್ತ.?

ನಟ ಅನಿರುದ್ಧ ಜೀ ಕನ್ನಡ ವಾಹಿನಿಯಲ್ಲಿ ಪ್ರಾರಂಭವಾಗಿದ್ದಂತಹ ಜೊತೆ ಜೊತೆಯಲಿ ಎಂಬ ದಾರವಾಹಿಯಲ್ಲಿ ಆರ್ಯವರ್ಧನ್ ಪಾತ್ರ ನಿರ್ವಹಿಸುತ್ತಿದ್ದರು. ಕಳೆದ ಮೂರು ವರ್ಷಗಳಿಂದಲೂ ಕೂಡ ಈ ಧಾರಾವಾಹಿಯಲ್ಲಿ ನಟನೆ ಮಾಡುವುದರ ಮೂಲಕ ಸಾಕಷ್ಟು ಜನರಿಗೆ ಮನರಂಜನೆಯನ್ನು ನೀಡಿದ್ದರು. ಇನ್ನು ನಟ ಅನಿರುಧ್ ಅವರ ಅಭಿನಯವನ್ನು ನೋಡಿ ಎಲ್ಲರೂ ಮೆಚ್ಚಿಕೊಂಡಿದ್ದರು ಒಂದು ರೀತಿಯಲ್ಲಿ ಹೇಳುವುದಾದರೆ ಸಿನಿಮಾಗಿಂತಲೂ ಕೂಡ ಧಾರಾವಾಹಿಯಲ್ಲಿ ನಟನೆ ಮಾಡುವುದರ ಮೂಲಕವೇ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಗಿಟ್ಟಿಸಿಕೊಂಡಿದ್ದರು.

ಆದರೆ ಸೀರಿಯಲ್ ತಂಡ ಮತ್ತು ಅನಿರುದ್ಧ್ ನಡುವೆ ಕೆಲವು ವಿಚಾರಕ್ಕೆ ಕಾರಣಾಂತರಗಳಿಂದ ಕಿರಿಕಿರಿ ಉಂಟಾಗುತ್ತದೆ ಚಿತ್ರತಂಡದವರು ಅನಿರುಧ್ ಅವರು ಕಿರಿಕ್ ಮಾಡಿದ್ದಾರೆ ಎಂದು ಹೇಳಿದರೆ ಮತ್ತೊಂದು ಕಡೆ ಅನಿರುಧ್ ಅವರು ಸೀರಿಯಲ್ ತಂಡದಿಂದಲೇ ನನಗೆ ಸಾಕಷ್ಟು ನೋವು ಉಂಟಾಗಿದೆ ಎಂದು ಹೇಳಿಕೊಳ್ಳುತ್ತಾರೆ. ಈ ವಿಚಾರ ದೊಡ್ಡದಾಗುತ್ತಿದ್ದ ಹಾಗೆಯೇ ಜೊತೆ ಜೊತೆಯಲಿ ಧಾರಾವಾಹಿ ತಂಡ ಈ ಸೀರಿಯಲ್ ನಿಂದ ಅನಿರುಧ್ ಅವರನ್ನು ಹೊರ ಹಾಕಬೇಕು ಎಂಬ ತೀರ್ಮಾನವನ್ನು ಕೈಗೊಂಡು.

ಅದರಂತೆ ಆರ್ಯವರ್ಧನ್ ಪಾತ್ರದಿಂದ ಅನಿರುಧ್ ಅವರನ್ನು ಕೈ ಬಿಡಲಾಗುತ್ತದೆ ಆ ಪಾತ್ರಕ್ಕೆ ನಟ ಹರೀಶ್ ರಾಜ್ ಅವರನ್ನು ಆಯ್ಕೆ ಮಾಡಿಕೊಂಡು. ಇದೀಗ ಹರೀಶ್ ರಾಜ್ ಅವರೇ ಆರ್ಯವರ್ಧನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಇದು ಆರ್ಯವರ್ಧನ್ ಅಭಿಮಾನಿಗಳಿಗೆ ದೊಡ್ಡ ಆ.ಘಾ.ತ.ವನ್ನು ಉಂಟು ಮಾಡಿತು. ಜೊತೆ ಜೊತೆಯಲಿ ಧಾರಾವಾಹಿ ತಂಡದಿಂದ ಹೊರ ಬಂದ ನಂತರ ಅನಿರುಧ್ ಅವರು ತಮ್ಮಷ್ಟಕ್ಕೆ ತಾವಿದ್ದರು.

ಆದರೆ ಮೊನ್ನೆಯಷ್ಟೇ ಕಲಾ ಸಾಮ್ರಾಟ್ ಎಸ್ ನಾರಾಯಣ್ ಅವರು ನಿರ್ದೇಶನ ಮಾಡುತ್ತಿರುವ ಸೂರ್ಯಕಾಂತಿ ಎಂಬ ಸೀರಿಯಲ್ ನಲ್ಲಿ ಅನಿರುಧ್ ಅವರಿಗೆ ವಿಶೇಷ ಪಾತ್ರ ಒಂದನ್ನು ನೀಡಿದ್ದಾರೆ. ಫೋಟೋಶೂಟ್ ಮಾಡಿ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವ ಮೂಲಕ ಉದಯ ಟಿವಿಯಲ್ಲಿ ಮೂಡಿ ಬರುವಂತಹ ಸೂರ್ಯವಂಶ ಎಂಬ ದಾರವಾಹಿಯಲ್ಲಿ ನಟ ಅನಿರುಧ್ ಅವರು ಅಭಿನಯಿಸಲಿದ್ದಾರೆ ಎಂಬ ವಿಚಾರವನ್ನು ಸ್ವತಃ ಎಸ್ ನಾರಾಯಣ್ ಅವರೇ ರಿವಿಲ್ ಮಾಡಿದ್ದರು.

ಇದಕ್ಕೆ ಪೂರಕವಾಗುವಂತೆ ಅನಿರುಧ್ ಜಟ್ಕರ್ ಅವರು ಕೂಡ ತಮ್ಮ instagram ಖಾತೆಯಲ್ಲಿ ಎಸ್ ನಾರಾಯಣ್ ಜೊತೆ ಇರುವಂತಹ ಕೆಲವೊಂದು ಶೇರ್ ಮಾಡಿ. ನಿಮ್ಮೆಲ್ಲರ ಆಸೆಯಂತೆ ಮತ್ತೆ ನಾನು ಹೊಸ ಧಾರವಾಹಿಯಲ್ಲಿ ನಟನೆ ಮಾಡುತ್ತಿದ್ದಾರೆ ಕಲಾ ಸಾಮ್ರಾಟ್ ಎಸ್ ನಾರಾಯಣ್ ಅವರು ಸೂರ್ಯಕಾಂತಿ ಸಿನಿಮಾದಲ್ಲಿ ನನಗೆ ವಿಶೇಷ ಪಾತ್ರ ಒಂದನ್ನು ಕೊಟ್ಟಿದ್ದಾರೆ. ನಿಮ್ಮ ಹಾರೈಕೆ ಹೀಗೆ ಇರಲಿ ಪ್ರೋತ್ಸಾಹ ಮತ್ತು ಪ್ರೀತಿಯನ್ನು ನೀಡಿ ಎಂದು ಬರೆದುಕೊಂಡಿದ್ದರು ಇದನ್ನು ನೋಡಿದಂತಹ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು ಅಷ್ಟೇ ಅಲ್ಲದೆ ತಮ್ಮ ನೆಚ್ಚಿನ ನಟ ಮತ್ತು ಸೀರಿಯಲ್ ಲೋಕಕ್ಕೆ ಎಂಟ್ರಿ ಕೊಡುತ್ತಿರುವುದನ್ನು ನೋಡಿ ಸಂತೋಷವನ್ನು ವ್ಯಕ್ತಪಡಿಸಿದ್ದರು.

ಆದರೆ ಇದೀಗ ನಟ ಅನಿರುಧ್ ಮತ್ತೊಂದು ಸಂಕಷ್ಟ ಎದುರಾಗಿದೆ ಅದೇನೆಂದರೆ ಜೊತೆ ಜೊತೆಯಲಿ ಧಾರಾವಾಹಿ ತಂಡದಲ್ಲಿ ಕಿರಿಕ್ ಮಾಡಿಕೊಂಡು ಹೊರ ಬಂದ ನಂತರ ನಿರ್ದೇಶಕ ಮತ್ತು ನಿರ್ಮಾಪಕ ಸಂಘದಿಂದ ಅನಿರುಧ್ ಅವರನ್ನು ಎರಡು ವರ್ಷಗಳ ಕಾಲ ಬ್ಯಾನ್ ಮಾಡಬೇಕು ಯಾವ ನಿರ್ದೇಶಕ ಮತ್ತು ನಿರ್ಮಾಪಕರು ಕೂಡ ಅನಿರುಧ್ ಅವರನ್ನು ತಮ್ಮ ಧಾರಾವಾಹಿಯಲ್ಲಿ ನಟನೆ ಮಾಡುವುದಕ್ಕೆ ಆಯ್ಕೆ ಮಾಡಿಕೊಳ್ಳಬಾರದು ಎಂಬ ಷರತ್ತು ವಿಧಿಸಿದ್ದರಂತೆ.

ಆದರೆ ಇದೀಗ ಇದರ ವಿರುದ್ಧವಾಗಿ ನಿರ್ಮಾಪಕ ಎಸ್ ನಾರಾಯಣ್ ಅವರು ಅನಿರುಧ್ ಅವರನ್ನು ಸೂರ್ಯವಂಶ ಎಂಬ ಧಾರಾವಾಹಿಯಲ್ಲಿ ನಟನೆ ಮಾಡುವುದಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದು ನಮ್ಮ ಸಂಘದ ವಿರುದ್ಧ ಮಾಡುತ್ತಿರುವಂತಹ ಪಿತೂರಿ ಆಗಿದೆ ಎಂದು ಎಸ್ ನಾರಾಯಣ್ ಮತ್ತು ಅನಿರುಧ್ ಅವರ ವಿರುದ್ಧ ಮಾತನಾಡುತ್ತಿದ್ದಾರೆ. ಸಂಘದ ವಿರುದ್ಧವಾಗಿ ಈ ರೀತಿ ನಿರ್ಧಾರವನ್ನು ಕೈಗೊಂಡಿರುವುದು ತಪ್ಪು ಅನಿರುಧ್ ಅವರನ್ನು ಆಯ್ಕೆ ಮಾಡಿಕೊಳ್ಳುವುದಕ್ಕಿಂತ ಮುಂಚೆ ಸಂಘಕ್ಕೆ ಒಂದು ಬಾರಿ ತಮ್ಮ ನಿರ್ಧಾರವನ್ನು ತಿಳಿಸಬೇಕಿತ್ತು ನಮ್ಮಿಂದ ಒಪ್ಪಿಗೆ ಪಡೆದ ನಂತರವಷ್ಟೇ ಅವರನ್ನು ಆಯ್ಕೆ ಮಾಡಿಕೊಳ್ಳಬೇಕಿತ್ತು.

ಇದೀಗ ಏಕಾಏಕಿ ಅವರನ್ನು ಆಯ್ಕೆ ಮಾಡಿಕೊಂಡು ನಮ್ಮ ಸಂಘಕ್ಕೆ ಗೌರವವನ್ನು ತೋರಿದ್ದೀರಿ ಎಂದು ಎಸ್ ನಾರಾಯಣ್ ಮತ್ತು ಅನಿರುಧ್ ಅವರ ವಿರುದ್ಧ ಆ.ಕ್ರೋ.ಶ.ವನ್ನು ವ್ಯಕ್ತಪಡಿಸಿದ್ದಾರೆ. ಇದರಿಂದ ಅನಿರುಧ್ ಅವರ ಕೆರಿಯರ್ ಗೆ ಬಹುದೊಡ್ಡ ಒಡೆತ ಬಿದ್ದಿದೆ ಒಂದು ಧಾರಾವಾಹಿಯಿಂದ ಬ್ಯಾನ್ ಆಗಿ ಇನ್ನೊಂದು ಧಾರವಾಹಿಯಲ್ಲಿ ನಟನೆ ಪ್ರಾರಂಭ ಮಾಡುವುದಕ್ಕಿಂತ ಮುಂಚೆ ಈ ರೀತಿ ತೊಂದರೆಯಾಗುತ್ತಿರುವುದು ನಿಜಕ್ಕೂ ಕೂಡ ವಿಷದವೇ ಅದೇನೆ ಆಗಲಿ ಈ ಎಲ್ಲಾ ಪ್ರಕರಣಗಳನ್ನು ಮೀರಿ ಸೂರ್ಯವಂಶ ಸೀರಿಯಲ್ ನಲ್ಲಿ ಅನಿರುಧ್ ಅಭಿನಯಿಸುತ್ತಾರ ಅಥವಾ ಇಲ್ಲವೇ ಎಂಬುದನ್ನು ಕಾದು ನೋಡಬೇಕಿದೆ ನಿರ್ಮಾಪಕರ ಸಂಘದ ಈ ಧೋರಣೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮುಖಾಂತರ ತಿಳಿಸಿ.

Entertainment Tags:Aniruddh jatkhar, S Narayan, Suryavamsa, Udaya TV
WhatsApp Group Join Now
Telegram Group Join Now

Post navigation

Previous Post: ನಿಶ್ಚಿತಾರ್ಥದ ಸಮಯದಲ್ಲಿ ಉಂಗುರ ಬದಲಾಯಿಸಿಕೊಂಡ ತಕ್ಷಣ ಕಣ್ಣೀರಿಟ್ಟ ಹರಿಪ್ರಿಯಾ, ಕಣ್ಣೀರು ಒರೆಸಿ, ಆಕೆಯನ್ನು ಸಂತೈಸಿದ ವಸಿಷ್ಠ ಸಿಂಹ ಈ ಕ್ಯೂಟ್ ವಿಡಿಯೋ ನೋಡಿ.
Next Post: ರಚಿತಾ ರಾಮ್ ಜೊತೆ ವಿಜಯ್ ರಾಘವೇಂದ್ರ ಮಾಡಿದ ಮಸ್ತ್ ಡಾನ್ಸ್ ಒಮ್ಮೆ ನಿಜಕ್ಕೂ ಫಿದಾ ಆಗ್ತಿರಾ.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore