ಸೆಲೆಬ್ರಿಟಿಗಳ ಅಂತರ್ಜಾತಿ ವಿವಾಹ ಬಹಳ ಮಾಮೂಲಿ, ಆದರೆ ಬಹುಶಃ ಭಾರತದಲ್ಲಿ ಯಾವ ತಾರೆಯ ವಿವಾಹದ ವಿಷಯ ಕೂಡ ಇಷ್ಟೊಂದು ವಿವಾದ ಆಗಿರಲಿಲ್ಲ ಎನಿಸುತ್ತದೆ. ಬಾಲಿವುಡ್ ಬೆಡಗಿ ರಾಖಿ ಸಾವಂತ್ ಮೈಸೂರು ಮೂಲದ ಮುಸ್ಲಿಂ ಯುವಕ ಆದಿಲ್ ಖಾನ್ ಅವರ ಪ್ರೇಮ ವಿವಾಹ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಗಂಡನ ಮೇಲೆ ಹಣದ ವಂ.ಚ.ನೆ ಸೇರಿದಂತೆ ಬೆ.ತ್ತ.ಲೆ ಫೋಟೋ ಮಾರಾಟ ಮಾಡಿರುವ ಆರೋಪ ಹಾಗೂ ಆತ ಹ.ಲ್ಲೆ ಮಾಡಿರುವ ಬಗ್ಗೆ ಕೂಡ ದೂರು ಕೊಟ್ಟು ಪತಿ ಆದಿಲ್ ಖಾನ್ ಮೇಲೆ ಎಫ್ ಐ ಆರ್ ದಾಖಲಿಸಿ ಜೈಲಿಗೆ ಕಳಿಸಿರುವ ರಾಕಿ ಸಾವಂತ್ ಅವರು ಇಂದು ಮೈಸೂರಿಗೆ ಆಗಮಿಸಿದ್ದರು.
ಫರ್ಲಿನ್ ಚೋಪ್ರಾ ಅವರ ಜೊತೆ ಮೈಸೂರಿಗೆ ಆಗಮಿಸಿರುವ ರಾಖಿ ಸಾವಂತ್ ಪತಿಯಿಂದ ಆದ ಅನ್ಯಾಯದ ಬಗ್ಗೆ ನ್ಯಾಯ ಕೇಳಲು ಉದ್ದೇಶದಿಂದ ಬಂದಿದ್ದರು. ಕೋರ್ಟ್ ಅವರಣದಲ್ಲಿ ಮಾಧ್ಯಮದ ಎದುರೇ ಮತ್ತೊಮ್ಮೆ ಗಂಡನ ಮೇಲೆ ಕಿಡಿಕಾರಿದ್ದಾರೆ. ಆದಿಲ್ ಖಾನ್ ನನಗೆ ಮೋಸ ಮಾಡಿದ್ದಾನೆ, ಹಣವಂಚನೆ ಮಾಡುವುದರ ಜೊತೆ ನನ್ನ ನಂಬಿಕೆ ದ್ರೋ.ಹ ಕೂಡ ಮಾಡಿಕೊಂಡಿದ್ದಾನೆ. ಅವನಿಗೆ ತನು ಎನ್ನುವ ಹುಡುಗಿ ಜೊತೆ ಅ.ನೈ.ತಿ.ಕ ಸಂಬಂಧ ಇದೆ. ನನ್ನನ್ನು ಪ್ರೀತಿಸಿ ಮದುವೆ ಮಾಡಿ ಕೊನೆಗೆ ಫ್ರಿಡ್ಜ್ ಅಲ್ಲಿ ತುಂ.ಡು ಮಾಡಿ ಇಡುವುದೇ ಅವನ ಉದ್ದೇಶ ಆಗಿತ್ತು.
ದೇವರ ಕೃಪೆಯಿಂದ ನಾನು ತಪ್ಪಿಸಿಕೊಂಡೆ ಯಾವುದೇ ಕಾರಣಕ್ಕೂ ಅವನು ಶಿ.ಕ್ಷೆಯಿಂದ ತಪ್ಪಿಸಿಕೊಳ್ಳಬಾರದು ಎಂದು ಗೋಳಾಡಿದ್ದಾರೆ. ಜೊತೆಗೆ ಆದಿಲ್ ಖಾನ್ ಇಂದ ಬಹಳ ಮೋಸ ಆಗಿದೆ ಈಗ ಅವರ ಕುಟುಂಬದವರನ್ನಾದರೂ ಮಾತನಾಡಿಸೋಣ ಎಂದು ಅವರ ಮಗನ ಬಗ್ಗೆ ಕೆಲ ವಿಷಯ ತಿಳಿಸುವ ಸಲುವಾಗಿ ಅವರ ತಂದೆ ತಾಯಿಯನ್ನು ಭೇಟಿಯಾಗಲು ಮನೆ ಬಳಿ ಹೋದರೆ ನಾನು ಹಿಂದು ಎನ್ನುವ ಕಾರಣಕ್ಕೆ ಅವರ ತಂದೆ ನನ್ನನ್ನು ಮನೆಗೆ ಸೇರಿಸುತ್ತಿಲ್ಲ.
ನೀನು ಹಿಂದೂ ಹಾಗಾಗಿ ಮನೆ ಒಳಗೆ ಬರಬೇಡ ಎಂದು ನೇರವಾಗಿ ಹೇಳುತ್ತಿದ್ದಾರೆ ಎಂದು ಮಾಧ್ಯಮಗಳ ಎದುರು ಗಳಗಳನೆ ಕಣ್ಣೀರುಟ್ಟು ಮಾತನಾಡಿದ್ದಾರೆ ರಾಖಿ ಸಾವಂತ್. ಕೋರ್ಟ್ ಆವರಣದಲ್ಲಿ ರಾಖಿ ಸಾವಂತ್ ಮತ್ತು ಆದಿಲ್ ಖಾನ್ ಅವರ ಭೇಟಿ ಕೂಡ ಆಗಿದೆ, ಅದರ ಬಗ್ಗೆ ಕೂಡ ಮಾತನಾಡಿದರು. ಕೋರ್ಟ್ ಆವರಣದಲ್ಲಿಯೇ ನನನ್ನು ಸಾ.ಯಿ.ಸು.ವು.ದಾ.ಗಿ ಬೆ.ದ.ರಿ.ಕೆ ಹಾಕಿದ್ದಾನೆ, ಅದ್ಹೇಗೆ ಬದುಕುತ್ತೀಯಾ ನಾನು ನೋಡುತ್ತೇನೆ ಎಂದು ನನಗೆ ಪ್ರಾಣ ಬೆ.ದ.ರಿಕೆ ಹಾಕಿದ್ದಾನೆ, ಅವನಿಗೆ ರೌಡಿಗಳ ಪರಿಚಯ ಇದೆ, ಜೈಲಲ್ಲಿ ಇದ್ದುಕೊಂಡೇ ಅವರ ಮೂಲಕ ನನ್ನನ್ನು ಮುಗಿಸಲು ಪ್ಲಾನ್ ಮಾಡುತ್ತಿದ್ದಾನೆ.
ಎಂದು ಪತಿ ಮೇಲೆ ಮತ್ತೊಂದು ಆರೋಪ ಹೊರಿಸಿದ್ದಾರೆ ರಾಖಿ ಸಾವಂತ್ ಅವರು. ಸದ್ಯಕ್ಕೆ ಪತಿ ಮತ್ತು ಆತನ ಕುಟುಂಬದ ಮೇಲೆ ದಿನಾ ಒಂದೊಂದು ಹೊಸ ಆರೋಪ ಇಟ್ಟುಕೊಂಡು ಮಾಧ್ಯಮದವರ ಎದುರು ಕಾಣಿಸಿಕೊಳ್ಳುತ್ತಿರುವ ರಾಖಿ ಸಾವಂತ್ ಅವರು ವಿವಾಹದ ವಿಷಯ ಸೋಶಿಯಲ್ ಮೀಡಿಯಾದಲ್ಲೂ ಬಾರಿ ಚರ್ಚೆ ಆಗುತ್ತಿದೆ. ಅನೇಕರು ರಾಖಿ ಸಾವಂತ್ ಪರ ನಿಂತು ಆಕೆಗೆ ನೈತಿಕ ಬೆಂಬಲ ಸಹ ತೋರುತ್ತಿದ್ದರೆ, ಇತ್ತ ಕೆಲ ಮಂದಿ ಆದಿಲ್ ಖಾನ್ ಕರ್ನಾಟಕದ ಹುಡುಗ ಆಗಿ ಈ ರೀತಿ ದೇಶಾದ್ಯಂತ ಚರ್ಚೆ ಆಗುವ ರೀತಿ ವೈಯಕ್ತಿಕ ವಿಷಯದಲ್ಲಿ ವಿವಾದ ಮಾಡಿಕೊಂಡಿರುವುದಕ್ಕೆ ಅವರಿಗೂ ಸಹ ಛೀಮಾರಿ ಹಾಕುತ್ತಿದ್ದಾರೆ.